ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿದ್ಯಾವಿದ್ಯಕಮೀರಿದಾಗುಣತ್ರಯಾ ದಾವನು ಹೊಂದಾದಿಯಾ ನಿಚಯಾಸರ್ವಕ್ಕುದಾವಾಶ್ರಯಾ ಶುದ್ಧಾತ್ಮಾ ಸುಖದಾಲಯಾ ಸತುಚಿದಾನಂದೈಕರಸನಿಶ್ಚಯಾ ಸಿದ್ಧಾಂತ ಪ್ರತಿಪಾದ್ಯದಾವನುದಯಾ ಶ್ರೀ ದೇವ ದತ್ತಾತ್ರಯಾ 1 ಜಗದೋಳಾವನಸದುಗುಣಾ ನಿರಗುಣಾ ಸ್ವಾರೂಪದಾ ಲಕ್ಷಣಾ ಬಗೆ ಬಗೆಯಲಿ ಮಾಡಲು ವಿವರಣಾ ನೇತಿನೇತಿ ಶೃತಿ ವಚನಾ ಮುನಿಜನಾ ನಿಶ್ಚೈಸದಿಹ ರಾವನಾ ಪ್ರಗಟೀಸಿಹನು ನೋಡಿದೇ ನಿಜಘನಾ ಶ್ರೀದತ್ತ ನಿರಂಜನಾ 2 ನಿಶ್ಚಯಿಸದಿಹದಾವನಲಿ ತಾಂಪೌರಾಣಿತಿಹಾಸ ಭೇದಿಸುತಲೀ ನೆಲೆ ಗಾಣದೇ ನಿಲ್ಲಲೀ ಅಪದಿಂದ ಮೀಮಾಂಸತರ್ಕವರಲೀ ಬೆಂಡಾದವು ನೋಡಲೀ ಅಪರ ಘನ ಬಂದಿದೇಧರಿಯಲೀ ಬೆಂಡಾದವು ನೋಡಲೀ 3 ಪಾತಾಳಾದಿಯ ಲೋಕವೇಳುಸರಳು ದಾವನ ಪದ ಕಟಗಳು ಖ್ಯಾತಿಂದೇಭುವನೇಳು ಊಧ್ರ್ವಕಿರಲು ನಾಭಿಂದ ಸಿರವಾಗಲು ಸೀತಾಂಶು ರವಿದಾವನಂಬಕಗಳು ಅಶಾವೆ ಶ್ರೀತಂಗಳು ದತ್ತೆನಿಸಲು4 ಅಮರಂಗಣಾ ದಾವನುದರ ವಿಶ್ವಕಾಗಿ ಭುವನಾ ಶ್ರೀಮದ್ರಮಾರಮಣಾ ನಖದಾಧೀನಾ ಶ್ರೀದತ್ತ ಮನ ಮೋಹನಾ 5 ಸರ್ವೆಶ ಸರ್ವೋತ್ತಮಾ ಸರ್ವಾಧಾರನುದಾವ ದೇವಗರಿಮಾ ಪೂಜ್ಯನು ಸಕಲಾಗಮಾ ಸರ್ವಾತೀತನು ದಾವನಂಘ್ರಿ ಕಮಲಾ ಸೇವಿಸುವಳು ಶ್ರೀರಮಾ ಶ್ರೀದತ್ತ ಗುರುವೇನಮಃ 6 ಅನಸೂಯಾ ಕರರತ್ನನಾಗಿಜನಿಸೀ ಇಷ್ಟಾರ್ಥವನು ಪೂರಿಸೀ ಯೋಗಾಂಗವನು ಪ್ರಕಟಿಸಿ ಸ್ಮರಿಸೀದವರಲ್ಲಿ ಬಹುಕರುಣಿಸೀ ಶ್ರೀ ದತ್ತಪದ ಧ್ಯಾಯಿಸೀ 7 ಮೆರೆವಾ ಮುಪ್ಪುರದಿಂದೇರುವಾ ಸಾರೀ ಸಾವಿರದಳ ಪದ್ಮದಿರುವಾ ಸ್ವಾನಂದ ಭೋಗಿಸುವಾ ಮುದ್ರಾಂಕುರವ ಬೀರುವಾ ಶ್ರೀದತ್ತ ಗುರು ಎನಿಸುವಾ8 ಕಾತ್ರ್ಯವೀರ್ಯವರವಾಯದುರಾಯನುದ್ಧರಿ ಸಿದಾ ಗುರುಮಹೀಪತಿ ನುಡಿಸಿದಾ ಸ್ವಾನಂದ ಸುಖ ಬೀರಿದಾ ಸದಾ ಪಡೆವನು ಗತಿಸಂಪದಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವೃಂದಾವನೀ ದೇವಿ ವಂದಿಸುವೆ ಶ್ರೀ ತುಳಸಿ ವಂದಾರು ಜನತತಿಗೆ ಮಂದಾರಳೆನಿಸಿರುವಿ ಸಂದೇಹವಿಲ್ಲವಿದಕೆ 1 ಅಂದು ಧನ್ವಂತರಿಯು ತಂದಿರುವ ಪೀಯೂಷ ದಿಂದ ಪೂರಿತ ಕಲಶದಿ ಇಂದಿರಾಪತಿಯ ಆನಂದ ಬಾಷ್ಪೋದಕದ ಬಿಂದು ಬೀಳಲು ಜನಿಸಿದಿ2 ಶ್ರೀ ತುಳಸಿ ನಿನ್ನನು ನಿಕೇತನದಿ ಪೂಜಿಪರ ಪಾತಕವ ಪರಿಹರಿಸುವಿ ಶ್ರೀ ತರುಣಿಪತಿಗೆ ಬಲುಪ್ರೀತಿ ವಿಷಯಳೆನಿನ್ನ ನಾ ಸ್ತುತಿಸಲೆಂತು ಜನನಿ 3 ಸರ್ವ ತೀರ್ಥಗಳೆಲ್ಲ ತರುಮೂಲದಲ್ಲಿಹವು ಸರ್ವ ವಿಬುಧರು ಮಧ್ಯದಿ ಸರ್ವ ವೇದಗಳೆಲ್ಲ ತರುಅಗ್ರಭಾಗದಲಿ ಇರುತಿಹರು ಬಿಡದೆ ನಿರುತ 4 ತುಳಸಿ ನಿಮ್ಮಯ ಲಕ್ಷದಳಗಳಿಂದಲಿ ಲಕ್ಷ್ಮಿನಿಲಯನಂಘ್ರಿಗಳರ್ಚಿಸಿ ಕಲುಷ ವರ್ಜಿತನಾಗಿ ಬಲುಬೇಗ ಶ್ರೀಹರಿಯ ಒಲುಮೆ ಪಡೆವನು ಜಗದೊಳು 5 ತುಳಸಿ ದೇವಿಯೆ ನಿನಗೆ ಜಲವೆರೆದು ಕುಂಕುಮದ ತಿಲಕವಿಡುತಲಿ ನಿತ್ಯದಿ ಲಲನೆಯರು ಪೂಜಿಸಲು ಒಲಿದಿತ್ತು ಸೌಭಾಗ್ಯ ಸಲಹುವಿಯೆ ಕರುಣದಿಂದ 6 ಮಾಧವ ಪ್ರಿಯ ತುಳಸಿ ಸಾದರದಿ ನಿನ್ನೊಳಗೆ ಶ್ರೀದೇವಿ ನಿಂದಿರುವಳು ಮೋದಮುನಿ ಶಾಸ್ತ್ರವನು ಬೋಧಿಸುವ ಬುಧಜನರ ಪಾದಸೇವೆಯ ಕರುಣಿಸು 7 ಮಿತ್ರನುದಯದಲೆದ್ದು ಚಿತ್ತನಿರ್ಮಲರಾಗಿ ಭಕ್ತಿಯಲಿ ಶ್ರೀ ತುಳಸಿಯ ಮೃತ್ತಿಕೆಯ ಧರಿಸಿದ ಮಹಾತ್ಮರನು ಕಂಡು ಯಮ ಭೃತ್ಯರಂಜುವರು ಭಯದಿ 8 ಇಂತು ಶ್ರೀತುಳಸಿ ಸೀಮಂತಿನಿಯ ಸ್ತೋತ್ರವ ನಿ- ರಂತರದಿ ಪಠಿಸುವವರ ಚಿಂತಿತ ಪ್ರದನಾಗಿ ನಿಂತು ಕಾರ್ಪರದಿ ಸಿರಿ ಕಾಂತ ನರಹರಿ ಪೊರೆವನು 9
--------------
ಕಾರ್ಪರ ನರಹರಿದಾಸರು
ಶ್ರೀ ಗಜಾನನ ದೇವ ಸುರಾರ್ಚಿತಾ |ನಾಗಭೂಷಣ ಸಿಂಧೂರ ಚರ್ಚಿತಾ || ಪಡೆವನು ಜ್ಞಾನವಾ 1 ಸಿರಿಸರಸ್ವತಿ ಕಾಮಿನಿ ನಾಯಕೆ || ಲೋಕ ವಿರಾಜಿತೆ 2 ಸಲೆ ರಾಮರೂಪವ ತೋರಿದ ವಿಹಿತ | ಕಮಲ ಬಲಗೊಂಡು ಸನ್ಮತಿ ನೀಡಲು ವಿಮಲಾ 3 ಅನುದಿನ ಸೇವಿಸುತಿಹಳು ಪದ್ಮಾ || ನೆನುವದಕ ತಾರದಿರಂತರಾಯ 4 ರಾಜ ತೇಜದ ಭಕ್ತರ ತಾರಿಸಿ || ತ್ಯಾಜದೀವುದು ಜ್ಞಾನದ ಸಂಪತಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು