ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರೇ ವೆಂಕಟಶೈಲವಲ್ಲಭಪೊರೆಯಬೇಕು ಎನ್ನಪ ದುರಿತದೂರ ನೀನಲ್ಲದೆ ಧರೆಯೊಳುಪೊರೆವರನ ಕಾಣೆ ನಿನ್ನಾಣೆ ಅ.ಪ. ಆರು ನಿನ್ನ ಹೊರೆತೆನ್ನ ಪೊರೆವರುನೀರಜಾಕ್ಷ ಹರಿಯೆ ಅ-ಪಾರ ಮಹಿಮ ಪುರಾಣ ಪುರುಷಘೋರ ದುರಿತಗಳ ದೂರ ಮಾಡಿಸೋ 1 ಇಂದಿರೇಶ ಅರವಿಂದನಯನ ಎನ್ನತಂದೆ ತಾಯಿ ನೀನೆಹೊಂದಿದವರ ಅಘವೃಂದ ಕಳೆವಮಂದರಾದ್ರಿಧರನೇ ಶ್ರೀಧರನೇ2 ಮಂಗಳಾಂಗ ಮಹನೀಯ ಗುಣಾರ್ಣವಗಂಗೋದಿತ ಪಾದಅಂಗಜಪಿತ ಅಜರಾಜಶಯ್ಯ ಶ್ರೀ-ರಂಗವಿಠ್ಠಲ ದೊರೆಯೇ ಶ್ರೀ ಹರಿಯೇ 3
--------------
ಶ್ರೀಪಾದರಾಜರು
(ಸರಸ್ವತಿ) ಸುಂದರೆ ಸುಗುಣಮಂದಿರೆ ನಿನ್ನ ಚರಣ ಚಂದಿರೆ ನಂಬಿದ ಶರಣಗಮನ ಸಿಂಧುರೆ ಅರವಿಂದನಯನ ಗಂಭೀರೆಅದ್ಭುತ ಮಹಿಮ ಶಂಕರೆ ಸುರಸೋಮ ಸಂತವಹರೆ ಪಂಕಜಪಾಣಿಧಾರೆ ಜಪಮಣಿ ಪುಸ್ತಕವಿರೆ ವೀಣಾಯುತ ಸಾರೆ ಸಾರುತ ವದನದಿ ಬಾರೆ ಬಂದು ಕರುಣಾವ ಬೀರೆ ಬೀರುತ ಮೊಗ ತೋರೆತೋರುತ ತಂದೆವರದಗೋಪಾಲವಿಠಲನಯನಿಸೆರೆಂತರೆ 1 ಸದನ ಸರಳೆ ನಿನ್ನ ಕಾಣುವ ಶರಣಳೆ ಯಂದ್ಯನಿಸು ಮನಬಾಗಿ ಬೇಡುವೆ ಸಾಧನವಾಗುವಂತೆ ವೈರಿಗಳುಪಟಳವ ಬಿಡಿಸೆ ತಾಯಿ ನಿನ್ನ ಪಾವನ ಪದುಮ ಪಾದನುಗ್ರಹದಿಂದಜಲಧಿಯೊಳಗಿಪ್ಪ ಜೀವಿಗಳಂತೆ ತಂಪಿನೊಳಿಪ್ಪೆ ಮಂತ್ರವಾಹನನ ರಾಣಿರಂಗಾ ತಂದೆವರದಗೋಪಾಲವಿಠಲನ ಮಂತ್ರವ ಬೋಧಿಸೆ 2 ಸಾರಥಿ ಸತಿ ಶಚಿ ಶಾಮಲ ಮಿಕ್ಕಿದವರ ಪೊರೆದಂತೆ ಪೊರೆಯಬೇಕು ಪರಶುಧಾರಿ ತಂದೆವರದಗೋಪಾಲವಿಠಲನ ತೋರೇ 3 ನಖ ಶಿಖ ಪರ್ಯಂತಾನಿಲವೋ ಹೃತ್ಸರಸಿಜದೊಳಗೆ ಪೊಳದು ನರಹರಿ ರೂಪಧಾರಿ ತಂದೆವರದಗೋಪಾಲವಿಠಲನ ಪ್ರೀಯೆ 4 ಮಂಗಳಾಂಗಿ ಮಹಾ ತುಂಗ ಮಹಿಮ ತುರಂಗ ವದನ ಚತುರಂಗ ಧರನ ಸರ್ವಂತರಂಗದೊಳು ತಂತುಬಿಡದೆ ಮಹಂತನೊಡಗೂಡಿ ಶಿರಿಕಂಠನುತ ತಂದೆವರದಗೋಪಾಲವಿಠಲನ ಪಠಿಸುವಳೆ 5 ಪಾದ ಕಂಡಮ್ಯಾಲೆ ಪಾತಕವೆಲ್ಲಿಹದೆ ತಂದೆವರದಗೋಪಾಲವಿಠಲನ ದಯದಿಂದ 6
--------------
ತಂದೆವರದಗೋಪಾಲವಿಠಲರು
ಏಳು ರಂಗಯ್ಯ ನೀನೇಳು ಕೃಷ್ಣಯ್ಯ ಏಳಯ್ಯ ದೊರೆ ಬೆಳಗಾಯಿತೇಳೆಂದು ಪಾಲ್ಗಡಲೊಡೆಯ ಹರಿಯನೆಬ್ಬಿಸಿದಳಂದು ಬಾಲೆ ಯಶೋದೆಯು ಬಹು ಸಂಭ್ರಮದಿಂದ ಪ ಶಕ್ರನುಪಟಳವ ನೀ ಪರಿಹರಿಸಬೇಕು ವಿಕ್ರಮದಿ ಗೋವರ್ಧನ ಎತ್ತಬೇಕು ಚಕ್ರಧರ ನಿನ್ನ ಮಧುರೆಗೆ ಕರೆದೊಯ್ಯೆ 1 ಮಾವ ಕಂಸನು ನಿನ್ನ ಬಾ ಎಂದನಂತೆ ಸಾವು ಅವನಿಗೆ ಸಮೀಪದಲಿದೆಯಂತೆ ದೇವಕಿ ವಸುದೇವ ಸೆರೆಯಲಿರುವರಂತೆ ಕಾವುದಕೆ ನೀ ಪೋಗಲೇಬೇಕಂತೆ 2 ಬಿಲ್ಲ್ಹಬ್ಬದಲಿ ಜಯಶೀಲನಾಗಬೇಕು ಖುಲ್ಲ ರಕ್ಕಸ ದಲ್ಲಣನೆನಿಸಬೇಕು ಬಲ್ಲಿದ ಮಗಧನ ಕೊಲ್ಲಿಸಲುಬೇಕು 3 ದೇವಿ ದ್ರೌಪದಿಗೆ ಸುಚೇಲವೀಯಬೇಕು ಭಾವಮೈದುಗೆ ಬೋವÀನಾಗಬೇಕು ಪಾವಿನ ಶರದಿಂದವನ ಪೊರೆಯಬೇಕು ಯಾವತ್ತು ಭೂ ಭಾರವನಿಳುಹಬೇಕು 4 ಮಧ್ವರಾಯರ ಹೃತ್ಪದ್ಮದಿ ನಿಲಬೇಕು ಇದ್ದು ಉಡುಪಿಯೊಳು ಪೂಜೆಗೊಳಲುಬೇಕು ಶುದ್ಧ ವೈಷ್ಣವರಿಷ್ಟಗಳ ಸಲಿಸಬೇಕು ಮುದ್ದು ರಂಗೇಶವಿಠಲನೆನಿಸಬೇಕು 5
--------------
ರಂಗೇಶವಿಠಲದಾಸರು
ಕೀಚಕಾಂತಕ ಭೀಮಸೇನರಾಯ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ಪ ಕುಂತಿ ಜಠರೋದ್ಭವನೆ ಕುವಲಯದೊಳಗಿಪ್ಪಮ ಹಂತರಿಗೆ ಬಪ್ಪ ಜನ್ಮಾದಿರೋಗ ಚಿಂತೆಗಳ ಕಳೆದ ನಿಶ್ಚಿಂತರನು ಮಾಡು ಸ ರ್ವಾಂತರಾತ್ಮಕ ಸುಖದ ಸರ್ವೇಶ ಶಕ್ರಾದಿ ನುತ 1 ದ್ರೌಪದೀರಮಣ ಜ್ಞಾತಾಜ್ಞಾತ ಕರ್ಮಜ ಮ ಹಾಪರಾಧಗಲೆಸದನು ದಿನದಲಿ ನೀ ಪೊರೆಯಬೇಕುಪೇಕ್ಷಿಸದೆ ನಿನ್ನವರ ವಿ ವಿಶ್ವ ಚೇಷ್ಟಕನೆ 2 ಕೌರವಾಂತಕನೆ ಕಾಶ್ಯಪಿಸುತರ ಸಂತೈಪ ಭಾರ ನಿನ್ನದು ಭವದಿ ಭಕ್ತಬಂಧೋ ಪ್ರೇರಕ ಪ್ರೇರ್ಯ ರೂಪಗಳಿಂದ ಸರ್ವರ ಶ ರೀರದೊಳಗಾಡುವೆ ದೇವತೆಗಳೊಡನೆ 3 ಪವಮಾನತನಯ ಪಾಪಿಷ್ಠರೊಳಗಿದ್ದು ನಿ ನ್ನವರನೀಪರಿ ದಣಿಸಿ ನೋಡುತಿಹುದು ಭುವನತ್ರಯೇಶ ಭೂಷಣವೇನೋ ನಿನಗೆ ಸ ತ್ಕವಿ ಕುಲೋತ್ತಂಸ ಕಾವರ ಕಾಣೆ ನಿನ್ನುಳಿದು 4 ಧನಧಾನ್ಯ ಪಶುಪತ್ನಿ ಜ್ಞಾನಭಕುತಿ ತನಗೆ ತಾನೊದಗಿ ಬಪ್ಪುದು ಸುನಿಶ್ಚಯ ಸನಾ ತನ ಜಗನ್ನಾಥ ವಿಠ್ಠಲನೊಲುಮೆ ಪಾತ್ರ 5
--------------
ಜಗನ್ನಾಥದಾಸರು
ತಾಯಿ ಅಲ್ಲವೇ ನೀನು ಹೆತ್ತ ಪ ತಾಯಿಯಾದ ಮೇಲೆ ಕತ್ತೆಮರಿಯಾದರೂ ಪೊರೆಯಬೇಕುಎನ್ನ ಅ.ಪ. ಸಾರ್ಥಕಾಗಲಿಲ್ಲ ಜನುಮವು ವ್ಯರ್ಥವಾಯಿತಲ್ಲಾಸಾಗುತಿದೆ ಆಯು ಸಹಿಸಲಾರೆ ಬಡಿಸೆ ಭವದ ನೋವು 1 ಸಾರವೆಲ್ಲಿದೆ ಸಂಸಾರ ಶರಧಿಯೊಳಗೆ ಮುಣುಗಿದೆ ಅಸಾರ ಸುಖವ ಸವಿದು ಘನ ಸಂಸಾರಿ ಎನಿಸಿ ಮೆರೆದೆ 2 ನಿಷ್ಠೆಯಿಂದ ನಿನ್ನ ಭಜಿಸಿದೆ ಭ್ರಷ್ಟನಾದೆ ಇನ್ನು ಶಿಷ್ಟರೊಡಯ ತಂದೆವರದಗೋಪಾಲವಿಠ್ಠಲನ ಮುಟ್ಟಿ ಭಜಿಪ ಎನ್ನ 3
--------------
ತಂದೆವರದಗೋಪಾಲವಿಠಲರು
ವರದೇಶ ವಿಠಲರಾಯಾ ಗುರು ವರದೇಂದ್ರರ ಪ್ರೀಯಾ ಮರಿಯದೆ ನೀಯನ್ನ ಕೈಯ್ಯಾ ಪಿಡಿದು ಪೊರೆಯಬೇಕು ಜೀಯಾ ಪ ಒಂದು ದಿನ ನಿನ್ನ ಮನದಲಿ ನೊಂದು ನುಡಿದ ಯನ್ನ ಮಂದನ್ನ ಮಾಡಿದ್ಯೊ ಇನ್ನ ನಿನ್ನ ಸುಂದರ ಮೂರುತಿ ತೋರೆಲೋಘನ್ನ 1 ಏನು ತಿಳಿಯೆ ಮೂಢ ತನದಿ ನಾ ಹೀನಭವದಿಗಾಢ ಮಾನವ ಜನರೊಳಕ್ರೀಡಾ - ಪರನಾ ಜ್ಞಾನಕಳಿಯೊ ಪ್ರೌಢ 2 ಹರಿಪರಜನಸಂಗ ಮಾಡದೆ ನರರೊಳಗಾದೆನು ಮಂಗ ಸುರವರ ಸಹಿತಾಂತ ರಂಗ - ದೊಳು ವರದೇಶ ವಿಠ್ಠಲರಂಗ 3
--------------
ವರದೇಶವಿಠಲ