ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆನಯ್ಯ ಚನ್ನಕೇಶವರಾಯನ ವೇಲಾಪುರದರಸನ ಸುಕೃತ ಫಲದಿಂದ ಪ ಹೇಯ ವಿಷಯದಿ ರಂಗನಾಕನ ಮರೆದ ಪಶುವಾನು ಹೇಯನಲ್ಲದೆ ನರಕದಲಿ ಬೀಳ್ವವನು1 ಕಂಡೆ ಶಂಖ ಚಕ್ರ ಪದುಮಧರನ ಕಿರೀಟ ಕುಂಡಲಧರನ ಪೀತಾಂಬರಧರನ 2 ಸುರಸಿಂಧು ಜನನ ಕಾರಣ ಚರಣಕಮಲ ವಿಕಾಸ ಧರನ ಕರುಣಾಪವರಧರನ ರಂಗನಾಯಕನ 3
--------------
ಬೇಲೂರು ವೈಕುಂಠದಾಸರು
ಕರುಣದಿ ಪೊರೆಯೆನ್ನ ಪ್ರಭುವೇ ಮೂಲ ಗುರುವೆ ಪ ಪರಮ ದಯಾನ್ವಿತ ಸುರಕಲ್ಪತರುವೆ ಅ.ಪ. ಅಂಗಜಪಿತನಾಜ್ಞೆ ಹಿಂಗಾದೆ ನೀಯಾಂತು ಅಂಗನೆ ಸೀತೆಯ ಅರಸುತ್ತ ಪೋದೆಯೊ ತುಂಗವಿಕ್ರಮ ನೀನು ಮಂಗಳಾಂಗಿಯ ಕಂಡು ಶೃಂಗಾರವನವನ್ನೆ ಭಂಗಮಾಡಿದೆಯೊ 1 ಕರಿಪುರದರಸನ ವರಪುತ್ರ ನೀನಾಗಿ ಕರಿರಾಜವರದಗೆ ಭಾವನಾಗಿ ಧರಣಿ ಭಾರವೆಲ್ಲ ಹರಿಸಿದೆ ನೀನು 2 ಯತಿಯ ರೂಪವ ತಾಳಿ ಕ್ಷಿತಿಯೊಳು ಚರಿಸುತ ದಿತಿಜರ ಬಾಯ್ಗಳ ಬಡಿಯುತಲಿ ಪತಿತ ಪಾವನ ಶ್ರೀ ರಂಗೇಶವಿಠಲನೆ ಪ್ರತಿಯಿಲ್ಲವೆಂತೆಂಬ ಮತಿಯಿತ್ತದೇವ 3
--------------
ರಂಗೇಶವಿಠಲದಾಸರು
ತೆರಳಿದರು ವೈಕುಂಠ ಪುರದರಸನ ಚರಣಾಬ್ಜ ಸೇವಿಸಲು ನರಸಿಂಹದಾಸರು ಪ ಜವಹರುಷದಿಂದ ಪಾರ್ಥಿವ ಮರುಷ ಮಾರ್ಗಶಿರ ಅಪರ ಪಕ್ಷದ ಪಪ್ಠಿ ಭೌಮವಾರ ದಿವದಿ ಪ್ರಾತಃಕಾಲ ಸಮಯದಲಿ ಶ್ರೀ ಲಕ್ಷ್ಮೀ ಕಮಲ ಧೇನಿಸುತ ಸಂತೋಷದಲಿ 1 ವರಹತನಯಾತೀರ ಪ್ರಾಚಿದಿಗ್ಬಾಗದಲಿ ಸುಕೃತ ಛಾಗಿಯೆಂಬಾ ಪುರವರದಿ ತತ್ವ ತತ್ವೇಶರೊಳು ಲಯವರಿತು ಪರಮ ಪುರುಷನ ದಿವ್ಯ ನಾಮಗಳ ಸ್ಮರಿಸುತಲಿ 2 ಭವ ಅನಂ ತರಸನ ಜಠರದಿ ಜನಿಸಿ ಬಂದೂ ಪುರಂದರ ದಾಸರಂಘ್ರಿಗಳ ಸ್ಮರಿಸುತ ಜಗನ್ನಾಥ ವಿಠಲನೊಲುಮೆಯ ಪಡೆದು 3
--------------
ಜಗನ್ನಾಥದಾಸರು
ನೋಡಲುಬೇಕೇ ಎನ್ನೊಡೆಯನನೂ ನೋಡಿದಿರೇ ತಾಳಪಾಕಂ ಚಿಣ್ಣೈಯಾ ಪ ದಿಕ್ಕುಗಳನು ಬೆಳಗುವ ಸುಕೀರಿಟವ ನಿಕ್ಕಿಹ ಮಾಣಿಕದೋಲೆಯನೂ ಚೊಕ್ಕಟ ಮೂಗುತಿಯಿಂದೊಪ್ಪುವನ್ನ ಜ ಗಕ್ಕೆ ಪತಿಯೆನ್ನೆರೆಯ ಚೆನ್ನಿಗನಾ 1 ಕಂಬು ಚಕ್ರಗದೆ ಪದುಮವ ಪಿಡಿದು ಪೀ ತಾಂಬರದಂಗಿಯ ಧರಿಸಿಕೊಂಡೂ ತುಂಬಿದ ವಕ್ಷದಿ ರಮೆ ಕೌಸ್ತುಭದಿಂ ಗಂಭೀರಾರ್ಣವನಾದ ಚೆನ್ನಿಗನ 2 ಸುರರೆಲ್ಲರು ಪೂಜಿಸುವ ಚರಣದೊಳು ಕಿರುಗೆಜ್ಜೆ ಪೆಂಡೆಯವಿಟ್ಟವನಾ ವರವೈಕುಂಠ ವೇಲಾಪುರದರಸನ ಶರಣ ವತ್ಸಲನಾದ ಕರುಣಾಂಬುಧಿಯಾ 3
--------------
ಬೇಲೂರು ವೈಕುಂಠದಾಸರು
ಬಂದಿರುವೆನು ಭೂಜಾತೆ | ಶರ- ದಿಂದುವದನೆ ವೋ ಸೀತೆ ಪ ಕೂಗುವುದೇತಕೆ ನಿಮ್ಮಯ ಪೆಸರೇ ನೀಗ ತಿಳಿಸಿರೈ ಸ್ವಾಮಿ | ನುಡಿ ಭಾಗವತ ಜನಪ್ರೇಮಿ ಅ.ಪ ಹೀನತಮವ ಮುರಿದಜಗೆ ಶೃತಿಗಳಿತ್ತ ಮೀನಾವತಾರನೆ ನಾನು | ಬಾ ಜಾನಕಿ ಬೇಗನೆ ನೀನು ಮೀನಾದರೆ ನೀರೊಳಗಿರುವುದು ಸರಿ ಮಾನಿನಿಯಲಿ ಕಾರ್ಯವೇನು | ನಡಿ ದೀನ ಜನರ ಸುರಧೇನು 1 ಕಮಲನಯನೆ ನಾ ಪೂರ್ವದಿ | ಗಜ- ಗಮನೆಯೆ ನೋಡನುರಾಗದಿ ಭ್ರಮೆಯಾತಕೆ ಕೇಳ್ ಕಠಿಣಾಂಗಗೆ ನಾ ಸಮಳೆ ನಿನಗೆ ನೀ ನೋಡು | ಸಂ ಭ್ರಮವಿದ್ದಲಿ ನಲಿದಾಡು 2 ವರಹಾರೂಪನೆ ಕಾಮಿನಿ | ಓ ತರುಣಿಯರೊಳಗೆ ಶಿರೋಮಣಿ ವರಾಹನಾದರೆ ಅಡವಿಯ ತಿರುಗುತ- ಲಿರದೇತಕೆ ಇಲ್ಲಿ ಬಂದೆ | ನಡಿ ಪರಿಪರಿ ಮೃಗಗಳ ಹಿಂದೆ 3 ಕರುಳ ಬಗೆದ ನರಸಿಂಹ | ನಾನು ಪರಮ ಪುರಷ ಪರಬ್ರಹ್ಮ ನರಸಿಂಹನು ನೀನಾದರೆ ನಡಿನಡಿ ಗಿರಿಗುಹೆಯೊಳಗಿರು ಹೋಗೈ | ಬಹು ಪರಿನುಡಿಗಳು ನಿನಗೇಕೈ 4 ಭೂಮಿಯ ದಾನವ ಬೇಡಿ ಬಲಿಯ ಗೆದ್ದ ವಾಮನ ನಾನೆಲೆ ನಾರಿ | ಸು ತ್ರಾಮಾದ್ಯರಿಗುಪಕಾರಿ ಬ್ರಾಹ್ಮಣನಾದರೆ ನಮಿಸುವೆ ಚರಣಕೆ ಹೋಮಧ್ಯಾನ ಜಪಮಾಡೈ | ನಿ ಷ್ಕಾಮ ಜನರ ಪಥನೋಡೈ 5 ದುರುಳನೃಪರ ಸಂಹರಿಸವನಿಯ ಭೂ ಸುರರಿಗೆ ಕೊಟ್ಟೆನೆ ದಾನವು | ಕೇಳ್ ಪರಶುರಾಮಾಭಿದಾನವು ವರಮಾತೆಯ ಶಿರವರಿದವ ನೀನಂತೆ ಸರಸವೇತಕೆನ್ನಲ್ಲಿ | ಮನ ಬರುವಲ್ಲಿಗೆ ತೆರಳಲ್ಲಿ 6 ತಾಯನುಡಿಗೆ ತಮ್ಮಗೆ ರಾಜ್ಯವ ಕೊಟ್ಟು ಪ್ರಿಯದಿ ವನದೊಳಗಿದ್ದೆನೆ | ದೈ ತ್ಯೇಯ ನಿಕರವನು ಗೆದ್ದೆನೆ ಸ್ರೀಯರಲ್ಲಿ ಹಿತವೇನು | ಕಮ ಲಾಯತಾಕ್ಷ ನಡಿ ನೀನು 7 ನಾರಿಯರನು ಕೂಡಿ ರಾಸ ಕ್ರೀಡೆಯೊಳ್ ತೋರಿದೆ ಪರಿಪರಿ ಚಿತ್ರವ | ವಿ- ಜಾರ ಪುರಷನಿಗೆ ಹೋಲುವಳಲ್ಲವು ಸಾರ ಪತಿವ್ರತೆ ನಾನು | ಇ- ನ್ನ್ಯಾರು ತಿಳಿಸು ಮತ್ತೆ ನೀನು 8 ಪತಿವ್ರತೆಯರ ಸದ್‍ವ್ರತವ ಕೆಡಿಸಿದಾ ಪ್ರತಿಮ ಬುದ್ಧನೆ ಲತಾಂಗಿ | ಓ ಮತಿವಂತಳೆ ಮೋಹನಾಂಗಿ ಕೃತಕವಾಡದಿರು ಒಲ್ಲೆ | ಕೇ ಳತಿ ಮೋಹಕ ನೀ ಬಲ್ಲೆ 9 ಹಲವು ನುಡಿಗಳೇನು ಕಲಿಯುಗಾಂತದಲಿ ಮಲೆತ ಮನುಜರನು ಕೊಲ್ವೆನೆ | ಓ ಲಲನೆ ನೋಡು ಬಲು ಚೆಲ್ವನೇ ಕಲಿತನವ ತೋರಿಸದಿರು ಈ ಪರಿ ಹಲವು ವೇಷ ನಿನಗೇಕೆ | ಕೇ ಳೆಲವೊ ಸ್ವಾಮಿ ನುಡಿ ಜೋಕೆ 10 ವೇಷವಲ್ಲ ಸರ್ವೇಶ ನಾನು ಪರಿ- ಪೋಷಿಸುವೆನು ನಿಜಭಕ್ತರ | ಸಂ- ತೋಷಿಸುವೆನು ಧರ್ಮಯುಕ್ತರ ಪೋಷಿಸುವನು ನೀನಾದರೆಲ್ಲಿ ನಿನ್ನ ವಾಸಪೇಳು ನಿಜವೀಗಾ | ಪರಿ ಹಾಸವೇಕೆ ನುಡಿಬೇಗ 11 ಪರಮಾತ್ಮನು ನಾ ಕೇಳೆ | ಎನ್ನ ಮರತೆಯೇನೆ ಎಲೆ ಬಾಲೆ ಅರಿತೆನೀಗ ಬಹು ಸಂತಸವಾಯಿತು ಎರಗುವೆ ಚರಣಕೆ ನಾನು | ನಿನ್ನ ಸರಿಯಾರೈ ದೊರೆ ನೀನು 12 ಧರೆಯೊಳಯೋಧ್ಯಾ ಪುರದರಸನ ಮಗ ಗುರುರಾಮವಿಠಲನೆ ನಾನು | ಓ ತರುಣಿ ನಿನಗೊಲಿದು ಬಂದೆನು ಧರಣಿ ತನಯೆ ನಸುನಾಚಿಕೆಯಿಂದಲಿ ಣಗಳನು ತೊಳೆದಳು ಬೇಗ 13
--------------
ಗುರುರಾಮವಿಠಲ
ಭಕ್ತಿಲೇಸು ಮುಕ್ತಿಗಿಂತಲಿ ಪ ಭಕ್ತಿಲೇಸು ಮುಕ್ತಿಗಿಂತಲಿ | ಭಕ್ತಜನರಾ ಪಾಲಿಸುವನಾ | ಭಕ್ತಿಗೊಲಿದು ಫಣಿಗಣ ಲೋಕದಿ | ಯುಕ್ತಬಲಿಯ ಬಾಗಿಲಲೊಳಿಹ ರಂಗಯ್ಯನಾ | ಸುರಪ್ರೀಯನಾ ಮುನಿಧ್ಯೇಯನಾ 1 ಸರಸಿಭವನ ಕಠಾರದಿಂದ ಲೋಗದನಾ | ಅರಸೆನಿಪನಾ ತನುಭವನಾ | ಧರಿಸಿದನಾ | ಅರಸಿಯ ಜನಕನ ಕುಲರಿಯನಿಪನಾ | ಕುವರನ ಸ್ಯಂದನ ವಾಜಿಯನು ಪೊರೆದನಾ | ಗೆಲಿಸಿದನಾ | ಮೆರಿಸಿದನಾ 2 ವನರುಹಸಖನ ಪೊಂದೇರ ನಡೆಸುತಿಹನಾ | ಅನುಜನಾ ಅರಿಗಳಾ ಹರಿಯ ನಂದನನಾ | ಘನವಾಲದಿಂದ ನೊಂದಿಹ ಪುರದರಸನಾ | ಅನುಜನಾ ಸ್ಥಿರಪದವಿತ್ತು ನುಳುಹಿದನಾ | ನಿಲಿಸಿದನಾ | ಕಾಯ್ವನಾ 3 ಸಿರಿಯ ಮದನಳಿದು ಗುರುಚರಣಕೆ ಹೊಂದಿ | ದೊರಕಿ ನಿತ್ಯದಲಿ ಸಂತುಷ್ಟವಿರುತಾ | ಗುರುವರ ಮಹಿಪತಿ ಸ್ವಾಮಿಯ ಷೋಡಶ | ಪರಿಯಲಿ ತುಳಸಿಯ ತಂದು ಪೂಜೆ ಮಾಡುವ | ಪಾದ ನೋಡುವಾ | ಪಾಡುವಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಘವೇಂದ್ರರ ಸ್ತೋತ್ರ ಬಂದರಾ ರಾಘವೇಂದ್ರರಾಯರು ಮಂತ್ರ ಮಂದಿರ ವೆಂಬೀ ಸ್ಥಳಕೆ ವಿಭವದಿ ಪ ಇಂದು ಭಜಕ ದ್ವಿಜ ವೃಂದಕೆ ಪರಮಾ ನಂದ ಗರಿಯಲು ಶ್ಯಂದನವೇರಿ ಅ.ಪ ಶ್ಯಂದನವೇರಿ ಧಣಂ ಧಣ ವಾದ್ಯದಲಿ ಪೌರಜನ ಸಂದಣಿಸಿತು ಆನಂದದಿ ನೋಡುತಲಿ ಪ್ರಾರ್ಥಿಪರು ಮುಗಿಯುತಲಿಕೈಯಾ ಕವಿಗೇಯಾ ಶುಭಕಾಯಾ ಸುಧೀಂದ್ರರ ತನಯಾ ಗುರುವರಮಧ್ವ ಮು- ನೀಂದ್ರರಾ ಸುಮತಾಂಬುಧಿ ಚಂದಿರ ಅತಿ ಸುಂದರ ವೃಂದಾವನದಲಿ ನಿಂದಿಹರೆಂದರಿದೊಂದಿಪರಿಗೆ ಭವ ಬಂಧವ ಬಿಡಿಸಲು 1 ಸಡಗರದಲಿ ಬಿಳಿಗೊಡೆ ಚಾಮರ ವ್ಯಜನಾದಿಗಳನು ಪಿಡಿದು ಸೇವಿಸುವ ಎಡಬಲದಲಿ ಸುಜನಾ ಸಚ್ಛಾಸ್ತ್ರ ವೇದ ಪುರಾಣ ಪ್ರವಚನ ಪಾವನ್ನ ಗುರುಗಳ ಗುಣಸ್ತವನ ಮಾಡುವಾ ವರಗಳ ಬೇಡುವಾ ಕುಣಿಕುಣಿದಾಡುವಾ ಪಾಡುವಾ ಪೊಡವಿ ನಿರ್ಜರರ ಕಡು ವೈಭವದಲಿ 2 ಮಣಿ ಮುಕುಟ ದಿಂದ ದಿ- ಗ್ವಲಯ ಬೆಳಗುತಿಹ ಚಲುವ ಮುಖದ ಮಾಟಾ ಗಳದಲ್ಲಿ ಮೌಕ್ತಿಕದ ಹಾರ ಕೇಯೂರ ನೂಪರ ಸ- ಪೊಳೆಯುತ ಭಜಕರ ಕ- ಲುಷಾಭ್ರಕೆ ಮಾರುvರೆÀನಿಸುತ ಇಳೆಯೊಳು ಪಂಡಿತ ಯಳೆಮೇಲಾರ್ಯಗೊಲಿದು ಭಕುತ ವತ್ಸಲರೆಂದೆ ನಿಸುತ3 ಮಂಗಳ ತುಂಗ ತರಂಗಿಣಿ ತೀರದಲಿ ಭಕುತ ಜ- ನಂಗಳಿಗೆ ನಿಖಿಲಾರ್ಧಂಗಳ ಸಲಿಸುತಲೀ ಪಾಲಿಸುವ ದೇವ ಸ್ವಭಾವ ಶರಣ ಸಂಜೀವ ಕರದಲ್ಲಿಗೆ ಬರುವ ಎನ್ನುತ ತುತಿಪರು ದೃಗ್ಭಾಷ್ಪವ ಸುರಿಸುತ ಮೈಮರೆಯುತ ಬಲು ನಿರ್ಮಲ ಅಂತರಂಗದಿತವ ಪದಂಗಳ ಸ್ಮರಿಪರ ಸಂಘಕೆ ಸತತ ಸುಮಂಗಳವೀಯಲು 4 ಪುರದರಸನು ತನ್ನ ಸಿರಿಪರಿವಾರದಲಿ ಚರಿಸುತ ಬರುತ ಕಾಣುತಲೆ ಗುರುವರ ಚರಣದಲಿ ಕಾಣಕೆಯನ್ನಿತ್ತು ಶಿರಬಾಗಿ ಚನ್ನಾಗಿ ಆರುತಿಯ ಬೆಳಗಿ ಬರುತಿರೆ ರಥಸಾಗಿ ತೋರುವಾ ನೋಳ್ಪರ ನಯನಕ್ಕೆ ಪರಮೋತ್ಸವಾ ಶರಣರ ವಾಂಛಿüತಗಳ ಗರಿಯುವಾ ಪೊರೆಯುವ ಧರೆಯೊಳು ಮೆರೆಯುವ 'ಶಿರಿ ಕಾರ್ಪರ ನರಹರಿಯ' ನೊಲಿಸಿರುವ ಗುರು ಪ್ರಹ್ಲಾದರು 5
--------------
ಕಾರ್ಪರ ನರಹರಿದಾಸರು
ರಾಜವದನೆ ಸುರರಾಜನ ಪುರದೊಳುರಾಜಿಸುತಿಹ ಕುಜವ ಪ ರಾಜೀವ ಮುಖಿಯೆನಿಸುವ ಸಖಿಗೊಲಿದಿತ್ತರಾಜನ ತೋರೆನಗೆ ಅ ನೆತ್ತಿಯಿಂದಿಳಿದಳ ಹೆತ್ತ ಮಗನ ಮೊಮ್ಮನೆತ್ತಿದಾತನ ಪಿತನ ತುತ್ತು ಮಾಡುವನ ವೈರಿಯನೇರಿ ಜಗವನು ಸುತ್ತು ಬರುತಲಿಪ್ಪನಕತ್ತಲೆಯೊಳು ಕಾದಿ ಅಳಿದಯ್ಯನ ಶಿರವಕತ್ತರಿಸಿದ ಧೀರನಸತ್ತ ಮಗನ ತಂದಿತ್ತವನನು ಎ-ನ್ನೊತ್ತಿಗೆ ಕರೆದು ತಾರೆ 1 ವರುಷವೈದರ ಪೆಸರವನ ತಾಯನುಜನಧರಿಸಿದಾತನ ಸಖನಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂವರಗೆ ತಾನೊಲಿದವನಸುರಗಿರಿಯನು ಸುತ್ತಿ ಬಾಹನ ಸುತನ ಕೈಯಲಿಹರಸಿ ದಾನವ ಕೊಂಡನಧರಣಿಜಾತನ ಶಿರವರಿದು ನಾರಿಯರನುಪುರಕೆ ತಂದವನ ತೋರೆ 2 ಹನ್ನೆರಡನೆಯ ತಾರೆಯ ಪೆಸರಾಕೆಯಕನ್ನೆಯಯ್ಯನ ಮನೆಯತನ್ನ ತಾ ಮರೆ ಮಾಡಿಕೊಂಡಿಪ್ಪರಸಿಯಬಣ್ಣವ ಕಾಯ್ದಿಹನಪನ್ನಗಶಯನ ಬೇಲಾಪುರದರಸನುತನ್ನ ನೆನೆವ ಭಕ್ತನಮನ್ನಿಸಿ ಕಾಯುವ ಚೆನ್ನಾದಿಕೇಶವ ಪ್ರ-ಸನ್ನನ ತೋರೆನಗೆ 3
--------------
ಕನಕದಾಸ
ಸರಳಕವಿ ರಾಮಾರ್ಯ ಹರುಷದಿ ವಿರಚಿಸಿದ ವರವೆಂಕಟೇಶನ ಪರಮಲೀಲೆಯ ಚರಿತೆಯುನ್ನತ ಕೀರ್ತಿಯಾಂತಿಹುದು ನರರ ಭಕ್ತಿಯ ಪೆರ್ಚಿಸಲ್ಕಿದು ಕರದ ದಿವ್ಯಜ್ಯೋತಿಯಪ್ಪುದು ಬರೆದಕವಿಯಾಸೂರಿವಂಶದ ಶರಧಿಚಂದಿರನು 1 ಭರತಭಕ್ತಿ ಯೆನಿಪ್ಪ ಚರಿತೆಯ ಬರೆದು ತಾನೇ ಭರತನಾಗಿಹ ಪರಿಯ ತೋರುವ ಭಕ್ತಿಬೋಧಕ ಭಾವಭಂಗಿಯಲಿ ಸರಸ ಸರಳತೆ ಲಲಿತಪದಗಳ ಶರಧಿಯಪ್ಪುದು ಕಾವ್ಯಮಿದನಾ ದರದಿ ಮುದ್ರಣಗೊಳಿಸಿ ಹಂಚಿದ ಕವಿಯು ಧನ್ಯನಲೇ 2 ಕವಿ ವಿಶಿಷ್ಠಾದ್ವೈತತತ್ವೋ ದ್ಭವನು ಹರಿಹರ ಭೇದರಹಿತನು ನವರಸಾಲಂಕೃತಯುತ ಗೋಕರ್ಣ ಮಹಿಮೆಯನು ಶಿವನ ಸನ್ನುತಿಗೈದು ರಚಿಸುತೆ ಭುವಿಯ ರಕ್ಷಣೆಗೈವ ಶಿವಕೇ ಶವರ ನಾಮವನೇಕ ವೊಬ್ಬನೆ ದೈವತಾನೆಂಬ 3 ಭಕ್ತಿಕಾವ್ಯಂಗಳನು ರಚಿಸಿಹ ಭಕ್ತನೀತನ ವಹ್ನಿಪುರಕಾ ಸಕ್ತಿಯಾಂತೈತರ್ಪುದೆಂದೆವು ವೇಂಕಟೇಶ್ವರನ ಭಕ್ತಿಬೋಧಕ ಕೃತಿಗೆ ಮಂಗಳ ದುಕ್ತಿಯುತ್ಸವಕಾಗಿ ನಾವತಿ ಭಕ್ತಿ ಸುಸ್ವಾಗತವನೀವೆವು ಕೈಗಳಂ ಮುಗಿದು 4 ಕೃತಿಯ ರಚನೆಗೆ ಮೋಹಗೊಂಡೆವು ಕೃತಿಯನೋದಿಸಿ ಕೇಳಿ ನಲಿದೆವು ಕೃತಿಯ ಬರೆದಾ ಕವಿಯ ಭಕ್ತಿಗೆ ಮನವ ತೆತ್ತಿಹೆವು ಕೃತಿಯ ಕರ್ತಗೆ ಮಣಿದು ಮಹದುಪ ಕೃತಿಯ ಗೈದಿಹಿರೆಂಬುದಲ್ಲದೆ ಕೃತಿಯ ಬರೆದವಗಾವಭಾಗ್ಯವನಿತ್ತು ತಣಿಸುವೆವು5 ಪರಮಭಕ್ತನಿಗಿಂದು ವಂದಿಸಿ ನೆರೆದ ಪಂಡಿತ ಪೌರಸಭಿಕರ ನೇಮಗಳಪೊತ್ತು ಹರಿಯ ಪಾದಂಗಳಿಗೆ ವಂದಿಸಿ ವರಕವಿಗೆ 'ಕವಿರತ್ನ’ ನೆನ್ನುವ ಬಿರುದನೀವೆವು ಸರಳಕವಿವರನಿದನು ಕೈಗೊಳಲಿ 6 ಗಮಕಕೋಕಿಲನೆನಿಪ ಕೌಶಿಕ ನಮಲಕೃತಿವಾಚನವಗೈಯಲು ಅಮಿತಸಂತಸದಿಂದ ವಿವರಿಸುತಂತರಾರ್ಥಗಳ ಕ್ರಮದಿ ಪೇಳಲು ಸೂರ್ಯನಾರಣ ನಮಿತ ಹರ್ಷಾಂಬುಧಿಯೊಳಿಳಿಯುತೆ ರಮೆಯ ರಮಣನ ಪಾದಕೆರಗಿದ ಸರಳಕವಿರತ್ನ7 ಆ ಮಹಾಮುನಿ ಸೂತನಂದದಿ ರಾಮಚರಿತಾಮೃತವ ರಚಿಸುತೆ ಆ ಮಹೇಶ್ವರನಾತ್ಮಲಿಂಗವು ಭೂಮಿಗಿಳಿದಾಕಥೆಯ ಕಾವ್ಯವ ನೀ ಮಹಾಮತಿ ರಚಿಸಿ ಮುಕ್ತಿಯ ಮಾರ್ಗವಿಡಿದಿಹನು8 ಸರಳಕವಿರತ್ನನಾಸೂರಿ ರಾಮಾರ್ಯತಾಂ ವಿರಚಿಸಲಿ ಸದ್ಭಕ್ತಿ ಕಾವ್ಯಗಳನೋರಂತೆ ಸಿರಿಕಾಂತನೀತಂಗೆ ದೀರ್ಘಾಯುರಾರೋಗ್ಯಗಳ ಕುಡಲಿ ಕಡುಕೈಪೆಯೊಳು ನೆರೆ ಗಮಕ ಕಲೆಯ ಸತ್ಕೀರ್ತಿ ವಿಸ್ತರಗೊಳಲಿ ಸಿರಿಗನ್ನಡಂ ಚಿರಂ ಬಾಳ್ಗೆ ಸುಕ್ಷೇಮದಿಂ ವರವಹ್ನಿಪುರದರಸನೆಲ್ಲರಂ ರಕ್ಷಿಸಲಿ ಭದ್ರಂ ಶುಭಂ ಮಂಗಳಂ9
--------------
ಪರಿಶಿಷ್ಟಂ