ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರಂಜನ ಶರಧಿಜಕಂಜಕರದಿ ಸುರಸ ಭುಂಜಿಸೋ ದೇವ ಪ ಜಂಬು ನೀರಲ ಸುಗೋಡಂಬಿ ಪಲಸು ದಾ-ಳಿಂಬ ಸುರಸ ಇಕ್ಷುರಂಭೆ ಫಲಗಳಾ 1 ನಾರಿಕೇಳವು ದ್ರಾಕ್ಷಿ ಪೇರು ಖರ್ಜೂರ ಕವಳಿಭೂರಿ ಕಿತ್ತಳೆ ಚೂತಕೇರು ಫಲಗಳು2 ಕಾಯಿಸಿದಾ ಪಾಯಸ ದೋಸೆ ಮೊಸರುಬೆಣ್ಣೆದೋಸೆ ಕೊಡುವೆ ಇಂದಿರೇಶ ಯಾದವಗೆ3
--------------
ಇಂದಿರೇಶರು
ಪಾಲಿಸು ಮರೆಯದೆನ್ನ ಪಾಲ ತ್ರಿಜಗಮೋಹ ಮಾಲಕೌಸ್ತುಭ ಸತ್ಯಭಾಮಾ ಲೋಲ ಭಕ್ತಜನರ ಪ್ರೇಮ ಕಾಲಕಾಲದಿ ನಿಮ್ಮ ಭಜನಲೋಲಜನರೊಳಿರಿಸಿ ಎನ್ನ ಬಾಲನೆಂದು ಕರುಣದಾಳು ಕಾಳರಕ್ಕಸಕುಲಸಂಹಾರ ಪ ವಾರಿಧಿಯೊಳು ಮುಳುಗಿದ ವೇದಗಳ ತಂದು ವಾರಿಜಾಸನಗೊಪ್ಪಿಸಿದಿ ಸಾಧುಗಳ ಬಂಧು ವಾರಿಧಿಯೊಳು ವಾರಿಧಿಯ ಕಡೆದಿ ವಾರಿಧಿಯೊಳು ವಾಸನಾದಿ ವಾರಿಧಿಸುತೆಪತಿ ನೀನಾದಿ ವಾರಿಧಿಯನು ಬಂಧಿಸಿ ಮತ್ತೆ ವಾರಿಧಿಯ ಮಧ್ಯದ ಪುರವ ಸೂರೆಗೈದಾಪಾರಮಹಿಮ ಘೋರತಾಪದಿ ಬಿಡದೆ ದೇವ1 ಮಾಯಾಜಗವ ತುಂಬಿದಿ ಮಹರಮಣ ಹರಿಯೆ ಮಾಯದ ಮರುಣುಣಿಸಿದಿ ವೈಕುಂಠಪತಿಯೆ ಮಾಯೆಗೆ ಮಾಯೆಯೆನಿಸಿದಿ ಮಾಯೆಹರನಾದಿ ಮಾಯದಿಂ ಬಲಿಯನ್ನು ತುಳಿದಿ ಕಶ್ಯಪನ ಅಳಿದಿ ಮಾಯದ್ಹಿರಣ್ಯಕನ ಸೀಳಿದಿ ಮಾಯದಿಂ ಮಾಯೆಮೂಗು ಕುಯ್ಸಿದಿ ಮಾಯಮೃಗವನು ಮಾಯದಿಂ ಕೊಂದಿ ಮಾಯದೆನ್ನ ನೂಕದೆ ದೇವ 2 ಕಪಟಕೋಟಿಗಳನ್ನಳಿದಿ ಚಪಲಸುರಪನ ಕಪಟಗರುವವ ಮುರಿದಿ ಲಕುಮಿರಮಣ ಕಪಟನಾಟಕ ನೆನಿಸಿದಿ ಕಪಟಹರನಾದಿ ಕಪಟ ಅಸುವ ಸೆಳೆದಿ ಕಪಟ ಕಂಸನ ಶಿರವಮೆಟ್ಟಿದಿ ಕಪಟಿಗಳ ಮಹ ಕಪಟದಿಂ ಕೊಂದಿ ಶ್ರೀರಾಮ3
--------------
ರಾಮದಾಸರು
ಫಲಾಹಾರವನು ಮಾಡೊ ಪರಮಪುರುಷ ಭೂಲಲನೆಲಕ್ಷ್ಮೀ ಕಂದರ್ಪರ ಸಹಿತಪ.ಕದಳಿ ಕೆಂಬಾಳೆ ಕಿತ್ತಳೆ ಕಂಚಿ ಫಲಗಳುಬದರಿ ಬೆಳುವಲ ಜಂಬೀರ ದ್ರಾಕ್ಷಿಗಳು ||ಮಧುರದ ಮಾದಾಳ ಮಾವಿನ ಹಣ್ಗಳುತುದಿ ಮೊದಲಿಲ್ಲದ ಪರಿಪರಿ ಫಲಗಳ 1ಉತ್ತತಿ ಜಂಬುನಾರಂಗ ದಾಳಿಂಬವುಮುತ್ತಾದೌದುಂಬರ ಕಾರಿಯು ಕವಳಿ ||ಕತ್ತರಿಸಿದ ಕಬ್ಬು ಪಲಸು ತೆಂಗಿನಕಾಯಿಒತ್ತಿದ ಬೇಳೆ ನೆಲಗಡಲೆ ಖಜ್ಜೂರ ಹಣ್ಣ 2ಹಾಲು ಸಕ್ಕರೆ ಜೇನುತುಪ್ಪ ಸೀಕರಣೆಯುಹಾಲು ರಸಾಯನ ಬೆಣ್ಣೆ ಸೀಯಾಳು ||ಮೂಲೋಕದೊಡೆಯ ಶ್ರೀ ಪುರಂದರವಿಠಲನೆಪಾಲಿಸೋ ನಿನ್ನಯ ಕರಕಂಜದಿಂದಲಿ 3
--------------
ಪುರಂದರದಾಸರು
ಬಣ್ಣಿಸಲಮ್ಮೆ ನಾನು ಪ.ಬಣ್ಣಿಸಲಮ್ಮೆ ನಾ ಬಹಳ ಮಹಿಮ್ಮನಚಿನ್ಮಯ ನಗಾಧಿಪ ಚೆಲುವ ತಿಮ್ಮಪ್ಪನ ಅ.ಪ.ಇಳೆಯ ಮಾನವರೊಳು ಈಕ್ಷಿಸಿ ಕೃಪಾಳುಒಲಿದು ಕರುಣದಿಂದ ವೈಕುಂಠಪುರದಿಂದಇಳಿದು ಮಂಗಳದೇವಿಯನು ಕೂಡಿಕೊಂಡು ವಿಮಲ ಸ್ವಾಮಿಪುಷ್ಕರ ಮಹಾತೀರ್ಥದ ತೀರದಲಿ ನಿಂತು ಬೇಕಾದ ಧನಧಾನ್ಯ ಸಂಪದಹಲವು ಕಾಮ್ಯವನೀವ ಹೊಗಳಿದವರಕಾವಸುಲಭರೊಡೆಯನ ಕಂಡು ಹಸಿದ ಕಂಗಳಹಬ್ಬ ದಣಿಯಲುಂಡು ಬಹುತೋಷತುಳುಕುವ ಸುಜನವಿಂಡು ವಾರಂವಾರ 1ಪೇಳಲೇನಯ್ಯನ ಪರಿಸೆಯ ಸೊಬಗು ನಾಆಲಯದಿಂ ಗಡಾ ಜನಿಜನ ಸಂಗಡಚೋಳ ಚಪ್ಪರಮೊತ್ತ ಛತ್ರ ಚಾಮರ ಪತಾಕಾಳಿ ಸೀಗುರಿ ಢಕ್ಕೆ ಕೊಂಬು ಕಹಳೆ ಡೆಂಕೆಮೇಳೈಸಿ ಮಹಿಮರು ಮಹದಾನಂದದವರುಗೋಳಿಡುವರು ಹರಿಗೋವಿಂದ ಎನುವರುಕಾಲಾಟದಲ್ಲವರು ಕೀರ್ತಿಪ ಗೀತತಾಳ ದಂಡಿಗೆಯವರು ಬೆಳಗುವಸಾಲು ಪಂಜಿನವರು ವಾರಂವಾರ 2ವಾಂಛಿತಫಲಗಳು ಒದಗಲು ಹರಿಯೊಳುವಂಚನೆಯಿಲ್ಲದೆ ಒಂದೊಂದು ಬಗೆಯದೆಕಾಂಚನ ಮುಡುಪಿಲಿ ಕರಬದ್ಧಾಂಜಲಿಯಲಿಮಿಂಚುವ ಭಕ್ತಿಲಿ ಮಧುಕರ ವೃತ್ತಿಲಿಪಂಚಾಬ್ದಾದ್ಹಸುಳರು ಪ್ರಾಯದ ಅಬಲೇರುಹಿಂಚಾದ ವಯಸಾದ ಹಿರಿಯರು ಹರುಷದಿಸಂಚಿತಹರಕೆಯವರು ತೊಟ್ಟಿಲು ಮನೆಮಂಚವ ಹೊತ್ತವರು ದೇಶಗಳಿಂದಾಕಾಂಕ್ಷೆವಿಡಿದು ಬಂದವರು ವಾರಂವಾರ 3ಸ್ವಾಮಿ ವರಾಹಪಾದ ಸರಸಿಜಾಂಬುಸ್ವಾದತಾಮಹತ್ಯಂಕದ ಶಾತಕುಂಭಾಂಕದವೈಮಾನವಾಸನವಿಧಿಭವೇಂದ್ರೇಶನಕಾಮನ ಪಿತನ ಕಲಿಭಯಛಿತ್ತನಸೋಮಸೂರ್ಯಾಕ್ಷನಸಾಮಜಪಕ್ಷನಜೀಮೂತಗಾತ್ರನ ಜಿತಶತ್ರು ಸೂತ್ರನನೇಮದಿ ಕಂಡೆರಗಿ ಮೈಯೊಳುರೋಮ ಪುಳಕಿತರಾಗಿ ಭಕ್ತರಸ್ತೋಮವು ಮುಕ್ತರಾಗಿ ವಾರಂವಾರ 4ಗಿರಿಯೊಳಮಲಂತರ್ಗಂಗೆ ಪಾಪಾಂತೆವರಪಾಂಡುತೀರ್ಥ ಬಿಲ್ವಾಂಬು ಕಚ್ಛಪತೀರ್ಥಸಿರಿವರಾಹ ಮಚ್ಛಸಲಿಲಪಾವನಲಕ್ಷ್ಮಿಸರ ನಾರದೀಯ ಸರಸ್ವತೀಯ ತೋಯಮೆರೆವ ತುಂಬುರ ಜಲ ಮೊದಲಾದ ಸ್ಥಳಗಳಸರವ ಸನ್ನಿಧಪೂರ್ಣ ಸ್ವಾಮಿ ಪುಷ್ಕರಿಣಿಯನೆರಕೊಂಡು ಪೂತಾಂಗರು ಹರಿಪಾದಸರಸಿಜರತ ಭೃಂಗರು ಜ್ಞಾನೋನ್ಮತ್ತಭರಿತಾಂಗ ಮತ್ತಾಂಗರು ವಾರಂವಾರ 5ನಳಿನಾಕ್ಷ ಪದವಾರಿನಿತ್ಯಸೇವಿಸಿಸಿರಿತುಲಸಿ ತುದಿಯ ಪೊನ್ನತಳಗಿಯದಧ್ಯನ್ನಬಲುರುಚಿ ಅನ್ನವಾಲು ಬಕುಳನ್ನ ಪೊಂಗಲುಸಲೆ ಮೃದು ಗಾರಿಗೆ ಸುಕಿನುಂಡೆ ಗುಳ್ಳರಿಗೆಪುಳಿ ತಿಕ್ತ ಮಧುಮಿಶ್ರ ಪಲಸು ಪಾಲಿನ ದೋಸೆಪಲವು ಪರಿಯ ಘೃತವು ಪಕ್ವ ಪಂಚಾಮೃತಪಾಲ ತೈಂತೊಳೆ ಮನೋಹರ ಪ್ರಸಾದುಂಡುಕಳೆಯೇರುವರು ಮನೋಹರ ಅಲ್ಲಿಗಲ್ಲಿನಲಿವ ದಾಸರ ಮೋಹರ ವಾರಂವಾರ 6ಪೂವಿನಂಗಿಯ ಚೆನ್ನ ಪುಳಕಾಪುಮಜ್ಜನನವ್ಯೋತ್ಸಾಹದಲ್ಲಿಹ ನರಮುನಿಸುರಸಹಸೇವ್ಯಾನಂದನಿಲಯ ಸಾಮಗಾಯನ ಪ್ರಿಯದಿವ್ಯ ರತ್ನಾಭರಣ ದೀಧಿತಿ ಸಂಕೀರ್ಣಹವ್ಯಾಸದನುದಿನ ಹನುಮಗರುಡಯಾನಸವ್ಯಾಪಸವ್ಯ ಭವಭೂಷಿತ ಸ್ಥಿತಸೂರ್ಯಾರೂಢನ ಮೂರ್ತಿಯ ಭೂವೈಕುಂಠಸುವ್ಯಕ್ತವಹ ವಾರ್ತಿಯ ಪ್ರಸನ್ವೆಂಕಟವ್ಯಾಕೃತನ ಕೀರ್ತಿಯ ವಾರಂವಾರ 7
--------------
ಪ್ರಸನ್ನವೆಂಕಟದಾಸರು