ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಾದ್ರಿ ವಾಸ | ವಿಠಲ ಪೊರೆ ಇವನಾ ಪ ಮಾನಮೇಯ ಜ್ಞಾನ | ಸಾನುಕೂಲಿಸಿ ಇವಗೆನೀನಾಗಿ ಪೊರೆಯೊ ಹರಿ | ಕೋನೇರಿವಾಸಾ ಅ.ಪ. ಚಿತ್ರ ಚಾರಿತ್ರ | ಶುಭಗಾತ್ರನೇ ಶತಪತ್ರನೇತ್ರಕರವಾದ ದ್ವಂದ್ವ | ಸೂತ್ರಾಂತರಾತ್ಮ |ಮಿತ್ರನಾನುಗ್ರಹಕೆ | ಪಾತ್ರನ ಸಲಹೊ ಮಾಕಳತ್ರನೇ ನಿನ್ನ ಸುಪ | ವಿತ್ರ ಪದ ನಮಿಪೇ 1 ಕರುಣವೆಂತುಟೊ ನಿನಗೆ | ಶರಣಜನ ವತ್ಸಲನೇಕರೆದೊಯ್ದು ಸ್ವಪ್ನದಲಿ | ಹರ ಗಿರಿಜೆ ತೋರೀ |ಮರಳಿ ಬ್ರಹ್ಮನ ಲೋಕ | ದರುಶನಾನಂದದಲಿಕರೆದೊಯ್ದು ಕರುಣಾಳು | ಸುರಸೇವ್ಯ ಬದರಿಗೆ 2 ದಶಮತಿಗೆ ಬೋಧಿಸುವ | ವ್ಯಾಸದರ್ಶನ ಭಾವಿದಶಮತಿಯ ಸಹವಿರುವ | ವ್ಯಾಸ ಭಕ್ತನ್ನಾ |ಹಸನಾಗಿ ತೋರಿ ನೀ | ವಸುಮತಿಗೆ ಕರೆತಂದುಬೆಸಸಿದೆಯಾ ಫಲದೈವ | ದರ್ಶನಕೆ ಇವನಾ 3 ಬದ್ಧನಾದರು ಇಹದಿ | ಶುದ್ಧ ಸಂಸ್ಕøತನಿಹನುಮಧ್ವಮತ ದಾಸತ್ವ | ಶ್ರದ್ಧೆಯುಳ್ಳವನೇಬುದ್ಧಿಯಲಿ ಎನಗೆ ಉ | ದ್ಬುದ್ಭವನೆ ಮಾಡ್ದ ಪರಿತಿದ್ದಿ ಅಂಕಿತವಿತ್ತು | ಬುದ್ಧಿ ಪೇಳಿಹೆನೋ 4 ಸಂಚಿತ ಕರ್ಮ | ತೀವ್ರದಲಿ ದಹಿಸೇಗೋವುಗಳ ಪಾಲ ಗುರು | ಗೋವಿಂದ ವಿಠ್ಠಲನೆಭಾವದಲಿ ಬಿನ್ನವಿಪೆ | ನೀ ವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ಕಲಯಾಮಿ ಶ್ರೀನಿವಾಸಂ-ಕಲಭಾಷ ಮಿಂದುಹಾಸಂ ಪ ಕಮನೀಯಹೇಮ ಚೇಲಂ-ಕಮಲಾಲಯಾನುಕೂಲಂ ಕಮಲಾಭಿರಾಮ ಮಾಲಂ 1 ಸುಮಬಾಣ ಸುಂದರಾಂಗಂ-ಸುಮನನಾರ್ಪಿತಾಂತರಂಗಂ ನಮದಾರ್ತಿ ಸಂಗ ಭಂಗಂ 2 ಜಲಜಾಪ್ತ ಪತ್ರನೇತ್ರಂ-ಜಲದೋಪಮಾನ ಗಾತ್ರಂ ಜಲಜಾಪ್ತ ಪುತ್ರ ಮಿತ್ರಂ 3 ಕುಂದೋಪಮಾನ ರದನಂ-ಚಂದ್ರೋಪಮಾನ ವದನಂ ಬೃಂದಾರಕಾರಿ ದಮನಂ 4 ಅಜವಂದ್ಯ ಚರಣಕಮಲಂ-ನಿಜ ಸೌಖ್ಯ ಕರಣ ಕುಶಲಂ ಭಜನೀಯ ವರದ ವಿಠಲ-ಕಲಯಾಮಿ ಶ್ರೀನಿವಾಸ 5
--------------
ಸರಗೂರು ವೆಂಕಟವರದಾರ್ಯರು
ಜೋ ಜೋ ಸುಚರಿತ್ರ ಪರಮ ಪವಿತ್ರಾ ಜೋ ಜೋ ಶತಪತ್ರನೇತ್ರ ಸುಗಾತ್ರಾ ಪ ಜೋ ಜೋ ವಟಪತ್ರಶಯನ ವಿಚಿತ್ರ ಜೋ ಜೋ ಸುಂದರಚಿತ್ರ ಸೀತಾಕಳತ್ರ ಅ.ಪ ಕುಶಿಕಾಧ್ವರಪಾಲಬಾಲ ಸುರನುತಿಪಾತ್ರಾ ಸನ್ನುತ ಸ್ವರರೂಪ ಚಿತ್ರ ನಿಶಿಚರಹರ ನಿತ್ಯಸುಖದಾತ ಮಿತ್ರಾ [ತ್ರಿಶಿರಾದ್ಯಸುರ ಸಂಹಾರಕನೇತ್ರ] 1 ಕರುಣಾಕಾರ ದಿವ್ಯ ಶಶಿಬಿಂಬವದನಾ ಶರಣಜನಾನತ ಮರಕತವದನಾ ಧರಣಿಜಲೋಲ ಭಾಸ್ಕರವಂಶಮದನಾ ನಿತ್ಯ ಮಾಂಗಿರಿಸದನಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಂದನು ಕೃಷ್ಣ ಗೋವಿಂದ ಮುಕುಂದ ಭವ ಬಂಧನ ಪರಿಹಾರ ಶೌರಿ ಪ ಸಾರಸಪತ್ರನೇತ್ರ ಅನಘ ಘನನೀರದÀ ನಿಭಗಾತ್ರ ಶಕಟಾಂತಕ ಧೀರ ಕರುಣಾ ಪಾತ್ರ ಮುರಹರ ಜಂಭಾರಿಸನ್ನುತ ಗೋತ್ರಾ ಧಾರಿ ಮುನಿಜನ ಮಂದಾರ ಗೋಪಾಲ ಘನ ಸಾರ ಶೋಭಿತ ಯದುವೀರ ನಾರಾಯಣ 1 ಪಂಡಿತ ಕುಸುಮಪಾಣೆ ಜನಕ ಶ್ರೀ ಅಂಡಜಗಮನ ಗಾನಲೋಲನೆ ತಂಡ ರಕ್ಷಕ ಪುರಾಣಪುರುಷ ಕೋ ದಂಡ ಪಾಣಿ ಧುರೀಣ ಕುಂಡಲಿಶಯನ ಭೂಮಂಡಲಾಧಿಪ ಬಲೋ- ದ್ದಂಡ ಪರಾಕ್ರಮ ಚಂಡಮಹಿಮ ರಾಮ 2 ವೇದವೇದ್ಯ ಸುನಾಮಾ ತ್ರಿಜಗನ್ನುತ ಯಾದವ ಸಾರ್ವಭೌಮ ಪರಮಾತ್ಮ ಆದಿತೇಯಾಬ್ಧಿ ಸೋಮ ರಮೇಶಾಂಬುಜೋದರ ಸುಗುಣಧಾಮ ಮಾಧವ ನರಮೃಗ ಪ್ರಹ್ಲಾದ ವರದ ಸನÀಕಾದಿ ವಂದಿತ ಚರಣ 3
--------------
ಹೆನ್ನೆರಂಗದಾಸರು
ಸುವ್ವಿ ಶ್ರೀ ದೇವಿರಮಣ ಸುವ್ವಿ ಸರ್ಪರಾಜಶಯನ ಹರಣ ಸುವ್ವಿ ನಾರಾಯಣ ಪ ಭವ್ಯಚರಿತ ದುರಿತವಿಪಿನ ಹವ್ಯವಾಹನ ಭವೇಂದ್ರಾದಿ ಸೇವ್ಯಮಾನ ಸುಪ್ರಸಿದ್ಧ ಸುಲಭsÀ ಮೂರುತಿ ಅವ್ಯಯಾಮಿತ ಸುಖಾತ್ಮ ದಿವ್ಯ ಮಹಿಮೆ ತುತಿಪೆ ಸುವಿವೇಕಿಗಳಿಗೆ ಕೊಡುವುದಮಿತ ಮೋದವ 1 ವಾಸವಾದ್ಯಮರ ವಾರಾಶಿ ಶಾರದೇಂದು ಮಧ್ವ ದೇಶಿಕಾರ್ಯ ಚಿತ್ತ ಸಿಂಹಪೀಠಮಧ್ಯಗ ದೇಶಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮ ಶ್ರೀಮ ಹೀ ಸಮೇತ ಕೃಷ್ಣ ಕೊಡಲಿ ಎಮಗೆ ಮಂಗಳ 2 ಕಮಲ ಸಂಭವನ ವೇದ ತಮನು ಒಯ್ಯತಿರಲು ಲಕ್ಷ್ಮೀ ಶರಧಿ ಮಥನದಿ ಕಮಠ ರೂಪಿನಿಂದ ಸುರರಿಗಮೃತವಿತ್ತು ಕಾಯ್ದ ಅಖಿಳ ಸುಮನಸೇಂದ್ರ ಸ್ವಾಮಿ ಕೊಡಲಿ ಎಮಗೆ ಮಂಗಳ 3 ಕನಕ ಲೋಚನನ ಸದೆದು ಮನುಜಸಿಂಹ ವೇಷನಾದ ದ್ಯುನದಿ ಪಡೆದು ಜನನಿ ಕಡಿದು ವನವ ಚರಿಸಿದ ಜನಪ ಕಂಸನ್ನೊದೆದು ತಿರಿಪುರವನಿತೆಯರ ಸುವ್ರ್ರತ ವಿನುತ ಕಲಿ ದೇವರಾಜ ಎಮ್ಮ ಸಲಹಲಿ 4 ಪಾಹಿ ಪಾವನ ಚರಿತ್ರ ಪಾಹಿ ಪದ್ಮ ಪತ್ರನೇತ್ರ ನಿಗಮ ಗಾತ್ರ ಮಾಂ ಪಾಹಿ ಸಜ್ಜನಸುಮಿತ್ರ ಪಾಹಿ ದೋಷದೂರ ಸುಗುಣ ಪಾಹಿ ಜಗನ್ನಾಥ ವಿಠಲ ಜಯ ತ್ರಿಧಾಮಗ 5
--------------
ಜಗನ್ನಾಥದಾಸರು