ಒಟ್ಟು 6 ಕಡೆಗಳಲ್ಲಿ , 1 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊರವಿ ನರಹರಿ ಸ್ತೋತ್ರ ಹರಿಯು ನಿಂದಿಹ ನೋಡೀ | ಭೂತಳದಿ ತೊರವಿಲಿಹರಿಯು ಇಂದಿರೆಗೂಡಿ | ಒಡವೆರೆಸಿ ಸರ್ವದಶರಣ ಜನರೊಡನಾಡೀ | ಸುಖವೀವ ನೋಡೀ ಪ ಹರಿಯೆ ಪರನೆಂಧ್ಹೇಳ್ಪ ಬಾಲಕೆದುರುಳ ಕಾಶ್ಯಪು ಪರಿಪರೀಯಲಿಕರ ಕೆರೆಯ ಗೊಡಲಾಗ ನರಹರಿತರುಳನುದ್ಧರ ಗೈದ ಶ್ರೀಹರಿ ಅ.ಪ. ಉದರ ಪೋಷಕ ಬೋಧಾ ಗುರುಶಂಡಮರ್ಕರು ಮುದದಿ ತಿಳುಹಲ ಗಾಧ | ಸರಿಸುತ್ತ ದೂರದಿಹದನ ಪೇಳಿದ ವೇದ | ಪ್ರತಿಪಾದ್ಯ ಶ್ರೀಹರಿವಿಧ ವಿಧವು ಕಾರ್ಯಗಾಧ | ಸೃಷ್ಠಿ ಲಯ ಮೊದಲಾದಅದುಭೂತವು ಎನೆ ಕಾರ್ಯ ಬಹಳವಗೈದು ಲೀಲೆಯ ತೋರಿ ಜಗದೊಳುಮುದವ ಬೀರುತ ಸಾಧು ಸಜ್ಜನಮೋದ ಬಡಿಸುವೆ ನೆಂದು ಪೇಳಿದ 1 ಕರಿಯಪದತಳ ತುಳಸೀ | ಪ್ರಹ್ಲಾದ ಬಾಲನಹಿರಿದು ಶರಧಿಯೊಳಿರಿಸೀ | ಮತ್ತವನು ಉಳಿದಿರೆಧರೆಯ ಗುಹೆಯೊಳಗಿರಿಸೀ | ಮೇಲ್ಕಿಲೆಯ ಮುಚ್ಚಲುಮರಳಿ ಬಂದನು ಜೀವಿಸೀ | ಹರಿಯ ವಿಶ್ವಾಸೀ ತರಳನಿಗೆ ಅಹಿಯಿಂದ ಕಚ್ಚಿಸಿಕರುಣಿ ಮಾತೆಯು ವಿಷವನೂಡಿಸೆಗರಸಹೋದರಿ ಪೊರೆಯಲವನನುತರಳನಿಂಧ್ಹರಿವರನುಯೆಂದ 2 ಬಂದ ಚಿಮ್ಮಲಿಗಿಂದ | ಭಕುತಂಗೆ ಪೇಳುತನಂದ ಹುಲ್ಲೆಸೆಯಂದ | ಅದು ಹತ್ತಿ ಉಳಿಯಲುನಿಂದಿಹೆ ತಾ ನಲ್ಲೆಂದ | ಅದರಂತೆ ಗೈಯಲುನಿಂದ ತೋರವಿಲಿ ಛಂದ | ಹರಿಯು ಬಹು ಆನಂದನಂದ ನಂದನನಾದ ಗುರು ಗೋ-ವಿಂದ ವಿಠಲನ್ನಕೇಸರಿಯುಚಂದದಿಂ ದೂವ್ರ್ಯಾಸ ಪೂಜಿತನಂದ ಕಂದ ಮುಕುಂದ ಶ್ರೀಹರಿ 3
--------------
ಗುರುಗೋವಿಂದವಿಠಲರು
ಪಾವಮಾನಿಯೆ ತವ | ಯಾವ ಮಹಿಮೆಯೊಳೇಕಭಾವ ಪೊಗಳಲು ಆವ | ದೇವತೆಗಳಿಗಳವೇ ಪ ಶ್ರೀವರನಂಘ್ರಿಯ | ಸೇವೆಗೈವಲಿ ಬಹು | ಧಾವಿಸೀ |ಬಹು ಎಚ್ಚರದಿ ಸೇವಿಸೀ ||ನಿರುತ ಭಕ್ತಿಯ | ಭಾವದಲಿ ದುರಿ | ತಾವಳಿ ವಿಭಾವಸುನೀ ವೊಲಿದು ಭೃ | ತ್ಯಾವಳಿಯ ಪಾಲಿಪೆ | ಸಾರ್ವಕಾಲ ಮ-ತ್ತೋರ್ವರಿಲ್ಲವೊ | ದೇವರೊತ್ತಮ | ದೇವ ನೀನೇ ಅ.ಪ. ಸೂರ್ಯ ಮೋಚನ |ಆಶಿಸುತಲಿ ಹಾರಿ | ದೋಷವ ಕಳೆಯಲು | ಯತ್ನೀಸೆ ಆ ಸುಮಹದಾಕಾರ ಶೃಣಗೈದೀವಾಸವನು ನಿನ ಘಾತಿಸಲು ಕುಲಿಶದೀ ಅದಕಂಡು ತವ ಪಿತಶ್ವಾಸಗಳ ಬಲು ಪರಿಯ ರುದ್ಧಿಸಲು | ಮೂರ್ಲೋಕ ತಪಿಸೇಅಸುರರು ವಿಧಿವಿಧದಿ ಮೊರೆ ಇಡಲೂ | ಆಲೈಸ ನಾಲ್ಮೊಗಶ್ವಾಸ ಸತಿಯನು ಸೂಸಿ ಸೂಚಿಸಲೂ | ಅದಕೇಳಿ ಮತ್ತೆಲೇಸುಗೈಯ್ಯಲು ಮನವ ಮಾಡಲೂ ವಾಸವಾದ್ಯರಶ್ವಾಸ ಮಾಡುವ ತೆರನ ಮಾಡೆಯ್ದೊಕ್ಲೇಶನಾಶನ ಶ್ವಾಸಮಾನಿ ಮಹಾ ಕೃಪಾಳೊ 1 ವ್ರಾತ ಮಣಿ ರಘು | ಜಾತಗಿತ್ತೆಯೊ | ಮಾತರಿಶ್ವಾ 2 ಪುಂಡರೀಕಾಕ್ಷ ಉರ ಬಗೆದು ಕರುಳಕೊಂಡು ಕೊರಳಲಿ ಧರಿಸೀ | ನರ ಮೃಗನ ಲೀಲೆಕಂಡು ದ್ವಯೆ ಬಲ ತಪಿಸೀ | ಅರಕ್ಷೌಹಿಣಿ ಮುಂ-ಕೊಂಡು ನೀನೆ ಸಂಹರಿಸೀ | ಕೌರವನ ತೊಡೆಖಂಡಿಸುತವನ ಛೇದಿಸೀ |ಅಂಡಜಾಧಿಪವಹಗೆ ಅರ್ಪಿಸಿ | ನಿಂದೆ ಭೀಮಾ 3 ಅದ್ವೈತ ಸಿದ್ಧಿಲಿಹೇಯ ಬಹಳವ ನೀನೆ ತೋರಿಸೀ | ಬದರಿಯಲಿ ಬಾದರಾಯಣರಿಂದ ಉಪದೇಶೀಸಿ | ಮತ್ತಿಲ್ಲಿ ಬರುತಲಿಧೇಯ ಸಾಧಿಸೆ ಗ್ರಂಥ ಬಹು ರಚಿಸೀ | ಕುಭಾಷ್ಯಗಳ ಬಹುಹೇಯತ್ವವನೆ ಸಾಧಿಸೀ | ವಾದ ಕಥೆಯಲಿಮಾಯಿಗಳ ಬಲುಪರಿಯ ಸೋಲಿಸೀ |ಕಾರ್ಯ ಸರ್ವವ | ರಾಯ ಕೃಷ್ಣಗೆ ಅರ್ಪಿಸಿದೆ ಮಧ್ವಾ 4 ಪರಿ ವ್ಯಾಪ್ತನೆ | ಅಧ್ಯರ್ಥ ರೂಪಿಅಪ್ರಾಪ್ಯ ಅಶಕ್ತಿ ರಹಿತಾನೇ |ವ್ಯಾಪಿಸುತ ಜಗ | ವೀಪರೀಯಲಿ | ಮಾಳ್ಪೆ ಪ್ರಾಣಾ 5 ಮೋಕ್ಷಾಧೀಚ್ಛೆಯ ವರ್ಜ | ಅಚ್ಛಿನ್ನ ಭಕುತಾನೇದಕ್ಷಿಣಾಕ್ಷಿ ಗೋ | ವತ್ಸ ರೂಪಾನೇ ||ಅಕ್ಷಿಯೋಳಿಹ ತ್ರಿದಶಾ | ದ್ಯಕ್ಷರಿಂದಲಿ ಸಂ | ಸೇವ್ಯಾನೇ |ಕಂಠದಲಿ ನೀ ಹಂಸೋಪಾಸಕನೇ |ಶಬ್ದಗಳ ನುಡಿದು ನುಡಿಸುತಿರುವಾನೆ | ಕೂರ್ಮರೂಪಿ ಸಲಕ್ಷಣದಿ ಬ್ರಹ್ಮಾಂಡ ಧಾರಕನೆ | ಸಪುತ ಸ್ಕಂದಗತಇಚ್ಛೆಯಲಿ ಲೋಕಧಾರಕನೆ | ಬೃಹತಿ ಸಾಸಿರವಾಚ್ಯನೆಂದೆನಿಸುತ್ತ ಸ್ತುತ್ಯಾನೆ | ಪತ್ಯಬಿಂಬ ಮುಖ್ಯನೆಈಕ್ಷಿಸುವೆ ಸರ್ವತ್ರ ಹರಿಯನ್ನೆ | ಮುಂದಿನಜ ಅಪರೋಕ್ಷವನು ಪಾಲಿಸೆಂಬೇನೆ ||ಮೋಕ್ಷದನೆ ಕರುಣಾ ಕಟಾಕ್ಷದಿ | ಈಕ್ಷಿಪುದು ಪವನ 6 ಜೇಷ್ಠ ಶ್ರೇಷ್ಠನೆ ಸ | ಮಷ್ಟಿ ರೂಪನೆ ಪವನ |ವ್ಯಷ್ಟಿರೂಪದಿ ಜಗದಿ | ವರೀಷ್ಟನೇ ||ನಿಷ್ಠೇಲಿ ಭಜಿಪರಿ | ಗಿಷ್ಟಾರ್ಥವನೆ | ಸಲಿಸೂವೇ |ಅತಿರೋಹಿತ ವಿಜ್ಞಾನಿ ಎನಿಸಿರುವೆ ||ಸಕಲ ಗುಣಗಣ ಭೋಕ್ತøವೆನಿಸಿರುವೆ | ಸಕಲ ಜ್ಞಾನೋಪದೇಷ್ಟನೆಂದೆನಿಸಿ ಕರೆಸೂವೆ | ಶಿವ ಶೇಷ ಖಗಪರಿನಿಷ್ಟ ಗುರು ನೀನೆ ಎನಿಸಿರುವೆ ಸಜಾತಿ ಗುಣ ಅಯುತವರಿಷ್ಟನು ನೀನು ಆಗಿರುವೆ | ವಿಜಾತ್ಯನಂತ ಗುಣಗರಿಷ್ಟ ರೂಪಿ ಎನಿಸಿರುವೇ | ವೇದಾನುಕ್ತ ಗುಣವಿಶಿಷ್ಟ ರೂಪದಲಿಂದ ಮೆರೆಯುವೇ ||ಇಷ್ಟ ಗುರು ಗೋವಿಂದ ವಿಠ್ಠಲ | ಪ್ರೀತಿ ಪಾತ್ರನು ಆದ ಪ್ರಾಣ 7
--------------
ಗುರುಗೋವಿಂದವಿಠಲರು
ಮುದ್ದು ಮೋಹನ ದಾಸರೇ ನಿಮ್ಮ | ಶುದ್ಧ ಪಾದವ ನಂಬಿದೇತಿದ್ದಿಯೆನ್ನಯನಾದ್ಯ ವಿದ್ಯೆಯ | ಬುದ್ಧಿ ನಿಲಿಸಿರಿ ಹರಿಯಲೀ ಪ ನಡುಮನೆ ದ್ವಿಜನೆಂಬನಾ | ವಡ್ಡಲೊಳು ಉದಿಸೀದನಾ |ಆಡ್ಯಮತವನುಕರಿಸಿದಾ | ದೊಡ್ಡ ಬಳ್ಳಾಪುರದಲೀ1 ವಿಕೃತಿ ಸಂವತ್ಸರದಲೀ | ಪ್ರಕೃತ ಜನ್ಮವ ಪಡೆದನಾಸುಕೃತ ಪೊಗಳುವ ಜನರ ದು | ಷ್ಕøತವ ನೀ ಪರಿಹರಿಸುವೀ 2 ಚಿಪ್ಪಗಿರಿ ಸುಕ್ಷೇತ್ರದೀ | ಗೊಪ್ಪ ಶ್ರೀ ಅಂಕಿತವನೂ ಅಪ್ಪ ಶ್ರೀ ವರರಿಂದಲೀ | ವಪ್ಪಿ ನೀ ಕೈಗೊಂಡೆಯೋ 3 ಮೂರೊಂದು ಸಲ ಶ್ರೀಕಾಶಿಗೇ | ಭೂರಿಸಲ ಶ್ರೀ ಉಡುಪಿಗೇಸಾರಿ ವೆಂಕಟ ಪತಿಯನೂ | ಬಾರಿ ಬಾರಿಗೆ ನೋಡಿದೇ4 ದಾಸ ಪೀಳಿಗೆ ಬೆಳೆಸಲೂ | ಶೇಷನಾಮಕ ದಿವಿಜಗೇಭಾಸಿಸುವ ಅಂಕಿತವನಿತ್ತೂ | ಪೋಷಿಸಿದೆ ಸದ್ವೈಷ್ಣವತತ್ವ 5 ಸುಜನ ಜನ ಸಂಸೇವಿಸೆ | ವಿಜಯ ವಿಠಲನ ಸ್ಥಾಪಿಸೇಭಜನೆ ಗೈಯುತ ಮೆರೆದೆಯೊ | ನಿಜಪುರದಿ ನೀ ನಿಲ್ಲುತಾ 6 ಸಿರಿಯಧರಿಸಿ ಮೆರೆಯುವ ಗುರು | ಗೋವಿಂದ ವಿಠಲನ ಭಜಿಸುವಾಪರಮ ಗುರುಗಳೆ ನಿಮ್ಮ ಚರಣವ | ಪರಿಪರೀಯಲಿ ಪೂಜಿಪೆ 7
--------------
ಗುರುಗೋವಿಂದವಿಠಲರು
ಮೋತಂಪಲ್ಲಿ ಪ್ರಾಣದೇವರ ಸ್ತೋತ್ರ ಏನು ಕರುಣವೊ ನಿನಗೆ ಮೋತಪಲ್ಲಿಶಾ ||ದೀನ ದ್ವಿಜಗೊಲಿದು ಬಂದಿಲ್ಲಿ ನಿಂತೇ ಪ ವಿಪ್ರವರ ತಪಗೈಯ್ಯೆ | ನೀನೊಲಿದು ಅವನಿಗೆಕ್ಷಿಪ್ರದಿಂ ಕಿಂಪುರುಷ | ಖಂಡದಿಂಧ್ಹೊರಟೂ |ಅಪ್ರತಕ್ರ್ಯೊರು ಸ | ದ್ಗುಣ ಪೂರ್ಣ ಹರಿದೂತಸುಪ್ರಸನ್ನನು ಆಗಿ ಬಂದಿಲ್ಲಿ ನಿಂತೇ 1 ಸುಜನ ಜನರಂದೂ 2 ಪಾದ | ಪದ್ಮಯುಗವಾ ||ದ್ವಿಜಗುರೂ ಪ್ರಾಣಪತಿ | ತೈಜಸನು ತಾನಾಗಿ |ಭಜಕರಿಗೆ ಪೇಳಿದನು | ಸ್ವಪ್ನ ಸೂಚಿಸುತಾ 3 ಭಿನ್ನವಾಗಿದ್ದಂಥ | ಅಂಗಗಳ ಜೋಡಿಸುತನನ್ನೆಯಿಂ ತೈಲವನು | ಪೂಸೆನ್ನುತಾ |ತನ್ನ ಸದನದ ಕದವ | ನಾಲ್ವತ್ತು ಮತ್ತೊಂದುದಿನ್ನ ತೆಗೆಯದೆ ಲವಣ | ವ್ರತ ಮಾಳ್ಪುದೆಂದಾ 4 ಸದನ | ಕದ ತೆಗೆಯುತಿರಲೂ |ನೇಮ ಮೀರಿದ ಫಲವು | ತೋರುವನೊ ಎಂಬಂತೆಕೀಮು ರಕ್ತವ ಸ್ರವಿಸೆ | ವಕ್ಷದಲಿ ಕಂಗಳಲೀ 5 ತಪ್ಪು ತಪ್ಪೆಂದವನು | ದವಡೆಯನೆ ತಟ್ಟುತ್ತಅರ್ಪಿಸಲು ತನುಮನವ | ಭಕುತಿಯಿಂದಾ |ವಪ್ಪಿಕೊಳ್ಳುತ ಹನುಮ | ಸ್ವಪ್ನದಲಿ ಪೇಳಿದನುಅರ್ಪಿಸುವುದಲ್ಲಿಲಿ | ಶಾಲಿಗ್ರಾಮಗಳಾ6 ಹರಿಮಹಿಮೆ ಕೊಂಡಾಡಿ | ಬರದಂತೆ ತಾವ್ ಮಾಡಿನರಸಿಂಹ ವಸುದೇವ | ಸುತ ಶಾಲಿಗ್ರಾಮಗಳಾ |ಸ್ಥಿರಪಡಿಸಲಲ್ಲಿಲಿ | ಕರುಣದಿಂದಲಿ ದಿವ್ಯವರ ರೂಪದಿಂ ನಿಂತೆ | ಗುರು ಮಾರುತೀಶಾ 7 ಮಾಸ | ಎಂಟೈದನೇ ದಿನದಿನೆಂಟರೆಲ್ಲರು ಸೇರಿ | ಬಹು ಉತ್ಸವಗಳಾ |ಭಂಟರಾಮರ ನಿನಗೆ ಉಂಟು ಮಾಡಲು ಭಕ್ತಕಂಟಂಕಗಳ ನೀಗಿ | ವಾಂಛಿತವ ನೀನೇ 8 ಗುರುಗೋವಿಂದ ವಿಠಲ | ಪರಮ ಸೇವಕ ಹನುಮಪರಿ ಪರೀಯಲಿ ನಿನ್ನ | ಚರಣ ಯುಗ್ಮಗಳಾ |ಪರಮ ಭಕ್ತಿಲಿ ಸೇವೆ | ನೆರೆ ಮಾಳ್ಪ ಸುಖವಿತ್ತುಪರಮ ಪುರುಷನ ಕಾಂಬ | ವರ ಮಾರ್ಗ ತೋರೋ 9
--------------
ಗುರುಗೋವಿಂದವಿಠಲರು
ಯತಿ ಕುಲ ಶಿರೋರನ್ನ - ಪತಿತ ಜನ ಪಾವನ್ನಮತಿ ವಿಕಳ ನಾದೆನ್ನ - ಉದ್ದರಿಸೊ ರನ್ನ ಪ ಭವ ಜನಿತ - ದುಃಖಗಳಹರ್ತಾ 1 ಪರಿ ಪರೀಯಲಿ ಬಲ್ಲವೇದ ವೇದಾಂತ ವೇದ್ಯ - ಅನವದ್ಯಾ ||ವೇದ ಮುಖ ಸುರವೃಂದ | ವೇದವಾಣೀ ವಂದ್ಯಸಾಧು ಜನರಘಹರಣ - ತೋರೊ ತವ ಚರಣ 2 ಪತಿ ಖ್ಯಾತಪಾದಿನಾಮದ ಹರ್ತ - ಲೋಕಕರ್ತಾ ||ನೋವಿಲ್ಲದವನೆ ಗುರು - ಗೋವಿಂದ ವಿಠಲ ಹರಿಭಾವದಲಿ ತವರೂಪ - ಕೋರ್ವೆ ಬಹುರೂಪ 3
--------------
ಗುರುಗೋವಿಂದವಿಠಲರು
ಸುಂದರ ಕಾಂಡ ರಾಮಾಯಣ ಸಿರಿ ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ 1 ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ 2 ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ 3 ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ 4 ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ 5 ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ 6 ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ 7 ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ 8 ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ 9 ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ 10 ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ 11 ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ 12 ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ 13 ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ 14 ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ 15 ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ 16 ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ 17 ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ 18 ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ 19
--------------
ಗುರುಗೋವಿಂದವಿಠಲರು