ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಫಣಿರಾಜಶಯನ ರುಕ್ಮಿಣೀ ದೇವಿಯೊಡಗೂಡಿ ಕುಳಿತಿರ್ದು ಸತಿಯೊಡನೆ ಅಣಕವಾಡಿದನು ಇನಿತೆಂದು 1 243 ಹೇ ರಾಜಕನ್ನಿಕೆ ಭೂರಮಣ ನಾನಲ್ಲ ನಾರದನ ನುಡಿಗೆ ನಳಿನಾಕ್ಷಿ 2 244 ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು ಸುಕುಮಾರಿ ಎನಲು ಪರ ವಶಳಾದಳಾಗ ಮಹಲಕ್ಷ್ಮಿ 3 245 ಈ ಮಾತ ಕೇಳಿ ಕೈ ಚಾಮರವನೀಡಾಡಿ ಭುಗಿಲೆಂದು ಮಲಗಿದಾ ಕಾಮಿನಿಯ ಕಂಡ ಕಮಲಾಕ್ಷ 4 246 ಕಂಗೆಟ್ಟಳೆಂದು ತನ್ನ ಅಂಗನೆಯ ಬಿಗಿದಪ್ಪಿ ಮುಂಗುರುಳ ತಿದ್ದಿ ಮುದ್ದಿಸಿ | ಮುದ್ದಿಸಿ ಮಾತಾಡ್ಡ ಕಂಗಳಶ್ರುಗಳ ಒರೆಸುತ್ತ5 247 ಸಲಿಗೆ ಮಾತಿನ ಬಗೆಯ ತಿಳಿಯದಲೆ ಹೀಗೆ ಚಂ ಚಲವನೈದುವರೆ ಚಪಲಾಕ್ಷಿ | ಚಪಲಾಕ್ಷಿ ಏಳೆಂದು ತÀಲೆಯ ಮೇಲಿಟ್ಟ ಕರಪದ್ಮ 6 248 ಶ್ರೀ ದೇವಿ ನಿನ್ನೊಳು ವಿನೋದ ಮಾಡಲಿಷ್ಟು ವಿ ಅನುದಿನ | ಅನುದಿನದಿ ಸ್ಮರಿಸುವರ ಕಾದುಕೊಂಡಿಹೆನು ಬಳಿಯಲ್ಲಿ 7 249 ಹಿಗ್ಗಿದಳು ಮನದಿ ಸೌಭಾಗ್ಯ ಭೂಮಿನಿಯು ಅಪ ವರ್ಗದನ ನುಡಿಗೆ ಹರುಷಾದಿ | ಹರುಷದಿಂದಲಿ ಪಾದ ಯುಗ್ಮಕೆರಗಿದಳು ಇನಿತೆಂದು 8 250 ಜಗದೇಕ ಮಾತೆ ಕೈ ಮುಗಿದು ಲಜ್ಜೆಯಲಾಗ ಮಾತಾಡಿದಳು ಪತಿಯ ಮೊಗವ ನೋಡುತಲಿ ನಳಿನಾಕ್ಷಿ 9 251 ಪರಿಪೂರ್ಣಕಾಮ ನಿನ್ನರಸಿ ನಾನಹುದು ಸ್ವೀ ಕರಿಸಿದೆಯೊ ಎನ್ನ ಸತಿಯೆಂದು | ಸತಿಯೆಂದ ಕಾರಣಾ ಕ್ಷರಳೆನಿಸಿಕೊಂಡೆ ಶ್ರುತಿಯಿಂದ10 252 ಭುವನಾಧಿಪತಿ ನೀನು ಅವಿಯೋಗಿ ನಿನಗಾನು ನೃಪರ ಪತಿಯೆಂದು | ಪತಿಯೆಂದು ಬಗೆವೆನೇ ಸವಿ ಮಾತಿದಲ್ಲ ಸರ್ವಜ್ಞ 11 253 ಭಗವಂತ ನೀನು ದುರ್ಭಗ ದೇಹಗತರವರು ತ್ರಿಗುಣವರ್ಜಿತವು ತವರೂಪ | ತವರೂಪ ಗುಣಗಳನು ಪೊಗಳಲೆನ್ನಳವೆ ಪರಮಾತ್ಮ12 254 ಭಾನು ತನ್ನಯ ಕಿರಣ ಪಾಣಿಗಳ ದೆಸೆಯಿಂದ ಪಾನೀಯಜಗಳನರಳಿಸಿ | ಆರಳಿಸಿ ಗಂಧ ಆ ಘ್ರಾಣಿಸಿದಂತೆ ಗ್ರಹಿಸೀದಿ13 255 ಬೈದವನ ಕುತ್ತಿಗೆಯ ಕೊಯ್ದು ಅಂಧಂತಮಸ್ಸಿ ಪರಿಪಂಥಿ ನೃಪರನ್ನು ಐದುವೆನೆ ನಿನ್ನ ಹೊರತಾಗಿ 14 256 ನಿಮ್ಮನುಗ್ರಹದಿಂದ ಬ್ರಹ್ಮರುದ್ರಾದಿಗಳ ನಿರ್ಮಿಸಿ ಸಲಹಿ ಸಂಹಾರ | ಸಂಹಾರ ಮಾಡುವೆನು ದುರ್ಮದಾಂಧರನಾ ಬಗೆವೇನೆ 15 257 ಮಂಜುಳೋಕ್ತಿಯ ಕೇಳಿ ಅಂಜಲ್ಯಾತಕೆಂದು ನವ ಕಂಜಲೋಚನೆಯ ಬಿಗಿದಪ್ಪಿ | ಬಿಗಿದಪ್ಪಿ ಮುದ್ದಿಸಿದ ಧ ನಂಜಯ ಪ್ರಿಯನು ಸಥೆಯಿಂದ16 258 ನಿನಗೆ ಎನ್ನಲಿ ಭಕುತಿ ಎನಿತಿಹುದೊ ಕಂಡೆ ಎಂದೆಂದು ಇಹುದು ಇದ ಕನುಮಾನವಿಲ್ಲ ವನಜಾಕ್ಷಿ 17 259 ದೋಷವರ್ಜಿತ ರುಕ್ಮಿಣೀಶನ ವಿಲಾಸ ತೋಷದಲಿ ಕೇಳಿ ಪಠಿಸಿದ | ಪಠಿಸಿದಂಥವರ ಅಭಿ ಲಾಷೆ ಪೊರೈಸಿ ಸಲಹೂವ 18 260 ನೀತಜನಕ ಶ್ರೀ ಜಗನ್ನಾಥ ವಿಠ್ಠಲ ಜಗ ನ್ಮಾತೆಯೆನಿಸುವಳು ಮಹಲಕ್ಷ್ಮಿ | ಮಹಲಕ್ಷ್ಮಿ ಸುತ ಬ್ರಹ್ಮ ಪಾತ್ರನೆನಿಸುವ ಗುರು ರುದ್ರ 19
--------------
ಜಗನ್ನಾಥದಾಸರು
ಜಯ ಜಯ ಕೃಪಾಂಬುಧಿಯೆ ಜಯ ಸುಗುಣ ಶರನಿಧಿಯೆ ಜಯತು ಸಂಶ್ರುತನಿಧಿಯೆ ವಿಮಳ ಸುಧಿಯೇ ಪ ಜಯ ಸಮಸ್ತೋಪಧಿಯೆ ಜಯ ಸರ್ವಧೀಮತೆಯೇ ಜಯ ಜಯತು ಸಲಹೆನ್ನ ಸೌಭಾಗ್ಯ ನಿಧಿಯೆ ಅ.ಪ ನತ ನಿರ್ಜಿತ ವ್ರಾತೆ ರತಿಪತಿಪಿತ ಪ್ರೀತೆ ರತುನಕರ ಸಂಜಾತೆ ನುತಿಸಲೆನ್ನಳವೆ ನಿನ್ನನು ಲೋಕಮಾತೆ 1 ವಿಗಡವಿಶ್ರುತ ಮಾಯೆ ತ್ರಿಗುಣಾನ್ವಿತ ವಿದಾಯೆ ನಿಗಮ ನಿರುತೋಪಾಯೆ ನಿತ್ಯೆ ನಿರಪಾಯೆ ಜಗನ್ಮೋಹನೆ ಕಾಯೆ ಅಗಣಿತೋಪಮದಾಯೆ ಪೊಗಳಲೆನ್ನಳವೆ ನಿನ್ನನು ಲೋಕಮಾತೆ2 ಪರಮ ಶಕ್ತಿಗುಣಾಢ್ಯೆ ನಿರುತಾಗಮಾವೇದ್ಯೆ ಸ್ಮರನ ಪೆತ್ತತಿ ಚೋದ್ಯೆ ಸೌಖ್ಯ ಪ್ರದಾದ್ಯೆ ಸುರನಗರದಧಿನಾಥ ವರಲಕ್ಷ್ಮೀಕಾಂತನಾ ಅರಸಿ ಸಿರಿಮಾಲಕ್ಷ್ಮಿ ಭವರೋಗ ವೈದ್ಯೇ 3
--------------
ಕವಿ ಲಕ್ಷ್ಮೀಶ
ಶ್ರೀಸತ್ಯವ್ರತರು ಶಿರಿ ಸತ್ಯವ್ರತಸುರ ತರುವೆ ನಿಮ್ಮಯಪಾದವರಶತ ಪತ್ರಕ್ಕೆಭಿನಮಿಪೇ ಪ ಪರಮ ದುರ್ಮತದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿಯಾಗಿಹೆನಿರತ ಶ್ರೀ ಮದಾನಂದ ತೀರ್ಥರವರಸು ಭಾಷ್ಯಾಮೃತವ ನುಣಿಸೋ ಅ.ಪ. ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |ಸುಗುಣಿತವ ಭಕ್ತರ್ಗೆ ಕಾಡುವವಿಗಡ ಅಪಸ್ಮಾರ ಕುಷ್ಠವುಮಿಗಿಲು ರೋಗಾದಿಗಳ ಕಳೆಯುತಬಗೆ ಬಗೆಂದಲಿ ಸ್ತುತ್ಯರಾಗಿಹ 1 ಸರಿತು ಪ್ರವಹದಿ ಎರಡೆರಡು ಸುತರ್ಗಳಹರಣ ಪೋಗಲು ಖೇದದೀ |ವರದ್ವಿಜನು ರಘುನಾಥಾಖ್ಯ ಭಕ್ತಿಲಿಶಿರಿಸತ್ಯವ್ರತರನು ಸೇವೆಗೈಯ್ಯುಲುಅರಿತು ಸಂತಾನಾಷ್ಟ ಕಂಗಳತ್ವರಿತ ಕರುಣಿಸಿ ಪೊರೆದಗುರುವರ2 ಶಿರಿಸತ್ಯ ಸಮಧರೀ ವೃಂದಾವನದ ಬಳಿಶಿರಿಮನ್ಯಾಯಾಸುಧೆ ಪಠಿಸೇ |ಗುರುವರರು ಸಂತುಷ್ಟ ಪಡುತಲಿಶಿರವತೂಗಲು ಅಂತರಂಗದಿವರಸುವೃಂದಾವನವು ತನ್ನಯಶಿರವ ತೂಗುತ ತೋರಿತಚ್ಛರಿ 3 ವಾದಿಭಹರ್ಯಕ್ಷ ಮೇಧಾವಿ ವಿಭುಧೇಡ್ಯಸುಧಾಪಿವೃತಿ ಕರ್ತಾರ |ಮೇಧಿನಿಯ ಸಂಚರಿಸಿದುರ್ವಾದಿಗಳ ಬಲು ಖಂಡಿಸುತಭೋಧಿಸುತ ತತ್ವಗಳ ಸುಜನಕೆಹಾದಿಮೋಕ್ಷಕೆ ತೋರ್ದ ಯತಿವರ 4 ವೇದವಿದ್ಯಾಖ್ಯ ಸತ್ಕರಜರೆಂದೆನಿಸುತ್ತಮೋದ ತೀರ್ಥರ ಸೇವೆಗೈದೂ |ಹಾದಿ ಚರಿಸುತ ಸಾಂಗ್ಲಿಕ್ಷೇತ್ರದಿಆದರದಿ ವೃಂದಾವನವ ಪೊಕ್ಕುನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತ ಗುರುವರ 5
--------------
ಗುರುಗೋವಿಂದವಿಠಲರು
ಪೊಗಳಲೆನ್ನಳವೆ ನಿನ್ನ ಗುರುಗಳ ರನ್ನಪೊಗಳಲೆನ್ನಳವೆ ನಿನ್ನಗಣಿತಮಹಿಮೆಯವಸುಧೆಯ ಮೇಲೇಸೊ ಅಸುರರು ಪುಟ್ಟಿ ತ್ರಿ-ಕಂಜಮಿತ್ರನ ಸುತನೊಡನೆ ಸಖ್ಯವ ಮಾಡಿವಾನರನಿಕರವ ನೆರಹಿ ಸೇತುವೆಕಟ್ಟಿಕೃಷ್ಣನ ಸೇವೆಗೋಸುಗವೆ ಕುಂತಿಜನಾಗಿವೀರರಾಯರನೆಲ್ಲ ಸೆರೆಯನಾಳುವಂಥನಡುರಣದಲಿ ಬಂದು ಘುಡುಘುಡಿಸುತನಿಂದುಮಾಯಿಗಳುಹೆಚ್ಚಿ ಮಹಿಯೆಲ್ಲ ವ್ಯಾಪಿಸೆದಶಉಪನಿಷತ್ತುಗಳಿಗೆ ಟೀಕವಮಾಡಿವಾಲುಕ ಮುಷ್ಟಿ ಅಷ್ಟವು ದಿಗ್ವಿಜಯ ರಾಮ-ಮೂರ್ಹತ್ತು ಎರಡು ಲಕ್ಷಣವುಳ್ಳ ಕಾಯನೆಆನಂದತೀರ್ಥ ನಿಜಾನಂದಚರಿತ ಪಂ-
--------------
ಗೋಪಾಲದಾಸರು