ಒಟ್ಟು 45 ಕಡೆಗಳಲ್ಲಿ , 27 ದಾಸರು , 39 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಥಮ ವಚನ ಕಾಂತಿಯಿಂದಿರುವ | ಚಕ್ರ ಪದುಮ ಗದೆ | ಅದರೊಳಗೆ ಬಿದ್ದಿರುವ ಪರಮಪವಿತ್ರ ತ್ಯುಬುಗಳ ತೆಗೆದು | ನೇತ್ರದೊಳಗೊತ್ತಿ | ಪರಿಮಳವಾದ ಗಂಧಗಳಿಂದ ಅಲಂಕೃತ | ಸಿರಿದೇವಿ ವರದೊಡೆಯ ಮೇಲಿದ್ದು | ಕರಕಮಲದಲೊತ್ತುವ | ದಿನವೆ ಪರಮ ಪುಣ್ಯೋದಯ ಪ ಪಾದ | ಸರಸೀರುಹ ಸರಸದಿಂ ಕೊಂಡಾಡಿ | ನೆರಳಿ ಮರಳೀ ಸೌಖ್ಯದಾನಂದ | ಶರಧಿಯೊಳು ಮುಣುಗಿ ಮುಣುಗಿ ಏಳುತ | ಸೌಖ್ಯದಾನಂದ ಭಕ್ತಿಭಾವಗಳಿಂದ ಕರುಣಾಳು ಕೃಷ್ಣ ತ್ವರಿತದಲಿ ತನ್ನ ಸೇವಕ ಜನರೊಳಗೆ | ಸೇರಿಪ್ಪ ನಾ ಅರಿಯನು ನಾನೊಂದು ಸ್ತೋತ್ರ ಮಾಡುವದಕ್ಕೆ | ವರವ್ರಜ ತರುಣಿಯರು ಏನು ಪುಣ್ಯವ ಮಾಡಿದರೊ | ಸರುವದಾ ಹರಿಯನ್ನು ಕಾಣುವರು ಕಂಗಳಲಿ | ಪರಿಹಾಸ್ಯ ನುಡಿಯಲ್ಲ | ಪರಮ ಪವಿತ್ರರಿಗೆ ದೊರೆ | ಸಿರಿ ವಿಜಯವಿಠ್ಠಲನು | ಕರವಿಡಿದು ಎನ್ನಭೀಷ್ಟವನಿತ್ತು | ಪರಿಪಾಲಿಸಬೇಕೆಂದು ಭಕ್ತ ಕೇಳಿದನು 1 ದ್ವಿತೀಯ ವಚನ ಜಲಜನಾಭನÀ ರಥದ ದಡದ ಮೇಲೆ ನಿಲ್ಲಿಸಿ | ಜಲದೊಳಗೆ ತಾ ಮುಳುಗಿ ಅಕ್ರೂರ ಕಣ್ಣು ತೆರೆಯೆ | ಕಲುಷವರ್ಜಿತನಾದ ಕೃಷ್ಣ | ಹಲಧರನ ಸಹ ಮೇಳ ಸಂಭ್ರಮದಿ | ಜಲದೊಳಗೆ ತಾ ಕಂಡು | ನಾ ಪೇಳಿದ ಮಾತು ನಡಿಸಿ | ಬಲವಂತದಲಿ ಬಿದ್ದ ಭವರೋಗ ವೈದ್ಯನ ಮಾತೆ | ಲಲನಾಮಣಿಗೆ ಏನು ಹೇಳುವೆನು | ಸುಲಭವಾಗಿ ಎಮಗೆ ಅಭೀಷ್ಟಪ್ರದವಿದು | ಎಂದೆನುತ ತಂದೆ ನಂದಗೋಪನು | ಯೋಚಿಸಿ ಮನದಲಿ ಚಿಂತೆಯಗೊಂಡು | ಹನುಮೇಶ ವನಜಾಕ್ಷ | ಘನಮಹಿಮ ಎನ್ನ ಮನದ ಚಿಂತೆಯನು ಹನನವ ಮಾಡಿ ಎನ್ನ ಕೈಪಿಡಿಯಲಾಗದೆ ಈಗ ಎನುತ | ಮೇಲೇಳೆ ಸನಕ ಸನಂದನ ಸನತ್ಕುಮಾರ ಸಹ | ವನಜ ಸಂಭವ ಜನಕ ವೈಕುಂಠಪತಿ ಕೃಷ್ಣ | ಕನಕ ರಥದ ಮೇಲೆ ನಿಂತಿದ್ದು ತಾ ಕಂಡು | ಕರವೆರಡು ಜೋಡಿಸಿ | ಭರದಿ ಭಕ್ತಿಯಗೊಂಡು | ನರಜನ್ಮ ಹುಳು ನಿನ್ನ ಮಹಿಮೆಗಳ ಅರಿಯದೆ | ಜಲದೊಳಗೆ ನೀ ಬಿದ್ದಿ ಎನುತಲೀ ಯೋಚಿಸಿದೆ | ಚರಣದ ಮಹಿಮೆಗಳ | ಮರಣದಲಿ ಅಜಮಿಳಗೆ ದಯಮಾಡ ಬೇಕೈ | ಅರ್ಭಕ ಪ್ರಹ್ಲಾದ ನಿಜಮುನಿ ಶುಕಾಚಾರ್ಯರಂತೆ | ಅಪ್ರಾಕೃತ ಅಕಲಂಕ ಚರಿತ ಅಮರೇಂದ್ರ ವಂದಿತ | ಪಾಲಾ ವಿಜಯನ ರಥವನ್ನು ಸಾರಥಿಯಾಗಿ ದಯಾಸಮುದ್ರ ವಿಜಯವಿಠ್ಠಲನೇ2 ತೃತೀಯ ವಚನ ಅರವಿಂದನಾಭ ಕೃಷ್ಣ ಅಖಿಲಜನ ಪರಿಪಾಲ | ಕೃಪಾ ಸಮುದ್ರ | ಕಳತ್ರ | ಪರಿಪಾಲಿಸಬೇಕೆನ್ನ | ಪಾವನ ಚರಿತ್ರ | ಸುರಪತಿಗೆ ಅಸುರರ ಬಲನೀಗಿ ಆ | ವಿರಂಚಿ ಬಳಿಗೆ | ಶರಣೆಂದು ವರವೊಂದು ಕೇಳಿದೆ ವೈಕುಂಠಪತಿ ಕೃಷ್ಣ | ಕಂಟಕ ಕಂಸಾದಿಗಳ ಗೆಲಿದು | ಪಾದ | ಸರಸಿಜದೊಳು ಚಿತ್ತವಿರುವಂದದಲಿ | ಪರಮ ದಯಾಕರ ನಿನ್ನ ಮಹಾ ಮಹಿಮೆಗಳ | ಗರ್ವಿಷ್ಠನಾಗಿ ಮಲಗಿದವನಲ್ಲಿ | ಕೇಳ್ವ | ತ್ವರಿತದಲಿ ದಯಮಾಡಿ | ಭರದಿ ಪಾಲಿಸಬೇಕೆನ್ನ | ಭಕ್ತಜನ ವತ್ಸಲನೆ ಎನಲಾ ಮಾತಿಗೆ | ಇನ ಇಂದಿರೆ ಅರಸ | ಹನುಮೇಶ ಕನಕಮಯವಾದ ಪೀತಾಂಬರ | ಜನಿವಾರ | ಅನೇಕ ಅತರಿಗಳ ಗೆಲಿವ ಕನಕಮಯ | ಕಿರೀಟ ಚತುರ್ಭುಜ | ಕಟಕ ರತ್ನಮಯದುಂ | ಗುರ ವಾಹನ ಚಕ್ರವರ್ತಿಗೆ ತನ್ನ ನಿಜರೂಪವ3 ಚತುರ್ಥ ವಚನ ಆನಂದತೀರ್ಥ ಮುನಿವಂದ್ಯ | ಜ್ಞಾನಿಗಳ ವಲ್ಲಭ | ದೀನಜನ ಮಂದಾರ ನಾ | ನಿನ್ನ ಮೊರೆಹೊಕ್ಕು ಧೇನಿಸಲರಿಯೆ | ಆನೆಯನು ಆದರದಿ ಕಾಯ್ದ ಶ್ರೀನಿವಾಸ | ಸಾನುರಾಗದಿ ಪ್ರಹ್ಲಾದಗೊಲಿದ ಶ್ರೀನಿಧಿ ನರಸಿಂಹ | ಅನಾದಿ ಕಾಲದಿ ತಂದೆ ಬಂಧು ಬಳಗವು ಎಂದೆ | ಮಾನಿನಿ ದ್ರೌಪದಿ ಮೊರೆ ಇಟ್ಟಾಗ ಧ್ವನಿ ಕೇಳಿ | ಮಣಿ ಲಕುಮಿಗ್ಹೇಳದೆ | ಆನಂದಮಯನು ಅಕ್ಷಯವಿತ್ತು ಆಗ ಪರಿಪಾಲಿಸಿದಿ ಅದರಂತೆ | ಮಾನಹೀನನೆಂದು ನಿರಾಕರಿಸದೆ | ಧ್ಯಾನಕ್ಕೆ ಒಳಗಾಗಿ | ಮೌನಿಜನರನು ಕಾವ ಕ್ಷೋಣೀಶ ಮಾಣಿಕ್ಯ ಮಕುಟ ಕುಂಡಲಧರ | ಸಿರಿ ತುಳಸಿ | ಪರಿಮಳ ಸಿರಿಗಂಧ ಉದರದಲಿ ಬೆಳಗುವ | ಉಪೇಂದ್ರ ನಾಮ ಕೃಷ್ಣ ಉರಗೇಶಶಯನಾ | ನಿನ್ನ ದಾಸರದಾಸನೆಂದೆನುತ | ಕಾಣಸಿ ನಿನ್ನ ನಿಜರೂಪ | ನಿನ್ನ ಸ್ತೋತ್ರ ಮಾಡುವ ಭಕ್ತಗಣದೊಳಗೆ ನಿಲ್ಲಿಸೊ | ನಿನ್ನ ಮತ್ತೊಂದು ಪದಾರ್ಥ ಕೇಳುವವನಲ್ಲ | ತೀರ್ಥ ತೀರ್ಥಗಳಲ್ಲಿ ಮುಳುಗಿ ಬಂದವನಲ್ಲ | ಸಾರ್ಥಕವಾದಂಥ ಕೃತ್ಯ ಮಾಡುವನಲ್ಲ | ಸಾಧುಜನಸಂಗದಲಿ ಸೇರಿ ಪಾಡಿದವನಲ್ಲ | ಈ ನುಡಿ ಸತ್ಯವೇ ಲೇಸು ಪುಸಿಯಲ್ಲ | ಮಲ್ಲಮಲ್ಲರ ಗೆಲಿದ ಮಾಧವನು ನೀನಲ್ಲದೆ ಇನ್ನೊಂದು ದೈವವಿಲ್ಲದ ಮಧ್ವ ಮುನಿ ಹೃದಯಾಟ್ಟ ಪೀಠದೊಳು ವಾಸ ಮಾಡುವ ದೊರೆ ಉದ್ಧರಿಸಬೇಕೆನ್ನ ವಿಜಯವಿಠ್ಠಲನೆ 4 ಐದನೇ ವಚನ ಕರಿಯಬೇಕೆನ್ನ ಹಿರಿಯರೂ | ಇಡಲಾಗದ ಮನಸು ಸರ್ವದಾ ನಿನ್ನ | ಚರಣಾರವಿಂದ ದ್ವಂದ್ವದಲಿ | ಭರದಿಂದ ಮುದ್ರೆಯನಿಟ್ಟ | ತುತಿ ಮಾಡುವೆ ನಿನ್ನ | ಮುಚಕುಂದ ವರದ ನಿತ್ಯಾನಂದ ವಿಗ್ರಹ | ಸರಸಿರುಹಾಕ್ಷ ಸಜ್ಜನ ಪರಿಪಾಲಾ | ಪೂಜ್ಯ ಅವಗುಣ ವರ್ಜ ಅಕಳಂತ | ಮಹಾನುಭಾವ ಮಧ್ವೇಶ | ಈ ನುಡಿಯು ಪುಸಿಯಲ್ಲ | ಕರ ಪಿಡಿದು ಕಾಯ್ವರನ ಕಾಣೆ ಚರಣಾವಿಂದವನು ಭಜಿಪ ವೀಣೆ | ಈ ಕ್ಷೋಣಿಯೊಳಗೆನ್ನ ನರಜನ್ಮವು ಬಾರದೆ ಪರಿಪಾಲಿಸಬೇಕೆನ್ನ | ಪರಮ ಪವಿತ್ರ ಪಂಕೇರುಹನೇತ್ರ ಸಂಕಟಗಳ ಕಳೆದು | ಸೌಖ್ಯಪದ ವೈಕುಂಠದೊಳಗೆನ್ನ ನಿಲ್ಲಿಸೊ | ಭರದಿಂದ ನಿನ್ನ ನಾಮದ ಭಂಡಾರ ಕದ್ದ ಕಳ್ಳನೆನೆಸಿ | ಅರವಿಂದನಾಭ ನಿನ್ನ ಅಮರನೇ ವೈಕುಂಠ | ಕಾರಾಗೃಹದೊಳಗೆ ವಾಸ ಮಾಡಿಸು ದೇವ ಕೋಟಿ | ವರುಷಕೆ ಇದುವೆ ಎನಗೆ ಹರುಷ ಆನಂದಮಯ | ಇನ್ನೋರ್ವನಿಲ್ಲ ವಿಜಯವಿಠ್ಠಲನೇ 5
--------------
ವಿಜಯದಾಸ
(ಈ) ಲೋಕನೀತಿಯನ್ನು ಕುರಿತ ಕೃತಿಗಳು ಏನಯ್ಯ ದೊರೆಯೆ ನಿನಗಾನಂದವೆ ದೊರೆಯೆ ಪ ಮಾನಿತ ಜನರವಮಾನವ ನೋಡದೆ ಹೀನ ಜನರ ನುಡಿ ನೀನಿಲಿದಾಲಿಪುದು ಅ.ಪ ಜಾತಿಧರ್ಮವಿಲ್ಲಾ ಶಾಸ್ತ್ರದ ರೀತಿ ನಡತೆಯಿಲ್ಲ ಮಾತಿದು ಪುಸಿಯಲ್ಲಾ ಮಾನದ ಭೀತಿಯು ಮೊದಲಿಲ್ಲಾ ನೀತಿಯನರಿಯದ ಕೋತಿಗಳಂದದ ಜಾತಿಯ ಜನರೊಳು ಮಾತಿನವಾಶಿಯಿಲ್ಲ 1 ದುರ್ಜನರು ಬೆರೆದು ದೋಷ ವಿವರ್ಜಿತರನ್ನು ಜರಿದು ಲಜ್ಜೆಯ ನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು ಈ ಜಗದೊಳಗಿಹ ಸಜ್ಜನರಗಿಎ ಕುಲ ಕಜ್ಜಳರವಮತಿಗುಜ್ಜುಗಿಸುತ್ತಿಹ 2 ಗಂಡಬಿಟ್ಟಿಹರು ಗರತಿಯ ಕಂಡು ನಗುತಿಹರು ಮಿಂಡರ ಬೆರೆದಿಹರು ಮೇಲತಿ ದಿಂಡೆಯರಾಗಿಹರು ಭಂಡತನದಿ ಪರಗಂಡಸರೊಳು ಸಮ- ದಂಡೆಯೆನಿಸಿ ಬಲು ಚಂಡಿಸುತಿರ್ಪರೋ 3 ಕೇಳು ಹಂದೆಯಾಳು ಕ್ಲೇಶವ ಪೇಳಲು ಮತಿತಾಳು ಕೀಳುಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು ಕಾಳಮೂಳಿಯರ ಮೇಳದಿ ಹಿಗ್ಗುವ ಬಾಳುಗೇಡಿ ಜನರೊಳಿಗ ಬಲುಘನ 4 ಧರೆಯೊಳಧಿಕವಾದ ಶ್ರೀಪುಲಿಗಿರಿಯೊಳು ನೆಲೆಯಾದ ಸಿರಿವರ ನಿಜಪಾದ ಸೇವೆಯ ಕರುಣಿಸು ಬಹುಮೋದ ಶರಣಾಭರಣ ನಿಜಕರುಣವ ತೋರಿಸು ವರದವಿಠಲ ದೊರೆ ವರದದಯಾನಿಧೆ 5
--------------
ವೆಂಕಟವರದಾರ್ಯರು
(ಬಾಗಿಲು ತಡೆ) ಸಾರಸ ನಿಲಯೆ ಸಾಗರ ತನಯೆ ಸಾರೆ ಬಂದೆನು ಈಗ ಬೇಗ ಸಾರಿ ಬಾಗಿಲ ತೆಗೆ ಬೇಗ ಪ. ಸಾರು ಸಾರೆಲೊ ಸಾರಿಕೂಗುವನಾರೊ ಸಾರು ಬಾಗಿಲ ತೆಗೆ ನಾನು ಅ.ಪ. ಏಕಿಂತು ಕೋಪವೆ ಕೋಕಿಲಾರವೆ ನೀಂ ಕಟಾಕ್ಷಿಸು ಎನ್ನ ಮುನ ಸಾಕುಮಾಡುವುದಿದೆನ್ನ 1 ಸಾಕು ಸಾಕಿಂತು ಏಕೆ ಕೂಗುತಿರ್ಪೆ ಕಾಕು ನುಡಿಗಳುಸಲ್ಲ 2 ಪುಂಡರ ತಡೆವುದ ಕಂಡುಂಟು ಜಗದೊಳು ಗಂಡನ ತಡೆವರೆ ಭಾಮೆ ರಾಮೆ ಕಂಡವರೇನೆಂಬರೆ ಭಾಮೆ 3 ಗಂಡನಾರಿಗೆ ಹೆಂಡತಿಯಾರಿಗೆ ಪುಂಡಾಟವಾಡದೆ ಪೋಗು ಸಾಗು ಭಂಡನಾಗಿರ್ಪೆ ಪೋಗು 4 ವಲ್ಲಭೆ ನಿನ್ನೆದೆ ಕಲ್ಲಾಗಿರುವುದೆ ಬಲ್ಲವಳೆಂಬುವುದೆಲ್ಲೆ 5 ಬಲ್ಲೆ ಬಲ್ಲೆನೀ ಚಲ್ಲಾಟಗಳ ಸೊಲ್ಲಿಸದಾರನ್ನು 6 ದಶರಥರಾಮನೆ ಸೀತೆ ಖ್ಯಾತೆ ಪುಸಿಯಲ್ಲವೆಲೆ ಭೀತೆ 7 ನಿಶಿಚರರಿಲ್ಲಿಹರೇನೈ ಜ್ಞಾನಿ ವಿಷಮವರ್ತನವೇನೈ 8 ಅಂಗನೆ ನಿನ್ನ ಮೋಹನಾಂಗನಾದ ಶ್ರೀ ರಂಗ ನಾನೆಲೆ ಚಪ ಲಾಕ್ಷಿ ಲಕ್ಷ್ಮಿ | ಭಂಗಿಸಬೇಡೆನ್ನ ಲಕ್ಷ್ಮಿ 9 ತುಂಗ ವಿಕ್ರಮ ರಘು ರಾಮ ಶ್ಯಾಮ ರಂಗ ಕಾರುಣ್ಯಧಾಮ 10 ಪರಿ ಪೇಳುತೆ ಕೈಪಿಡಿದಳು ತ ನ್ನೋಪನ ವಂದಿಸಿ ರಾಣಿ ರಮಣಿ ಕೋಪರಹಿತೆ ಸುವಾಣಿ 11 ಭೂಪಶೇಷಾದ್ರೀಶನು ಕಾಂತೆಯ ಕೈಪಿಡಿದನು ನಲವೇರೆ ಅರರೆ ತಾಪಸನುತ ನಲವೇರೆ 12
--------------
ನಂಜನಗೂಡು ತಿರುಮಲಾಂಬಾ
3. ನೀತಿಬೋಧೆ ಓಲಗ ಸುಲಭವೋ ರಂಗೈಯನ ಪ ಓಲಗ ಸುಲಭವೊ ಪುಸಿಯಲ್ಲ ಕರುಣಾಲ-ವಾಲನಾದ ಕರಿರಾಜ ವರದನ ಅ.ಪ ದೂರ ಹೋಗಲಿಬೇಡ ತೊಡೆಯ ಗುದ್ದಲಿ ಬೇಡನೀರ ನೆರೆಯಬೇಡ ನಿಗಡದಲ್ಲಿರಬೇಡನಾರಾಯಣನೆಂಬ ನರನ ಯೋಗಕ್ಷೇಮಭಾರ ತನ್ನದೆಂಬ ಪ್ರಹ್ಲಾದ ವರದನ1 ಸಂತೇಲಿ ಮಾಡಿದ ಸಾಷ್ಟಾಂಗ ನಮಸ್ಕಾರದಂತೆ ಅಲ್ಲವೆ ಅನ್ಯರ ಭಜಿಸುವುದುಅಂತರಂಗದಲ್ಲಿ ಹರಿ ನೀನೆ ಗತಿಯೆಂದುಚಿಂತಿಸಿದರೆ ಕಾಯ್ವ ಶ್ರೀರಾಮಚಂದ್ರನ2 ತಪ್ಪು ಸಾಸಿರಗಳ ತಾಳಿ ರಕ್ಷಿಸುವತಪ್ಪು ಮೇಘವರ್ಣ ಕಾಂತಿಯಿಂದೊಪ್ಪುವಸರ್ಪಶಯನನಾದ ಸರ್ವಲೋಕೇಶÀನಅಪ್ರಮೇಯ ನಮ್ಮಪ್ಪ ಶ್ರೀಕೃಷ್ಣನ 3
--------------
ವ್ಯಾಸರಾಯರು
373ಶಿವನು ನೀನಾದರೆ ಶಿವನ ರಾಣಿ ನಿನಗೇನೊ ಅವಿವೇಕ ಮನುಜ ಈ ಮಾತು | ಈ ಮಾತು ಕೇಳಿದರೆ ಕವಿಜನರು ನಗರೆ ಕೈ ಹೊಡೆದು 1 374ಎಲ್ಲ ಬಂದೇ ಎಂಬ ಖುಲ್ಲ ಮಾನವ ನಿನ್ನ ವಲ್ಲಭೆಯ ಬೆರೆದು ಸಂತಾನ | ಸಂತಾನ ಪಡೆವೇಕೆ ಇಲ್ಲವೇ ಜನನಿ ಭಗಿನೇರು 2 375ಬಿಂಬವೊಂದೆ ಪ್ರತಿಬಿಂಬ ವೊಂದೆಂಬಿ ಈಶು ದ್ಧಾಂಬರದ ನೆರಳು ಕಪ್ಪಾಗೆ | ಕಪ್ಪಾದ ಬಳಿಕ ನೀ ನೆಂಬೊ ಈ ಮಾತು ಪುಸಿಯಲ್ಲಿ 3 376 ಎಲ್ಲ ಒಂದೆ ಎಂಬ ಸೊಲ್ಲು ಖರೆಯೆಂತೆನಲು ಖರೆಯೆಂಬ ಮಾತುಗಳು ಸುಳ್ಳೆನ್ನರೇನೊ ಸುಜನಾರು 4 377 ನಿಮ್ಮ ನಾ ಬೈದರೆ ನಮ್ಮ ನೀವ್ ಬೈದರೆ ಅದ್ವೈತ ಸುಮ್ಮನಿರಬೇಕು ಎಲೊ ಭ್ರಾಂತ 5 378 ಶುದ್ಧ ಬ್ರಹ್ಮನ ಸುಂಗುಣವ ಕದ್ದ ಪ್ರಯುಕ್ತ ಪ್ರ ಸಿದ್ಧ ಚೋರತ್ವ ನಿನ್ನಲ್ಲಿ | ನಿನ್ನಲ್ಲಿ ಪೊದ್ದಿತೊ ಉದ್ಧಾರವೆಲ್ಲೊ ಭವದಿಂದ 6 379 ಮಾಯವಾದಿಯ ಮತವು ಹೇಯವೆಂಬುದು ಸಿದ್ದ ತಾಯಿತಂದೆಗಳು ಸತಿಪುತ್ರ | ಸತಿಪುತ್ರರಗಲಿದರೆ ಬಾಯಿ ಬಿಟ್ಯಾಕೊ ಆಳುತಿದ್ದಿ 7 380 ಸುಳ್ಳಿಗಿಂತಧಿಕ ಮತ್ತಿಲ್ಲವೋ ಮಹಪಾಪ ಸುಳ್ಳು ಕಳ್ಳತನವು ನಿನ್ನಲ್ಲಿ | ನಿನ್ನಲ್ಲಿ ಉಂಟಾಯಿ ತಲ್ಲೊ ಜಾರತ್ವ ಇದರಂತೆ 8 381ಮೇ ಮಾತೆ ವಂಧ್ಯೆಯೆಂಬ ಈ ಮಾತಿನಂತೆ ಮು ಅಪುಸಿಯಿಂಬೀ ಮಾತುಗಳು ಭ್ರಾಮಕವೆ ಖರೆಯೊ ನಿಜವಲ್ಲ 9 382 ಶಶವಿಷಾಣಗಳೆಂದು ಒಪ್ಪುವರೆ ಬಲ್ಲವರು ಮೊಲೆಹಾಲು ಉಂಡಿತೋ ರಿಸೊ ಮಿಥ್ಯೆ ಸತ್ಯವಹುದೇನೊ 10 383ಸತ್ಯವೆಂದರೆ ಖರೆಯು ಮಿಥ್ಯೆಯೆಂದರೆ ಸುಳ್ಳು ನ್ಮತ್ತ ಈ ಮಾತು ನಿಜವೆಲ್ಲಿ 11 384ಭೀತಿ ನಿರ್ಭೀತಿ ಶೀತತಾಪಗಳೊತ್ತಟ್ಟು ನೀತವಾಗಿಹವೆ ಜಗದೊಳು |ಜಗದೊಳಿದ್ದರೆ ತೋರು ಜಾತಿ ಭೇದಗಳು ಇರಲಾಗಿ 12 385 ಜೀವೇಶರೊಂದೆಂಬ ಈ ಮಾತು ಕೇಳ್ವರಿಗೆ ಕೇವಲ ಶ್ರಾವ್ಯವೆಂದೆಂದು | ಎಂದೆಂದು ಬುಧರು ಪಶು ಗಾವಿ ನೀನೆಂದು ಕರೆಯಾರೆ 13 386 ಗುಣವಂತನೆಂಬ ಈ ಮಾತನು ಕೇಳಿ ಸುಖಿಸದವ ಮನುಜ ಪಶುಸಿದ್ಧ ಪುಸಿಯಲ್ಲ | ಪುಸಿಯಲ್ಲ ನಿನ್ನ ಮತ ಗಣನೆ ಮಾಡದಲೆ ಬಯ್ವೋರ 14 387ಮಲದ ಗರ್ತಕೆ ಶುದ್ಧ ಜಲಧಿ ಸಮಯವೆಂತೆಂಬಿ ಕಲುಷವರ್ಜಿತಕೆ ತೃಣಜೀವ | ತೃಣಜೀವ ಸರಿಯೆ ಸಿಂ ಬಳಕ ಗೋಘೃತವು ಸಮವಹುದೆ 15 388 ಐರಾವತಕೆ ಸರಿಯೆ ಕೂರಿಹೇನಿನ ಮರಿಯು ತೋರಿತೊ ನಿನ್ನ ಅಜ್ಞಾನ 16 389 ದ್ವಾಸುಪರ್ಣಾ ಎಂಬ ಈ ಶ್ರುತಿಗಳಲ್ಲಿ ವಿ ಶ್ವಾಸ ಮಾಡದಲೆ ಜೀವೇಶ | ಜೀವೇಶಕೈಕ್ಯೋಪ ದೇಶ ಮಾಡಿದವ ಚಂಡಾಲ 17 390ಅಜರಾಮರಣ ಬ್ರಹ್ಮ ಭುಜಗಭೂಷಣ ಪೂಜ್ಯ ತ್ರಿಜಗ ದೇವೇಶ ಹರಿಯೆತ್ತ | ಹರಿಯೆತ್ತ ನೀನೆತ್ತ ಅಜಗಜನ್ಯಾಯ ಪುಸಿಯಲ್ಲ 18 391 ಪಾಲುಗಡಲೊಳಗಿಪ್ಪ ಶ್ರೀ ಲೋಲ ಹರಿಯೆಲ್ಲಿ ಹೇಲುಚ್ಚೆವೊಳಗೆ ಹೊರಳುವ | ಹೊರಳಾಡಿ ಬಳಲುವ ಖೂಳ ಮಾನವನೆ ನೀನೆಲ್ಲಿ 19 392 ಕ್ಷೀರಾಂಬುಧಿಗೆ ಸರಿಯೆ ಕಾರಿಕೆಯ ಶ್ಲೇಷ್ಮ ಭಾ ಗೀರಥಿಗೆ ಸಮವೆ ಖರಮೂತ್ರ | ಖರಮೂತ್ರ ಜೀವ ಲ ಕ್ಷ್ಮೀರಮಣಗೆಣೆಯೆ ಜಗದೊಳು 20 393ಗುಣಪೂರ್ಣ ಸರ್ವಜ್ಞ ಅಣುಮಹದ್ಗತನ ನಿ ರ್ಗುಣ ಅಲ್ಪನೆನುತಿದ್ದಿ | ಎನುತಿದ್ದಿ ಹರಿಗೆ ದೂ ಷಣೆಯು ಬೇರುಂಟೆ ಇದಕಿಂತ 21 394 ಈಶ ನಾನೆನಲು ಕೀನಾಶನಿಂದಲಿ ದಣಿಪ ದಾಸನೆಂಬುವಗೆ ದಯದಿಂದ | ದಯದಿಂದ ತನ್ನಯಾ ವಾಸದೊಳಿಟ್ಟು ಸಲಹೂವ 22 395ಈಶತ್ವ ವೆಂಬುದು ಲಕುಮೀಶಗಲ್ಲದೆ ಜೀವ ರಾಶಿಗಳಿಗುಂಟೆ ಈ ಶಕ್ತಿ | ಈ ಶಕ್ತಿ ಸತ್ವಗುಣ ಈಶ ಬಿಟ್ಟಿಹನೆ ಜಗದೊಳು 23 396 ಉದ್ಗೀಥಶ್ರೀ ಪ್ರಾಣ ಹೃದ್ಗತನು ಜಗದೇಕ ಸದ್ಗುರುವರೇಣ್ಯನೆನುತಿಪ್ಪ | ಎನುತಿಪ್ಪರಿಗೆ ಯಮ ಗದ್ಗದನೆ ನಡುಗಿ ನಮಿಸುವ 24 397 ಸ್ವಾಮಿ ಭೃತ್ಯನ್ಯಾಯ ಈ ಮಾತಿನೊಳಗುಂಟು ಗ್ರಾಮಧಾಮಗಳು ಇದರಂತೆ | ಇದರಂತೆ ನೋಡಿಕೊ ನೀ ಮಾತ್ರ ನುಡಿಯೆ ಸಾಕೆಂಬೆ 25 398ಈಶ ನಾನೆಂದವನ ಶ್ವಾಸ ಬಿಡಗೊಡದೆ ಯಮ ಸೆಳೆದೊಯಿದು ನರಕದೊಳು ಘಾಸಿಗೊಳಿಸುವನೊ ಬಹುಕಾಲ 26 399 ಮಾತಾ ಪಿತರ ದ್ರೋಹಿ ಬಂಧು ಘಾತಕ ಬ್ರಹ್ಮ ಘಾತಕನು ನೀನು ಪುಸಿಯಲ್ಲ | ಪುಸಿಯಲ್ಲ ಶ್ರೀ ಜಗ ನ್ನಾಥ ವಿಠಲನೆ ನಾನೆಂಬಿ 27
--------------
ಜಗನ್ನಾಥದಾಸರು
ಆತ್ಮನಿವೇದನೆ ಅಗಲಿ ನಾ ಸೈರಿಸಲಾರೆ ಪ-À್ನಗರಾಜಶಯನನ ತೋರೆ ಪ. ಖಗರಾಜಗಮನ ನಿಗಮಗೋಚರನಜಗದೇಕವಂದ್ಯನ ಜಾಣೆ ರಂಗಯ್ಯನ ಅ.ಪ. ಮಾರನು ಮನೆಗ್ಹೋದÀನಮ್ಮ ಎನ್ನಸೇರದೆ ಮುನಿದ ಕಾಣಮ್ಮಯಾರಿಗೆ ಉಸುರಲೆ ನೀರಜಾಕ್ಷಿಯೆ ಎನ್ನಬಾರದೆ ಮುನಿದು ತಾಳಲಾರೆ ನೋಡಮ್ಮ 1 ಹೆಣ್ಣುಜನ್ಮ ವ್ಯರ್ಥಕಾಣಮ್ಮ ಎನ್ನಪುಣ್ಯವಿನ್ನಿಂತಾಯಿತಮ್ಮಬಣ್ಣ ಸರವನೀವೆ ಭಾಮಿನಿರನ್ನಳೆಕಣ್ಣಾಣೆ ಕರೆತಾರೆ ಪುಸಿಯಲ್ಲ ಕೃಷ್ಣನ 2 ಅಂತರಂಗವ ತಿಳಿದೇನಮ್ಮ ಪ್ರಾಣ-ಕಾಂತ ಮನೆಗೆ ಬಂದನಮ್ಮಪಂಥವ ಬಿಟ್ಟೀಗ ಬಂದೆ ನಾ ಪಾಲಿಸುವಕಂತುಜನಕ ಹಯವದನ ರಂಗಯ್ಯನ 3
--------------
ವಾದಿರಾಜ
ಆದಿಯುಗದಿ ಮಹ ಆದಿದೈತೇಯನೊಬ್ಬ ಮೇದಿನಿಯೊಳ್ ಸ್ವರ್ಣಕಶ್ಯಪು ನಾಮದಿ ಸಾಧಿಸಿ ಬಂದವಗೊಬ್ಬ ಸೋದರ ಸ್ವರ್ಣಾಂಬಕನೆನಿಸಿ ಮೇದಿನಿ ಚೋರನಾಗಿ ಹತನಾದನು ಆದಿಶೇಷನೆ ವಿಷ್ಟಕ್ಸೇನ ತಾ- ನಾದ ಪ್ರಹ್ಲಾದ ಪ್ರಾಣಾವೇಶದಿಂದ ಸೋದರ ಜೀವಾಂಶಾಪಾನಾವಿಷ್ಟ ಸ- ಲ್ಹಾದನಾಮಕ ಮಿತ್ರನಾದ ಕ ಹ್ಲಾದ ವ್ಯಾನಾವೇಶದಿಂದ ಮೋದದಿ ಸೋಮಾಂಶೋದಾನಾಯುತ ನು- ಹ್ಲಾದ ನಾಮಕ ಸಂಭೂತನಾದ ಆದರೈವರಾದೈತ್ಯಗೆ ಪುತ್ರರು ಮೇದಿನಿ ಸುರರುದ್ಧಾರಗೋಸುಗ ಆದಿದೈವ ನಾರೇಯಣ ತಾ ನಾದಿಕಾರಣ ವಿಶ್ವಕರ್ತಾ ಮೋದಾನಂದ ಮೂರುತಿ ಸುಗುಣ ಭೋಧಪೊರ್ಣ ಸರ್ವಜ್ಞ ಸ್ವಾತಂತ್ರ ವೇದಪುರುಷಾದಿ ಜಡಾದಿ ಜಗಕೆ ಆಧಾರ ಹರಿ ಎಂಬ ಜ್ಞಾನವ ಭೋದಿಸಿ ಬೊಮ್ಮಮುಖರು ಹರಿ ಪಾದಸೇವಕರೆನುತ ನಿತ್ಯ ವಾದದಿ ವಾದಿಗಳ ಜಯಸಿದರವರ ಪಾದಸೇವಿಸಿ ಕರುಣಾಪಡೆದು ಆದಿ ಗುರು ಜಗನ್ನಾಥವಿಠಲನ್ನ ಆದರದಲಿ ಭಜಿಪೆ ಪರಮ ಸುಖ ರಾಗ :ಕಲ್ಯಾಣಿ ಅಸುರರ ಜನ್ಮದಿ ಪುಟ್ಟಿದ ಇವರಿಗೆ ಶ್ವಸನನ ಆವೇಶ ಸುರರಾವೇಶ ಬಲದಿ ಅಸಮಙÁ್ಞನ ಭಕುತಿ ವಿರಾಗವು ವಸುಧಿಯ ತಳದಿ ದಿನದಿನದಲ್ಲಿ ಪಸರಿಪ ಸೂರ್ಯನ ಪ್ರಭೆಯಂದದಲಿ ಮಿಸುಪದಕಿದೇ ಕಾರಣ ಉಂಟು ಬಿಸಜಾಂಬಕ ಹರಿಪೇಳಿದ ಇವರಿಗೆ ಅಸುರೇಶ ಹಿರಣ್ಯಕಶಿಪುವಿನಲ್ಲಿ ಶಿಶುಭಾವದಿಂದ ಜನಿಸಲು ಪೋಗಿರಿ ಪುಸಿಯಲ್ಲ ಮಚ್ಛಾಪÀ ಅಸುರಭಾವ ಪ್ರಲ್ಹಾದಾದ್ಯ ರಸಮಮಹಿಮರಾಗೀ ಜನಿಸಿರೆಂದು ಉಸುರಿದ ವಾಕ್ಯವು ಪ್ರಮಾಣ ಸಿದ್ಧವೆನ್ನಿ ವ್ಯಸನzಲೈವರು ಹರಿಯನೆ ಮತ್ತೆ ಬೆಸಗೊಂಡರೀಪರಿ ಪರಿಯಾ ಅಸುರನ ಪತ್ನಿಯ ಬಸಿರೊಳು ಪುಟ್ಟುವುದು ವಶವಲ್ಲವೋ ಸ್ವಾಮಿ ಕುಸುಮನಾಭನೆ ನಿನ್ನ ಅಸಮಲೋಕದ ಸುಖ ವಸುಧಿತಳಾದಲ್ಲಿ ಎಸಗದು ಎಸಗದು ಎಂದಿನಕಾಲಕ್ಕೂ ಮುಸುಕುವದಙÁ್ಞನ ದುಃಖದ ಭವದಲ್ಲಿ ಕಸವಿಸಿಗೊಳುತಾ ಙÁ್ಞನವನೀಗಿ ಬಿಸನಿಲಯನೆ ನಿನ್ನ ದರುಶನವಿಲ್ಲದೆ ಅಸುನಿಲ್ಲುವ ಬಗೆ ಯಾವುದು ಪೇಳೋ ಶಶಿಧರವಂದ್ಯ ಗುರುಜಗನ್ನಾಥ ವಿಠಲ ನಮ್ಮ ವ್ಯಸನವನು ಕಳೆದು ಸುಖವನು ಸಲಿಸೋ ರಾಗ - ಕಾಂಭೋದಿ ತಾಳ - ತ್ರಿವಿಡಿ ಭಕುತವಾಕ್ಯವ ಲಾಲಿಸಿ ತಾನಾಗ ಪರಿ ನುಡಿದನು ವಿಕಳ ಪೊಂದದೆ ನೀವು ತ್ವರಿತಾದಿ ಧರೆಯೊಳು ಸಕಲರು ಜನಿಸಲು ಮುಸಕದಙÁ್ಞನ ಲಕುಮಿ ಭೂಮಿಯ ಸಹಿತ ಇರುವೆನು ನಿಮ್ಮೊಳು ನಿತ್ಯ ಪರಿಪರಿ ಮಹಿಮವ ಪ್ರಕಟಮಾಡುವೆ ಮುಖ್ಯಪ್ರಾಣನಿಪ್ಪನು ಸತತ ಕಕುಲಾತಿ ಯಾಕಿನ್ನು ನಡಿರೆಂದು ಹರಿಯೆಂದ ಉಕುತ ವಾಕ್ಯದಲಿಂದ ದಿತಿಜನಲ್ಲಿ ಸುಕೃತಿಗಳೈವರು ಉದಯವೈದಿದರಾಗ ಮುಕುತಿದಾಯಕ ಗುರುಜಗನ್ನಾಥ ವಿಠಲನೆಂಬ ಭಕುತಿ ಪೂರ್ವಕ ಙÁ್ಞನವೃದ್ಧಿಯೈದಿದರು ರಾಗ - ಆರಭಿ ತಾಳ - ಅಟ್ಟ ಪಿರಿಯ ಪ್ರಲ್ಹಾದನ್ನ - ಕರದು ತೊಡೆಯ ಮೇಲೆ ಇರಿಸಿ ಪ್ರೇಮದಿ ನಿಮ್ಮ - ಗುರುವೇನು ಪೇಳ್ಯಾನೆ ಮರಿಯಾದೆ ಎನಮುಂದೆ - ಅರಹು ಎನಲು ಬಾಲ ಕಿರಿನಗೆ ಮುಖದಿಂದ - ಹರಿಯೆ ಸರ್ವೋತ್ತಮ ಹರಬೊಮ್ಮ ಮುಖರೆಲ್ಲ - ಪರಿವಾರಭೂತರು ಅರಿದಿಪ್ಪೆ ಎನ್ನಯ್ಯ ಸರಸಿಜಜಾಂಡಕ್ಕೆ ಅರಸು ತಾನಾಗಿದ್ದು ಇರುವಾದಿ ಚೇತನ ತರುವಾದಿ ಜಡಮಯ ಸರ್ವಸ್ಥಳದಲ್ಲಿ ನಿರುತದಿ ವ್ಯಾಪಿಸಿ ಇರುತಿಹ ಹರಿ ಎಂದು ಅರಿತ ಮಾನವÀÀನಿಗೆ ದೊರೆವೋನು ನಿಶ್ಚಯ ಅರಿತು ಪೇಳಿದ ತನ್ನ ತರಳಾನ ನುಡಿಕೇಳಿ ಭರದಿಂದ ಕಂಬವ ಕರದಿಂದ ಬಡಿಯಾಲು ನರಮೃಗಾಕಾರದಿ ಹೊರಗೆ ಬಂದಾದೈತ್ಯನು ದರವ ಬಗೆದು ಕರುಳಮಾಲೆಯತಾ ಕೊರಳೊಳು ಧರಿಸಿದ ಚರಜನ ಪರಿಪಾಲ ಬಿರುದು ಬೀರಿದ ನಮ್ಮ ಗುರುಜಗನ್ನಾಥವಿಠಲ ಶರಣರ ಮರೆಯನೋ ಧರಿತಳದೊಳಗೆ ರಾಗ :ಇಚ್ಛಾ :ತಾಳ - ಆದಿ ಈ ತೆರ ಪ್ರಹ್ಹಾದ ಹರಿಪಾದವ ಭಜಿಸಿ ಪ್ರೀತಿಯ ಪಡೆದು ಭೂಸುರಗಣಕೆ ಭೂತಳದೊಳಗೆ ಯತಿಗಳ ಕುಲಕೆ ನಾಥನು ವ್ಯಾಸಮುನಿ ಎನಿಸಿ ಮರಳಿ ಖ್ಯಾತ ಶ್ರೀ ರಾಘವೇಂದ್ರನೆಂದೆನಿಸಿ ಪ್ರೀತಿಯಿಂದಲಿ ಭಕ್ತರ ಪೊರೆಯಲು ನೀತಿ ಭಾವದಲಿ ಯತಿಯಾಶ್ರಮ ಪೊಂದಿ ಸೀತಾಪತಿರಾಮ ಯದುನಾಯಕ ಕೃಷ್ಣ ಭೀತಿಹರ ನರಸಿಂಹ ವ್ಯಾಸರ ಭಜಿಸಿ ದೂತರ ಮನೋರಥ ಪೂರ್ತಿಸಿ ಪೊರೆವನು ದಾತಗುರುಜಗನ್ನಾಥ ವಿಠಲನ್ನ ನೀತ ವಿಭೂತಿಯ ಪಡೆದು ನಿರ್ಭೀತನಾಗಿಹನು ಜತೆ ದೂತಜನರ ಮಹಾಪಾತಕ ಹರನೆನ್ನಿ ಪ್ರೀತಗುರುಜಗನ್ನಾಥವಿಠಲನೊಲಿವ ರಾಗ :ಶಂಕರಾಭರಣ :ತಾಳ :ಏಕ
--------------
ಗುರುಜಗನ್ನಾಥದಾಸರು
ಈತನೆಂಥಮಹಿಮೆ ನೊಡಿರೆ ರಂಗಯ್ಯ ರಂಗ ಈತನೆಂಥ ಮಹಿಮ ನೋಡಿರೆ ಪ ಈತನೆಂಥ ಮಹಿಮ ಓರ್ವ ಮಾತೆಯುದರದಿ ಜನಿಸಿ ಮತ್ತೊಬ್ಬ ಮಾತೆಕೈಯಿಂದ ಬೆಳೆದು ಗೋಕುಲ ನಾಥ ನವನೀತಚೋರನೆನಿಸಿದ ಅ.ಪ ಕಾಳಕೂಟ ವಿಷವ ಕುಡಿಸಿದ ಆ ಮಾಯದೈತ್ಯಳ ಕಾಲನ ಆಲಯಕೆ ಕಳುಹಿದ ಮಡುವನ್ನು ಧುಮುಕಿ ಕಾಳಿ ಹೆಡೆಮೆಟ್ಟಿ ನಾಟ್ಯವಾಡಿದ ಗೋವುಗಳ ಕಾಯ್ದ ಬಾಲನೆಂದೆತ್ತೊಯ್ಯಲು ಬಂದ ಖೂಳ ಶಕಟನ ಸೀಳಿ ಒಗೆದು ಕಾಳಗದಿ ಧೇನುಕನ ತುಳಿದು ಬಾಲಲೀಲೆಯ ತೋರಿ ಮೆರೆದ 1 ಪರಿಪರಿಯ ಮಾಯದಿಂ ಕಾಡ್ವ ಭೂಭಾರಿಯಾಗಿ ಧರಣಿಜನರತಿಶಯದಿ ಬಳಲಿಸುವ ಪರಮಕಂಟಕ ದುರುಳ ಕಂಸನೆಂಬುವನ ಶಿರವ ತರಿದ ಮಾಧವ ಧರಣಿತಾಪವನ್ನೆ ಕಳೆದು ಸೆರೆಯ ಬಿಡಿಸಿದ ಜನನಿ ಜನಕರ ಮಹಿಮೆ ತೋರ್ದ 2 ಗೊಲ್ಲ ಬಾಲರ ಸಮೂಹವನು ನೆರೆಸಿ ಮನೆಯಲ್ಲಿ ಯಾರು ಇಲ್ಲದ ಸಮಯವನೆ ಸಾಧಿಸಿ ಮೆಲ್ಲಮೆಲ್ಲನೆ ಎಲ್ಲ ಬಾಲರ ಒಳಗೆ ತಾ ಹೊಗಿಸಿ ಪಾಲ್ಮೊಸರು ಸವಿಸಿ ಕಳ್ಳ ಕೃಷ್ಣೆಮ್ಮ ನಿಲ್ಲಗೊಡನೆಂದು ಗೊಲ್ಲಸ್ತ್ರೀಯರು ಗುಲ್ಲುಮಾಡಲು ನಿಲ್ಲದೋಡಿ ತಾ ಪುಲ್ಲನಾಭನು ಎಲ್ಲಿ ನೋಡಿದರಲ್ಲೆ ತೋರುವ 3 ಶಿಶುವು ಈತನೆಂದು ಮುದ್ದಿಸುವಾಗ ಕುಶಲದಿಂದಪ್ಪಿ ಅಧರ ಸವಿಯುವ ಎಂಥ ಶಿಶುವನೆ ಹಸುಮಗಾಗೆಳೆದೊಯ್ದು ರಮಿಸುವ ಮಿಸುಗಗೊಡನಿವ ಕಸಿದು ಭಾಂಡ ದೆಸೆದೆಸೆಗೆ ಎಳೆದು ವಸುಧೆಯೊಳು ತನ್ನ ಅಸಮ ಮಹಿಮೆಯ ಪಸರಿಸಿದ ಹರಿ4 ಮಣ್ಣು ತಿಂದು ತಾಯ ಬಳಿಗೈದಕಂದ ಏನಿದು ಮಣ್ಣು ತಿನ್ವರೆ ಉಗುಳೆಂದೆಶೋದೆ ಕಣ್ಣು ತಿರುವÀಲು ತನ್ನ ಬಾಯೊಳ್ಬ್ರಹಾಂಡ ತೋರಿದ ಭಿನ್ನವಿಲ್ಲದ ತನ್ನ ತಾನು ಅರಿಯದೆಶೋದಿನ್ನು ಈರೂಪವಡಗಿಸೆನ್ನಲು ಸಣ್ಣಮಗುವಾಗಿ ಚಿಣುಫಣುವಿಡಿದುನ್ನ - ತೋನ್ನತ ಆಟವಾಡಿದ 5 ಪರಿಪರಿಯಲಿ ಕಾಡ್ವ ಕೃಷ್ಣನ್ನ ವರದೇವಿ ತಡೆಯದೆ ಸರವೆನಡುವಿಗ್ಹಚ್ಚಿ ತರಳನ್ನ ಸರಸರನೆ ಬಿಗಿದು ಒರಳಿಗ್ಹಾಕಿ ಕಟ್ಟಿ ಮುರಹರನ ಮರೆಯಾಗಲಾಕ್ಷಣ ಊರುತಂಬೆಗಾಲು ಊರಬೀದಿಲಿ ಒರಳನೆಳೆಯುತ ಹೊರಗೆ ಹೋಗಿ ತರಗುಳಿರಕಿಲದೊರಳ ಸೇರಿಸಿ ಮುರಿದು ಶಾಪದಿಂ ಮುಕ್ತಮಾಡಿದ 6 ಪುಂಡತನದಿಂ ಸೊಕ್ಕಿಮರೆಯುವ ಆ ರುಗ್ಮನಿಡಿಕೈಯ ಬಂಡಿಗಾಲಿಗೆ ಕಟ್ಟಿ ಶ್ರೀಧರ ರುಗ್ಮಿಣಿಯನ್ನು ಕೊಂಡು ಗೋಕುಲ ಸೇರಿ ವೈಭವ ನಡೆಸಿ ಯಾದವ ರ್ಹಿಂಡಲಿಗೂಡಿಸಿ ಪುಂಡದೇವಿಯುದ್ದಂಡತನದಿ ಕೈ ಕೊಂಡ ಕಲ್ಯಾಣ ಗಂಡುಗಲಿಗಳ ಗಂಡನೆನಿಸಿದ ಹಿಂಡುದೇವರ ಸಾರ್ವಭೌಮ 7 ಚರಣದಾಸರ ಒಡೆಯ ತಾನಾದ ವರ್ಣಿಸಲಳವಲ್ಲ ಚರಣದಾಸರ ದಾಸನೆನಿಸಿದ ಪುಸಿಯಲ್ಲ ಕೇಳಿರಿ ನರನ ಕುದುರೆಯ ವಾಘೆಯನು ಪಿಡುದು ರಥವ ನಡೆಸಿದ ಕರೆಯಲೋಡಿದ ಸರಸಿಯಲ್ಲಿಗೆ ಭರದಿ ಒದಗಿದ ಕುರುಪಸಭೆಯಲ್ಲಿ ಪರಮ ನಿಗಮಗಳ್ಗಿರುವನಗೋಚರ ಸ್ಮರಿಸಿದವರಿಗೆ ಭರದಿ ನೆರವಾದ 8 ತಾಳಿಬಂದ ನಾರಾಯಣಾವತಾರ ಪಾಲಿಸಲು ಜಗವಂ ಬಾಲಗೋಪಾಲ ಭಕ್ತರಾಧಾರ ಗೊಲ್ಲನೆನಿಸಿ ಲೀಲೆನಡೆಸಿದ ಶಾಮಸುಂದರ ಭವಜಾಲಪರಿಹರ ಕಾಳರಕ್ಕಸರೊಳು ಕಾದಿ ನಿರ್ಮೂಲಮಾಡಿ ಜಗಪಾಲಿಸಿದ ತ್ರಿ ಜಾನಕಿಲೋಲ ಶ್ರೀರಾಮ 9
--------------
ರಾಮದಾಸರು
ಊ. ಆತ್ಮನಿವೇದನೆ ಇಂದು ನಿನಗಿಷ್ಟ ವಂದಿಸಿ ಬಾಯ್ತೆರದು ಬೇಡಿದೆ ಪ ಮುಂದೆ ನೀ ಮನ ಬಂದಂತ್ಯದ ಮಾಳ್ಪುದು ಕಂದು ಕಂಠನ ಪದ ತೀವ್ರಗಮನ ಬಾಲಾ ಅ.ಪ. ಆರು ಅರಿಯದೆ ಇದು ಒಂದು ಬಾರಿ ಸೇವೆಮಾಡಲು ನಿನ್ನ ಘೋರ ದಾರಿಯಲಿಂದ ಪಾರುಗಾಣಿಸುವಾ 1 ಹಿಂದೆ ಪೇಳಿದನು ಕಳುಹಿ ಪೂರ್ಣಾನಂದ ಪಡಿಸೊ ಇಂದುಧರ ಪಿತನಾಣೆ ಸುಖ ಸಿಂಧುವಿನೊಳಗಿಟ್ಟು ಪೊರೆವಾ 2 ಪುಸಿಯಲ್ಲ ಪುಶಿಯಲ್ಲ ಈಶನಾಣೆ ಮಧ್ವದಾಸನೆ ಕೇಳು ತಂದೆವರದಗೋಪಾಲವಿಠಲನಾಣೆ 3
--------------
ತಂದೆವರದಗೋಪಾಲವಿಠಲರು
ಎನ್ನ ನುಡಿ ಪುಸಿಯಲ್ಲ ಈ ಜಗದೊಳು ಪ ಅರವಿಂದವಿಲ್ಲದಿಹ ಕೊಳವು ತಾ ಕಂಗಳವುಹರಿಣಾಂಕನಿಲ್ಲದಿಹ ಇರುಳು ಮರುಳುಸ್ವರಭೇದವಿಲ್ಲದಿಹ ಸಂಗೀತವಿಂಗೀತಸರಸವಿಲ್ಲದಿಹ ಸತಿಯ ಭೋಗ ತನುರೋಗ 1 ಪಂಥ ಪಾಡುಗಳನರಿಯದ ಬಂಟನವ ತುಂಟಅಂತರವರಿಯದಾ ವೇಶಿ ಹೇಸಿದಂತಿಯಿಲ್ಲದ ಅರಸು ಮುರಿದ ಕಾಲಿನ ಗೊರಸುಅಂತಸ್ಥವಿಲ್ಲದ ಪ್ರಧಾನಿ ಮದ್ಯಪಾನಿ2 ಮಾಗಿಯಲಿ ಸತಿಯನಗಲಿದ ಕಾಂತನವ ಭ್ರಾಂತಪೂಗಣೆಯ ಗೆಲಿಯದಿಹ ನರ ಗೋಖುರಭೋಗಿಸದೆ ಇಹಪರಕೆ ಗಳಿಸಿದರ್ಥ ಅಪಾರ್ಥಕಾಗಿನೆಲೆಯಾದಿಕೇಶವನ ಭಕ್ತ ಮುಕ್ತ 3
--------------
ಕನಕದಾಸ
ಎಲ್ಲ್ಯಾಡಿ ಬಂದ್ಯೋ ನೀ ಹೇಳಯ್ಯನಿಲ್ಲು ನಿಲ್ಲು ಗೋಪಾಲಕೃಷ್ಣಯ್ಯಾ ಪ ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿಹೊಸಪರಿ ಸುದ್ದಿಯು ಹುಟ್ಟಿದೆಪುಸಿಯಲ್ಲ ಈ ಮಾತು ಮುಟ್ಟಿದೆ ನಿನ್ನ ನಸುನಗೆ ಕೀರ್ತಿ ಹೆಚ್ಚಿದೆ1 ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನಕೊರಳ ಪದಕವೆಲ್ಲಿ ನೀಗಿದೆಸರಕೆಲ್ಲ ಅವಳಲ್ಲಿ ಸಾಗಿದೆ ಆತರುಣಿ ಮಹಿಮೆ ಹೀಂಗಾಗಿದೆ 2 ಕಳ್ಳತನವ ಹೀಗೆ ಮಾಡಿದೆ ನಿನ್ನಸುಳ್ಳು ಕಡೆಗೆ ನಾ ನೋಡಿದೆಎಲ್ಲರಿಗೂ ಠಕ್ಕು ಮಾಡಿದೆಚೆಲುವ ರಂಗವಿಠಲ ನಗೆಗೀಡಾದೆ 3
--------------
ಶ್ರೀಪಾದರಾಜರು
ಏನಯ್ಯ ಧೊರೆಯೆ-ನಿನಗಾನಂದವೆ ಧೊರೆಯೇ ಪ ನುಡಿನೀನೊಲಿದಾಲಿಪುದುಅ.ಪ. ಜಾತಿಧರ್ಮವಿಲ್ಲಾ-ಶಾಸ್ತ್ರದರೀತಿನಡತೆಯಿಲ್ಲ ಮಾತಿದುಪುಸಿಯಲ್ಲಾ-ಮಾನದ-ಭೀತಿಯುಮೊದಲಿಲ್ಲಾ ನೀತಿಯನರಿಯದ-ಕೋತಿಗಳಂದವ ಜಾತಿಯ ಜನರೊಳು ಮಾತಿನವಾಶಿಯಿಲ್ಲ 1 ದುರ್ಜನರು ಬೆರೆದು-ದೋಷವಿ ವರ್ಜಿತರನ್ನು ಜರಿದು ಲಜ್ಜೆಯನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು ಈ ಜಗದೊಳಗಿಹ ಸಜ್ಜನರಿಗೆ ಕುಲಕಜ್ಜಳರವ ಮತಿ ಗುಜ್ಜುಗಿಸುತ್ತಿಹ 2 ಗಂಡನ ಬಿಟ್ಟಿಹರು-ಗರತಿಯ-ಕಂಡು ನಗುತ್ತಿಹರು ಮಿಂಡರ ಬೆರೆದಿಹರು-ಮೇಲತಿ-ದಿಂಡೆಯರಾಗಿಹರು ಚಂಡಿಸುತಿರ್ಪರೋ 3 ಕೇಳುಹಂದೆಯಾಳು-ಕ್ಲೇಶವ ಪೇಳಲು ಮತಿತಾಳು ಕೀಳು ಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು ಜನರೂಳಿಗ ಬಲುಘನ 4 ಧರೆಯೊಳಧಿಕವಾದ ಶ್ರೀ ಪುಲಿ-ಗಿರಿಯೊಳು ನೆಲೆಯಾದ ಸಿರಿವರ ನಿಜಪಾದ-ಸೇವೆಯ-ಕರುಣಿಸು ಬಹುಮೋದ ಶರಣಾಭರಣ ನಿಜ ಕರುಣವ ತೋರಿಸು ವರದ ವಿಠಲಧೊರೆ ವರದದಯಾನಿಧೆ 5
--------------
ಸರಗೂರು ವೆಂಕಟವರದಾರ್ಯರು
ಏನು ಪೇಳಲಿ ತೀರ್ಥಪತಿಯ ಮಹಿಮೆ ಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ ಪ ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದು ದೇಶದೊಳು ಪುಸಿಯಲ್ಲ ಸಿದ್ಧವೆನ್ನಿ ಈಶನುಪದೇಶದಿಂದಲಿ ವಿಗತ ಜನನಾಗಿ ಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ 1 ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿ ಪರಮಭೀತಿಯಿಂದ ಅವಳ ವಸನವ ತಂದು ವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು 2 ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲು ನಿಲ್ಲದೆ ಸನ್ಮುಕ್ತಿ ಧರನಾಗುವಾ ಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನ ಸಲ್ಲಲಿತ ಪಾದವನು ಕಾಂಬ ಪ್ರಾಣೇಂದ್ರಿಯದಲಿ 3
--------------
ವಿಜಯದಾಸ
ಏಸು ರೂಪಾಯ್ಗೆ ಕೊಂಡು ಕೊಂಡೆವ್ವಾ ಒಸರುವ ಗಡಿಗೆ ಪ ಏಸುರೂಪಾಯ್ಗೆ ಕೊಂಡುಕೊಂಡೆವ್ವಾ ಏಸುರಾಪಾಯ್ಗೆ ಕೊಂಡುಕೊಂಡಿ ಹೇಸಿಕೊಳ್ಳದೆ ಇದನು ನೀನು ಬೇಸರಿಲ್ಲದೆ ತೊಳೆಯುತಿದ್ದಿ ವಾಸನಿಕ್ಕಿ ನಾರುತಿದೆ ಅ.ಪ ಎಂಥ ಕುಂಬಾರಿದನು ಮಾಡಿದ ಎಷ್ಟುಕಾಲದಿ ಕುಂತು ಇದಕೆ ಶೋಧ ಹುಡುಕಿದ ಅವನು ದಾವ ಸಂತೆಯೊಳಗೆ ಕುಂತು ಮಾರಿದ ಕೊಂಡೇನುತಿಳಿದ ತಂತು ತಿಳಿಯದೆ ಹೊತ್ತುಕೊಂಡು ನಿಂತಿಯಿದರ ಖ್ಯಾಲಿನೊಳಗೆ ಸಂತೆ ತೀರಿಹೋಗಲಾಗೇನಂತ ಹೇಳುವಿ ಕೇಳುವವರಿಗೆ 1 ಕಷ್ಟದ್ಹೊತ್ತು ಕುದಿಯುತಿದ್ದ್ಯಲ್ಲ ಹುಚ್ಚು ಎಷ್ಟುದುಡಿದು ತುಂಬುತಿದ್ದ್ಯಲ್ಲ ನಿಲ್ಲದಿನಿತು ಅಷ್ಟು ಒಸರಿ ಬಸಿಯುತಾದಲ್ಲ ಖೂನ ನಿನಗಿಲ್ಲ ನಟ್ಟನಡುವೆ ಗಂಟುಬಿದ್ದು ಕೊಟ್ಟು ನಿನಗೆ ಕಷ್ಟ ವಿಧ ವಿಧ ಕಟ್ಟ ಕಡೆಗೆ ಕೈಯ ಬಿಟ್ಟು ಕೆಟ್ಟು ಮಣ್ಣು ಕೂಡುತಾದೆ 2 ಮಸಣಿಬುದ್ಧಿ ನೀಗಿ ಕೇಳಮ್ಮ ನಿಜವನಿರುತ ಕುಶಲರ್ಹೇಳುವ ಮಾತು ತಿಳಿಯಮ್ಮ ಮುಂದೆ ಮಹಕಾಲ ನಿಶೆಯು ಒದಗುತದೆ ತಂಗೆಮ್ಮ ಪುಸಿಯಲ್ಲವಮ್ಮ ಮಸಿಯ ಗಡಿಗ್ಹಿಡಿದು ಹಸನಮಾಡಿ ವಸುಧೆಗಧಿಕ ಶ್ರೀರಾಮಪಾದ ಕುಸುಮಕರ್ಪಿಸಿ ಧನ್ಯಳಾಗಿ ಅಸಮಮೋಕ್ಷಪದವಿ ಪಡೆಯೆ 3
--------------
ರಾಮದಾಸರು
ಕೊಡಿಸೆ ಭಕ್ತರ ಒಡಂಬಡಿಸೆ ಮೊಲೆಯುಣ್ಣಿಸಿ ತೊಟ್ಟಿಲೊಳ್ ಮಾಯೆ ನೀನೊಬ್ಬಳೆ ತಾಯೆ ಭಕ್ತರ ಸಂತತ ಕಾಯೆ ಶಾಂತೇಶ್ವರಿ ಮಾಹಾಮಾಯೆ ನಾನಿನ್ನ 1 ಸಪ್ತಸ್ವರ ಭೇದವ ತಿಳಿಸಿದ್ಯಾಕೆ ನೀನು ಪೇಳುವ ನುಡಿ ಪುಸಿಯಲ್ಲ ನಾನಿನ್ನ 2 ವರಕೊಲ್ಲಾಪುರದ ಶ್ರೀ ದುರ್ಗಾಂಬಾ ನಾನಿನ್ನ ಪಾದದ ಸ್ಮರಣೆ ಬಿಡೆನು ಶ್ರೀ ಮೂಕಾಂಬಾ ಅಡಿಗಡಿಗೆ ನಾ ಶ್ರೀ ಮೂಕಾಂಬೆ ನಾನಿನ್ನ 3
--------------
ಭಟಕಳ ಅಪ್ಪಯ್ಯ