ಒಟ್ಟು 81 ಕಡೆಗಳಲ್ಲಿ , 22 ದಾಸರು , 79 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದಕುಮಾರಾ ಮುಕುಂದಾ ಜನಾರ್ದನ ಮಂದರಧರ ಗೋವಿಂದ ಹರೇ ಪ ಸುಂದರ ಗೋಪಿ ಮಾಧವ ಕೇಶವಪತೇ ನಮೋ ಸಾಮಜಪಾಲನ ನಾಮಾ ನಮೋ ಭೂಮಿ ಸುತಾನ್ವಿತ ರಾಮಾ ನಮೋ ನಮೋ ಕಾಮಿತದಾತಾ ಪರೇಶಾ ನಮೋ ನಮೋ 1 ಅಕ್ಷಯಾತ್ಮ ಸುರಪಕ್ಷಾ ನಮೋ ನಮೋ ಪಕ್ಷಿಗಮನ ಪದುಮಾಕ್ಷಾ ನಮೋ ನಮೋ ಲಕ್ಷರೂಪ ಖಳಶಿಕ್ಷಾ ನಮೋ ನಮೋ [ರಕ್ಷಕ ಪಾಂಡವ ಪಕ್ಷ ನಮೋ] 2 ತುಂಗ ಕೃಪಾಂಬಕ ರಾಮಾ ನಮೋ ನಮೋ [ಮಂಗಳದಾಯಕ ಕೃಷ್ಣನಮೋ] ಅಂಗಜಾತ ಪಿತ ರಂಗ ನಮೋ ನಮೋ ಮಾಂಗಿರಿವಾಸ ಕೃಪಾಂಗಾ ನಮೋ ನಮೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿಖಿಳ ಗುಣಗಣ ಪೂರ್ಣ ಪ ಅಂಬುಜಾಸನ ಜನಕ ನರಹರಿ ಅಂಭ್ರಣೀ ಜಗನ್ನಾಥ ನಾಯಕ ಬಿಂಬ ವಿಷ್ಣುವೆ ನಿಖಿಳವಿಶ್ವಕೆ ತುಂಬಿ ಭಕ್ತಿಯ ಕಾಯೋ ಕರುಣಿ ಯೇ ಅ.ಪ. ತಂದೆಕಾರಣ ಭವದೀ- ನೀ ಎನ್ನ ಬಂದೆನಲ್ಲದೆ ನಿಜದೀ- ಸುಖಪೂರ್ಣ ನಿಂದು ನಡೆಸದೆ ಭವದೀ- ದಾಟಿನ್ನ ಎಂದಿಗಾದರು ಗೆಲ್ಲುವೆನೆ ಘನ್ನ ಬಂಧನಪ್ರದ ನೀ ಬಂಧಮೋಚಕ ತಂದ ವಿಷ್ಣುವೆ ಮೂಲಕಾರಣ ವೆಂದು ಶೃತಿಗಳವೃಂದ ನುಡಿವುವು ಬಂದು ನಿನಗಿಂತಧಿಕರಾರೈ ನಿಂದು ಹೃದಯದಿ ಸರ್ವಕಾಲದಿ ತಂದು ಉಣಿಸುವೆ ಸಕಲ ವಿಷಯವ ಬಂಧಿ ನಾನಿಹೆ ಜಡವೆ ನೀ ಬಿಡೆ ಮುಂದಿನಾಗತಿ ಬೇಗ ತೋರೈ ಇಂದಿರೇಶ ಮಹೇಂದ್ರ ಸುಖಮಯ ಕಂದರಾಶ್ರಯ ಬ್ರಹ್ಮಮಂದಿರ ನಂದಿವಾಹನ ತಾತ ವಿಭುವರ ಚಂದಗೋಚರ ಸಾರ್ವಭೌಮನೆ ಕೂಂದುನಕ್ರನ ಗಜವ ಸಲಹಿದೆ ನಂದನೀಡಿದೆ ಪಾರ್ಥಮಡದಿಗೆ ತಿಂದು ಎಂಜಲ ಕಾಯ್ದೆ ಶಬರಿಯ ಗಂಧ ಕೊಳ್ಳುತ ಕಾಯ್ದೆ ಕುಬ್ಜೆಯ ಕಂದ ಕೂಗಲ್ ಬಂದೆ ಕಂಭದಿ ಇಂದ್ರ ಗೋಸುಗ ಬಲಿಯ ಬೇಡದೆ ಮಂದರಾದ್ರಿಯ ಪೊತ್ತೆ ಸುರರಡೆ ಸುಂದರಾಂಗಿಯುಆದೆ ಹಾಗೆಯೆ ಹಿಂದೆ ಈತೆರ ನಿತ್ಯತೃಪ್ತನೆ ಬಂದು ಸಲಹಿದ ಭಕ್ತವೃಂದವ ಮಂದನಾದರು ಶರಣುಬಿದ್ದವ ನೆಂದು ಸಲಹೈ ಪೂರ್ಣಕರುಣಿಯೇ1 ಕೂಡಿಸುತ ಮನ ವಿಷಯ ಬಲೆಯಲ್ಲೀ ಮಾಡಿಸುವೆ ಮಾಡಿದ್ದ ದಿನದಿನದೀ ಗೂಢ ನಿನ್ನಯ ಭಕ್ತಿ ಕೊಡಲೊಲ್ಲೀ ಕೇಡುಮೋಹ ಸಜಾಡ್ಯ ಹರಿಸಿಲ್ಲೀ ಓಡಿಓಡಿಸೆ ಜಗವು ನಡೆವುದು ನೋಡಿನೋಡಿಸೆ ನಾವು ನೋಳ್ಪೆವು ಮಾಡಿಮಾಡಿಸೆ ಕರ್ಮವಾಹುದು ಪ್ರೌಢ ನಿನ್ನಯ ಬಲದ ವಿಶ್ವಕೆ ಕಾಡಿಕಾಡಿಪ ವಿಷಯ ಬಿಡಿಸುತ ಹಾಡಿಹಾಡಿಸಿ ನಿಮ್ಮ ಕೀರ್ತನೆ ಆಡಿಆಡಿಸಿ ಸಾಧುಸಂಗದ ಜಾಡುತೋರಿಸೊ ಭಕ್ತಿ ಮಾರ್ಗದ ಕ್ರೋಢನರಹರಿ ಮತ್ಸ್ಯವಾಮನ ಪ್ರೌಢ ಭಾರ್ಗವ ರಾಮಕೃಷ್ಣನೆ ಗಾಡಿಕಾರ ಪರೇಶ ಬುದ್ಧನೆ ದೂಡು ಕಲಿಯನು ಕಲ್ಕಿದೇವನೆ ಕೂಡು ಮನದಲಿ ಬಾದರಾಯಣ ನೀಡು ಜ್ಞಾನವ ಜೀಯ ಹಯಮುಖ ಮಾಡು ದತ್ತಾತ್ರೇಯ ಕೃಪೆಯನು ಈಡುಕಾಣದು ಕಪಿಲಮೂರ್ತಿಯೆ ಬೀಡುಗೈದಿಹ ಬೀಜ ನಿದ್ರೆಯು ನೋಡಗೊಡದೈ ನಿನ್ನತುರ್ಯನೆ ನಾಡುದೈವಗಳನ್ನು ಭಜಿಸಲು ಓಡದದು ಎಂದೆಂದು ಸತ್ಯವು ಮಾಡುತಲಿ ಸಾಷ್ಟಾಂಗ ನತಿಗಳ ಜೋಡಿಸಿಹೆ ಶಿರ ಪಾದಪದ್ಮದಿ ಗಾಢಪ್ರೇಮದಿ ಸಲಹು ಭೂಮನೆ ಮೂಡಿಸುತನಿಜ ಭಕ್ತಿ ಜ್ಞಾನವ 2 ಎನ್ನ ಯೋಗ್ಯತೆ ನೋಡೆ ಫಲವಿಲ್ಲ ನಿನ್ನಕೃಪೆ ತೋರದಿರೆ ಗತಿಯಿಲ್ಲ ಅನ್ಯ ಹಾದಿಯು ಯಾವುದೆನಗಿಲ್ಲ ಘನ್ನಚಿತ್ತಕೆ ಬರಲು ತಡಿಯಿಲ್ಲ _ ಹೇನಲ್ಲ ಪೂರ್ಣಜ್ಞಾನಾನಂದ ಶಾಶ್ವತ ಪೂರ್ಣ ಚಿನ್ಮಯ ಪೂರ್ಣ ಮೂಲದಿ ಪೂರ್ಣ ನಂದದಿ ಪೂರ್ಣ ಅವಯವಿ ಪೂರ್ಣಶಕ್ತನೆ ಪೂರ್ಣಬೋಧ ಮುನೀಂದ್ರ ವಂದಿತ ಶರಧಿ ದೇವನೆ ಪೂರ್ಣನಿತ್ಯಾನಂದ ದಾಯಕ ಪೂರ್ಣಮಾಡೈ ಬಯಕೆ ತೂರ್ಣದಿ ನೀನೆ ಸರ್ವಾಧಾರ ಪ್ರೇರಕ ನೀನೆ ರಕ್ಷಕ ಸರ್ವಶಿಕ್ಷಕ ನೀನೆ ಸೀಮಾಶೂನ್ಯ ನಿಶ್ಚಯ ನೀನೆಪೊಗಳಿತನಿಖಿಳವೇದದಿ ನೀನೆ ವಾಚ್ಯನು ಸರ್ವಶಬ್ದದಿ ನೀನೆ ಮುಕ್ತಾಯಕ್ತ ಸೇವಿತ ನೀನೆ ದೋಷವಿದೂರ ಸ್ಥಾಣುವು ನೀನೆ ಸೃಷ್ಟಾ ದ್ಯಷ್ಟಕರ್ತೃವು ನಿನ್ನಸಮ ಉತ್ಕøಷ್ಟರಿಲ್ಲವು ನಿನ್ನ ದಾಸರು ಸರ್ವಜೀವರು ಭಿನ್ನರೈ ಸರ್ವತ್ರ ಸರ್ವರು ನಿನ್ನ ದಾಸರ ಭಾಗ್ಯಬೇಡುವೆ ಜನ್ಮಜನ್ಮಕು ಇದನೆ ಬಯಸುವೆ ನಿನ್ನ ನಂಬಿಹೆ ನಿನ್ನನಂಬಿಹೆ ಸಿರಿಪತಿ ಕೃಷ್ಣವಿಠಲನೇ 3
--------------
ಕೃಷ್ಣವಿಠಲದಾಸರು
ರಾಜೀವ ಲೋಚನ ಹರೇ ಮುರಾರೇ ಮಾಜೀವ ಮೋಹನ ಹರೇ ಮುರಾರೇ ಪ ರಾಜೇಂದ್ರ ನಂದನ ಹರೆ ಮುರಾರೇ ಓ ಜಾನಕೀ ಪ್ರಿಯ ಪಾಹಿ ಖರಾರೇಅ.ಪ ವಾರಾಶಿ ಗಂಭೀರ ಸಾಕೇತಧಾಮ ಮಾರಾರಿ ವಂದಿತ ಲೋಕಾಭಿರಾಮ ಘೋರಾಘಸಂಹಾರ ರಣರಂಗ ಭೀಮ ಶ್ರೀರಾಮ ಜಯರಾಮ ಕಲ್ಯಾಣರಾಮ 1 ಪವನಾತ್ಮಜಾನಂದದಾತಾಪರೇಶ ಭವನಾಶ ಜಗತೀಶ ದೈತೇಯನಾಶ ಸುವಿಲಾಸ ಮಾಂಪಾಹಿ ಶ್ರೀಮಾಂಗಿರೀಶಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸುರಾಸುರಾರ್ಚಿತ ಸರೋಜಲೋಚನ ಸರಾಗದಿಂದೆನ್ನನೀಕ್ಷಿಸೈ ಪರಾಪರೇಶನೆ ಪರಾತ್ಪರನೆ ನೀ ಪರಾಕುಮಾಡದೆ ಪಾಲಿಸೈ ಪ ವಿರಾಜಮಾನ ಸುವಿರಾಜವಾಹನ ವಿರಾಟ್ಪುರುಷ ವಿಶ್ವಂಧರ ಕರಾರವಿಂದದಿ ಕರಾದಿಗಳ ಪಿಡಿ ಧರಾತಿಮರ್ದನ ಧುರಂಧರ 1 ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ ಧರಾಮರರ ಬಹುಪರಾಭವವ ಬಲು ಸರಾಗದಲಿ ನಿರ್ವಾಪಣ 2 ಜರಾಮರಣಗಳ ನಿರಾಕರಿಸಿ ವಸುಂಧರಾಭರಣ ಗುಣಭೂಷಣ ಸುರಾರಿಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ 3 ಶಿರೀಷ ಕುಸುಮದ ಸರಿಸುಕೋಮಲಶರೀರ ನಿನ್ನದು ಈ ಪರಿ ಸಿರಿಯುದರದೊಳೇ ಸಿರಿಯಧರಿಸಿದ ಪರಿಯದೆಂತುಟೋ ಕೇಳ್ ಹರಿ 4 ಪಯೋಧಿತನಯಾ ವಯೋಸುರೂಪನೆ ದಯಾನಿಧೇ ಧರ್ಮಾತ್ಮನೆ ದಯಾರಸದಿ ಹೃತ್ಪಯೋಜಮಧ್ಯದಿ ನಿಯಾಮಿಸುವ ನಿರ್ಮಾಯನೆ 5 ವರೇಣ್ಯ ಸಜ್ಜನ ಶರಣ್ಯ ಪುಲಿಗಿರಿಯರಣ್ಯ ಮಧ್ಯವಿರಾಜಿತ ಹಿರಣ್ಮಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ 6 ವ್ಯಾಘ್ರನೆಂಬುವತ್ಯುಗ್ರ ದೈತ್ಯನಂ ನಿಗ್ರಹಗೈದ ಮಹಾತ್ಮನೆ ಶೀಘ್ರದಿ ಭಕ್ತಾನುಗ್ರಹಮಾಳ್ಪ ಸುರಾಗ್ರಗಣ್ಯ ಪುಣ್ಯಾತ್ಮನೆ 7 ಸುರರು ನರರು ನಿನ್ನರಿಮೆಯನರಿಯದೆ ನಿರುತವು ಸನ್ನುತಿಗೈವರೆ ಪರಮಪುರುಷ ಸುಖಕರ ನೀನೆನ್ನುತ ಪರಿಪರಿ ನಿನ್ನನೆ ಪೊಗಳ್ವರೆ 8 ಮೂಜಗ ಮಾಡುವ ಪೂಜೆಯಿಂದ ನೀನೀ ಜಗದಲಿ ಒಲಿದಿರ್ಪೆಯ ಮೂಜಗ ಪೂಜಿಪ ವ್ಯಾಜದಿಂದ ನಿಜಪೂಜೆಯ ನೀ ಕೈಗೊಂಬೆಯ 9 ನಿಜಪದದೊಳು ನೀನಜಭವ ಮುಖಸುರವ್ರಜಗೋಚರನಾಗಿಲ್ಲವೈ ಸುಜನರ ಪೊರೆಯವ ನಿಜಮತಿಯಿಂದಲಿ ತ್ರಿಜಗಕ್ಕೆ ಗೋಚರನಾಗಿಹೈ10 ನಿತ್ಯತೃಪ್ತ ನೀನತ್ಯುತ್ತಮ ನಿಜಭೃತ್ಯನಮತ್ರ್ಯನು ಮೋದದಿ ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ 11 ಧರಣಿಯೊಳುರುತರ ಮೆರೆಯುವ ಫಣಿಭೂ ಧರದೊಳು ನಿರುತವು ಭಕ್ತರ ಸಿರಿವಲ್ಲಭ ವರದ ವಿಠಲ ಕರುಣಾಕರ 12
--------------
ವೆಂಕಟವರದಾರ್ಯರು
(3) ಶಿವಸ್ತುತಿಗಳು ನಮೋ ಗಿರೀಶ್ವರ ನಮೋ ಸುರೇಶ್ವರ ನಮೋ ಧರೇಶ್ವರ ಗಂಗಾಧರಾ ಪ ರಮಾರಮಣ ಹರ ಕುಮಾರ ಪಿತಹರ ನಮಾಮಿ ಶಂಕರ ಗಂಗಾಧರಾ ಅ.ಪ ಬಾಲಾರ್ಕ ಸುರುಚಿರ ಬಾಲೇಂದುಶೇಖರ ಬಾಲಾಂಬಿಕಾ ವರಗಂಗಾಧರಾ 1 ಮಹಾಜಟಾಧರ ಮಹಾನಟೇಶ್ವರ ಮಹಾ ಮಹೇಶ್ವರ ಗಂಗಾಧರ 2 ಮಹಾ ಮಹಿಮರ ಮಹಾಚತುರ ಹರ ಮಹಾ ಮುನೀಶ್ವರ ಗಂಗಾಧರ 3 ಪರೇಶ ನಿರುಪಮ ಪರಾಕ್ರಮಾ ಹಿಮ ಗಿರೀಂದ್ರ ಧಾಮಾ ಗಂಗಾಧರ 4 ಸುರಾಸುರೋತ್ತಮ ಕರಾರ್ಚಿತಾ ಮಾಂ ಗಿರೀಶ ನಾಮಾ ಗಂಗಾಧರಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
(ಕಾಣೂರು ಮಠದ ನರಸಿಂಹ) ನೋಡಿರಯ್ಯ ನರಸಿಂಹ ಮೂರ್ತಿಯ ಪಾಡಿರೋ ಕೀರ್ತಿಯನು ಪ. ಚಿಕ್ಕವನ ಗೋಳಿಕ್ಕಿಸುತಲತಿ ಸೊಕ್ಕಿದಸುರನನು ಧಿಕ್ಕರಿಸುತಿಹ ಕಕ್ಕುಲತೆಯಿಂದುಕ್ಕಿ ರೋಷವನು ಮಿಕ್ಕ ದೇವರ ಲೆಕ್ಕಿಸದವನ ತಿಕ್ಕಿ ತೊಡೆಯೊಳಗಿಕ್ಕಿ ನಖಗಳನಿಕ್ಕರಿಸಿ ಸಾಲಿಕ್ಕಿ ತರುವ ಕರುಳಕ್ಕರದಿ ತೆಗೆದ್ಹಕ್ಕಿಗಮನನ 1 ವೇದಮುಖ ಸುರರೆಲ್ಲ ದೂರದಿ ಕಾದುಕೊಂಡಿರಲು ಸಿರಿನಡು ಹಾದಿಯಲಿ ಚಿನ್ಮೋದನಿರಕಾಲ್ಹಾದ ಬಡುತಿರಲು ಪಾದಪದ್ಮಗಳನ್ನು ಭಕ್ತಿರಸಾರದರದಿ ಶಿರಕಿಕ್ಕಿರುವ ಪ್ರ- ಲ್ಹಾದನನು ಪಿಡಿದೆತ್ತಿ ಪರಮವಿನೋದಗೊಂಡ ಪರಾಪರೇಶನ 2 ಅರ್ಥಿಯಿಂದಲಿ ಬಂದಿರುವರು ಪೂರ್ಣಾರ್ಥದಾಯಕನಾ ವ್ಯರ್ಥವೈರದ ದ್ವ್ಯರ್ಧಿದೈತ್ಯರ ಮೂರ್ತಿದಹಿಸುವನಾ ಅರ್ತಿಹರ ಶೇಷಾದ್ರಿವರ ಪುರುಷಾರ್ಥ ಪಾಲಿಪೆನೆಂದು ವಾಮನ ತೀರ್ಥ ಕೃತ ಪೂಜಾರ್ಥವಿಲ್ಲಿಗೆ ಕೀರ್ತಿಕರ ನಿಲಯಾರ್ಥದಾತನ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಕಾರ್ಕಳದ ವೆಂಕಟೇಶನನ್ನು ನೆನೆದು) ಶ್ರೀನಿವಾಸ ನಮೋ ನಮೋ ಶ್ರುತಿಗಾನಲೋಲ ಪಾಹಿ ಪ. ವಿಪಿನ ನ- ವೀನದವಾನಲ ದೀನೋದ್ಧಾರ ದಯಾನಿಧೆ ಸುಂದರ ಅ.ಪ. ಶೇಷಗಿರಿಯಿಂದ ಸುಜನಗಳ ಘೋಷದಿ ನಂಬಿದ ದಾಸಜನರಭಿಲಾಷೆಯನು ಸಂತೋಷದಿ ಕೊಡಲು- ಲ್ಲಾಸದಿಂದ ಪರೇಶ ನಾನಾ ವಿಲಾಸದಿ ನೆಲಸುತ ಕಾಸುವೀಸದ ಭಾಷೆಯನು ದಿಗ್ದೇಶದಿಂದ ಮಹಾಸುಕೀರ್ತಿಯ ರಾಸಿಗಳಿಸಿ ಜಗದೀಶ ಪರೇಶ ಮ- ಹೇಶವಿನುತ ನಿರ್ದೋಷ ಜಗನ್ಮಯ 1 ಉತ್ತಮಾಂಗಸುರತ್ನಖಚಿತಕಿರೀಟದ ನಿಜಪದ- ಭಕ್ತಜನಮನವೃತ್ತಿ ಒಲಿಸುವ ಕೂಟದ ಕರುಣೋ- ತ್ಪತ್ತಿ ಸರಸಿಜನೇತ್ರಯುಗ್ಮದ ನೋಟದ ಭೂಷಣ- ಮೊತ್ತದಿಂದಾದಿತ್ಯಕೋಟಿಯನ್ನೆತ್ತಿಂದತೆಸೆವುತ್ತ ಮಂಗಲ- ಮೂರ್ತಿಧರಿಸಿ ಜನರರ್ತಿಯ ಸಲಿಸುವ ಚಿತ್ತಜಜನಕ ಸರ್ವೋತ್ತಮ ನಿರುಪಮ 2 ಪಂಕಜಾಂಬಕ ಶಂಕರಾಪ್ತ ಶುಭಾಕರ ಶ್ರೀವ- ತ್ಸಾಂಕ ಮುಕ್ತಾಲಂಕೃತ ಕರುಣಾಕರ ಭಕ್ತಾ- ತಂಕರಹಿತ ನಿಶ್ಯಂಕ ನಿತ್ಯನಿರಾಕರ ಪ್ರಭು ವೆಂಕಟೇಶ ನಿರಾಮಯಾಮರಸಂಕುಲಾರ್ಚಿತ ಶಂಖಚಕ್ರಗ- ದಾಂಕಿತ ದನುಜಭಯಂಕರ ವರ ನಿರ- ಹಂಕರ ನಿಜದ ನಿಷ್ಕಳಂಕಚರಿತ್ರ 3 ಮಂದರಾಧರ ಮಾಪತೇ ಮುಖಚಂದಿರ ಮೌನಿ ವೃಂದವಂದ್ಯ ಸುರೇಂದ್ರಪೂಜ್ಯ ಧುರಂಧರ ಮಹಾ- ಕಂಬುಕಂಧರ ಶೋಭಿಪ ಕುಂದರದನ ಕುಚೇಲಪಾಲಾರವಿಂದನಾಭ ಪುರಂದರಾರ್ಚಿತ ಮಂದಹಾಸ ಮುಚುಕುಂದವರದ ಗೋ- ವಿಂದ ಸಚ್ಚಿದಾನಂದ ಉಪೇಂದ್ರ 4 ಮೂರು ಲೋಕೋದ್ಧಾರಿ ಘನಗಂಭೀರನೆ ವೆಂಕಟ ಧೀರಕಾರ್ಕಳಸಾರನಗರಾಧಿಕಾರನೆ ಭೂಸುರ- ಭೂರಿವೇದಪುರಾಣಘೋಷಾದಿಹಾರನೆ ಸಂತತ ಚಾರು ಗೌಡಸಾರಸ್ವತಶೃಂಗಾರಋಗ್ವೇದಾಖ್ಯ ಉತ್ತಮ ದಾರುಣೀಸುರರಿಂದನವರತ ಮಂಗ- ಲಾರತಿಗೊಂಬ ಲಕ್ಷ್ಮೀನಾರಾಯಣ ಹರಿ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಜಗನ್ನಾಥದಾಸರು) ಇಂದು ಪ ಕಂಗಳ ಧಣಿ ರಂಗವೊಲಿದ ಮಹಾತ್ಮರ ಅ.ಪ ದ್ವಾಪರದಲ್ಲಿಯ ಶಲ್ಯರು ಇವರಂತೆ ತಪಸಿ ಪ್ರಹ್ಲಾದನ ಅನುಜರು ಇವರಂತೆ ಕಪಟರಹಿತ ಕಲ್ಕೀರ ಭೂಪನ ರೂಪರೇಶೆಯ ನಿರ್ಮಿಸಿ ಮೆರೆದವರ 1 ಎಂಥ ಪುಣ್ಯವಂತರು ನಮ್ಮ ಹಿರಿಯರು ಇಂಥ ಮಹಾತ್ಮರ ಸೇವಿಸಿ ಬದುಕಲು ನಿಂತು ಮನದಿ ಇವರ ನಾಮ ಭ್ರಾಂತಿಯಾಗಲು ಸಂತೋಷದಿ ಶಾಂತ ಹೊಳೆ ಹರಿಸುವರನು 2 ಶಿಷ್ಟ ಸದಾಚಾರ ಸೃಷ್ಟಿಸಿ ಜಗದಲಿ ಶ್ರೇಷ್ಠ ದಾಸರೆಂದು ಖ್ಯಾತರಾಗಿಹರ ಅಷ್ಟಮಾಂಗ ಸಾಷ್ಟಾಂಗದಿ ಎರಗಲು ಸೃಷ್ಟೀಶ ಸಿರಿವತ್ಸಾಂಕಿತನ ತೋರ್ಪರ 3
--------------
ಸಿರಿವತ್ಸಾಂಕಿತರು
(ಬಂಟ್ವಾಳದ ವೆಂಕಟೇಶ ದೇವರನ್ನು ನೆನೆದು) ವಂದಿಸುವೆನು ಶ್ರೀನಿವಾಸ ಶ್ರೀ ವೆಂಕಟೇಶ ವಂದಾರುನಿಚಯಮಂದಾರ ಸದಾ- ಪ. ನಂದೈಕನಿಧಿವಿಲಾಸ ಚಂದ್ರಾದಿತ್ಯಸಹಸ್ರಪ್ರಕಾಶ ಹೊಂದಿದೆ ನಿನ್ನ ಪರೇಶ ಶ್ರೀ ವೆಂಕಟೇಶ 1 ಶಾಂತಾತ್ಮನಿಯಮ ಸಂತಾಪಪ್ರಶಮ ಸಂತಜನಮನೋಲ್ಲಾಸ ಭ್ರಾಂತಿಜ್ಞಾನವಿತಾನವಿನಾಶ ಚಿಂತನೀಯ ನಿರ್ವಿಶೇಷ ಶ್ರೀ ವೆಂಕಟೇಶ 2 ಶ್ರೀಧರಾಚ್ಯುತ ಸುಮೇಧನಾಮಕ ಪ- ಯೋಧಿಶಯನ ಪರಮೇಶ ನಿತ್ಯ ನಿರ್ದೋಷ ಸಾಧು ಕೌಸ್ತುಭಮಣಿಭೂಷ ಶ್ರೀ ವೆಂಕಟೇಶ3 ನೀರಜನಾಭ ನೀಲಾಭ್ರದಾಭ ಶ್ರೀರಾಮ ತ್ರಿದಶಗಣಪೋಷ ಪ್ರಾರಬ್ಧಕರ್ಮ ಬೋಧೋದ್ಭಾಸಾ- ಪಾರಮಹಿಮ ಜಗದೀಶ ಶ್ರೀ ವೆಂಕಟೇಶ 4 ನೇತ್ರಾವತಿ ಸುಪವಿತ್ರಚಿತ್ರಸು- ಕ್ಷೇತ್ರ ವಟಪುರನಿವಾಸ ಕರ್ತ ಲಕ್ಷ್ಮೀನಾರಾಯಣನೀತ ಪಾರ್ಥಸಾರಥಿ ಪೃಥಗೀಶ ಶ್ರೀ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಯರ್ಡನಾಡ ವಿಷ್ಣುಮೂರ್ತಿ) ಸಾರಥಿ ಪ. ಶಿಷ್ಟರಾಯಸದ ಸಜ್ಜನರ ಮೇಲ್ಕರುಣಾ ದೃಷ್ಟಿಯಿಂದಲಿ ಉಭಯಾರ್ಥದ ಪುರದಿ ಕಷ್ಟಪಾಶವ ಕಡಿದರಿಗಳ ಗೆಲಿಸುತ ಭೀಷ್ಟ ಕೊಡುವ ಸರ್ವೋತ್ಕøಷ್ಟ ಪರೇಶಾ 1 ಕ್ಷೋಣಿಸುತೆಯ ಚೂಡಾಮಣಿಯ ಬೇಗದಿ ತಂದ ಪ್ರಾಣನಾಥನು ಸುಪ್ರವೀಣನೆಂದದಿರು ಕಾಣಿಕೆ ಕಪ್ಪ ಪೂಜೆಗಳ ತನ್ಮತದಿಂದ ಮಾನಿಸಿಕೊಳುತಿಹ ಮನ್ಮಥ ಜನಕ 2 ನಿನ್ನ ಕಟಾಕ್ಷ ಸಂಪೂರ್ಣ ಪೊಂದಿಹರಾ ಹೆಂಣಾ ತಂದಿಹನಾ ಮೇಲಿರಿಸು ಪದ್ಮ ಕರಾ ಪನ್ನಗಚಲವಾಸ ಪವಮಾನವಂದಿತ ನಿನ್ನ ದಾಸರ ದಾಸ್ಯ ದಯಮಾಡು ಸುಪ್ರೀತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅನುಜ ಭಾವಿ ಮುಖ್ಯಪ್ರಾಣನೆ ಪ ಚರಣಭಕ್ತರಲ್ಲಿ ಮುನ್ನ ಇರಿಸಿ ಸಲಹೊ ಕರುಣಶರಧಿಯೆ ಅ.ಪ. ಹರಿಯಮುಂದೆ ನಿಂದು ಸೇರಿ ಸ್ತುತಿಸೆ ದಿವಿಜವೃಂದ ಧೀರ ಲಾತವ್ಯ ಬಂದೆ ಹಾ ಚಾರು ಯುಕ್ತಿಮಲ್ಲಿಕಾದಿ ಸಾರಗ್ರಂಥರಾಶಿ ಇತ್ತು ಈರಮತವ ಮೆರೆಸಿ ಮೆರೆದ ಶೂರ ನಿನ್ನ ಪೊಗಳಬಲ್ಲೆವೆ 1 ಎರಡು ಹತ್ತು ಮೇಲೆ ನೂರುವರುಷ ಪೊರೆದು ಶಿಷ್ಯಸಂಘ ಕಾಯ ಕುಳಿತೆ ಭರದಿ ವೃಂದಾವನದಲೀ ತೊರೆಯಲಾಗದೇನೆ ನಿನ್ನ ತುರಗವದನ ರಾಮಕೃಷ್ಣ ಅರವಿದೂರ ವೇದವ್ಯಾಸ ಪೊರೆವರೆಲ್ಲ ಸೇವೆಕೊಳ್ಳುತಾ 2 ಸುರರು ಎಲ್ಲ ಮಣಿದು ಕುಣಿದು ನಿನ್ನ ಸಹಿತ ಮಣಿದು ಹರಿಯ ಭಜಿಸುತಿಹರು ತನುವ ಕೆಡಹಿ ರಾಗದಿಂದ ನೆನೆದು ನಿನ್ನ ನೋಡೆಸದನ ಜನುಮ ಜನುಮ ದೋಷ ಕಳೆವ ಘನ ಮಹಾತ್ಮೇಗೀಡುಕಾಣೆ 3 ಎರಡು ಕಮ್ಮಿ ಎರಡುನೂರು ವರವಿರಂಚಿ ಕಲ್ಪಗಳಲಿ ನಿಮ್ಮ ಮಹಿಮೆಗೇನೆಂಬೆ ಸುರರು ವಿವಿಧ ಬಲಿಗಳಿತ್ತು ಚರಣ ಪಿಡಿದು ನಡೆವರೆನಲು ನರನು ಪೊಗಳಬಲ್ಲನೇನು ಹರನಗುರುವೆ ಶಿರವ ಬಾಗುವೆ 4 ವರವಿಮಾನದಲ್ಲಿ ಕುಳಿತು ಚರಿಸುತಿರಲು ಒಮ್ಮೆಯೇನೆ ಸುರರು ಎಲ್ಲ ಕರೆಯೆನಿನ್ನ ಧರಿಸಿ ರೂಪ ನಿಚಯ ನಡೆದೆಯಾ ವರವಿಶೇಷಪೂಜೆಕೊಂಡು ಸ್ಥಿರವಗೈದು ಪದವಿಗಳನು ಕರೆದು ಹರುಷ ದಿವಿಜಗಣಕೆ ಪೊರೆದ ನಿನಗೆ ತುಲ್ಯ ಕಾಣೆವೈ5 ಸಿರಿಯಪತ್ರ ಹರಿಗೆ ಇತ್ತು ಮರುತನಂತೆ ಪಡೆದು ವರವ ಕೊಂಡು ಭುವಿಯಲಿ ಧರಿಸಿನಿಂದು ದಂಡ ಕಾಷ್ಠ ದುರುಳವಾದಿಗಜಗಳಳಿದು ಚರಿಸಿ ದೇಶವೆಲ್ಲ ಕೊನೆಗೆ ಕುರುಹು ತೋರಿನಿಂತ ಸ್ವಾದಿಲಿ6 ಏನು ನಿಮ್ಮ ಮಹಿಮೆ ಗುರುವೆ ತಾನೆ ಬಂದು ವಾಜಿವದನ ಸಾನುರಾಗದಿಂದ ಕೊಂಬ ಹೂರ್ಣಭಕ್ಷ್ಯವೆಲ್ಲ ಪೂರ್ಣ ಪೂರ್ಣನೀನು ಜೀವಗಣದಿ ಪೂರ್ಣತನ್ನ ಕಂದನೆಂದು ದಾನಗೈದ ನಿನ್ನ ಸತಿಗೆ ಜ್ಞಾನಪೂರ್ಣಬಲನು ನೀನ ಹೋ 7 ಚಾರು ಭ್ರಾತೃನಿನ್ನ ಬದಿಲಿ ಮೀರಿ ಇಹುದು ಯಾವುದಿಲ್ಲ ಮೂರುಜಗದಿ ಸತ್ಯಸತ್ಯವೋ ಮೂರುಕಣ್ಣಿನಾತ ಮುಂದೆ ಭಾರಿಭೂತರಾಜ ನಿಮ್ಮ ಸಾರ ಚರಣ ಪಿಡಿದು ಭಜಿಪ ಯಾರು ಸಾಟಿ ಇಲ್ಲ ಸಾರುವೆ8 ಗಂಗೆಮೊದಲು ಎಲ್ಲ ತೀರ್ಥ ತಂಗಿ ಧವಳಗಂಗೆಯಲ್ಲಿ ತುಂಗ ಮಹಿಮ ನಿನ್ನ ಯಜಿಸಿ ಹಿಂಗಿಸುವರು ತಮ್ಮ ಶಮಲ ಭಂಗ ಸತ್ಯಸರ್ವಪಾಪ ಸುರರು ಕೈವಶ 9 ನಿನ್ನ ನಿಲಯ ಸುತ್ತ ನೃತ್ಯ ವನ್ನು ಗೈದು ಭಜಿಸೆ ಹರಿಯ ಘನ್ನ ಜ್ಞಾನ ಚೆನ್ನ ಪಡೆದು ಸನ್ನು ತಾಂಗ ನೆಡೆಯಕಾಣುವ ಅನ್ನಸತ್ರ ನಿನ್ನ ಕ್ಷೇತ್ರ ಅನ್ನಪತಿಯ ತೋರ್ಪನಿನಗೆ ಇನ್ನು ಸರಿಯೆ ಕಾಮಧೇನು ಚಿಣ್ಣನೆಂದು ಪಿಡಿಯೊ ಶರಣನ 10 ಹತ್ತು ಐದು ನಾಲ್ಕು ಆರು ಹತ್ತು ಐದು ಸಹಿತ ಒಂದು ಹತ್ತು ಹತ್ತು ಮತ್ತೆ ಒಂದು ಹತ್ತುನೂರು ಹಾಗನಂತ ನಿತ್ಯ ನಿತ್ಯನುತಿಪೆ ಬೃಹತಿಯಿಂದ ಸತ್ಯಪದವಿಸಿದ್ಧ ನಿನಗೆಲೈ 11 ಗಿರಿಗಳರಸು ಮಗಳ ಸಹಿತ ಕರೆದು ನಿಮ್ಮ ರತ್ನರಾಶಿ ಸುರಿದು ಶಿರದಿ ಪೂಜೆಗೈದು ಪರಮ ಧನ್ಯನಾದ ತಾನಹೋ ತರಣಿ ಜನರು ಮಾರ್ಜನಾದಿ ಪರವಿಶೇಷ ಸೇವೆಗೈದು ಕೊಡುವೆ ಕಾಮಿತಾರ್ಥವ 12 ದೀಪಸಾಲು ಹಚ್ಚಿ ಭಜಿಸೆ ಪೋಪುದೈಯ್ಯ ಭವದ ತಾಪ ಆ ಪರೇಶ ಒಲಿದು ಜ್ಞಾನ ದೀಪ ವಿಡುವ ಹೃದಯಕಮಲದಿ ತಾಪ ದೂರನಾಗಿ ಶ್ರೀಪತಿಯ ದಾಸನಾಗಿ ಕೂಪ ದಾಟ ಪೋಪ ಬೇಗಹೋ13 ಯಮನ ಪುರವ ಸಾರಿ ನೀನು ವಿಮಲರೂಪ ತೋರಿ ಹಾಗೆ ಅಮರ ಜ್ಞಾನ ಬೋಧೆಯಿತ್ತು ಯಮನ ರಾಜ್ಯ ಬರಿದುಗೈದೆಹೊ ಕಮಲೆಕಂದ ಕಾಮಕೊರಗಿ ನಮಿಪ ನಿನ್ನ ರೂಪ ನೋಡಿ ಶ್ರಮವು ಆಯ್ತುಕಾಮನಿಂದ ಅಮರಸ್ತ್ರೀವೃಂದಕ್ಕೆಲ್ಲ ವೈ14 ದುಃಖಕೊಡದ ನಿನ್ನ ಅಸ್ಥಿ ಶಂಖಚಕ್ರ ಮಯವು ಹೌದು ಪಂಕಜಾಕ್ಷ ಅಂಗದಲ್ಲೆ ಅಂಕೆರಹಿತ ಸುಖವು ನುಂಬೆಹೊ ಸೂತ್ರ ತಾನು ಕಿಂಕಿಣೀ ಸುರಾವದಿಂದ ಶಂಕೆ ಕೊಡದೆ ಸಾರುತಿಹನು ಬಿಂಕವಾಗಿ ಪದವಿಬರ್ಪುದ15 ಮೇರುಗಿರಿಯ ಶಿಖರದಲ್ಲಿ ಕ್ರೂರಮದನ ತಾಪದಿಂದ ಚಾರುಕನ್ಯೆಯೊಬ್ಬಳಿನ್ನು ತೋರೆ ಸ್ವಾಂಗ ನಿನ್ನ ಬಯಸುತ ಧೀರನೀನು ಕದಲದಿರಲು ಕ್ರೂರ ತಪದಿ ಹರಿಯ ಒಲಿಸಿ ನೀರೆ ಪಡೆದ ಲೈಯ ನಿನ್ನ ಸೇರಿ ಸುಖಿಪ ಭಾಗ್ಯಮುಂದಕೆ 16 ಗರುಡನೇರಿ ನಿನ್ನ ಸಹಿತ ಹರಿಯು ತೋರಿಸಕಲಲೋಕ ಅಮೃತ ಕರದಿ ಕುಡಿಸಿ ಅರವಿ ದೂರ ನಿನ್ನ ತಬ್ಬಿದ ಮರುತನಂತೆ ವ್ಯಾಜರಹಿತ ಚರಣಭಜರ ನಿನಗೆ ತಾನೆ ಕರೆದು ಕೊಟ್ಟ ವಾಯುಪದವಿ ತುರಗವದನ ಪ್ರಥಮ ಭಕ್ತಹೋ17 ಗೆದ್ದು ವೀರಶೈವಗುರುವ ಗದ್ದುಗೆಯನು ಏರಿ ಮೆರೆದೆ ಮೆದ್ದು ಗರವ ಸುಖದಿ ನಿಂದೆ ತಿದ್ದಪಾಟು ತೋರ್ದೆ ಉಡುಪಿಲಿ ಬದ್ಧನಾದ ವಿಠಲ ನಿನಗೆ ಬಿದ್ದ ನೃಪನ ಗೇಸಿ ಕಾಯ್ದೆ ಶುದ್ಧ ವಿಷ್ಣುಭಕಿÀ್ತ ತೋರಿ ಮಧ್ವಸುತರ ಪೊರೆದ ದಾನಿಹೋ 18 ನೂರುನೂರು ಆನೆಮೀರಿ ಭಾರಿಬಲದ ಮೆರೆವ ಶಕ್ತ ನೇರನಿಲಿಸಿ ಧ್ವಜದಸ್ತಂಭ ದೂರಗೈದೆ ಶಿಷ್ಯಕಳವಳ ಭಾರ ಹೌರ ಸ್ಥೂಲಸೂಕ್ಷ್ಮ ತೋರಬಲ್ಲೆ ಇಚ್ಛೆಯಂತೆ ಮೇರೆ ಇರದ ಮಹಿಮನೆಂದು ಸಾರಿಸಾರಿ ನುತಿಪೆ ಜೀಯನೆ 19 ಗಂಗೆಪಡೆದ ರಂಗನನ್ನು ಅಂಗನಿಂದ ತರಿಸಿ ನೆಟ್ಟು ತುಂಗವಿಭವದಿಂದ ಯಜಿಸಿ ಕಂಗಳಿಂದ ನೋಡಿ ಉತ್ಸವ ಅಂಗಮರೆತು ನಂದ ಕುಡಿದೆ ಸಂಗದಿಂದ ಕಂಡ ಜನಕೆ ಭಂಗವಾಯ್ತು ಸಕಲ ಬಂಧ ಕೊಂಗಿ ಖಳರ ಬಿಟ್ಟು ಸತ್ಯವೈ 20 ಬರಿಯ ಕವನವಲ್ಲ ಕೇಳಿ, ಗುರುವೆ ದ್ವಿಜನ ಸ್ವಪ್ನದಲ್ಲಿ ಅರುಹಿ ತನ್ನ ಚರಿತೆಯನ್ನು ಬರೆಸಿ ಇಹನು ಪೊರೆಯೆ ಶಿಷ್ಯರ ಅರಸಿ ನೋಡಿ ಧನ್ಯರಾಗಿ ಒರೆಸಿ ಕಾಮಕ್ರೋಧವೆಲ್ಲ ಚರಣಪಿಡಿಯೆ ಭಕ್ತಿಯಿಂದ ಗುರುವು ಬಿಡನು ನಿಮ್ಮನೆಂದಿಗು 21 ಸುಧೆಯ ಕರ್ತ ಜಯಮುನೀಂದ್ರ ಹೃದಯವಾಸಿ ವಾಯುವಂದ್ಯ ಪದುಮೆ ರಮಣ ಕೃಷ್ಣವಿಠಲ ಸದರದಿಂದ ಮುಕ್ತಿ ನೀಡುವ ಸದನ ವಾಜಿವಕ್ತ್ರಗೆರಗಿ ಬದರಿನಿಲಯ ನನ್ನ ನೆನೆದು ಪದವನಿದನು ಪಠಿಪ ಭಕ್ತಗೆ22
--------------
ಕೃಷ್ಣವಿಠಲದಾಸರು
ಏನಂತೆನ್ನಲಿ ಎನ್ನನುತಾಪ ನೀನಾದ್ದರಿಂದೆಂಬೆ ಗೈಯದೆ ಲೋಪ ಪ. ಕಣ್ಣೆದುರಾದ ಕಂದರ್ಪಲಾವಣ್ಯ ಸನ್ನುತ ಸಕಲ ಲೋಕೈಕಶರಣ್ಯ ಪುಣ್ಯಪುರುಷ ಸುಪ್ರಸನ್ನ ಕೇಳಮ್ಮ 1 ಕೆಂದಾವರೆಯಂತೆ ಚೆಂದುಳ್ಳ ಚರಣ ಸೌಂದರ್ಯಸಾರ ಪೀತಾಂಬರಾವರಣ ವಂದನೀಯ ಪೂರ್ಣಾನಂದ ಮುಕುಂದ ಸಂದೇಹವಿಲ್ಲ ತೋರಿದನು ಗೋವಿಂದ 2 ಶಂಕ ಚಕ್ರ ಗದಾ ಪಂಕಜಪಾಣಿ ಶಂಕರನುತ ಶ್ರೀವತ್ಸಾಂಕಿತ ಜನನಿ ಬಿಂಕದ ಕೌಸ್ತುಭಾಲಂಕೃತಗ್ರೀವ ವೆಂಕಟೇಶ ನಿಷ್ಕಳಂಕ ಕೇಳವ್ವ 3 ಚಂದ್ರಶತಾನನ ಕುಂದಸುಹಾಸ ಇಂದಿರಾ ಹೃದಯಾನಂದ ಪರೇಶ ಸುಂದರ ನಳಿನದಳಾಯತನಯನ ಮಂದರಧಾರ ಧರಾಧರಶಯನ 4 ಲಕ್ಷ್ಮೀನಾರಾಯಣ ಸುಕ್ಷೇಮಧಾಮ ಅಕ್ಷರಾರ್ಚಿತ ನೀಲನೀರದಶ್ಯಾಮ ಪಕ್ಷೀಂದ್ರವಾಹನ ಪಾವನಚರಿತ ಸಾಕ್ಷಿರೂಪ ಸಚ್ಚಿದಾನಂದಭರಿತ 5
--------------
ತುಪಾಕಿ ವೆಂಕಟರಮಣಾಚಾರ್ಯ
ಏನಂತೆನ್ನಲಿ ಎನ್ನನುತಾಪ ನೀನಾದ್ದರಿಂದೆಂಬೆ ಗೈಯದೆ ಲೋಪ ಪ. ಕಣ್ಣೆದುರಾದ ಕಂದರ್ಪಲಾವಣ್ಯ ಸನ್ನುತ ಸಕಲ ಲೋಕೈಕಶರಣ್ಯ ಪುಣ್ಯಪುರುಷ ಸುಪ್ರಸನ್ನ ಕೇಳಮ್ಮ 1 ಕೆಂದಾವರೆಯಂತೆ ಚೆಂದುಳ್ಳ ಚರಣ ಸೌಂದರ್ಯಸಾರ ಪೀತಾಂಬರಾವರಣ ವಂದನೀಯ ಪೂರ್ಣಾನಂದ ಮುಕುಂದ ಸಂದೇಹವಿಲ್ಲ ತೋರಿದನು ಗೋವಿಂದ 2 ಶಂಕ ಚಕ್ರ ಗದಾ ಪಂಕಜಪಾಣಿ ಶಂಕರನುತ ಶ್ರೀವತ್ಸಾಂಕಿತ ಜನನಿ ಬಿಂಕದ ಕೌಸ್ತುಭಾಲಂಕೃತಗ್ರೀವ ವೆಂಕಟೇಶ ನಿಷ್ಕಳಂಕ ಕೇಳವ್ವ 3 ಚಂದ್ರಶತಾನನ ಕುಂದಸುಹಾಸ ಇಂದಿರಾ ಹೃದಯಾನಂದ ಪರೇಶ ಸುಂದರ ನಳಿನದಳಾಯತನಯನ ಮಂದರಧಾರ ಧರಾಧರಶಯನ 4 ಲಕ್ಷ್ಮೀನಾರಾಯಣ ಸುಕ್ಷೇಮಧಾಮ ಅಕ್ಷರಾರ್ಚಿತ ನೀಲನೀರದಶ್ಯಾಮ ಪಕ್ಷೀಂದ್ರವಾಹನ ಪಾವನಚರಿತ ಸಾಕ್ಷಿರೂಪ ಸಚ್ಚಿದಾನಂದಭರಿತ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕಥನಾತ್ಮಕ ಹಾಡುಗಳು ನೋಡಬನ್ನಿರಿ ಕಾರ್ಪರೇಶನ ಪಾಡಿರೈ ಸರ್ವೇಶನಾ ರೂಢಿಯೊಳು ಶೇಷಾದ್ರಿನಿಲಯನ ಕೂಡಿಕೊಂಡಿಲ್ಲಿರುವನ ಪ ಚಿಪ್ಪಗಿರಿ ದಾಸಾರ್ಯರೀತರು ಪಿಪ್ಪಲವ ಕಂಡಾಗಲೇ ಕಾರ್ಪರಾರಣ್ಯೆಂಬ ಪದದಿ ಸಂಕ್ಷಿಪ್ತ ಮಹಿಮೆಯ ಪೇಳ್ದರು 1 ಅಪರದಿಗ್ಭಾಗದಲಿ ನೋಡಲು ಸಪತ ಋಷಿಗಳ ಸ್ಥಾನವು ತ್ರಿಪಥಗಾಮಿನಿ ವ್ಯಕ್ತಳಾದಳು ತಪಕೆ ವಿಶ್ವಾಮಿತ್ರರ 2 ಯತ್ರಶ್ವೇತ ಶೃಂಗ ಕೃಷ್ಣಾಚೋತ್ತರ ವಾಹಿನಿಯೊಳು ತತ್ತದಾನ ಸ್ನಾನ ಕಾಸಿಗೆ ಉತ್ತಮವು ಫಲವೀಯಲು 3 ಚಾರುಕೃಷ್ಣಾತೀರವಿದರೊಳು ಕಾರ್ಪರಾಖ್ಯ ಮುನೀಂದ್ರನಾ ಘೋರತಪ ಕೊಲಿದರಳೆ ಮರದಾಗಾರನೆನಿಸಿದ ಧೀರನ 4 ನೀರಜಾಸನ ಮುಖ್ಯ ಸುರ ಪರಿಹಾರ ಸೇವಿತ ಚರಣನ ಸೇರಿದವರಘ ದೂರ ಮಾಡುವ ಘೋರನರಹರಿ ರೂಪನ 5 ಇಂತು ಅಶ್ವತ್ಥಾಂತರದಿ ಸಿರಿಕಾಂತನರಿಯನೆ ವಿಪ್ರರೊಳ್ ಶಾಂತ ನಾರಪ್ಪಯ್ಯನೆಂಬ ಮಹಾಂತರಿಲ್ಲಿರುತಿಪ್ಪರು 6 ದೊಡ್ಡವರ ಗುರುತರಿಯದಿವರನು ದಡ್ಡರೆನ್ನುತ ಭ್ರಾತ್ರರು ದೊಡ್ಡ ಕೃಷ್ಣಾನದಿಯೊಳಿವರನು ಕಟ್ಟಿ ಹಾಕಲು ಕೋಪದಿ 7 ಕಡಲಶಯನನ ಕರುಣದಿಂದಲಿ ದಡಕೆ ಸೇರಿದನಂತರ ದೃಢ ವಿರಾಗದಿ ವೆಂಕಟಾದ್ರಿಗೆ ನಡೆದರಾಗಲೆ ಹರುಷದಿ 8 ಶುಭ ಪಂಕಜ ಷಟ್ವದಾಯಿತ ಚಿತ್ತರು ಕೃಷ್ಣನಿರುತಿಹ ಬೆಟ್ಟದಡಿಯನು ಮುಟ್ಟಿಮಲಗಲು ಸ್ವಪ್ನದಿ9 ಇಲ್ಲಿ ದರ್ಶನವಿಲ್ಲ ನೀವಿರುವಲ್ಲಿ ಪುಣ್ಯಸ್ಥಾನವು ಪೋಗಿರೋ ಭೂಸುರ 10 ಧೇನು ರೂಪದಿ ಬರುವೆ ಕಾರ್ಪರ ಕಾನನದ ಅಶ್ವತ್ಥದಿ ಕಾಣುವುದು ಕ್ಷೀರಾಭಿಷೇಚನ ಧ್ಯಾನಿಸೆನ್ನನು ದ್ವಿಜವರ 11 ಇಂತುಸ್ವಪ್ನದಿ ಸೂಚಿಸಿದ ವೃತ್ತಾಂತವನು ಸಂಚಿಂತಿಸಿ ಕಂತು ಜನಕನ ಇಚ್ಛೆಯಿಂದಲೆ ಸಂತಸದಿ ಗಿರಿಗೊಂದಿಸಿ 12 ಮುಂದೆ ನಡೆದರು ಹಿಂದೆ ಗೆಜ್ಜೆಗಳಿಂದ ಬರುತಿಹ ಗೋಗಳ ಗೋವಿಂದನಂಘ್ರಿಯ ಸ್ಮರಿಸುತ 13 ಕುರುಕಿ ಹಳ್ಳಿಯ ಗ್ರಾಮದಿ ತಿರುಮಲೇಶನ ಕಂಡರು 14 ಗುರುತನು ಕಾಣುತ ಬಂದನು ಎನ್ನುತ 15 ಮುನಿವರನು ಸುಖದಿಂದಿರುತಿರೆ ತಿರೆ 16 ಬಂದರಲ್ಲಿಗೆ ತಮ್ಮ ಗ್ರಾಮದ ಬಂಧು ಬಾಲಕರೆಲ್ಲರು ಕಾಯುವದೆನುತಲಿ 17 ಚಾರು ಶಿಲೆಯೊಳಗೊಂದುದಿನ ಅಂಗಾರದಲಿ ಪ್ರಾಣೇಶನ ಪರಿಹಾರನುನಿಮಗೆಂದರು 18 ಪಾದ ನಿಷ್ಠೆಯಿಂದಲಿ ಸೇವಿಸೆ ಸಿದ್ಧಿಗಳಾಗ್ವವು 19 ನಾರಪ್ಪಯ್ಯರೆಂಬ ಮಹಾತ್ಮರು ಹರಿ ಸಂತತ 20 ಧರಣಿಯನು ಸಂಚರಿಸುತ ಚೆನ್ನೂರ ಗ್ರಾಮದಿ 21 ತೋರಿತಂದಿನ ರಾತ್ರಿಯೋಳ್ ಮಹಿಮೆಯಾ 22 ಭೂಪನ ಸ್ಪಪ್ನದಿ ತರುವನು ತೋರಿಸಿ 23 ಕಟ್ಟಿಸೆಲೊ ಭೂಪತಿಯೆ ಮಂದಿರ ಕೃಷ್ಣವೇಣಿಯ ಗರ್ಭದಿ ಶ್ರೇಷ್ಠನೆನ್ನಯ ಕರುಣದಿ 24 ಸುಪ್ರಭಾತದಲೆದ್ದು ನೃಪತಿಯು ಸ್ವಪ್ನಸೂಚಿತ ಸ್ಥಾನವ ಕ್ಷಿಪ್ರ ನೋಡುವೆನೆನುತ ಸೈನ್ಯದಿ ಕಾರ್ಪರಕೆ ಬಂದಿಳಿದನು25 ಆನೆಗಳು ಕಟ್ಟಿರುವ ಶಿಲೆಗಳು ಕಾಣಿಸುವ ವೀಗಾದರು ನನಸೇವಿಸಿದನು 26 ಮಂದಿರವಮೇಲ್ ನಿರ್ಮಿಸಿ ಇಂದಿರೇಶನ ಪದಕೆ ಭೂಸಂಬಂಧ ವೃತ್ತಿಯನೊಪ್ಪಿಸಿ27 ಹಿಂದೆ ನೋಡಲು ಚಂದ್ರಶೇಖರ ನಂದಿಪತಿ ಮಂದಿರಗಳು ವಂದೇ ವತ್ಸರದೊಳಗೆ ಶಿಲ್ಪಿಗಳಿಂದ ಕಟ್ಟಿದ ಶಿಲೆಗಳು 28 ವೃಷ್ಟಿಯ ಮಹಿಮೆಯ ಕಾಮಿತಾರ್ಥವನೀವುದು 29 ಮಾಸ ದೊ ಶರಧಿ ಸೇರುವ ಸಮಯದಿ 30 ಷೋಡಶ ಕರಗಳಿಂ ಹೊರಟನು ವೃಕ್ಷದಿ31 ತೀರ್ಥ ಸ್ನಾನದ ನರಹರಿ ದರ್ಶನ 32 ದಕ್ಷಿಣಾಯನ ಪರ್ವದಲಿ ಈ ವೃಕ್ಷದೆಡೆಯಲಿ ಸ್ನಾನವು ಮೋಕ್ಷ ಮಾರ್ಗಕೆ ಸಾಧನವು ಪ್ರದಕ್ಷಿಣಾದಿಕಮೆಲ್ಲವು33 ಮಂದಿರವ ಕಾಣುತಲೆ ಶ್ರೀಗೋವಿಂದ ಗೋವಿಂದೆನುತಲಿ ಬಂಧು ವರ್ಗ ಸಮೇತ ಭಕುತರ ವೃಂದ ಬರುವದು ನೋಡಿರೈ34 ಪಾಲಿನಭಿಷೇಕದಿ ಅರ್ಚನ ಪಾಲಕಿಯ ಸೇವಾವಧಿ ವಾಲಗವ ಕೈಕೊಳುತ ಭಕುತರ ಪಾಲಿಸುವ ನರಸಿಂಹನ 35 ವಾರವಾರಕೆ ಭಕ್ತಜನ ಪರಿವಾರ ಸೇವೆಯಕೊಳ್ಳುತ ಘೋರತರ ಸಂಸಾರ ಭಯಪರಿಹಾರ ಮಾಡುವ ದೇವನ 36 ತಪ್ಪದಲೆ ಪ್ರತಿವರ್ಷ ದ್ವಿಜ ಸಂತರ್ಪಣಾದಿಗಳಿಂದಲಿ ಕೊಪ್ಪರದಿ ನವರಾತ್ರ ಮೊದಲಾದುತ್ಸವಾದಿಗಳಾಗ್ವವು 37 ಹಿಂದೆ ಚಾತುರ್ಮಾಸ್ಯ ಕಾಲವು ಬಂದಿರಲು ವಿಭುದೇಂದ್ರರು ಬಂದರಿಲ್ಲಿಗೆ ಶಿಷ್ಯರಾದ ಯತೀಂದ್ರ ನಾರಾಯಣಾರ್ಯರು38 ಆ ಸಮಯದಿ ರಘುನಾಥ ತೀರ್ಥ ಯತೀಶರಿಲ್ಲಿಗೆ ಬಂದರು ತೋಷದಲಿ ವಿಭುದೇಂದ್ರ ತೀರ್ಥಮುನೀಶರವರಿಗೆ ಪೇಳ್ದರು39 ವೃಕ್ಷದಲಿ ಸನಿÀ್ನಹಿತ ನರಹರಿಯಕ್ಷನೆದುರಿಗೆ ನಮ್ಮಯ ಶಿಷ್ಯರೋದುವ ಗ್ರಂಥದರ್ಥ ಪರೀಕ್ಷೆ ಮಾಡಿರಿ ಎಂದರು40 ಮೌನಿರಘುನಾಥಖ್ಯರವರನು ಏನು ಓದುತಿರೆನ್ನಲು ಆನುಪೂರ್ವಿ ಸುಧಾಖ್ಯ ಗ್ರಂಥಾರ್ಥಾನುವಾದವ ಮಾಡಲು41 ಮೇದಿನಿಯಲಿ ವಾದಿಜಯ ಸಂಪಾದಿಸಿರಿ ನೀವೆಂದರೂ ಸಾದರದಿ ನಿಮಗೆಲ್ಲ ಜನ ಶ್ರೀಪಾದರಾಜರು ಎನ್ನಲಿ42 ಸೇವೆಯ ಮಾಡಲು ಒಂದು ವತ್ಸರದೊಳಗೆ ಸತ್ಯಾನಂದ ಯತಿಗಳ ಜನನವು43 ಸತ್ಯಧರ್ಮರು ಬಂದರೀ ಸುಕ್ಷೇತ್ರದರ್ಶನ ಮಾಡಲು ಮುತ್ತಿನ್ಹಾರವ ಪದಕ ಸಹಿತಾಗಿತ್ತರೀ ನರಸಿಂಹಗೆ 44 ಇದ್ದರಿಲ್ಲಿ ಜ್ಞಾನವೃದ್ಧ ಜನಾರ್ದನಾಭಿದ ಒಡೆಯರು ಶುದ್ಧ ಮನದಲಿ ನರಹರಿಯ ಪದಪದ್ಮ ಸೇವೆಯ ಮಾಡುತ45 ಬಿಡದೆ ತಪವಾಚರಿಸಿ ಕಾರ್ಪರದೊಡೆಯನನುಪಮ ಕರುಣವ ನಿತ್ಯದಲಿ ಪರಿಶುದ್ಧ ಮಧುಕರ ವೃತ್ತಿಯಿಂ ತಂದನ್ನವ ಎತ್ತಿ ವೃಕ್ಷಕೆ ಕಟ್ಟುವರು ಇದು ಬುತ್ತಿ ನಾಳೆಗೆ ಎನ್ನುತ47 ಪನ್ನಗಾರಿ ಧ್ವಜನಿಗರ್ಪಿಸಿ ಉಣ್ಣುತಿಹರಾನಂದದಿ48 ಮಂದಮತಿ ಭೂದೇವನೊಬ್ಬನು ನಿಂದೆ ಮಾಡಿದನಿವರನು ತಂದು ಕಟ್ಟಿದ ಅನ್ನ ತಂಗಳೆಂದು ತಿಳಿಯದೆ ಉಂಬರು 49 ನಿಂದೆ ಮಾಡಿದ ವಿಪ್ರನನು ಕರೆಸೆಂದರರ್ಚನ ಸಮಯದಿ ತಂದು ವೃಕ್ಷದಿ ಕಟ್ಟಿದನ್ನವ ತಂದು ಕೆಳಗಿಡಿರೆಂದರು 50 ಪೋಗಲು ವಿಪ್ರನು ಕೆಳಗಿಂತೆಂದರು
--------------
ಕಾರ್ಪರ ನರಹರಿದಾಸರು
ಕರಿಗಿರಿ ದುರ್ಗ ನಿವಾಸಾ | ದಯಾಪರಿಪೂರ್ಣ ಪೊರೆಯನ್ನ ಅನಿಶ ಪ ಶಿರಿ ಅಜಭವ ವಿಪಗೇಶಾ | ಹೃತ್‍ಸರಸಿಜ ವಾಸ ಲಕ್ಷ್ಮೀಶಾ ಅ.ಪ. ಗಜ ಬಿಸಜ ಕಿಂಜಲ್ಕದ ಯಸಳು ರಜವ ಶಿರಸಿಯೊಳಗೆ ನೀನಿರಿಸೋ 1 ಮೇಶ ಬ್ರಹ್ಮೇಶ ನಾಶವ ಗೈವೆ ಸಶೇಷಶೇಷಶಯ್ಯ ಜೀವಾದ್ಯರ ಪೋಷಾಈ ಸಮಸ್ತ ಜಗ ನಿನ್ನುದರದಿ ವಾಸಾಕೇಶಾಸುರಪಾದೀಶ ಪರೇಶನೆ ವ್ಯಾಸಾಈಶಿತವ್ಯ ತವ ದಾಸರಿಗೆಲ್ಲ ಉಪದೇಶಿಸು ಶಾಸ್ತ್ರ ವಿಶೇಷ ರಹಸ್ಯ ಮಹಿದಾಸ ಕುಶೇಶಯ ವಿಷಯ ವಿಲಾಸದಿಪೋಷಿಸು ಮನ ಮಧ್ವೇಶ ಮಹಾಪ್ರಭೋ 2 ಕರಿವರ ವರ ಶರಣಾಗತ ಪಾಲಾತರಳೆಗಿತ್ತೆ ನವ ನವ ಸೀರೆಯ ಜಾಲಾವರಸ್ತಂಭೋದಿತ ಹರಿಭಕ್ತಿ ಸುಪಾಲಾಗುರು ಗೋವಿಂದ ವಿಠ್ಠಲಾ ಕಾಲಾಸುರಪಾದಿಯ ತನು ವರ ರಥ ರೂಢ ಪು-ರಾರಿ ಭಯಹರ ಮುರಾರಿ ಮಹ ಭವತರಿ ಎನಿಸಿಹ ಸುಖ ತೀರಥ ಸನ್ಮತಧರಿಸಿಹೆ ಕಣ್ಣೆದುರಿಲಿ ನೀ ಕುಣಿಯೋ 3
--------------
ಗುರುಗೋವಿಂದವಿಠಲರು