ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಶುರಾಮಾವತಾರ ತುಂಗಾಮಂಗಳತರಂಗ ಭೂಷಿತಲಿಂಗರೂಪ ಭೃಗುಪುಂಗವನೆ ಶಿವಮಂಗಲಧಾಮನೆ ಮಾಧವನೆ ಪ. ಸರಸಿಜಾಸನಾದ್ಯಖಿಳ ಸುರಾರ್ಚಿತ ಚರಣಾಂಬುಜ ಶ್ರೀ ಕಲ್ಪತರೊ ಮಾನಸ ಚರಿಯವನು ಕರಧೃತ ಶಾರ್ಙಶರಾಸನ ಖಂಡಿತ ಕರದಶ ಶತಕರುಣಾ ಜಲಧೇ ಅರಿಗಳ ಬುಡ ಕತ್ತರಿಸಿ ನಿರಂತರ ಪೊರೆವುದೆನ್ನ ಪರಮಾದರನೆ 1 ಶ್ರೀನಿಕೇತನ ನೀ ನಡೆಸುವ ಚರ್ಯವನೇನೆಂಬೆನು ನಳಿವಾಂಬಕನೆ ಮಾನವರಂದದಿ ಮಾತೃವಧಾಕವೇನ ಸನಿಹದೆ ಅರ್ಜುನ ಸಖನೆ ನರರನು ಸಲಹುವೆನೆಂದು ಪಾತಕ ಹಾನಿಗೊಳಿಸದೆ ರಮಾವರನೆ 2 ದಾಸರು ವಹಿಸುವದೆಂಬುದನು ಲೋಕ ವಿಡಂಬನವ ವರ್ಣಿಸಲಿ ವಶಿತನವ ಶೇಷ ಭೂಧರನಿವಾಸಿ ಮಾನಸಿಕದಾಸೆ ಪೂರಿಸಖಿಳೊತ್ತಮನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣದಿಂದ ಪೊರೆವುದೆನ್ನಪರಮಪುರುಷ ಸೂರ್ಯದೇವ ಪಗಾಲಿಯೊಂದೆ ಇರುವ ರಥವುಕಾಲುಕುಂಟನಾದ ಸಾರಥಿಏಳುಕುದುರೆ ಇರಲು ನಡೆವಕಾಲಚಕ್ರ ನಿಯಂತಾರ 1ಲೋಕಕೆಲ್ಲ ಕಣ್ಣೆನಿಸುತಭೀಕರಾಂಧಕಾರವನುನೂಕಿ ಜಗಕೆಬೆಳಕನೀವಸಾಕಾರ ಪರಬ್ರಹ್ಮ 2ಸರ್ವಸ್ಟೃಕರ್ತನಾಗಿಸರ್ವಸ್ಥಿತಿಗೆ ಕಾರಣನಾಗಿಉರ್ಪಿಯೊಳಗೆ ಬೆಳಗುತಿರುವಸರ್ವದೇವ ಚಿತ್ಸ್ವರೂಪ 3
--------------
ಹೊಸಕೆರೆ ಚಿದಂಬರಯ್ಯನವರು
ಕಾರಣಾತ್ಮಕ ಭಕ್ತವತ್ಸಲ | ಪೊರೆವುದೆನ್ನನು || ಕರುಣಾರ್ಣವನೆ ಪ ಭವ | ಕಷ್ಟ ಕಳೆದು ಸಂ | ತುಷ್ಟಿ ಗೈಸೆನ್ನ 1 ಪಕ್ಷಿವಾಹನ | ಅಕ್ಷರೇಡ್ಯ ಸು | ಪಕ್ಷಪಾತಿಯ | ಲಕ್ಷ್ಮೀವಕ್ಷನೆ ||ಇಕ್ಷುಶರ ಪಿತ | ಲಕ್ಷಣಾಗ್ರಜ | ರಾಕ್ಷಸರ ಬಹು ಶಿಕ್ಷಕ | ಜಗ ರಕ್ಷಕ 2 ಭವ | ನೋವ ಕಳೆವುದು | ಶ್ರೀ ವರನೆ ಗುರು | ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಚಾರು ಗುಣಾನ್ವಿತೆ ಪ ನಾರಾಯಣಹಿಗೆ ಪಾಲಿಸೆ ಮಾತೆ ಅ.ಪ. ಸತ್ಯ ಸುಖಾಸ್ಪದೆ ಭೃತ್ಯರ ಬಿಡದೆ ನಿತ್ಯದಿ ಪೊರೆವುದೆ ಅತಿಶಯ ಬಿರುದೆ 1 ನಿನ್ನ ಕೃಪಾಶ್ರಯ ಪಡೆಯೆ ಮಹಾಶಯ ನಿನ್ನ ನಿರಾಶ್ರಯ ತಾಪತ್ರಿತಯ 2 ಲಕ್ಷುಮಿ ಕಾಂತನ ವಕ್ಷ ನಿವಾಸಿನಿ ಈಕ್ಷಿಸಿ ಕರುಣದಿ ರಕ್ಷಿಸು ಜನನಿ 3
--------------
ಲಕ್ಷ್ಮೀನಾರಯಣರಾಯರು
ಭಾರ ನಿನ್ನದೊ ಪ ಭಾರ ನಿನ್ನದಯ್ಯ ಹರಿಯೆ ಘೋರ ಈ ಸಂ ಸಾರದೊಳಗೆ ಪಾರುಮಾಡಿ ಪೊರೆವುದೆನ್ನ ಅ.ಪ ಕರುಣಾ ನಿಲಯನೆಂದು ನಿನ್ನ ಮೊರೆಯ ಹೊಕ್ಕು ಬೇಡಿಕೊಂಬೆ ನರನ ಭವದಗುಣಗÀಳಳಿದು ಹರಿಯೆ ನಿಮ್ಮ ಚರಣಸ್ಮರಣೆ ಕರುಣದಿಂದ ನೀಡಿ ಪೊರೆಯೊ ಶರಣಜನರ ಅಸಹಾಯಕರ 1 ಶ್ರೀಶ ಶ್ರೀನಿವಾಸ ನೀನೆ ದಾಸನ ಮನದಾಸೆಯ ಪೂರೈಸುವ ದಾತನೆಂದು ನಿನ್ನ ದಾಸತ್ವ ಬೇಡ್ವೆ ದೋಷದೂರ ಘಾಸಿಮಾಡದೆ ಹೇಸಿ ಭವದಿ ಪೋಷಿಸಯ್ಯ ಬೇಗ ಈಶ 2 ಚಿಂತೆ ಭ್ರಾಂತಿ ದೂರಮಾಡಿ ಸಂತಸ ಸುಖವನ್ನು ನೀಡಿ ಕಂತುಜನಕ ನಿಮ್ಮ ಭಕ್ತಿ ಅಂತ್ಯದಲ್ಲಿ ನಿಲ್ಲಿಸಿ ಎ ನ್ನಂತರಂಗದೊಳಗೆ ತೋರೊ ಸಂತರೊಡೆಯ ಸೀತಾರಾಮ 3
--------------
ರಾಮದಾಸರು
ಶ್ರೀರಾಮೇಶ ಪೊರೆವುದೆನ್ನ ನೀರವ ಮುನಿವಿನುತ ಚೆನ್ನ ಪ ಧ್ಯಾನ ಜಪತಪಗಳನರಿಯೆ ಹೀನ ಮನುಜ ನಾನು ಹರಿಯೆ ಧೀನಬಂಧುವಾದ ನಿನ್ನ ನಾನು ನೋಡೆ ತೋರೊ ಮುನ್ನ 1 ಸುಲಭನಾದ ನಿನ್ನ ಮರೆತು ಕಲಿಯ ದೋಷದೊಳಗೆ ಬೆರೆದೆ ಕಲುಷಹರಣ ಭಕ್ತಪ್ರಾಣ ನಿಲುಕಿಸೆನಗೆ ನಿನ್ನ ಚರಣ 2 ಜಾಜೀಶನೆ ನಿನ್ನಯಪದ ರಾಜೀವದ ದಾಸನೆನಿಸಿ ಪೂಜೆಮಾಡಿ ನಲಿಯುವಂತೆ ರಾಜಿಪ ಪದವೀಯೋ ಶಾಂತ 3
--------------
ಶಾಮಶರ್ಮರು
ಸಾರಸನಯನ ನಮೋ ನಮೋ ಪ ನಾರಾಯಣ ಗೋವಿಂದ ನಮೋ ಅ.ಪ. ದೀನ ಜನಾವನ ದಾನವ ಮಥನ ಶ್ರೀ ನಿಕೇತನ ಕೌಸ್ತುಭಾಭರಣ 1 ದಾಮೋದರ ದುರಿತಾರಿ ಪರಾತ್ಪರ ಹೇಮಾಂಬರಧರ ವನಮಾಲಾಧರ 2 ಸಾರಸಾಪ್ತನು ಸಾರುತಿಹನು ತವ ಸಾರಸಪಾದದ ಚಾರುದರುಶನಕೆ 3 ಮಾರ್ತಾಂಡನ ಬಲು ಚಂಡಕಿರಣವೆಮ್ಮ ನೇತ್ರಪಟುತ್ವ ಕುಂದಿಸುವುದು ಕೇಳ್ 4 ತರಣಿ ಪ್ರಕಾಶದಿ ತಪಿಸುತಿಹೆವು ನಾವ್ ಪೊರೆವುದೆಮ್ಮನು ಕರಿಗಿರೀಶನೆ 5
--------------
ವರಾವಾಣಿರಾಮರಾಯದಾಸರು
ಹರನರಾಣಿ ಉರಗವೇಣಿ ಸ್ಮರಿಪೆ ನಿನ್ನನಾ ಪ ಚರಣಸೇವೆ ಇತ್ತು ನಿರತ ಪೊರೆವುದೆಮ್ಮ ನೀಂ ಅ.ಪ ಸುರನರೋರಗವಿನುತೆ ಶೋಭನಚರಿತೆ 1 ಸರ್ವಮಂಗಳೆ ಪಾರ್ವತಿ ಮದಗರ್ಮದಿಮೆರೆವ ದು- ರ್ವಿನೀತರ ಛೇದಿಸುತ ಸುಪರ್ವರ ಪೊರೆವೆ 2 ಮನದದುವ್ರ್ಯಸವ ಬಿಡಿಸೆ ಜನನಿ ಶಂಕರಿ ವನಜನಯನೆ ಗುರುರಾಮ ವಿಠಲನ ಸೋದರಿ | ಗೌರಿ 3
--------------
ಗುರುರಾಮವಿಠಲ