ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದ ಆನಂದವು ಈ ಜಗದಿ ಗೋವಿಂದನ ದಯದಿ ಪ ಆನಂದವು ಗೋವಿಂದನ ನಾಮವು ಆನಂದದಿ ಸ್ಮರಿಸುವ ಸುಜನರಿಗೆಅ.ಪ ಬಂಧು ಬಾಂಧವರೆಲ್ಲರು ಕೂಡುತಲಿ ಒಂದೇ ಮನಸಿನಲಿ ಇಂದಿರೇಶನ ಸ್ಮರಣೆಯ ಮಾಡುತಲಿ ನಂದ ಯಶೋದೆಯ ಕಂದನೆ ಪರನೆಂದು ಚಂದದಿ ಕುಣಿದಾಡುತ ಸ್ತುತಿ ಮಾಡಲು ಭವ ಬಂಧನ ಬಿಡಿಸುವ- ನೆಂದು ಮನದಿ ಆನಂದ ಪಡುವರಿಗೆ 1 ಪಕ್ಷಿವಾಹನ ಪುರುಷೋತ್ತಮ ಹರಿಯು ಆನಂದ ವತ್ಸರದಿ ರಕ್ಷಿಸಿ ಪೊರೆವನು ಭಕುತರ ತ್ವರದಿ ಅಕ್ಷರೇಢ್ಯ ಕಮಲಾಕ್ಷನೆ ಪರನೆಂ- ದೀಕ್ಷಿಪ ಭಕುತರ ರಕ್ಷಿಸಿ ಪೊರೆವ ಪ- ರೀಕ್ಷಿತಗೊಲಿದಂದದಿ ಪರಮಾತ್ಮನು ರಕ್ಷ ಶಿಕ್ಷಕನೆಂದೆನುವ ಸುಜನರಿಗೆ2 ಕಮಲಾಪತಿ ಕಾಮನ ಪಿತ ಶ್ರೀಹರಿಯು ಕಾರುಣ್ಯ ನಿಧಿಯು ಕಮಲಾಕ್ಷನು ಕಾಪಾಡುವ ಸುಜನರನು ಕಮಲಭವೇಂದ್ರಾದ್ಯಮರರು ಪೊಗಳಲು ಕಮಲನಾಭ ವಿಠ್ಠಲ ಜಯ ಜಯ ಎಂದು ಸುಮನಸರೊಡೆಯ ಸುಂದರ ಶ್ರೀಹರಿ ತಾ ಶ್ರಮ ಪರಿಹರಿಸುವನೆನುವ ಸುಜನರಿಗೆ3
--------------
ನಿಡಗುರುಕಿ ಜೀವೂಬಾಯಿ
ನೀರಜ ನೇತ್ರ ನಿನ್ನ ಪಾದಂಗಳ ನಂಬಿದೆ ಕೊನೆಗೆ ಪ ಶ್ರುತಿಹಿತ ಧರ್ಮವಿಶ್ರುತ ನಾನಲ್ಲ ಸತತವು ಜ್ಞಾನಿಯ ಜೊತೆ ಸೇರಲಿಲ್ಲ 1 ಭಕ್ತಿಪಥದಿ ಮನವರ್ತಿಸಲಿಲ್ಲ ಯುಕ್ತಿಯಿಂ ವಿಷಯ ವಿರಕ್ತನಾನಲ್ಲ 2 ಗುರುಕುಲವಾಸದ ಗುರುತೆನಗಿಲ್ಲ ಪರಮ ಭಾಗವತರ ಪರಿಚರ್ಯವಿಲ್ಲ 3 ಮಂತ್ರಾರ್ಥದ ಬೋಧೆ ಮನದೊಳಗಿಲ್ಲ ತಂತ್ರದೊಳಗೆ ಜಾಣ್ಮೆ ಎನಗಿನಿತಿಲ್ಲ 4 ಸಜ್ಜನ ಸಹವಾಸದುಜ್ಜುಗವಿಲ್ಲ ದುರ್ಜನರ ಸಂಗತಿ ವರ್ಜಿಸಲಿಲ್ಲ 5 ಹರಿಕಥೆ ಮಾಡುವ ಪ್ರಜ್ಞೆ ನನಗಿಲ್ಲ ದುರುಳ ಕಾಮುಕಸಂಗ ಕಿರಿದಾಗಿಲ್ಲ 6 ಪರಿಪರಿ ಕಷ್ಟವ ಪರಿಹರಿಸುವನೆ ಪರಮಶ್ರೀಪುಲಿಗಿರಿ ವರದವಿಠಲನೆ 7
--------------
ವೆಂಕಟವರದಾರ್ಯರು