ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರೇರೆಲ್ಲ ಮುತ್ತಿನಾರತಿ ಬೆಳಗಿರೆ ಶ್ರೀ ಕೃಷ್ಣಮೂರುತಿಗೆ ಪ ನಾರೀಮಣಿ ಶ್ರೀ ರುಕ್ಮಿಣೀದೇವಿಗೆ ಮತ್ತು ಭೂಮಾಮಣಿಗೆ ಅ.ಪ ಪನ್ನಗಪತಿ ಫಣಿಯನ್ನು ತುಳಿಯುತಲಿ ಚನ್ನಾಗಿ ಕುಣಿದವಗೆ ಸನ್ನುತ ನಿಜ ಜನರನ್ನು ಸಲಹುವ ಮನ್ಮಥ ಜನಕನಿಗೆ 1 ಪಾರ್ಥಗೆ ಸಖನಾಗಿ ಧಾರ್ತರಾಷ್ಟ್ರನ ಹಠ ವ್ಯರ್ಥ ಮಾಡಿದವಗೆ ಆರತಿ ಎತ್ತಿರೆ ಶುಭಕೀರ್ತನೆ ಮಾಡುತ ಪಾರ್ಥಸಖನ ಸತಿಗೆ 2 ಚಂಡಮುನಿಯು ಬೇಡಿಕೊಂಡ ವರವನಿತ್ತ ಪಾಂಡವರ ಕಾಯ್ದವಗೆ ಪುಂಡರೀಕದಳಲೋಚನಗೆ ಜಗದಂಡಪತಿಯ ಸತಿಗೆ3 ವಾಮಲೋಚನರೆಲ್ಲಾ ನಾಮಗಿರೀಶ ಶ್ರೀ ನರಸಿಂಹ ಮೂರುತಿಗೆ ಪ್ರೇಮ ಮಾಡುವನೆಂದು ಕಾಮಿನಿಯರೇ ಸತ್ಯ ಭಾಮಾಸಹಿತನಿಗೆ 4
--------------
ವಿದ್ಯಾರತ್ನಾಕರತೀರ್ಥರು
ಇಂಥಾತನು ಗುರುವಾದದ್ದು ನಮಗೆ ಇ-ನ್ನೆಂಥಾ ಪುಣ್ಯದ ಫಲವೊ. ಪಚಿಂತೆಯಿಲ್ಲದೆ ಅತಿ ಸುಲಭದಿಂದಲಿ ಶ್ರೀಕಾಂತನ ಕಾಣಲಿಕ್ಕಾಯಿತುಪಾಯ ಅ.ಪತಾನು ಇಲ್ಲದೆ ಈ ಜಗದೊಳು ಹರಿಯಿಪ್ಪಸ್ಥಾನವಿಲ್ಲವೆಂದು ಸಾರಿದಹೀನ ದೈವಗಳ ನಂಬಿದ ಜನರಿಗೆ ತನ್ನಙ್ಞÕನದಿಂದಲಿ ಹರಿಯ ತೋರಿದ ||ನಾನಾ ಜೀವಿಗಳ ಒಳಗೆ ಹೊರಗೆ ಇದ್ದುತಾನೇ ಮುಖ್ಯನಾಗಿ ಮೀರಿದ |ಶ್ರೀನಾರಾಯಣನೆಂದು ಪೇಳುವರಿಗೆ ತನ್ನಧ್ಯಾನದಿಂದಲಿ ಮುಕ್ತಿಮಾರ್ಗವ ತೋರಿದ 1ಪನ್ನಗಪತಿ-ಗರುಡ-ರುದ್ರ-ಇಂದ್ರಾದ್ಯರಿಗೆಉನ್ನತ ಗುರುವಾಗಿ ಮೀರಿದ |ಘನ್ನವಾದ ಶ್ರುತಿತತಿಗಳಿಂದಲಿ ಜೀವಭಿನ್ನನು ಎಂತೆಂದು ತೋರಿದ ||ಹೊನ್ನು ಹೆಣ್ಣು ಮಣ್ಣಿನಾಶೆಯಿಲ್ಲದೆ ಅವಿ-ಚ್ಛಿನ್ನ ಭಕುತಿಯಿಂದ ಮೆರೆದ |ಚೆನ್ನಾಗಿ ಭಕುತಿ ವೈರಾಗ್ಯಗಳಿಂದಲಿ |ತನ್ನ ನಂಬಿದ ಭಕುತರ ಪೊರೆದ 2ಈರೇಳು ಲೋಕಂಗಳಿಗೆ ತಾನೇ ಮುಖ್ಯ ಆ-ಧಾರವೆಂಬುದ ಕಲಿಸಿದ |ಭಾರಣೆಯಿಂದಲೊಪ್ಪುತ ಬಲು ಹರುಷದಿಭಾರತಿಯನು ಒಲಿಸಿದಮೂರೇಳು ದುರ್ಭಾಷ್ಯಗಳ ಕಾನನವ ಕು-ಕಾರದಂತೆ ಕಡಿದಿಳಿಸಿದಸೇರಿ ಶ್ರೀಪುರಂದರ ವಿಠಲನಂಘ್ರಿಗಳಧೀರ ಪೂರ್ಣಪ್ರಙ್ಞÕಚಾರ್ಯರೆಂದೆನಿಸಿದ 3
--------------
ಪುರಂದರದಾಸರು