ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡುಮುದ್ದು ಮೋಹನನಾದ ಈ ಸೊಬಗ ನ-ಮ್ಮುಡುಪಿನ ಕೃಷúರಾಯನ ನೋಡು ನೋಡುಪ. ಬೊಮ್ಮರುದ್ರಾದಿಗಳ ಕಣ್ಗೆಗೋಚರಿಸದನಿರ್ಮಲ ಚಿನ್ಮಯ ಬೊಮ್ಮವೆÉನಮ್ಮ ಚರ್ಮದೃಷ್ಟಿಗಳಿಗೆ ಗಮ್ಯವಾಯಿತ-ಮ್ಮಮ್ಮ ಇನ್ಯಾರ ಪುಣ್ಯವೊ ನೋಡು ನೋಡು 1 ಶುದ್ಧ ಸಿದ್ಧಾಂತವ ಜಗಕೆ ತೋರಿಸಿದಮಧ್ವಮುನಿಗೊಲಿದು ಬಂದಅಬ್ಧಿಜೆಯರಸನೀತನು ತನ್ನಹೊದ್ದಿದರಿಗರ್ಧ ಶರೀರವನೀವನೆ ನೋಡು ನೋಡು 2 ಪಾದ ಕಟಿ ವಕ್ತ್ರ ನೇತ್ರ ಮೌಳೀಯ ನಲ್ಲಗೊಲ್ಲಪಳ್ಳಿಯ ನೊಲ್ಲದೆ ಬಂದÀನೆ 3 - - - - - - - - - - ಅಲ್ಲಿ ಬೆಣ್ಣೆಗಳ್ಳನೆಂಬೊರಿವನೆಲ್ಲಇಲ್ಲದಿದ್ದರೆಲ್ಲಿಂದೆಲ್ಲಿಗಿಲ್ಲಿಯ ವಾಸ ನೋಡು ನೋಡು 4 ಶ್ರುತಿಗಗೋಚರನೆನಿಪ ಯತಿತತಿಮತಿಗೆ ಮೈಗೊಡದ ಬೊಮ್ಮಪತಿತ ಪಾತಕಿಗಳಿಗೆ ಕ್ಷಿತಿಯೊಳ-ಗತಿ ಸುಲಭವಾಯಿತಿನ್ನು ನೋಡು ನೋಡು 5 ಬಲ್ಲವರೆ ಬಲ್ಲರಿವನ ಈ ಮಹಿಮೆಯದುರ್ಲಭಕ್ಕೆ ದುರ್ಲಭನವಚೆಲ್ವ ಹಯವದನನಾದ ಭಕುತ ಯತಿ-ವಲ್ಲಭನಿಂದಿಲ್ಲಿ ಸುಲಭ ನೋಡು ನೋಡು 6
--------------
ವಾದಿರಾಜ
ದಡ ಸೇರಿಸು ಭವದ ಕಡಲಿನದಡ ಸೇರಿಸು ಹರಿಯೆಕಡೆ ಮೊದಲಿಲ್ಲದ ಕ್ಲೇಶದ ವಾರಿಯಕಡು ಕಾಂಕ್ಷದ ಬಲುತೆರೆಯ ಪ.ಸಾಧು ಸಮಾಗಮ ಸಚ್ಛಾಸ್ತ್ರ ಶ್ರವಣಾದಿಗಳಿಲ್ಲದೆ ಕೆಡುವೆಮೇದಿನಿಯೊಳು ಮೂಢಾತ್ಮನು ನಾ ಶ್ರೀಪಾದವ ಹೊಂದಿಸು ಹರಿಯೆ 1ಸಾಸಿರ ನಾಮದಿ ತುಲಸೀ ಕುಸುಮವಶ್ರೀಶನಿಗರ್ಪಿಸಲಿಲ್ಲಹೇಸದೆ ಬಾರದುದನ್ನೆ ಬಯಸುತವಾಸುದೇವಕೆಟ್ಟೆನಲ್ಲ2ಮನ ವಶವಾಗದು ತನು ಮಡಿಯಾಗದುಕನಸಲಿ ಧರ್ಮವನರಿಯೆಒಣಮಾತಲಿ ದಿನ ಹೋದವು ಪರಗತಿಗನುಕೂಲಲ್ಲದು ದೊರೆಯೆ 3ದುವ್ರ್ಯಸನಕೆ ಬೇಸರೆನೆಂದಿಗೆಘನಗರ್ವಿಲಿ ವರ್ತಿಪೆನಲ್ಲಪರ್ವತ ನೆಗಹುವ ನುಡಿಯನ್ನಾಡುವೆನಿರ್ವಾಹಕಡ್ಡಿಯೊಳಿಲ್ಲ4ನನ್ನ ಗುಣದ ನಂಬಿಕೆ ನನಗಿಲ್ಲನಿನ್ನಯ ನಾಮವೆ ಗತಿಯುಇನ್ನಾದರು ಕಡೆಗಣ್ಣಲೆನೋಡುಪ್ರಸನ್ವೆಂಕಟ ಸಿರಿಪತಿಯೆ 5
--------------
ಪ್ರಸನ್ನವೆಂಕಟದಾಸರು
ನರರ ವಂಚಿಸಿದನೆಂದೆಂಬ | ಪೌರುಷವೇಕೋ |ಹರಿಯ ವಂಚಿಸಲಸಾಧ್ಯವು | ನಿನಗೆ ಮರುಳೆ |ದುರುಳರೊಡನಾಟದಲಿ ದುಷ್ಟ ಕಾರ್ಯವಮಾಡು|ನರಕದಲಿ ಮುಳುಗಿಸುವ ಯಮನುನೋಡುಪಮೂಢ ಮತಿ ಕೇಳ್ ನರಗೆ ನೋಡಲೆರಡೇ ಕಣ್ಣು |ಗಾಢ ನಿದ್ರೆಯೊಳದನು ಮುಚ್ಚಿ ಮಲಗುವನೂ |ಗಾಢಾಂಧಕಾರದಲಿ | ಸೊಡರ ಹೊರತು ಕಾಣದದು |ರೂಢಿಯೊಳು ಸಹಸ್ರಾಕ್ಷ | ನನು ಮೋಸಗೊಳಿಸುವಾ |ಪಾಡೇನ ಬಲ್ಲೆ ಮರುಳೇ1ಎರಡೇಳು ಜಗವನ್ನು ಧರಿಸಿರುವ ಹೃದಯದಲಿ |ಗರುಡ ವಾಹನನಾಗಿ ಧರೆಯೊಳ್ ಚರಿಸುವನು |ತರಣಿಶಶಿನೇತ್ರನೆಂದೆನಿಸಿ ಸರ್ವವನೋಳ್ಪ |ಪರಮಾತ್ಮನಾಗಿ ಪ್ರಾಣಿಗಳ | ಹೃದಯದಲಿ |ಹರಿಯು ನೆಲೆಸಿರ್ಪ ಕೇಳು2ಇಂದೋರ್ವನನು ಮೋಸಗೊಳಿಸಿದಾ ದೋಷವಿದು |ಎಂದೆಂದಿಗೂ ನಿನ್ನ ಬೆನ್ನ ಬಿಡದೂ |ನಿಂದಿಗನು ನರಜನಕೆ ಗೋವಿಂದನಿಗೆ ದ್ರೋಹೀ |ಎಂದೆನಿಸಿ ಯಮನ ಹಂಗಿಗನಾಗಬೇಡ ನಾಳೆ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಸಲ್ಲದೋ ಕೃಷ್ಣ ಸಲ್ಲದೋಸಿರಿವಲ್ಲಭಇದನೋಡುಪಾಲಿಸಬೇಕೋಪಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನುಮತ್ತೆ ತುರುವಿಂಡನು ಬಿಟ್ಟು ಮೆಲ್ಲಿಸುವುದು 1ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿಪಾವಕನುರಿಗೆ ನೀನೊಪ್ಪಿಸಿ ಕೊಡುವುದು 2ಕುಶಲದಿ ಬಣ್ಣಿಸಿ ಬರೆದು ಚಿತ್ತಾರವಮಸಿ ಮಣ್ಣ ಮಾಡಿ ನೀ ಕೆಡಿಸುವುದು 3ಬಲುಕಾಲ ಮುದ್ದಿಸಿ ಕಲಿಸಿ ಮಾತುಗಳನುಗಿಳಿಯ ಸಾಕಿ ಬಾವುಗಗೆ ಒಪ್ಪಿಸುವುದು 4ಕರುಣಿಸುಸಿರಿಪುರಂದರವಿಠಲ ನಮ್ಮಹಿರಿದು ಮಾಡಿ ಮತ್ತೆ ಕಿರಿದು ಮಾಡುವುದು 5
--------------
ಪುರಂದರದಾಸರು