ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಮುಗಿವೆ ಚರಣಕ್ಕೆರಗುವೆ ಭರದಿ ರಕ್ಷಿಸು ಬಿಡದೇ ಶ್ರೀ ಪ ಮಾನವ ಕಾಯ್ದೆಯೊ ಹೀನರ ಮದಗರ್ವವನೆಲ್ಲ ಅಳಿದೆಯೊ ಧ್ಯಾನ ಮಾಡುವ ಸ್ವಾನುಭವಿಗಳ ಸ್ಥಾನ ಹೃದಯವಾಸ ಶ್ರೀ 1 ಧ್ಯಾನಿಸಿವಂಥಾ ಗಜರಾಜನ ಕಾಯ್ದೆ ಮಾನಿನಿ ಅಹಲ್ಯೆಯ ಪಾದದೊಳುದ್ಧರಿಸಿದೆ ದೀನರಕ್ಷಕ ಬಿರುದ ಪೊತ್ತ ವಿ ಜ್ಞಾನದೊಳಗಿರಿಸೆನ್ನಾ 2 ಶಬರಿಯ ಭಕ್ತಿಗೆ ಮೆಚ್ಚನೀ ಬಂದೆಯೊ ಬದರಿಯ ಹಣ್ಣನೆ ಸವಿಸವಿ ದುಂಡೆಯೊ ವಿಭು ಪರಮಾನಂದಾ ಪ್ರಭೆಯೊಳಗಿರಿಸಿದೆ 3 ಸ್ವರ್ಣಕಶ್ಯಪನ ಸೊಕ್ಕಗಿಸಿದೆ ದೇವಾ ಮನ್ನಿಸಿ ಪಾಂಡವರೈವರ ಸಲಹುವಾ ಚನ್ನ ಗೋಪಿಯರ ಕೂಡಿ ಮನ್ನಣೆಕ್ರೀಡೆಯ ನಾಡಿ 4
--------------
ಶಾಂತಿಬಾಯಿ
ಕರುಣಿಸಲೊಲ್ಯಾ ಕರುಣಾನಿಧೇ ಪ ಕರುಣಿಸಲೊಲ್ಯಾ ನೀ ಕರುಣಸಾಗರ ನಿನ್ನ ಭವ ಅರಣ ದಾಟುವಂತೆ ಅ.ಪ ವಿಶ್ವವ್ಯಾಪಕನೆ ವಿಶ್ವಾಸುವಿಶ್ವ ನೀ ವಿಶ್ವ ಪ್ರೇರಕ ನಿನ್ನ ವಿಶ್ವಪಾದದೊಳು ನಾ ವಿಶ್ವಾಸಮಾಳ್ಪÀಂತೆ 1 ಜ್ಞಾನದಾಯಕನೆ ಜ್ಞಾನದಾಯಕ ಎನ್ನ ಜ್ಞಾನನಿಚಯ ನೀನೆ ಹಾನಿಮಾಡಿ ನಿನ್ನ ಜ್ಞಾನವನೈದೊಂತೆ 2 ಮಂದರೋದ್ಧರನೆ ಮಹಾರಾಯಾ ನಂದದಾಯಕನೆ ಇಂದಿರಾಪತಿ ನಿಜ ನಂದಕೊಡುವ ನಿನ್ನ ದ್ವಂದ್ವ ಚರಣದೊಳು ಸಂದೇಹವಿಲ್ಲದಂತೆ 3 ಕಾಮಿತಾರ್ಥವನೆ ಕಮಲಾಕ್ಷಾ ಕಾಮನ್ನಪಿತನೆ ಕಾಮಿತಾರ್ಥಗಳನ್ನು ಕಾಮಿಸದಲೆ ನಿನ್ನ ನಾಮವ ಭಜಿಸುವ ನೇಮಮತಿಯನಿತ್ತು 4 ಸೃಷ್ಟಿಕಾರಣನೆ ಶ್ರೀಕೃಷ್ಣಯ್ಯಾ ವೃಷ್ಣಿನಾಯಕನೆ ದುಷ್ಟಮತಿಯ ಬಿಡಿಸಿ ಶಿಷ್ಟಙÁ್ಞನವನಿತ್ತು ದಿಟ್ಟಗುರುಜಗನ್ನಾಥ ವಿಠಲ ನೀ ಎನ್ನ 5
--------------
ಗುರುಜಗನ್ನಾಥದಾಸರು
ನಾನೇನು ಬೇಡಿದೆನೋ ರಂಗಯ್ಯ ನೀನೆನ್ನ ನೋಡವಲ್ಲ್ಯಾಕೋ ಪ ಹಾನಿ ಮಾಡೆ ಮಹಹೀನಭವಸಾಗರ ಮಾನದಿಂ ಗೆಲಿಸೆಂದು ನಾನಿಷ್ಟೇ ಬೇಡುವೆ ಅ.ಪ ನಿಗ್ರಹಿಸಿ ಸ್ಥಿರಪದನುಗ್ರಹಿಸಿ ಪೊರೆಯೆಂದೆನೆ ಸುಗ್ರೀವನಂತೆನ್ನ ಆಗ್ರಜನ ಕೊಂದು ಕಪಿ ದುರ್ಗಕ್ಕಧಿಪತಿಯೆನಿಸೆಂದಾಗ್ರಬಟ್ಟೆನೊ ನಿನಗೆ 1 ಕುಲವ ನಿರ್ಮೂಲ ಮಾಡಿ ಇಳೆ ಪಟ್ಟಕ್ಕೆ ಸ್ಥಿರವಾಗಿ ನಿಲಿಸು ಎನಗೆಯೆಂದು ಸುಲಭದಿಂ ಬೇಡಿದೆನೆ ಒಲಿದು ಸಾರಥಿಯಾಗಿ ಕುಲದವರ ಸವರೆಂದು ನಳಿನಾಕ್ಷ ತವಪಾದದೊಳು ಬೇಡಿದೆನೇನೋ 2 ಚಿತ್ತಜಪಿತ ನಿನ್ನ ಸತ್ಯ ಬಿರುದುಗಳು ನಿತ್ಯ ನಿತ್ಯದಿ ಬಿಡದೆ ಶಕ್ತಿಯಿಂ ಪೊಗಳುವೆ ಭಕ್ತಿದಾಯಕ ನಿನ್ನ ಯುಕ್ತ್ಯಾರುಬಲ್ಲರು ಮುಕ್ತಿ ದಯಮಾಡೆಂದು ಪ್ರಾರ್ಥಿಪೆ ಶ್ರೀರಾಮ 3
--------------
ರಾಮದಾಸರು
ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ ಪ ಜೀಯ ಕಾಯುವುದಯ್ಯ ಪರಿಹರಿಸಯ್ಯ ತಾಪ- ತ್ರಯ ದಯೆತೋರಯ್ಯ ಎನ್ನೊಡೆಯಾ ಅ.ಪ ನಾನರಿಯೆ ನಿನ್ನಯ ಗುಣಗಣಾದಿಗಳ ಅನುದಿನದಿನಾ ಅನುಭವಿಸಿ ಭವಚಕ್ರದಾಟಗಳ ಜನುಮ ಜನುಮಾಂತರದಿ ಬಂದ ವಾಸನಾದಿಗಳ ದೀನವತ್ಸಲ ದೂರ ನೋಡುವೆಯ ನೀನರಿಯ ಎನ್ನನು ಉಳುಹುವ ಪರಿಯ ಎನಗ್ಯಾರಿಹರೊ ನಿನ್ಹೊರತು ಪೂರೆವರಯ್ಯ ವನಜಸಂಭವನಯ್ಯ ಜೀಯ 1 ಕರಿ ಮಕರಿ ಪಿಡಿಯಲು ಬಂದ ಪರಿಯೇನು ನಿಖಿಳಖಳಕುಲವೈರಿ ಶ್ರೀಹರಿ ಸಿರಿಗೆ ಹೇಳದ್ದೇನು ಭಕುತನಾರ್ತಧ್ವನಿಯ ಕೇಳಿ ಬಂದೆಯಾ ಏನು ನಾನು ಆಸಾಧನವನರಿಯೇನು ಘನ್ನಮಹಿಮ ನಿನ್ನಯ ಕೀರ್ತಿಯನು ಕೇಳಿ ಬಂದೆನು ಇನ್ನೇನು ನಿನಗೆ ಏನು ತೋರಿದಂತೆ ಮಾಡಿನ್ನು ಎನ್ನೊಡೆಯ ನೀನೆಂದಡಿಗೆ ಬಿದ್ದಿಹೆನೊ ಇನ್ನು 2 ಈಸಲಾರೆನು ಸಾರಿ ಈ ಭವಸಾಗರದೊಳಗೆ ಶ್ರೀಶ ನಿನಗತಿಶಯವೆ ಕರುಣವಿಲಾಸ ತೋರೆನಗೆ ದಾಸದಾಸದಾಸರದಾಸ್ಯ ಕೊಡಿಸೆನಗೆ ಶ್ರೀಶ ಎನ್ನಯ ಮನದ ಕ್ಲೇಶವನೂ ನಾಶವಗೈಸು-ನಿರಾಶ್ರಯನಾಗಿಹೆನು ಏಸುಬಲ್ಲೆನು ಕಾಸಿನವನು ಬೇಸರಿಸದಿರು ಇನ್ನೂ-ಮುನ್ನೂ 3 ತಾಪತ್ರಯಗಳಿಂದನುದಿನದಿ ನಾ ನೊಂದೆ ಶ್ರೀಪತಿಯೆ ಹೃತ್ತಾಪಕಳೆದು ಪೊರೆಯಬೇಕೆಂದೆ ಗೋಪನಿನ್ನಯ ಶ್ರೀಪಾದದೊಳು ಮನವ ನೀಡೆಂದೆ ಕುಪಿತವೇ ನಿನ್ನವನು ನಾನೆಂದೆ ಭೂಪ ಆಪತ್ತೋದ್ಧಾರಕನೆಂದೆ ಪಾಪಿಮಾನವಜನುಮದಲಿ ಬಂದೆ ಕಾಪಾಡುವುದು ಎಂದೇ-ತಂದೇ 4 ಭೂಸ್ಥಳದಿ ನಿಂತ ಶ್ರೀ ವೇಂಕಟೇಶ ಹರೇ ತ್ರಿಸ್ಥಳದೊಳು ಈ ಸ್ಥಳವೆ ವೈಕುಂಠ ದೊರೆಯೆ ವಿಸ್ತರದಿ ಮಹಿಮೆಯ ಪಾಡಿ ಪೊಗಳಲು ನಾವು ಶಕ್ತರೆ ಸ್ವಸ್ಥಚಿತ್ತವಿಲ್ಲ ಶ್ರೀಹರೇ ಈ ಸ್ಥಿತಿಯಲ್ಲಿ ಎನ್ನ ನೋಡುವರೆ ದುಸ್ಥಿತಿಯಬಡವನಕೈಯ ಬಿಡುವರೆ-ಶೌರೆ5
--------------
ಉರಗಾದ್ರಿವಾಸವಿಠಲದಾಸರು
ಮಂಗಳ ಪಾಡಿರೆ ಭಾವೆಯರೇ ರಂಗನ ರಮಣಿಯ ಭಾವಿಸಿರೇ ಪ ಅಂಗಜಜನನಿಯ ಕೃಪೆಯಿ ಸ- ತ್ಸಂಗತಿ ಪಡೆದೆವು ನಿಶ್ಚಯಂಅ.ಪ ಭೋಗವತೀಪತಿಶಾಯಿಯೊಳು ಅನು ರಾಗಗೊಂಡಿಹ ದೇವಿಯಿವಳ್ ಭಾಗ್ಯಲಕ್ಷ್ಮಿಯ ಪಾದದೊಳು ಬಾಗುತ ಶಿರವನು ರಾಗದೊಳು 1 ವೇದಸಾರದ ವಾಕ್ಯದಲಿ ಮಾಧವಿಯಂ ಸ್ತುತಿ ಮಾಡುತಲಿ ಭೇದವೆಣಿಸದೆ ಸಲಹೆನ್ನುತಲಿ ಮಾಧವನಂ ಕೊಂಡಾಡುತಲಿ 2 ತಾಪತ್ರಯಗಳ ಪರಿಹರಿಸಿ ಆಪತ್ತುಗಳಿಂದುದ್ಧರಿಸಿ ಕಾಪಾಡುವಳಿವಳೆಂದೆನಿಸಿ ಶ್ರೀಪದ್ಮಿನಿಯನು ಸಂಸ್ಮರಿಸಿ 3 ಶರಣಾಗತ ಸಂರಕ್ಷಕಿಗೆ ವರಶೇಷಗಿರಿನಿಲಯನಿಗೆ ಕರುಣಾರೂಪಿಣಿ ಪದ್ಮಿನಿಗೆ ಕರಗಳ ಮುಗಿಯುತೆ ಮಾಧವಿಗೆ 4
--------------
ನಂಜನಗೂಡು ತಿರುಮಲಾಂಬಾ
ಮಹಾಲಕ್ಷ್ಮಿ ಇಂದಿರೆ ಮಂದಿರದೊಳು ನಿಂದಿರೆ ಪ. ನಿತ್ಯ ಎನ್ನ ಆಹಾಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪದಿಂದ ಪೂಜಿಸುವೆನು ಕುಂದುಗಳೆಣಿಸದೆ ಅ.ಪ. ಘಲು ಘಲು ಗೆಜ್ಜೆಯ ನಾದದಿಂದಫಳಫಳಿಸುವ ದಿವ್ಯಪಾದದೊಳುಪಿಲ್ಯ ಕಾಲುಂಗುರನಾದ ಅಂಘ್ರಿಚಲಿಸುವ ದಿವ್ಯಸುಸ್ವಾದ ಆಹಾಕಾಲಂದಿಗೆ ಗೆಜ್ಜೆ ಝಳಪಿಸುತ್ತ ನ-ಮ್ಮಾಲಯದೊಳು ನಿಲ್ಲೆ ಪಾಲವಾರಿಧಿಕನ್ನೆ 1 ಸಿರಿ ಅರಳೆಲೆ ಕುಂಕುಮಹೆರಳಗೊ[ಂ]ಡೆಗಳಿಂದ ಹರಿಯ ಮೋದಿಸುವೆ 2 ಜಯ ಜಯ ವಿಜಯಸಂಪೂರ್ಣೆ ಭಕ್ತಭಯನಿವಾರಣೆ ಎಣೆಗಾಣೆ ಎನ್ನಕಾಯುವರನ್ಯರ ಕಾಣೆ ಶೇಷ-ಶಯನನ್ನ ತೋರೆ ಸುಶ್ರೇಣೆ ಆಹಾಕೈಯ ಪಿಡಿದು ಭವಭಯವ ಪರಿಹರಿಸೆ ಸಿರಿಹಯವದನನ ದಯವ ಪಾಲಿಸೆ ಲಕ್ಷ್ಮಿ 3
--------------
ವಾದಿರಾಜ