ಒಟ್ಟು 8 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿಕೇಶವಗರ್ಥಿಯಲಿ ನಾನಾರ್ತಿ ಮಾಡುವೆನು ಆರ್ತಿ ಮಾಡುವೆ ನಾ ಮಂಗಲಾರ್ತಿ ಮಾಡುವೆನು ಪ ಶೀಳಿ ದೈತ್ಯನ ಲೀಲೆಯಲಿ ಮಂಗಳೋಲೆ ತಂದವಗೆ ವ್ಯಾಲತಪ್ಪಿದ ಶೈಲವನು ಬೆನಮ್ಯಾಲೆ ಪಿಡಿದವಗೆ ಖೂಳಗೆ ತೋರಿದ ... ಪದಗೋಲ ತಂದವಗೆ ಬಾಲಗೆ ಪಿತ ಗೋಳು ಮಾಡಿದ ಕೇಳಿ ಆ ದೈತ್ಯನ ಶೀಳ್ದವಗೆ 1 ಭೂಮಿಯ ಬೇಡಿ ನಿಸ್ಸೀಮ ಬಲಿನೃಪನಾ ಹಮ್ಮು ಕರಗಿಸಿ ಪಾತಾಳಕಟ್ಟಿದವಗೆ ನೇಮದಲಿ ಕ್ಷಾತ್ರಸ್ತೋಮವ ನಿರ್‍ನಾಮ ಮಾಡ್ದವಗೆ ದಶಶಿರ ನಾಮವಳಿದ ಶ್ರೀರಾಮ ಚಂದಿರಗೆ ಸೋಮಕುಲದ ಸುನಾಮಿ ವರ್ಗಕೆ ಪ್ರೇಮರಸ ಸತ್ಯಭಾಮಾವರಗೆ 2 ಹರನ ಬಲಪಿಡಿದರೀ ತ್ರಿಪುರಸಂಹರೀಸಿದ ಶಿರಿವರಗೆ ಹರಿಯನೇರಿ ದನುಜಾರನ್ನೆಲ್ಲ ಸವರೀದ ಭೂವರಗೆ ಶರಣಜನರೊಳು ಕರುಣವಿರಿಸಿ ನಿರುತ ಪೊರೆದವಗೆ ಶ್ರೀ ನರಸಿಂಹವಿಠಲನಿಗೆ 3
--------------
ನರಸಿಂಹವಿಠಲರು
ಮಂಗಳಂ ಜಯ ಮಂಗಳಂ ರಾಮ ಸಜ್ಜನರ ಪ್ರೇಮ ಮಂಗಳಂ ಲೋಕಾಭಿರಘುರಾಮ ಪಟ್ಟಾಭಿರಾಮ ಪ ಮಂಗಳಂ ಶ್ರೀ ದಶರಥಾತ್ಮಜಗೆ ಮಂಗಳಂ ಅಯೋಧ್ಯವಾಸಿಗೆ ಮಂಗಳಂ ಜನಕಜಾಮಾತೆಗೆ ಮಂಗಳಂ ಶ್ರೀ ರಾಮಚಂದ್ರಗೆ ಅ.ಪ ದೇವದೇವೋತ್ತಮ ವೈಕುಂಠದೊಳಗೆ ಶ್ರೀ ಭೂಮೇರಿಂದ ಸೇವೆಗಳ ಕೈಗೊಳ್ಳುತ ಮಲಗಿರಲು ದೇವಋಷಿ ಬ್ರಹ್ಮೇಂದ್ರಾದಿಗಳು ಸಹಿತ ಶ್ರೀಧರನ ಸ್ತುತಿಸುತ ರಾವಣಾಸುರನುಪಟಳ ವರ್ಣಿಸಲು ಸಂತೈಸಿ ಅವರನು ಭೂಮಿಪತಿ ದಶರಥನ ಪ್ರೇಮ ಕುಮಾರನಾಗುದಿಸುತಲಯೋಧ್ಯದಿ ಪ್ರೇಮ ತೋರುತ ಮೆರೆದವಗೆ ಜಯ1 ದಶರಥನ ಸುತರಾಗಿ ಬೆಳೆಯುತಲಿ ಕೌಶಿಕನÀಯಜ್ಞವ ಕುಶಲದಲಿ ರಕ್ಷಿಸುತ ಹರುಷದಲಿ ಶಶಿಮುಖಿಯ ಕೂಡುತ ಕುಶಲದಲಿ ವನವಾಸ ಚರಿಸುತಲಿ ದಶಶಿರನು ಜಾನಕಿಯ ಕದಿಯಲು ಶಶಿಮುಖಿಯನರಸುತಲಿ ವನವನ ವಸುಧಿಪತಿ ಕಪಿಗಳ ಕಳುಹಿ ಸತಿ ಕುಶಲ ತಿಳಿಯುತ ನಲಿದವಗೆ ಜಯ 2 ಬಂದ ಕಪಿ ಕಟಕವನೆ ನೋಡುತ್ತ ಸಾಗರಕೆ ಸೇತುವೆ ಒಂದೇ ನಿಮಿಷದಿ ರಚಿಸಿ ಶೀಘ್ರದಲಿ ಮಂದಮತಿ ರಾಕ್ಷಸರ ವಧಿಸುತಲಿ ಅಂದಣವ ಕಳುಹಿ ಮಂದಗಮನೆಯ ಕರೆಸಿ ಬೇಗದಲಿ ಬಂದ ರಾಮನು ಎಂದು ಮಾರುತಿ ಮುಂದೆ ಭರತಗೆ ಕುಶಲ ತಿಳಿಸಲು ತಂದೆ ಕಮಲನಾಥ ವಿಠಲ ಮುಂದೆ ಪ್ರಜೆಗಳ ಪೊರೆದವಗೆ ಜಯ 3
--------------
ನಿಡಗುರುಕಿ ಜೀವೂಬಾಯಿ
ಮಂಗಳಂ ಶ್ರೀ ಶ್ರೀನಿವಾಸಗೆ ಶೃಂಗಾರರೂಪಗೆ ಮಂಗಳಂ ಶ್ರೀ ಶ್ರೀನಿವಾಸಗೆ ಪ. ಪದ್ಮನಾಭ ಪದ್ಮ ಮುಖಗೆ ಪದ್ಮಪಾದಗೆ ಪದ್ಮವತಿಯ ವರಿಸಿದವಗೆ ಪದ್ಮೋದ್ಭವನ ಸೇವೆ ಕೊಂಬಗೆ 1 ಆರ್ತ ಜನರ ಪೊರೆಯುವನಿಗೆ ಪಾರ್ಥಸಾರಥಿಗೆ ಕೀರ್ತಿಸುವರ ಕಾಯ್ದೆನೆಂದು ಅರ್ಥಿಯಿಂದ ನಿಂತಿರುವಗೆ 2 ಯೋಗಿಗಳಿಗೆ ನಿಲುಕದವಗೆ ಭೋಗಿಶಯನಗೆ ಭಾಗವತರು ಸ್ತುತಿಸಲು ಅನು- ರಾಗದಿಂದ ಲಾಲಿಪನಿಗೆ 3 ಭಕ್ತ ಜನರ ಕಾಯುವನಿಗೆ ಮುಕ್ತಿದಾಯಕನಿಗೆ ನಿತ್ಯಮುಕ್ತ ನಿಗಮವೇದ್ಯ ಸತ್ಯಸಂಕಲ್ಪ ಹರಿಗೆ 4 ಭೂಪರೈವರ ಪೊರೆದವಗೆ ತಾಪಹರನಿಗೆ ಗೋಪಾಲಕೃಷ್ಣವಿಠ್ಠಲಗೆ ಶ್ರೀಪತಿ ಶ್ರೀ ಶ್ರೀನಿವಾಸಗೆ 5
--------------
ಅಂಬಾಬಾಯಿ
ಮಂಗಳವೆನ್ನಿರೆ ಮದನಗೋಪಾಲನಿಗೆ ಮಂಗಳವೆನ್ನಿರೆ ಮಾಧವಗೆ ಪ ಮಂಗಳವೆನ್ನಿರೆ ಮಾಮನೋಹರನಿಗೆ ಮಂಗಳವೆನ್ನಿರೆ ಮುರಹರಗೆ ಅ.ಪ ಭುವನಮೋಹನ ಶಾಮಲಸುಂದರಾಂಗಗೆ ಅಮಿತಪರಾಕ್ರಮ ಅಚ್ಚುತಗೆ ನವನವಲೀಲೆಯ ತೋರಿದ ದೇವಗೆ ಸುವಿನಯದಿಂದ ಶ್ರೀ ಶ್ರೀಧರಗೆ1 ಶಂಖು ಚಕ್ರಪೀತಾಂಬರಧಾರಿಗೆ ಬಿಂಕದಿಂದ ಮುರಳಿಯನೂದಿದಗೆ ಶಂಕರಾದಿ ಸುರಸೇವಿತಗೆ ನಿಷ್ಕ- ಳಂಕದಿ ಭಜಿಪರ ಪೊರೆದವಗೆ2 ಪರಿಪರಿ ವಿಧದಲಿ ಹರಿ ಸ್ಮರಣೆಯ ಮಾಡೆ ಪರಾಭವನಾಮ ಸಂವತ್ಸರದಿ ದುರಿತಗಳೆಲ್ಲವ ಪರಿಹರಿಸುತ ಕಾಯ್ವ ಸಿರಿವರ ಕಮಲನಾಭ ವಿಠ್ಠಲನಿಗೆ3
--------------
ನಿಡಗುರುಕಿ ಜೀವೂಬಾಯಿ
ಮಗಳೆಂದು ಬೆಳಗಿರೆ ಕುರಂಗಕೇತು ವದನೆಯರೆ ಪ ಕುಂಡಲಿಶಯನ ಶ್ರೀಧವಗೆ | ಕೋದಂಡಪಾಣಿ ವಾವನಗೆ | ಪಾಂಡವಪಕ್ಷ ಪಿಡಿದವಗೆ | ಪಂಢರಿಪುರ ನಿವಾಸನಿಗೆ 1 ಸುರೇಶಮದವಿಭಂಜನಗೆ | ಪುರಾರಿ ಹರನ ಪೊರೆದವಗೆ | ದರಾರಿ ಪದುಮಗದಾಧರಗೆ | ಧರಾಮರಾರ್ಚಿತಾಂಘ್ರಿಗೆ 2 ಚಟುಲ ಶಾಮಸುಂದರಗೆ | ವಿಠಲವೀಶವಾಹನಗೆ | ಕುಟಿಲ ಚÀದುರೆಯರು ಬೇಗ | ಕುಠಾರಿಧರ ನರಮೃಗಗೆ 3
--------------
ಶಾಮಸುಂದರ ವಿಠಲ
ಶರಣು ಹೋಗುವೆನಯ್ಯ ನಾನು ಪ ಸಿರಿ ಅಜಭವ ಶಕ್ರ ಸುರಸ್ತೋಮಗಳನೆಲ್ಲ ಸರಸದಿಂದ ಆಳ್ವ ಪರಮಪುರುಷ ಹರಿಗೆ ಶಿರಬಾಗಿ ನಮಿಸುತ ಅ.ಪ. ನಿರುತ ಆನಂದದಿ ಮೆರೆದು ಇರುವಂಥ ನಿರಜ ನಿತ್ಯನು ಆದ ಉರಗನ ಮೇಲ್ವರಗುತ ಪರಮ ಪರಾತ್ಪರ ಪರಮವೇದದ ಸಾರ ಪರಮ ಸದ್ಗುಣ ಪೂರ್ಣ ಪುರುಷಸೂಕ್ತ ವಂದ್ಯ ಪರಿಪರಿ ರೂಪದಿ ಸರ್ವತ್ರ ಇರುವಂಥ ನಿರ್ಗುಣ ನಿರಾಕಾರ ನಿರುಪಮ ನಿಸ್ಸೀಮ ನಿರುತ ತೃಪ್ತನು ಆದ ಸರ್ವಸಾರ ಭೋಕ್ತ ಸರ್ವರ ಬಿಂಬನು ಸರ್ವಗುಣ ಪೂರ್ಣ ಸರ್ವರ ಆಧಾರ ಸರ್ವೇಶ ಸ್ವತಂತ್ರ ಸರ್ವಶಬ್ದ ವಾಚ್ಯ ಸರ್ವರಿಂ ಭಿನ್ನನು ಸರಸಸೃಷ್ಟಿಯ ಮಾಳ್ವ ನೀರಜನಾಭಗೆ ಚರಣವ ಪಿಡಿಯುತ್ತ ಉರುಗಾಯನ ದೇವ ಸಲಹು ಸಲಹೆಂದು 1 ವಾರಿಯೊಳಾಡುವ ಭಾರವಹೊರುವ ಕೋರೆಯತೀಡುವ ಕರುಳಾನು ಬಗೆಯುವ ವರವಟು ಆಗುವ ಪರಶುವ ಪಿಡಿಯುವ ನಾರಿಯ ಹುಡುಕುವ ನಾರಿಯ ಕದಿಯುವ ಬರಿಮೈಯ್ಯ ತೋರುವ ತುರುಗವನೇರುವ ನಾರಿಯು ಆದವ ಭಾರತ ಮಾಡುವ ವರ ಸಾಂಖ್ಯ ಹೇಳುವ ಕರಿಯನು ಪೊರೆಯುವ ಪೋರಗೆ ಒಲಿದವ ವರ ಋಷಭನಾದ ಹರಿ ಯಜ್ಞ ನಾದವ ತರಿವ ರೋಗಂಗಳ ವರಹಂಸ ರೂಪನು ತುರುಗ ವೇಷಧಾರಿ ನಾರಾಯಣ ಮುನಿಯೆ ಗುರು ದತ್ತಾತ್ರೇಯನೆ ಪರಿಸರ ಪರಮಾಪ್ತ ಪೊರೆಯೊ ಮಹಿದಾಸನೆಂದು ಕರವೆತ್ತಿ ಮುಗಿಯುತ 2 ಪಾಪಿಯ ಪೊರೆದವಗೆ ತಾಪ ಇಲ್ಲದವಗೆ ಅಪವರ್ಗದಾತಗೆ ವಿಪನ ಏರಿದವಗೆ ಗೋಪತಿಯಾದವಗೆ ತಾಪವ ಮೆದ್ದವಗೆ ಚಾಪವ ಮುರಿದವಗೆ ಚಪಲ ಇಲ್ಲ ದವಗೆ ಕಪಟರ ವೈರಿಗೆ ಗುಪ್ತದಿ ಇರುವಗೆ ವಿಪ್ರನ ಸಖನಿಗೆ ಅಪ್ರಮೇಯನಿಗೆ ಗೋಪೇರ ವಿಟನಿಗೆ ತಾಪಸ ಪ್ರೀಯಗೆ ವಿಪ್ರಶಿಶು ತಂದವಗೆ ಮುಪ್ಪಿಲ್ಲ ದವಗೆ ತ್ರಿಪುರಾರಿ ಸಖಗೆ ಕೃಪಣ ವತ್ಸಲನಿಗೆ ತಪ್ಪು ಮಾಡದವಗೆ ಆಪ್ತತಮನಿಗೆ ಸಪ್ತ ಶಿವವ್ಯಕ್ತನಿಗೆ ಶ್ರೀಪತಿಯಾದವಗೆ ಕಪಟನಾಟಕ ಪ್ರಭು ಗೋಪಾಲಕೃಷ್ಣಗೆ ಒಪ್ಪಿಸಿ ಸರ್ವಸ್ವ ಅಪ್ಪನೆ ಅಪ್ಪನೆ ತಪ್ಪದೆ ಸಲಹೆಂದು 3 ಅನ್ನವು ಆದವಗೆ ಅನ್ನಾದ ನೆಂಬುವಗೆ ಅನ್ನದ ಖ್ಯಾತನಿಗೆ ಚಿನ್ಮಯ ರೂಪಗೆ ಬೆಣ್ಣೆಯ ಕಳ್ಳಗೆ ಅನಾಥನಾದವಗೆ ಕನಕಮಯನಿಗೆ ಅನಂತರೂಪನಿಗೆ ಉಣ್ಣದೆ ಇರುವವಗೆ ಉಣ್ಣುತ ಉಣಿಸುವವಗೆ ಜ್ಞಾನಿಗಮ್ಯನಿಗೆ ಜ್ಞಾನ ದಾಯಕನಿಗೆ ಗುಣತ್ರಯ ದೂರಗೆ ಭಾನುವ ತಡೆದವಗೆ ಆನತ ಬಂಧುವಿಗೆ ಅನುಪಮನಾದವಗೆ ತನುಮನ ಪ್ರೇರಿಪಗೆ ದಾನವ ವೈರಿಗೆ ತನ್ನಲ್ಲೆ ರಮಿಸುವನಿಗೆ ಮನ್ಮಥ ಪಿತನಿಗೆ ಪೆಣ್ಣಿನ ಪೊರೆದವಗೆ ಅಣುವಿಗೆ ಅಣುವಿಹಗೆ ಘನಕೆ ಘನ ತಮನಿಗೆ ಕಣ್ಣಿಲ್ಲದೆ ನೋಳ್ಪ ಉನ್ನತ ಪ್ರಭುವಿಗೆ ಬೆನ್ನು ಬೀಳುವೆ ನಾನು ಇನ್ನು ಕಾಯೋ ಎಂದು 4 ಹೇಯನಾಗದ ಶೃತಿ ಗೇಯನು ಸುಜನರ ಪ್ರೀಯನು ಸರ್ವರ ಕಾಯುವ ಸುಂದರ ಹಯಮುಖ ಸರ್ವದ ಪ್ರಾಯದಿ ಮೆರೆಯುವ ಗಾಯನ ಪ್ರಿಯನಾದ ಮಾಯಾರಮಣ ಭಾವ ಮಾಯೆ ಹರಿಸಿ ಮುಕ್ತಿ ಭಾಗ್ಯ ಭಕ್ತರಿಗೀವ ತೋಯಜಾಂಬಕ ಸುರ ನಾಯಕರಿಗೆ ಭಕ್ತಿ ತೋಯದಿ ಮುಳುಗಿಪ ಶ್ರೀಯರಸಾಭಯ ದಾಯಕ ಗುರು ಮಧ್ವ ರಾಯರ ಪ್ರಿಯನಾದ ಜೇಯ ಜಯಮುನಿ ವಾಯುವಿನ ಅಂತರದಿ ನವನೀತ ಧರಿಸಿರ್ಪ ತಾಂಡವ ಸಿರಿಕೃಷ್ಣ ವಿಠಲ ರಾಯನಿಗೆ ಕಾಯ ವಾಚಮನದಿ ಗೈಯ್ಯುವ ಸಕಲವನು ಈಯುತ ನಮಿಸುತ ಜೀಯನೆ ಜೀಯನೆ ಕಾಯಯ್ಯ ಕಾಯೆಂದು 5
--------------
ಕೃಷ್ಣವಿಠಲದಾಸರು
ಶೇಷಶಯನ ಶ್ರೀಕೃಷ್ಣನಿಗಾರತಿ ಸತಿ ಲಕುಮಿಯು ಮಾಡಿದಳು ಪ ಸಾಸಿರನಾಮನ ಭೂಸುರಪಾಲನ ಸೋಸಿನಿಂದ ಸ್ಮರಿಸುತ ಮನದಿ ಅ.ಪ ಅಂಬುಧಿಯುದುಕದಿ ಆಲದ ಎಲೆ ಮೇಲೆ ಅಂಗುಟವನು ಬಾಯೊಳಗಿಟ್ಟು ತುಂಬಿಗುರುಳ ಮುಖಕಮಲದ ಚಲುವಗೆ ಸಂಭ್ರಮದಲಿ ಮುತ್ತಿನಾರತಿಯ 1 ಮಂದರಧರ ಗೋವಿಂದಗೆಮ್ಮಯ ಕುಂದುಗಳೆಣಿಸದೆ ಸಲಹೆನ್ನುತಾ ವಂದಿಸಿ ಪ್ರಾರ್ಥನೆ ಮಾಡುತ ಬೇಗದಿ ಇಂದಿರೇಶ ಸಲಹೆಂದೆನುತ 2 ಗೋವರ್ಧನವನು ಎತ್ತಿ ಸುಜನರನು ಗೋಗೋಪಾಲರ ಪೊರೆದವಗೆ ಗೋಪತಿ ಕಮಲನಾಭ ವಿಠ್ಠಲನಿಗೆ ಗೋಪಿಯರೊಡನಾಡುವ ಹರಿಗೆ 3
--------------
ನಿಡಗುರುಕಿ ಜೀವೂಬಾಯಿ