ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೃಢಚಿತ್ತದೊಳಗೆನ್ನ ಒಡೆಯನೀತಗೆ ಮುನ್ನ ಪಡಿಯೆನಿಪರಿನ್ನುಂಟೆ ಪೊಡವಿಯಲ್ಲಿ ಜನವಾರ್ತೆಯನೆ ಕೇಳಿ ವನಿತೆಯೊಳು ಖತಿತಾಳಿ ಇನಿತು ಕಾಡಿದ ಚಾಳಿಯೊರೆವೆ ಕೇಳಿ ಮಡಿವಳನ ನುಡಿಗಾಗಿ ಕಡುಮೂರ್ಖ ತಾನಾಗಿ ಅಡವಿಗಟ್ಟುವರೇನೆ ಮಡದಿಯನ್ನೆ ಧರ್ಮಪತ್ನಿಯುಮಂತು ಪೂರ್ಣಗರ್ಭವನಾಂತ ಅರ್ಧಾಂಗಿಯನ್ನುಳಿದ ನಿರ್ದಯಾತ್ಮ ದಯೆಯೆಂಬುದಿವನಲ್ಲಿ ತೋರದಿಲ್ಲಿ ಪ್ರಿಯರಾರು ಮತ್ತಿವಗೆ ಧಾತ್ರಿಯಲ್ಲಿ ಭಯವಿಲ್ಲ ಮಾತಿನೊಳು ನಯವದಿಲ್ಲ
--------------
ನಂಜನಗೂಡು ತಿರುಮಲಾಂಬಾ
ನಿಂದಿಸಿದ್ದು ಕುಂದಾದದ್ದೇನೊ ಮಂದಮತಿಗಳು ನಿಂದು ಸುಜನರಿಗೆಲ್ಲ ಪ. ಅಂದನುವಾಗಿಲ್ಲೆ ಇಂದಿರೇಶನು ಮಂದಗಮನೆ ದ್ರೌಪದಿಗೆ ಅ.ಪ. ಕಂದನೆಂದು ಕೌರವನ ಸೇವೆಗೆ ಆ ನಂದದಿಂದ್ಯವರ ಬೇಡೆಂದ ಮುನಿ ಬಂದರತ್ನವ ಬಿಟ್ಟನ್ನವ ಬೇಡಿಬಾರೆನೆ ಇಂದು ಮುಖಿ ಕೈಯಿಂದಿಡಿಸಿದ ಕೃಷ್ಣ 1 ಖಡ್ಗ ತೋರಿ ಬಳ ಪ್ರಹ್ಲಾದನಂಜಿಸೆ ಗುಡ್ಡ ಪೊತ್ತ ನರಹರಿಯಾಗ ಹೆಡ್ಡನೆ ತೋರುವೆನೆಂದು ಕಂಬದಿ ದೊಡ್ಡ ಮೃಗರೂಪದಲಂಜಿಸಿದ 2 ತೊಡೆಯನು ಬಿಡು ಎನುತೊಡನೆ ನೂಕಲು ಪೊಡವಿಯಲ್ಲಿಹುದು ನಡೆ ಬಾಲಕನೆನೆ ಕಡುಭಯದಲಿ ಧೃವ ಒಡನೆ ಹರಿಯ ಪಾದ ಬಿಡದೆ ಧ್ಯಾನಿಸೆ ದೃಢವರವಿತ್ತ ಹರಿ (ಕಡೆ ಹಾಯಿಸಲು) 3 ಕರಿಯ ಕಂಬದ ತೆರದಿ ನಿಲಿಸೆ ನಕ್ರ ಪೊರೆದವನಾರೋ ಹರಿಯಲ್ಲದೆ ಶರಣಾಗತ ಚಿಂತಾಮಣಿ ಎನೆ ಕರಿ ಪರಿದು ಚಕ್ರನಿ ನಕ್ರನ ಬೇಗ 4 ಏಕಾದಶಿವ್ರತ ಏಕಭುಕ್ತನ ನೀರೆಡಿಸೆ ಮಾನುನಿ ಬರಲು ಹರಿತಾ ಕರುಣಿಪನೆಂದು ತರಳನ ಶಿರಕೆ ಕೈಹಾಕೆ ಶ್ರೀ ಶ್ರೀನಿವಾಸನ ಸುತತಾ ಕರುಣಿಸಿದ 5
--------------
ಸರಸ್ವತಿ ಬಾಯಿ