ಒಟ್ಟು 110 ಕಡೆಗಳಲ್ಲಿ , 40 ದಾಸರು , 104 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೈ ಭೀಮ ಜರೆಸುತನ್ವೈರಿ ಜೈ ಭೀಮ ಜಯ ಜಯ ಜಯ ಮುಖ್ಯಪ್ರಾಣ ಸೋಮ ಕುಲದೊಳುದ್ಭವಿಸಿ ಗೀರ್ವಾಣ ಬಲು ಬಲುಮೆಯಿಂದಲಿ ದುರ್ವಾದಿಗಳನ್ನೆ ಮೂತಿಂದ್ವೊತ್ತಿ ಸಲಹೆನ್ನ ಶ್ರೀಮ- ದಾನಂದತೀರ್ಥಮುನಿ ಪ ರೋಮ ರೋಮಕೆ ಕೋಟಿಲಿಂಗ ಜಗತ್ಪ್ರಾಣಿಗಳಿಗೆ ಅಂತರಂಗ ಲಂಕೆನಾಳ್ವೋ ಭೂಪತಿಗತಿ ಭಂಗಬಡಿಸಿ ಕ್ಷೋಣಿಸುತೆಗೆ ಉಂಗುರಿಟ್ಟು ರಾಮರಲ್ಲೆ ಪ್ರೇಮ- ವಾರ್ತೆಯ ತಂದ ಪ್ರಾ- ಣೇಶ ದಯವಾಗೊ 1 ಮಧುವೈರಿ ಮಾತುಳನಾಗೆ ಬಂದು ಮಗಧ ಮುತ್ತಿಗೆ ಹಾಕೆ ಬ್ಯಾಗ ವೃಕೋದರ ಛಲವ್ಹಿಡಿದು ತಾ ಹೋಗೆ ಅಲ್ಲೆ ದ್ವಿಜನ್ವೇಷಧರಿಸ್ವಾಸುದೇವ ವಾಸವಿ ಕೂಡಿ ಮಗಧರಾಜನ ಮ- ರ್ಮಗಳಿಂದ ಸೀಳಿದ್ಯೊ 2 ಹಾಟಕಾಂಬರನಲ್ಲಿ ಭಕ್ತರೆಂದು ಅರಿಯದೆ ಅಂತಕನ ಪುತ್ರ(ನ) ಜೂಜಿನಾಟ(ದಿ) ಸೋಲಿಸಿ ಸೆಳೆಯೆ ವಸ್ತ್ರ ಕೃಷ್ಣೆ ನೋಟದಿ ಭಸ್ಮ ವಿಚಿತ್ರ ಸವ್ಯಸಾಚಿ ಸಹಿತವಾಗ್ವಿರಾಟ- ವರ್ಗದಿ ಸತಿಗೆ ಕಾಟ ಕಳೆದ್ಯಮ- ಪುರಿಗೆ ದಾಟಿಸ್ದ್ಯೋ ಕೀಚಕನ 3 ಕಳೆದÀು ಅಲ್ಲಜ್ಞಾತವಾಸ ಬಂದು ಖಳರೊಳಗಧಿಕ ದುಶ್ಶಾಸ(ನ) ಅವನ ಕರುಳ ಬಗೆಯಲತಿ ರೋಷ ಕಾಲಕ್ಕೊದಗಲು ನರಹರಿ ಆ- ವೇಶ ಕಂಡು ಸುರರಸುರರ ಸೈನ್ಯ ಜರಿದು ಹಿಂದಕೆ ನಿಲ್ಲೆ ರಣಧೀರ- ಗೆಣೆಯಿಲ್ಲ ಪರಮ ಪರಾಕ್ರಮ 4 ಸಕಲ ಜೀವರಿಗಾಧಾರಕನೊ ಭಾರತಿ ಪ್ರಾರಂಭಕ್ವೊಂದಿತನೊ ಮಧ್ವಮತ ಶಾಸ್ತ್ರಗಳ ಉದ್ಧಾರಕÀನೊ ತ್ರಿಗುಣ ಜೀವನು ಸಾರಪ್ರೇರಕನು ವಾಯು ಸಕಲ ಸುರರೊಡೆಯ ಭೀಮೇಶ ಕೃಷ್ಣನಲ್ಲಿ ಭಕುತಿ ಜ್ಞಾನವ ದಿವ್ಯ ಮುಕುತಿ ಮಾರ್ಗವ ತೋರಿದಿ 5
--------------
ಹರಪನಹಳ್ಳಿಭೀಮವ್ವ
ಬಂದು ಮಧುರೆಗೆ ತಾ ಕೊಂದು ಮಾತುಳನ ಬಂಧನ ರಹಿತವಾಗಲು ಮಾತಾಪಿತರು 1 ಜರೆಯಸುತನ ಬಾಧೆಯು ಘನವಾಗುತಿರಲು ಜಲದೊಳು ದ್ವಾರಕಾಪುರವ ನಿರ್ಮಿಸಿದ 2 ಯದುನಂದನ ತನ್ನಗ್ರಜ ಬಲರಾಮನ ಕೂಡ ಮುದದಿಂದಾವಾಸ ಯಾದವರ ಸಹಿತಾಗಿ3 ಇರುತಿರೆ ರುಕುಮ ತನ್ನನುಜೆ ಸಹಿತಾಗಿ ಚೆಲುವ ಸುಂದರಿಗೆ ಬ್ಯಾಗ್ವಿವಾಹದುತ್ಸವವು 4 ಅಕ್ಕರದನುಜೆ ರುಕ್ಮಿಣೀದೇವಿಗಿನ್ನು ಚಿಕ್ಕ ಚೆನ್ನಿಗನಾದ ತಕ್ಕ ವರನ್ಯಾರು 5 ವಸುಧೆಪಾಲರ ಮಧ್ಯ ಶಿಶುಪಾಲನೀಗಧಿಕ ಕುಸುಮಗಂಧಿನಿಗೆ ನಿಶ್ಚಯವ ಮಾಡಿದರು 6 ಅಗ್ರಜನ್ವಾಕ್ಯವ ಕೇಳಿ ಮನದಲ್ಯೋಚಿಸುತ ಘನಮಹಿಮಗೆ ಓಲೆ ಬರೆದಳು ಲಿಖಿತ 7 ಹರಿ ನೀನೆ ಮುರವೈರಿ ಸರುವಾಂತರಯಾಮಿ ನಿನ್ನ ಸ್ಮರಣೆ ದರುಶನ ಮಾತ್ರಕೆ ಪರಮಲಾಭೆನಗೆ 8 ಎಂದೆಂದಿಗೆನ ಕೂಡಾನಂದವ ಬಟ್ಟು ಇಂದೆ ಕೈಬಿಟ್ಟು ದೂರಿಂದ ನೋಡುವರೆ 9 ಪ್ರಾಣಪತಿ ನೀ ಪಾಣಿಗ್ರಾಣ (ಗ್ರಹಣ?) ಮಾಡದಲೆ ಇರೆ ಪ್ರಾಣ ಉಳಿಯದು ಕೇಳೆನ್ನಾಸೆ ಹುಸಿಯಲ್ಲ 10 ಸರ್ವರ್ವಂದಿತ ನಿನ್ನ ಅರಮನೆದ್ವಾರ ಕಾದಿರುವೋ ಭೃತ್ಯರಿಗೊಪ್ಪಿಸಿಕೊಡದೆ ಕರುಣಾಳು 11 ದೇಶಕಾಲಕೆ ನಾ ನಿನ್ನ ಸಮಳ್ವಾಸುದೇವ ಗುಣಕಸಮಳೆಂದು ಉದಾಸೀನ ಮಾಡಬ್ಯಾಡ 12 ವಕ್ಷಸ್ಥಳದ ವಾಸಿಯ ತುಚ್ಛಮಾಡದಲೆ ಲಕ್ಷೀಲೆ ಕರೆದೊಯ್ಯೊ ಪಕ್ಷಿವಾಹನನೆ 13 ಎನ್ನ ಬಿನ್ನಪ ಕೇಳಿ ಮನ್ನಿಸೊ ಕೃಷ್ಣ ಪನ್ನಂಗಶಯನ ನಿನ್ನ ಪಾದಕ್ಕೆರಗುವೆನು 14 ಪಾದ ಉರಗ ಮೆಟ್ಟಿದ ಪಾದ ನಿನ್ನ ಧ್ವಜವಜ್ರಾಂಕುಶ ಪಾದಕ್ಕೆರಗಿ ನಮಿಸುವೆನು 15 ಬರೆದ ಓಲೆಗೆ ಹಚ್ಚಿ ಅರೆದರಿಷಿಣವ ಕರವ ಜೋಡಿಸಿ ಕೊಟ್ಟು ಕಳುಹೆ ದ್ವಾರಕೆಗೆ16 ಜಗದೀಶಗೆ ಪತ್ರವ ಜಾಣೆ ತಾ ಬರೆದು ದ್ವಿಜನ ಕೈಯಲಿ ಕೊಟ್ಟು ಕಳುಹೆ ದ್ವಾರಕೆಗೆ 17 ವ್ಯಾಳ್ಯ ಮೀರುವುದೆಂದು ಎದ್ದಾಗ ರುಕುಮ ಭೇರಿ ತಾಡನ ಮಾಡಿಸೆ ಭೋರೆಂಬೊ ರಭಸ 18 ಎರೆದು ಮುಡಿಯನ್ಹಿಕ್ಕಿ ಜಡೆಯಬಂಗಾರ ಚೌರಿ ರಾಗಟೆ ಗೊಂಡ್ಯ ಧರೆಗೆ ಮುಟ್ಟುತಿರೆ 19 ಅಚ್ಚ ಜರತಾರಿ ಹೊಳೆವಷ್ಟಪತ್ರಿಕೆಯು ಮ್ಯಾಲೊಪ್ಪುವೊ ಪಟ್ಟೀನೊಡ್ಯಾಣ ಸರಿಸಿಟ್ಟು 20 ಕಂಕಣ ಚೂಡ್ಯ ದ್ವಾರ್ಯ ್ಹರಡಿ ಕೈಕಟ್ಟು ಮ್ಯಾ- ಕಂಚುಕ ತೊಟ್ಟು 21 ಹರಳು ಮಾಣಿಕ್ಯದ್ವಾಲೆ ಬುಗುಡಿ ಬಾವುಲಿಯು ಹೊಳೆವೊ ಮುತ್ತಿನ ಮೂಗುತಿ ಥಳಥಳಸುತಲಿ 22 ಹಾರ ಪದಕದ ಮಧ್ಯ ಮೇಲಾದೇಕಾವಳಿಯು ತೋರ ಮುತ್ತಿನ ದಂಡೆ ಲೋಲ್ಯಾಡುತಿರಲು 23 ಕನ್ನಡ್ಯಂದದಿ ಗಲ್ಲ ಕಳೆಯ ಸುರಿಸುತಲಿ ಸಣ್ಣಮುತ್ತಿನ ಗೊಂಚಲು ಸರಗಳಲೆಯುತಲಿ 24 ಝಗಝಗಿಸುತ ಬಂದಳು ಜಗದ ಮೋಹಿನಿಯು ಮುಗುಳು ನಗೆಯಿಂದ ಮೂರ್ಜಗವ ಮೋಹಿಸುತ 25 25 ಗೆಜ್ಜೆ ಸರಪಳಿ ಅಂದಿಗೆ ಹೆಜ್ಜೆಸರಿಸಿಡುತ ನಿರ್ಜರೇಶನ ಮಾರ್ಗದ ನಿರೀಕ್ಷಣದಿಂದ 26 ಸುತ್ತ ಮುತ್ತೈದೇರು ಕತ್ತಿಕೈ ಭಟರು ತುತ್ತೂರಿ ವಾದ್ಯ ಭೇರಿ ತಮ್ಮಟೆ ಕಾ(ಕಹ?) ಳೆ 27 ನಡೆದು ರುಕ್ಮಿಣಿ ಹೊಕ್ಕಳು ಗುಡಿಯ ಮಹಾದ್ವಾರ ಮೃಡನರಸಿಯ ಪೂಜಿಸಿ ದೃಢಭಕ್ತಿಯಲಾಗ 28 ಹಿರಿಯ ಮುತ್ತೈದೇರಿಗೆ ಮರದ ಬಾಗಿನವ ಅರೆದರಿಷಿಣ ಕುಂಕುಮ ಕರದಲ್ಲಿ ಗಂಧ 29 ಕಡಲೆ ಕಬ್ಬು ಕಾಯಿ ಉಡಿಯ ತುಂಬುತಲಿ ಕಡಲಶಯನನ ಮಾರ್ಗವ ಬಿಡದೆ ನೋಡುತಲಿ 30 ಮಂಗಳಗೌರಿಯೆದುರಿಗೆ ಮುತ್ತೈದೇರು ಅಂಗನೆ ಭೈಷ್ಮಿ ಪೀಠದಲಿ ಕುಳ್ಳಿರಿಸಿ 31 ಮಂಗಳಾಂಗನು ನಿನ್ನ ಪತಿಯಾಗಲೆಂದು ಮಂಗಳಸೂತ್ರ ಬಂಧನ ಮಾಡಲು ನಗುತ 32 ಮಾರನಯ್ಯನ ಮೋರೆ ನೋಡಿದಾಕ್ಷಣದಿ ಮಹಾ- ದ್ವಾರದಿ ಮುತ್ತು ಸೂರ್ಯಾಡೇನೀಕ್ಷಣದಿ 33 ಹರನ್ವಲ್ಲಭೆ ತೋರೆ ಮುರಹರನ ಕರಿವರನ ಭಯ- ಹರನ ಶ್ರೀಧರನ ಕೊಡುವೆನೀ ದೇವರನು 34 ಮಚ್ಛಲೋಚನೆ ಧ್ಯಾನ ಅಚ್ಚ್ಯುತನಲ್ಲೇ ಇಡೆ ಭಕ್ತ- ವತ್ಸಲ ಬಂದನೆಂದೆಚ್ಚರಿಸಿದರು35 ಹತವಾದ ಪ್ರಾಣ ಬರಲತಿ ಹರುಷವ್ಹ್ಯಾಗೋ ರಥವ ಕಾಣುತ ರುಕ್ಮಿಣಿ ಕೃತಕೃತ್ಯಳಾಗ 36 ಸೃಗಾಲದ ಮಧ್ಯ ಒಂದು ಸಿಂಹ ಹೊಕ್ಕಂತೆ ಶ್ರೀನಾಥ ರುಕ್ಮಿಣಿಯ ಸ್ವೀಕಾರ ಮಾಡಿದನು 37 ರಥವು ಮುಂದಕೆ ಸಾಗೆ ಪಥವು ತೋರದಲೆ ಅಲೆ ಬಾಯ ಬಿಡುತ ಶ್ರೀಪತಿಯ ಬೆನ್ನ ್ಹತ್ತಿ 38 ಬಂದ ರುಕುಮನ ಗಡ್ಡ ಮಂಡಿ ಸವರುತಲಿ ಬಂಧನ ರಥಕೆ ಮಾಡಿದ ನಂದಸುತನು 39 ವಾರೆನೋಟದಿ ನೋಡಿ ಮೋರೆ ತಗ್ಗಿಸಿದ ನಾರಿ ರುಕ್ಮಿಣಿಯ ಮುಖ ನೋಡಿ ಶ್ರೀಕೃಷ್ಣ 40 ಕರುಣವಿರಲಿಕ್ಕೆ ನೀ ಬರೆದ್ಯಾತಕೆ ಓಲೆ ತಿಳಿಯಲಿಲ್ಲವೆ ಎಂದೀಪರಿ ಹಾಸ್ಯದಿ ನುಡಿದ41 ಒಡಹುಟ್ಟಿದವನಲ್ಲಿ ಕಡು ಮೋಹವಿನ್ನೂ ಹಿಡಿಯದೆನ್ನೊಳು ಕೋಪ ಬಿಡುರುಕ್ಮಿಣಿ ಎಂದ 42 <ಈಔಓಖಿ ಜಿಚಿಛಿe='ಓuಜ
--------------
ಹರಪನಹಳ್ಳಿಭೀಮವ್ವ
* ಎಂಥಾದ್ದೊ ಶ್ರೀ ತಿರುಪತಿ | ಎಂಥಾದ್ದೊ ಪ. ಎಂಥಾದ್ದೊ ತಿರುಪತಿ ಕ್ಷೇತ್ರ | ಸ ತ್ಪಾಂಥರಿಗಿಲ್ಲಿ ಸುಗಾತ್ರ | ಆಹ ಕಂತುಪಿತನು ಇಲ್ಲಿ ನಿಂತು ಭಕ್ತರಿಗೆಲ್ಲ ಸಂತಸಪಡಿಸುವನಂತಾದ್ರಿನಿಲಯ ನಿನ್ನೆಂದಾದ್ದೊ ಅ.ಪ. ನಾಗಾದ್ರಿಗಿರಿಯ ಮೆಟ್ಟುಗಳು | ಅ ಯೊಗ್ಯರಿಗಿದು ದುರ್ಲಭಗಳು | ಅಲ್ಲಿ ಭಾಗವತರ ಸಮ್ಮೇಳಗಳು | ಶಿರ ಬಾಗಿ ವಂದಿಪರು ಜನರುಗಳು | ಆಹ ಪೋಗುತ ಗಾಳಿಗೋಪುರವ ಕಂಡೆರಗಿ ಮುಂ ದ್ಯಾಗುತ ಸಜ್ಜನ ನೀಗುವರು ದುಃಖ1 ಹರಿಮಂದಿರ ಮಹಾದ್ವಾರ | ಬಹು ಜ ನರು ಕೂಡಿಹರು ವಿಸ್ತಾರ | ಬೀದಿ ನಡೆದು ಪದ್ರಕ್ಷಿಣಾಕಾರ | ಭೂ ವರಹನ ಸ್ವಾಮಿ ಕಾಸಾರ | ಆಹ ಹರುಷದಿಂದಶ್ವತ್ಥ ತರುವ ಕಂಡೆರಗಿ ಹರಿ ದರುಶನಕಾಗಿ ಹಾರೈಸುವ ಜನತತಿ 2 ಸ್ವಾಮಿಪುಷ್ಕರಣಿಯ ಸ್ನಾನ | ಮನ ಕಾನಂದಪ್ರದ ಸುಜ್ಞಾನ | ಭಾನು ತಾನುದಿಸುವನು ಮುಂದಿನ | ಸುಖ ಕೇನೆಂಬೆ ಹರಿಯ ದರ್ಶನ | ಆಹ ನೀನೆ ಗತಿಯೆಂದು ನಂಬಿದವರ ಪೊರೆವ ಭಾನುಪ್ರಕಾಶ ಹಣ ಕಾಣೀಕೆ ಕೈಕೊಂಬ 3 ಗರುಡ ಸ್ಥಂಭವನೆ ಕಾಣುತ್ತ | ಬಾಗಿ ಕರಮುಗಿದು ಒಳದ್ವಾರ ಪೊಗುತ | ವಿಮಾನ ಗಿರಿ ಶ್ರೀನಿವಾಸಗೆರಗುತ್ತ | ಬಂದು ವರ ತೊಟ್ಟಿ ತೀರ್ಥ ಕೊಳ್ಳುತ್ತ | ಆಹಾ ತರತರದ ಕಾಣಿಕೆ ಕೊಪ್ಪರಿಗೆಗೆ ಸುರಿಯುತ್ತ ನಿರುತ ನೀ ಸಲಹೆಂದು ಮೊರೆಯಿಡೆ ಭಕ್ತರು 4 ಗರುಡನ ಎದುರೊಳು ನಿಂದು | ಸ್ವಾಮಿ ಗರುವ ರಹಿತ ತಾ ಬಂದು | ಬಂದ ವರಭಕ್ತರನೆ ಕಾಯ್ವ ಬಿರುದು | ಇಂಥ ಹರಿಗೆ ಅಮೃತೋದಕವೆರೆದು | ಆಹಾ ಜರಿಯ ಪೀತಾಂಬರ ಉಡಿಸಿ ಸರ್ವಾಭರಣ ಹರಿಗೆ ಶೃಂಗರಿಸಿಪ್ಪ ಪರಿಯ ವರ್ಣಿಸಲಳವೆ 5 ಶಿರದಲಿ ಪೊಳೆವ ಕಿರೀಟ | ಕ ಸ್ತೂರಿ ತಿಲಕವು ಸುಲಲಾಟ | ಸುರ ನರರ ಪಾಲಿಪ ವಾರೆ ನೋಟ | ಕರ್ಣದಿ ಕುಂಡಲ ಮಾಟ | ಆಹ ವರ ಸಂಪಿಗೆಯ ಪೋಲ್ವ ನಾಸಿಕದ ಕದಪುಗಳ್ ಮೆರೆಯೆ ಕನ್ನಡಿಯಂತೆ ಮುಗುಳು ನಗೆಯ ಚೆಲ್ವ 6 ಸಿರಿವತ್ಸ ಕೌಸ್ತುಭಹಾರ | ಕಂಠ ಕರಶಂಖ ಚಕ್ರವಪಾರ | ಸುರ ನರರಿಗಭಯ ತೋರ್ಪಧೀರ | ಕರ ದ್ವರವ ಕೊಡುವಂಥ ಉದಾರ | ಆಹ ತರತರದ ಪುಷ್ಪಗಳ್ ನವರತ್ನ ತುಳಸಿಯ ಮೆರೆವೊ ಹಾರಗಳನು ಧರಿಸಿರ್ಪ ಗಂಭೀರ 7 ವಕ್ಷಸ್ಥಳದಲ್ಲಿ ಲಕುಮಿ | ಹರಿ ಅವನಿ | ಜಗ ರಕ್ಷಿಪ ಮಮಕುಲಸ್ವಾಮಿ | ಸರ್ವ ಸಾಕ್ಷಿಯಾಗಿದ್ದು ತಾ ಪ್ರೇಮಿ | ಆಹ ಪಕ್ಷಿವಾಹನ ಸುರಾಧ್ಯಕ್ಷ ಖಳ ಶಿಕ್ಷ ಪಕ್ಷವಹಿಸಿ ಸುರರ ರಕ್ಷಿಪ ಸರ್ವದ 8 ನಡುವಿನ ನಾಭಿ ವಡ್ಯಾಣ | ಮೇಲೆ ಕುಂದಣ | ನೆರೆ ಪಿಡಿದುಟ್ಟ ಪೀತಾಂಬ್ರವರ್ಣ | ಕಾ ಲ್ಕಡಗ ರುಳಿಯು ಗೆಜ್ಜೆ ಪೂರ್ಣ | ಆಹ ಮಡದಿಯರುಭಯದಿ ಪರಿಶೋಭಿಸುತಿರೆ ಪಾದ ದೃಢಭಕ್ತರನೆ ಪೊರೆವ 9 ನೋಟಕತಿ ಚಲುವ ಗಂಭೀರ | ಭಕ್ತ ಕೂಟದಿ ಮೆರೆಯುತಪಾರ | ಉತ್ಸ ಸಾರ | ಭೋಕ್ತ ಸಾಟಿರಹಿತ ಬರುವ ಧೀರ | ಆಹ ಕೋಟಿದೇವತೆಗಳ ನೋಟದಿಂ ಪೊರೆಯುವ ದಾಟಿಸುವ ಭವನಾಟಕಧರದೇವ 10 ಮಚ್ಛಾದ್ಯನೇಕ ಅವತಾರ | ಬಹು ಇಚ್ಛೆಯಿಂದಲಿ ಭಜಿಸುವರ | ಕಾಯ್ವ ಮೆಚ್ಚುತ ಮನದಲಿ ನಾರ | ಸಿಂಹ ಸ್ವೇಚ್ಛೆÉ್ಛಯಿಂ ಮೆರೆವ ಜಗತ್ಸಾರ | ಆಹ ತುಚ್ಛಕರು ವಸನ ಬಿಚ್ಚಿ ಸೆಳೆಯುತಿರೆ ಇಚ್ಛೆಯರಿತು ಲಲನೆ ರಕ್ಷಿಸೆನಲು ಪೊರೆದ 11 ಎಲ್ಲೆಲ್ಲಿ ನೋಡಲು ಭಕ್ತ | ಜನ ರಲ್ಲಲ್ಲಿ ನೆರೆಯುತ ಮುಕ್ತಾ | ಧೀಶ ನಲ್ಲದಿನ್ನಿಲ್ಲೆಂದು ಸ್ತುತಿಸುತ್ತ | ಶ್ರೀಶ ಇಲ್ಲೆ ಬಾರೆಂದು ಕರೆಯುತ್ತ | ಆಹ ಸೊಲ್ಲು ಲಾಲಿಸೊ ಎನಲು ಬಲ್ಲಿದ ಭಕ್ತರ ಸೊಲ್ಲಿಗೆ ಒಲಿಯುವ 12 ಬುತ್ತಿ ಪೊಂಗಲು ಮಾರುವರು | ಜನ ರರ್ಥಿಯಿಂದದನು ಕೊಂಬುವರು | ಗೀತ ನೃತ್ಯ ವಾದ್ಯಗಳಿಂ ಕುಣಿಯುವರು | ಅನ್ನ ಅರ್ಥಿಯಿಂ ದಾನ ಮಾಡುವರು | ಆಹ ಎತ್ತ ನೋಡಲು ಮನಕತ್ಯಂತ ಆನಂದ ನಿತ್ಯ ಉತ್ಸವಗಳು ಸತ್ಯಾತ್ಮ ಕೈಗೊಂಬ 13 ಇಂತು ಮೆರೆವೊ ಕ್ಷೇತ್ರ ಘನವು | ನೋಡಿ ನಿಂತು ವರ್ಣಿಸಲಸದಲವು | ಜಗ ದಂತರಾತ್ಮಕನ ವೈಭವವು | ಗುರು ಅಂತರ್ಯಾಮಿ ಶ್ರೀನಿಧಿಯು | ಆಹ ಇಂತು ಬ್ರಹ್ಮೋತ್ಸವ ನಿಂತು ರಥದಿ ಬರುವ ಕಂತುಪಿತ ಶ್ರೀ ಭೂಮಿಕಾಂತೇರ ಒಡಗೂಡಿ14 ಶ್ರೀಪತಿ ಜಲದೊಳಾಡೀದ | ಕೂರ್ಮ ರೂಪದಿಂ ಗಿರಿಯನೆತ್ತಿದ | ಬಹು ಪಾಪಿ ಕನಕಾಕ್ಷನ ಕೊಂದ | ನೃಹರಿ ರೂಪ ವಾಮನ ಭೃಗುಜನಾದ | ಆಹ ಚಾಪಖಂಡನ ಕೃಷ್ಣಚರಿಸಿ ಬತ್ತಲೆ ಕಲ್ಕಿ ಗೋಪಾಲಕೃಷ್ಣವಿಠ್ಠಲನ ಮಹಾಕ್ಷೇತ್ರ15
--------------
ಅಂಬಾಬಾಯಿ
(ಇ) ಶ್ರೀಕೃಷ್ಣಲೀಲೆ ಅಂಗಜನೈಯನು ಗೋಕುಲ ಪೋಗುವಾಗಕಂಗಳ್ಹಬ್ಬದ ಉಬ್ಬಿನೇನ ಬಣ್ಣಿಪೆನಾ ಪ ಎಳೆಗರುಗಳ ಝುಂಗುಗಳನ್ನು ಮತ್ತೆಮಲೆವ ಗೂಳಿಗಳ ಗೂರಾಟವನ್ನುಒಲಿವಾವಿನ ಕೆಚ್ಚಲು ಸಂದಣಿಯಲ್ಲಿನಲಿವ ಮರಿಗರುಗಳ ನೋಡುತಲಿ 1 ಆಡಿಸುವ ಮೊಗ ಬದಿಗಳ ತುರಿಸುತ್ತಝಾಡಿಸುವಾಕಾರ ಬೆದರು ನೋಟಏಡಿಸುವ ಹುಬ್ಬಿನ ಗೋವಳರಕೋಡಂಗಿ ಆಟಕ್ಕೆ ಕುಲುಕಿ ನಗುತ 2 ಒಂದು ಹುಬ್ಬೊಂದು ಕಿವಿಯನಲಗಿಸುತಮುಂದಣ ಚಂಡಿಕೆ ತಾಳದ ಗತಿಗೆಚಂದದಿ ಕುಣಿಸುವ ಭೃಂಗಿ ಆಟಕೆ ಗೋಪಸಂದೋಹಕೆ ಮೆಚ್ಚಿ ಬಲಗೆ ತೋರಿಸುತ 3 ಕೆಲರು ಕೋಗಿಲೆಯಂತೆ ಕೆಲರು ನವಿಲಿನಂತೆಕೆಲರು ಹಂಸದಂತೆ ಸಾರಸದಂತೆಗಳರವದಿಂ ಗೋಪರು ಕೂಗೆ ಋತುಗಳುನಳಿನಾಕ್ಷನ ಸೇವೆಗೆ ಕೂಡಿದಂತಿರೆ 4 ಒಂದೊಂದು ತಾಳಕ್ಕೆ ಒಂದೊಂದು ಪದಗತಿಒಂದೊಂದು ರಸಕ್ಕೆ ಮತ್ತೊಂದು ಕೈಗತಿಒಂದೊಂದು ಭಾವಕ್ಕೆ ಒಂದೊಂದು ನೇತ್ರವಾನಂದದಿ ಗೋವರ್ಧನ ನಾಟ್ಯವಾಡೆ 5 ಕಿನ್ನರ ಗಾನ ಗೋಪರ ಗೀತ ದೇವಕನ್ಯೇರ ನಾಟ್ಯ ಗೋಪರನಾಟ್ಯಚೆನ್ನಾರ ಕುಣಿಸುವ ಚಿಣ್ಣರ ಕಣ್ಣುಸನ್ನೆ ಝೇಂಕರಿಸುವ ಗೋಪರ ನೋಡುತ6 ನಾರಂದನ ವೀಣೆ ಗೋಪರ ಕಿನ್ನರಿಗೀರ್ವಾಣದುಂದುಭಿ ಗೋಪರ ಮುರಜಆ ರಂಭೆಯರಾಟ ಗೋಪರ ತಾಂಡವಕ್ಷೀರೋದಕದಂತೆ ಕಲೆಸಿ ಬೆರೆಸಿರೆ 7 ರಸತುಂಬಿ ತುಳುಕುವ ಕೊಳಲ ರವಂಗಳುಹಸುಗಳ ಕೊರಳ ಘಂಟೆಗಳ ನಿನಾದಎಸೆವೆಳಗಂದಿಯ ಅಂಬಾರವಂಗಳು ಪಸರಿಸೆ ಗೋವಳೆಯರು ಸಡಗರಿಸಿ8 ಜಂಗುಳಿ ಗತಿಯರ ಮುಖ ಕನ್ನಡಿ ಊರೋ-ಜಂಗಳೆ ಮಂಗಳ ಪೂರ್ಣ ಕುಂಭಗಳುಕಂಗಳೆ ನೀಲೋತ್ಪಲಂಗಳು ಕರಗಳೆತುಂಗ ಪಲ್ಲವ ತೋರಣದಂತೆಸೆಯೆ 9 ಚೆಂದದ ನೋಟವು ಮಂಗಳಾರತಿಯಾಗೆಮಂದಹಾಸವು ಪೂಮಳೆಯಾಗೆ ಆನಂದ ಪುಳಕಗÀಳೆ ಕೋಡಿಯಾಗೆ ಗೋಪವೃಂದವಿದಿರುಗೊಳ್ಳ ಬಂದರೊಲವಿಲಿ 10 ಕಂಗಳ ಕುಡಿ ನೋಟಂಗಳಿÀಂ ಸೆಳೆದುರಂಗನ ತಮ್ಮಂತರಂಗದೊಳಿಟ್ಟುಹಿಂಗದಾಲಂಗಿಸಿ ಸುಖಾಂಬುಧಿಯ ತ-ರಂಗದಿ ಗೋಪಾಂಗನೆಯರು ಮುಳುಗಿ11 ಗೋಪಿಜನರು ರಂಗಗೆ ಮರುಳಾಗಿರೆನೂಪುರ ಮರಕತ ಪ್ರಭೆ ಸಾರಳೆಯಾಗೆಆ ಪದ್ಮರಾಗವೆ ಕೆಂಪು ಕಾರಳೆಯಾಗೆಶ್ರೀಪದನಖ ಕಾಂತಿ ರಂಗವಲ್ಲಿಯಾಗೆ 12 ಬೃಂದಾರಕರು ಪೂಮಳೆಗರೆಯಲು ಬೇಗಬಂದಾಳಿಗಳು ಬೃಂದಾವನದಲ್ಲಿ ಮಕರಂದವನುಂಡು ಸ್ವರ್ಗವ ಹಳಿದಿಳೆಗೆಬಂದಳಿಂದಿರೆಯೆಂಬ ಸಂಭ್ರಮದಿಂದ 13 ತುರುಗಾತಿಯರ ನೋಟದ ಬೇಟಂಗಳುಹರಿಮುಖೇಂದವಿನಲ್ಲಿ ಚಕೋರಗಳುಹರಿನಾಭಿಸರೋವರದಲ್ಲಿ ಮೀನ್ಗಳುಹರಿಪಾದಪದುಮದಿ ತುಂಬಿಗಳಾಗೆ14 ಇತ್ತ ಗೋವಳರಾಟಕೆ ತಲೆದೂಗುತಅತ್ತ ದೇವತೆಗಳ ಸ್ತುತಿ ಕೇಳುತ್ತಇತ್ತ ಗೋವಳೆಯರ ನಗಿಸುತ್ತ ನಗುತ್ತಅತ್ತಿತ್ತ ಮುನಿಗಳ ಸ್ತುತಿ ಕೇಳುತ್ತ 15 ಕಂಜಾಸನ ನಮಿಸಲು ಕೈಹಿಡಿದೆತ್ತಿ ಮೃ-ತÀ್ಯುಂಜಯ ವಂದಿಸೆ ಬಾ ಯೆನ್ನುತ್ತಅಂಜಲಿ ಪುಂಜದ ಇಂದ್ರಾದಿಗಳನ್ನುಕಂಜನೇತ್ರಗಳ ಸನ್ನೆಯಲಿ ಮನ್ನಿಸುತ16 ಸಿರಿ ವನಿತೆಗೆ ವನಮಾಲೆ ಉಯ್ಯಾಲೆಮೊರೆವಳಿಕುಲಗಳ ರವ ಸಂಗೀತ ವರ ಮುತ್ತಿನ ಹಾರ ಚಾಮರ ಶ್ರೀಕೃಷ್ಣ-ನುರಮಧ್ಯವೆ ಮಂಟಪವಾಗೆಸೆಯೆ 17
--------------
ವ್ಯಾಸರಾಯರು
(ಕಾರ್ಕಳದ ವೆಂಕಟೇಶನನ್ನು ನೆನೆದು) ಶ್ರೀನಿವಾಸ ನಮೋ ನಮೋ ಶ್ರುತಿಗಾನಲೋಲ ಪಾಹಿ ಪ. ವಿಪಿನ ನ- ವೀನದವಾನಲ ದೀನೋದ್ಧಾರ ದಯಾನಿಧೆ ಸುಂದರ ಅ.ಪ. ಶೇಷಗಿರಿಯಿಂದ ಸುಜನಗಳ ಘೋಷದಿ ನಂಬಿದ ದಾಸಜನರಭಿಲಾಷೆಯನು ಸಂತೋಷದಿ ಕೊಡಲು- ಲ್ಲಾಸದಿಂದ ಪರೇಶ ನಾನಾ ವಿಲಾಸದಿ ನೆಲಸುತ ಕಾಸುವೀಸದ ಭಾಷೆಯನು ದಿಗ್ದೇಶದಿಂದ ಮಹಾಸುಕೀರ್ತಿಯ ರಾಸಿಗಳಿಸಿ ಜಗದೀಶ ಪರೇಶ ಮ- ಹೇಶವಿನುತ ನಿರ್ದೋಷ ಜಗನ್ಮಯ 1 ಉತ್ತಮಾಂಗಸುರತ್ನಖಚಿತಕಿರೀಟದ ನಿಜಪದ- ಭಕ್ತಜನಮನವೃತ್ತಿ ಒಲಿಸುವ ಕೂಟದ ಕರುಣೋ- ತ್ಪತ್ತಿ ಸರಸಿಜನೇತ್ರಯುಗ್ಮದ ನೋಟದ ಭೂಷಣ- ಮೊತ್ತದಿಂದಾದಿತ್ಯಕೋಟಿಯನ್ನೆತ್ತಿಂದತೆಸೆವುತ್ತ ಮಂಗಲ- ಮೂರ್ತಿಧರಿಸಿ ಜನರರ್ತಿಯ ಸಲಿಸುವ ಚಿತ್ತಜಜನಕ ಸರ್ವೋತ್ತಮ ನಿರುಪಮ 2 ಪಂಕಜಾಂಬಕ ಶಂಕರಾಪ್ತ ಶುಭಾಕರ ಶ್ರೀವ- ತ್ಸಾಂಕ ಮುಕ್ತಾಲಂಕೃತ ಕರುಣಾಕರ ಭಕ್ತಾ- ತಂಕರಹಿತ ನಿಶ್ಯಂಕ ನಿತ್ಯನಿರಾಕರ ಪ್ರಭು ವೆಂಕಟೇಶ ನಿರಾಮಯಾಮರಸಂಕುಲಾರ್ಚಿತ ಶಂಖಚಕ್ರಗ- ದಾಂಕಿತ ದನುಜಭಯಂಕರ ವರ ನಿರ- ಹಂಕರ ನಿಜದ ನಿಷ್ಕಳಂಕಚರಿತ್ರ 3 ಮಂದರಾಧರ ಮಾಪತೇ ಮುಖಚಂದಿರ ಮೌನಿ ವೃಂದವಂದ್ಯ ಸುರೇಂದ್ರಪೂಜ್ಯ ಧುರಂಧರ ಮಹಾ- ಕಂಬುಕಂಧರ ಶೋಭಿಪ ಕುಂದರದನ ಕುಚೇಲಪಾಲಾರವಿಂದನಾಭ ಪುರಂದರಾರ್ಚಿತ ಮಂದಹಾಸ ಮುಚುಕುಂದವರದ ಗೋ- ವಿಂದ ಸಚ್ಚಿದಾನಂದ ಉಪೇಂದ್ರ 4 ಮೂರು ಲೋಕೋದ್ಧಾರಿ ಘನಗಂಭೀರನೆ ವೆಂಕಟ ಧೀರಕಾರ್ಕಳಸಾರನಗರಾಧಿಕಾರನೆ ಭೂಸುರ- ಭೂರಿವೇದಪುರಾಣಘೋಷಾದಿಹಾರನೆ ಸಂತತ ಚಾರು ಗೌಡಸಾರಸ್ವತಶೃಂಗಾರಋಗ್ವೇದಾಖ್ಯ ಉತ್ತಮ ದಾರುಣೀಸುರರಿಂದನವರತ ಮಂಗ- ಲಾರತಿಗೊಂಬ ಲಕ್ಷ್ಮೀನಾರಾಯಣ ಹರಿ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಭಗವದ್ಭಕ್ತ ಸಂಮೋಹ ಪ್ರಾರ್ಥನೆ) ಗಜಮುಖನ ಪ್ರಪಿತಾಮಹನಹಿಮನ ಗಜೆಯರಸನ ಪಿತನ ಪೆತ್ತನ ಸಾರಥಿ ಪಾದ ಪಂಕಜವ ಭಜಿಸಿ ಭಾರತಿವರನ ನಮಿಸುವೆ ಅಜಭವಾದಿ ಗುರೂತ್ತಮರ ನಿಜ ವೃಜಿನಪಂಕ ನಿವೃತ್ತಿಗೊಳಿಸುವದೆಂದು ವಂದಿಸುವೆ 1 ಅವ್ಯವಹಿತಾಸದೃಶ ಭಕ್ತಿಯ ಸವ್ಯಸಾಚಿ ಸಹಾಯ ಸಲಿಸಾ ದಿವ್ಯ ಪದವಿಯ ಪಡೆವೆನೆಂದುಗತವ್ಯಳೀಕದಲಿ ಕಾವ್ಯ ವ್ಯಾಕರಣಗಳಿಂದ ವಹಿಸಿದ ಸೇವ್ಯ ಗುರು ಲಾ- ತವ್ಯ ಮುನಿವರರಂಘ್ರಿಕಮಲವ ನುತಿಸಿ ನಮಿಸುವೆನು 2 ಪುಂಡರೀಕ ದಲಾಯತಾಕ್ಷನೆ ಹಿಂಡು ದೈವದ ಗಂಡನೆಂದತಿ ಚಂಡ ಮೈಗಳ ಖಂಡಿಸಿದ ಯತಿಮಂಡಲೇಶ್ವರನ ಪಾಂಡ್ಯದೇಶದೊಳವತರಿಸಿದಾ ಖಂಡಲಾತ್ಮನ ನಮಿಪೆ ಮಮ ಹೃ- ನ್ಮಂಡಲದಿ ಪಾಲಿಸು ಸುಧಾರಸವುಂಡು ನಲಿವಂತೆ 3 ಮೋದತೀರ್ಥ ಮಹಾಬ್ಧಿಯನು ಕಡೆ- ದಾದಿಯಲಿ ನ್ಯಾಯಾಮೃತವ ತೆಗೆ- ದಾದರದಿ ಸಜ್ಜನರಿಗುಣಿಸಿದ ಗಾಢಮತಿಯುತನ ಮಾಧವನ ಗುಣತರ್ಕ ತಾಂಡವ ವೋದಿಸುತ ಚಂದ್ರಿಕೆಯ ತೋರಿದ ಬೋಧಕರ ಪ್ರಲ್ಹಾದಮುನಿ ಕರುಣದಲಿ ಸಲಹೆನ್ನ 4 ಮಂಗಳಾಂಬುತರಂಗ ತುಂಗಾ ಸಂಗಿ ಮಂತ್ರಾಲಯದಿ ನಿಂದು ಕು ರಂಗ ವೈರಿಯ ಪೂರ್ವ ಕರುಣಾಲಿಂಗನೋತ್ಸುಕನ ಪಂಗು ಬಧಿರಾದ್ಯಂಗ ಹೀನರ ಪಾಂಗ ನೋಟದಿ ಪಾಲಿಸುವ ಯತಿ ಪುಂಗವಾರ್ಜಿತ ರಾಘವೇಂದ್ರರ ನಮಿಪೆನನವರತ 5 ಜೋಲಿಸುವ ಕಂಠದಲಿ ತುಳಸೀ ಮಾಲೆಯನು ಕರಯುಗದಿ ವೀಣಾ ತಾಳಗಳ ಬಾರಿಸುತ ಸರ್ವತ್ರದಲಿ ಸಂಚರಿಸಿ ಶ್ರೀಲಲಾಮನ ಲೀಲೆಗಳಿಗನು- ಕೂಲರಾದ ಸುರರ್ಷಿ ನಾರದ ರಾಲಯಸಿ ತಪ್ಪುಗಳ ತಿದ್ದುವುದೆಂದು ನಮಿಸುವೆನು 6 ಸತ್ಯಭಾಮಾಕಾಂತನಿದಿರಲಿ ನಿತ್ಯ ನಡೆಸುವನೆಂಬ ಸೇವೆಗೆ ಒತ್ತಿಬಹ ವಿಘ್ನಗಳ ದೂರದಿ ಕಿತ್ತು ಬಿಸುಟುವರ ಹತ್ತು ದೆಶೆಯಲಿ ನಿಂತು ರಕ್ಷಿಪ ಕೃತ್ತಿವಾಸ ಸುರೇಶಮುಖ ದೇ- ವೋತ್ತುಮರ ನಾ ನಮಿಪೆ ತತ್ವದ ಭೃತ್ಯನಹುದೆಂದು 7 ಪಾವಮಾನ ಮತೀಯ ವೈಷ್ಣವ- ರಾವಳಿಗೆ ಶರಣೆಂಬೆ ನಿಮ್ಮ ಕೃ- ಪಾವಲಂಬನವಿತ್ತು ಕರುಣವ ಶುದ್ಧಿಕರಿಸುತಲಿ ದೇವ ದೇವವರೇಣ್ಯ ಭಕ್ತರ ಕಾವ ಶೇಷಗಿರೀಂದ್ರನಾಥನ ಸೇವಿಸುವ ಸುಖವಿತ್ತು ಸುಲಭದಿ ಸಲುಹಬೇಕೆಂದು 8
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ರಾಘವೇಂದ್ರ ಪ್ರಾರ್ಥನೆ) ರಾಘವೇಂದ್ರ ತೀರ್ಥ ಬೋಧಿಸು ಭಾಗವತಗತಾರ್ಥ ರಾಘವ ಪಾದಾಂಬುಜ ಲಬ್ದಾರ್ಥ ಸರಾಗದಿ ಪಾಲಿಸು ನಿಜಪುರುಷಾರ್ಥ ಪ. ತುಂಗಾ ತಟವಾಸಾ ರಾಘವಶಿಂಗನ ನಿಜದಾಸ ಪಂಗುಬಧಿರ ಮುಖ್ಯಾಂಗ ಹೀನರ- ನಪಾಂಗನೋಟದಿ ಶುಭಾಂಗರ ಮಾಡಿಪ 1 ಪಾದೋದಕ ಸೇವಾರತರಿಗಗಾಧ ಫಳಗಳೀವ ಬೂದಿ ಮುಖದ ದುರ್ವಾದಿಗಳೋಡಿಸಿ ಸಾಧುಜನರಿಗಾಲ್ಹಾದ ಬಡಿಸುತಿಹ 2 ಸುಜನ ಶಿರೋಮಣಿಯೆ ವಿಜಯದನೆನಿಸುವ ದ್ವಿಜಕುಲನಂದನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಧ್ಯಾಯ ಒಂಬತ್ತು ಶ್ರೀ ವಾಣೀಭಾರತೀ ಗೌರೀ ಶಚೀಭಿಃಸ್ನಾಪಿತೋವತಾತ್| ಕುಚೀರಾಲ್ಲಬ್ಧ ವಿತ್ತೋರ್ಚನ್ ವಿಪ್ರಾನ್ ಲಕ್ಷ್ಮೀಪ್ರಿಯಂಶರಃ|| ವಚನ ಪರಮೇಷ್ಠಿ ಮಾಡಿದನು ಸರಸ್ವತಿಯು ಮೊದಲಾದ ಶೃಂಗರಿಸಿಕೊಂಡರು ತಾವು ವರನಾಗಿ ಶೋಭಿಸಿದ ವರ ಹರುಷದಲಿ ನಾಲ್ಕು ವರಕಲಶಗಳನಿಟ್ಟು ವರ ರತ್ನ ಸುರಗಿಯನು ಸುತ್ತಿ ಶ್ರೀಹರಿಗೆ ಸುರರೊಡೆಯ ಬೇಗಿನ್ನು ಮಜ್ಜನ ಮಾಡು ಹರಿಯೆ ನೀನು 1 ರಾಗ:ನೀಲಾಂಬರಿ ಆದಿತಾಳ ಕೇಳೀ ಕಂದಗಂದನು ಶೋಕ ದಲಿ ನೊಂದು ಮನದಲಿ1 ಹಿರಿಯರೆಂಬವರಾರೆನಗೆ ಹರುಸವರಾರಿಲ್ಲ ಅಕ್ಕರವಿಲ್ಲಾ 2 ಅಕ್ಕರದಿಂದ ಪೂಸೆ ಹಿಕ್ಕಿ ಎರೆಯುವದಕ್ಕೆ ಅಕ್ಕ ತಂಗಿಯರಾರಿಲ್ಲ ಅಕ್ಕರವಿಲ್ಲಾ 3 ಬಿಡದ ಕರ್ಮಕ್ಕೆ ಮಾಡುವದು ಬಿಡುವದೆ ಇದು 4 ತಂದೆ ತಾಯಿಗಳಿಲ್ಲದೆ ನೊಂದು ಬಳಲಿದೆ 5 ವಚನ ಎಂದಿಗಾದರು ನಿನಗೆ ತಂದೆ ಬರುವರು ಮಂದಿ ಚಂದೇನೊ ನಿನಗೆ ಇದು ಎಂದಿಗಗಲದೆ ನಿನ್ನ ಸಂದೇಹವ್ಯಾಕೆ ನಗುತ ಮುಂದಿರುವ ತನ್ನ ನೋಟದಿಂದ ನೋಡಿದನು 1 ತಿಳಿದು ತರಸಿದಳು ತೈಲವನು ಹರುಷದಲೆದ್ದು ತಿಳಿದು ತ್ವರದಿ ವರರತ್ನ ಪೀಠದಲ್ಲಿ ಹರಿಣಾಕ್ಷಿ ತಾ ಬಂದು ಸರಸಾದಸಂಪಿಗೆಯ ಹರಸಿದಳು ಹೀಗೆ2 ಮಂಡಿತನೆ ಭಕ್ತರಿಗುದ್ದಂಡ ವರ ಸಂತತಿ ಉದ್ದಂಡ ನಾಯಕನೆ ಭೂಮಂಡ ಕೂಡಿಕೊಂಡು ನಿನ್ನ ಈ ಲೇಪಿಸಿದಳಾ ಜಗದ್ವಾಪಕನ ಎರೆವಳು ತಾಪಿತೋ ದಕÀದಿ ಸಂತಾಪ ಹಾರಕಳು 3 ಗಂಧಪರಿಮಳದಿಂದ ಚಂದಾಗಿ ತಿರೆ ತಂದಳಾರತಿದೇವಿ ಚಂದದಾರತಿ ಒಡಗೂಡಿ ಮುಕುಂದನ ಫಣಿಗೆ ಆರತಿ ಬೆಳಗಿ ಮುಂದೆ ಮತ್ತೆರ ಸುಂದರಾಂಗಿಯು ತನ್ನ ಹರಿವಾಣದ್ಹಿಂದಿಟ್ಟು ಎತ್ತಿ ಕಲಶವೃಂದದಿಂದೋ ಕುಳಿಯ ಚಂದಾಗಿ ಎರೆವಳಾನಂದದಲ್ಲಿ ಸುಂದರಿಯರಿಂದ ಕೂಡಿ 4 ಮೈವರಿಸಿ ಸುತ್ತ ವಸ್ತ್ರ ಪೀತಾಂಬರವ ಬಹುಭಕ್ತಿಯಲಿ ಗಿರಿಜೆ ಸುತ್ತ ಕೇಶಗಳೆಲ್ಲ ತನ್ನ ಪುತ್ರಿ ಭಾಗೀ ಮೆಟ್ಟಿ ಪತ್ನಿಯಳ ಉತ್ತಮಾಸನದಲ್ಲಿ ಹತ್ತಿಕುಳಿತ5 ರಾಗ:ನೀಲಾಂಬರಿ ಆದಿತಾಳ ಎಲ್ಲರು ಬಂದರು ಬಹು ಉಲ್ಹಾಸದಿಂದಲ್ಲೆ ಅವನ ಚಲ್ವಿಕೆಯ ನೋಡುತಲೆ ಅಲ್ಲೆ ಕುಳಿತರು 1 ಚಂದದ ಚಾಮರಗಳ ಪಿಡಿದರು 2 ಕೊಟ್ಟಳು ವಿಚಿತ್ರದ ಕನ್ನಡಿ3 ಚೆನ್ನಾಗಿ ಹಚ್ಚಿಕೊಂಡ ಚನ್ನಿಗ ತಾನು 4 ಮುದದಿಂದ್ಹೀಗೆಂದಳು ಸೊಸೆಗೆ ಮುದು ಮಗನಿಗೆ ಕುಂಕುಮ ಹಚ್ಚು ಮದಗಜಗಮನೆ 5 ಫಣಿಗೆ ತಿದ್ದಿ ಕುಂಕುಮ ವನ್ನಿಟ್ಟಳು ಮುದ್ದು ಸುರಿಯುತ 6 ಮುಂದಲ್ಲೆ ಕುಬೇರಕೊಟ್ಟ ಚಂದದಾಭರಣಗಳಿಟ್ಟು ಸಂಧ್ಯಾನು- ಷ್ಠಾನವ ವಿಧಿಯಿಂದ ಮಾಡಿದ 7 ಪುಣ್ಯಾಹ ವಾಚನಕೆ ಕುಳಿತಾ ಪುಣ್ಯಾತ್ಮನು ತಾನು 8 ಒಡಗೂಡಿ ಕುಳಿತಳಲ್ಲೆ ಸಡಗರದಿಂದ 9 ಮತ್ತಲ್ಲೆ ವಶಿಷ್ಠ ಮುನಿಯು ಮುತ್ತಿನ ರಾಸಿಗಳಿಂದ ಉತ್ತಮ- ಗದ್ದಿಗೆಯ ಬರೆದ ಕ್ಲಪ್ತದಿಂದಲಿ 10 ವಿಧಿಯಿಂದ ಮಾಡಿಸಿದನÀು ವಿಧಿಸುತ ತಾನು11 ಸಂಭ್ರಮದಿಂದಲ್ಲೆ ಕೊಟ್ಟ ತಾ ಬ್ರಹ್ಮದೇವ 12 ದೇವಾಧಿದೇವಗೆ ಕೊಟ್ಟರಾ ವೇಳೆಯಲ್ಲಿ 13 ಮುತ್ತಿನ ಅಕ್ಷತೆ ಇಟ್ಟು ಮುತ್ತೈದೆರಲ್ಲೆ 14 ನುಡಿದ ಕುಲದೇವಿ ಯಾವಕೆ ನಿನಗೆ ಶ್ರೀನಾಥಪೇಳೋ 15 ಹಲವು ಕಾಲದಲ್ಲಿ ಎನ್ನ ಕುಲಪುರೋಹಿತನಾದ ಮೇಲೆ ಕುಲದೇವಿ ಯಾವಕೆ ಅರಿಯೆ ಮುನಿನಾಥ ನೀನು 16 ಕುಲಪುರೋಹಿತ ನೆನಿಸುವೆನೊ ಶ್ರೀನಾಥನಿನಗೆ17 ಕುಲದೇವಿ ಎನಗೆ ಉಂಟು ಮುನಿನಾಥ ಕೇಳೊ 18 ಯಾವರೂಪ ದಿಂದೆಸೆವಳು ಶ್ರೀನಾಥ ಪೇಳೊ19 ವೃಕ್ಷರೂಪದಿಂದ ಅಮಿತಾದ ಫಲಕೊಡುವಳಯ್ಯ ಮುನಿನಾಥ ಕೇಳೊ20 ವೃಕ್ಷ ಎಲ್ಲಿ ಇರು ತಿಹುದು ಪೇಳೋ ಶ್ರೀನಾಥ ನೀನು 21 ಇರುತಿಹುದು ವೃಕ್ಷ ಮುನಿನಾಥ ಕೇಳೊ 22 ಸಹಿತ ತ್ವರದಿ ನಡೆದ ಕುಲದೇವಿಯ ಕರೆವುದಕೆ 23 ವಚನ ಕ್ರಮದಿಂದ ಪೂಜಿಸುತ ದಯಮಾಡು ನಮಗೆ ಕುಲ ಅಮಿತ ಕಾರ್ಯವನು ಕ್ರಮ 'ಶಮಿಶಮಮೇ' ಎಂತೆಂಬ ಮಾಡಿ ಕುಲದೇವತೆಯಾ ಮಾಡಿ ನುಡಿದವು ಆಗ ಸೂರಾಡುತಲೆ ಬಂದ ಗಾಢನೆ ಸ್ನೇಹ ಸಂರೂಢನಾಗಿ 1 ವರಹದೇವನೆ ಎನ್ನವರ ಧರಣಿದೇವಿಯ ಕೂಡಿ ಸರಸಾಗಿ ಎಲ್ಲರಿಗೆ ಹರಿಯೆ ನೀನು ಹರಿ ಅಂದಮಾತಿಗೆ ಆ ಹಿರಿಯಳೆಂತೆಂದು ತಿಳಿ ಎನ್ನ ಇರುವೆ ಕೃಷಿ ಕಾರ್ಯದಲಿ ನಿರತನಾಗಿ 2 ಎಲ್ಲ ಈ ಪರಿಕೇಳಿ ಫುಲ್ಲನಾಭನು ಅವನ ಒಲಿದಾಜ್ಞೆಯ ಕೊಂಡು ಉಲ್ಲಾಸಬಟ್ಟು ಮನದಲ್ಲಿ ಕುಲದೇವತೆಯ ಅಲ್ಲಿ ಸ್ಥಾಪನೆ ಮಾಡಿ ನಿಲ್ಲದಲೆ ಸ್ವಸ್ಥಾನದಲಿ ಬರುತಾ ರಮಾ ವಲ್ಲಭನು ನುಡಿದನಾಗಲೆ ಈ ಪರಿಯು ಎಲ್ಲರ್ಹೊರಡಿರಿ ಇನ್ನು ಸುಳ್ಳ್ಯಾಕೆ ತಡ ದೂರದಲ್ಲೆ ಇರುತಿಹದು ಬಲ್ಲಿ ದಾಕಾಶಪುರ ಇಲ್ಲಿದ್ದ ಬಾಲಕರು ಎಲ್ಲ ವೃದ್ಧರು ಮತ್ತೆ ಮೆಲ್ಲಗ್ಹೋಗಲಿ ಮುಂದೆ ನಿಲ್ಲದಲೆ ಸಾಗಿ3 ತನ್ನ ತಂದೆಯ ವಚನವನ್ನು ಕೇಳೀಪರೀ ಮುನ್ನ ನುಡಿ ದನು ಬ್ರಹ್ಮ ಪುಣ್ಯಪುರುಷನೆ ಕೇಳು ಪುಣ್ಯಾಹ ವಾಚನವ ಚೆನ್ನಾಗಿ ನೀ ಮಾಡಿ, ಮುನ್ನ ಆಕುಲದೇವಿಯನ್ನು ಸ್ಥಾಪನೆಮಾಡಿ, ಉಣ್ಣದಲೆ ಪೋಗುವುದುಚಿತವಲ್ಲಾ ಸಣ್ಣ ಬಾಲರು ಮತ್ತೆ ಹೆಣ್ಣು ಮಕ್ಕಳು ದೇಹಹಣ್ಣಾಗಿ ಇರುವ ಬಹು ಪುಣ್ಯ ಶೀಲರು ಮತ್ತೆ ನೀನ್ನ ಕುಲ ಬಾಂಧವರು ಮಾನ್ಯ ಮುನಿಗಳು ಎಲ್ಲ ಉಣ್ಣದಲೆ ಹಸಿವೆಯಲ್ಲಿ ಬಣ್ಣಗೆಟ್ಟಿಹರು 4 ತನ್ನ ತನಯನ ವಚನವನ್ನು ಕೇಳೀ ಪರಿಯಮುನ್ನ ಶ್ರೀಹರಿನುಡಿದ ಎನ್ನ ಪುತ್ರನೆ ಕೇಳು ಎನ್ನ ಕಾರ್ಯಕೆ <ಈಔಓಖಿ ಜಿಚಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಮೂರು ಪದ ಸಾವಿರ ಬುಧರÀರನೆಲ್ಲ ಮೀರಿ ಪರಮೇಶ್ವರಗೆ ಹಾರ ಹಾಕುವೆನೆಂದು ಪಾರಿಜಾತದ ಕುಸುಮ ಪಾರ್ವತಿಯು ತಾತರಿಸಿ ಪೂರ್ವದಲಿ ಮಾಡಿದಳ ಪೂರ್ವ ಮಾಲೆಯ ಭಕ್ತಿಪೂರ್ವಕವಾಗಿ ಚಾರುತರವಾಗಿಹ ಅಲಂಕಾರಗಳ ನಿಟ್ಟು ಶೃಂಗಾರ ಭರಿತಳು ಆಗಿ ಪಾರಿಜಾತದ ಹೂವಿನ ಹಾರಕೈಯಲಿ ಪಿಡಿದು ಚಾರು ಸಖಿಯಲ್ಲಿ 1 ಚಂದ್ರವದನೆಯ ಬಹಳ ಛಂದಾದ ಮುಖನೋಡಿ ಚಂದ್ರಮನು ಇದುಕಾಂತಿ ನಂದು ಒಯ್ದಳು ಈಕೆ ಮುಂದಿವಳನೊಯ್ಯಬೇಕೆಂದು ಕುಚಗಳ ಕಂಡು ಇಂದ್ರ ತಾ ಯನ ನಾ ಗೇಂದ್ರನ ಶಿರವೆಂದ ಮುಂದದರ ಸೊಂಡೆ ಇದು ಯೆಂದು ಕರಗಳಿಗೆಂದಾ ಮಂದಗತಿ ಮತ್ತಾದರರಿಂದ ನಡಗಿಯ ಕಂಡು ಸುಂದರಿಯ ಆಹುಬ್ಬು ಕರಿದರ್ಪ ತಾ ಕಂಡು 2 ಎರಳೆ ನೋಟವ ಕಂಡು ಎರಳೆವಾಹನ ನುಡಿದ ಯರವಿಂದವಯವಕ್ಹಿಗ್ಗಿ ಹೊರಳು ವಳು ಯಂತೆಂದು ಕೊರಳವನು ಕಂಡು ಹರಿ ಕರದಲೊಪ್ಪುವಯೆನ್ನ ವರಪಾಂಚಜನ್ಯವಿದು ಸರಿಯೆಂದು ನುಡಿದಾ ಗುರುಳು ಗೂದಲದವಳ ಹೆರಳವನು ನೋಡಿಹರಿ ಇರುಳ ಮಲಗುವಯನ್ನ ಸರಳ ಹಾಸಿಗೆಯೆಂದು ಸುರರು ಎಲ್ಲರು ಪರಿ ಪರಿಯಿಂದ ನುಡಿದರನುಸರಿಸಿಯಿದರಂತೆ 3 ಪದ ಮುಂದೆ ಆ ಪಾರ್ವತಿ ಬಂದು ಕುಳಿತಳಲ್ಲೆ ಬಂದ ಶಿವನು ತಾ ಬಾಲಕನಾಗಿ 1 ಲೀಲೆಯಿಂದಲಿ ತೊಡೆಯ ಮೇಲೆ ಮಲಗಿದನಾಗ ಬಾಲೆ ಹೀಗೆಂದಳು ಎಲ್ಲರಿಗೆ 2 ಮುನ್ನೆತ್ತಿದವರಿಗ್ಹಾಕುವೆ ಮಾಲೆ 3 ಅಂದಮಾತನು ಕೇಳಿ ಇಂದ್ರ ಬಂದನು ಆಗ ಮುಂದೆ ಆ ಬಾಲನೆತ್ತುವೆನೆಂದು4 ಚನ್ನಿಗನಂತಾದ್ರೀಶನ ಹಿಂದಕೆ ಮಾಡಿ ಸಣ್ಣ ಬಾಲನ ತಾ ಮುಂದಕೆ ಕರೆದಾ 5 ಪದ ಸಣ್ಣಬಾಲನೇ ಬಾರೋ ಹಣ್ಣು ಕೊಡುವೆ ನಿನಗಿನ್ನು ಕೈತಾರೋ ಪ ಚಂಡು ಬೊಗರಿ ಗೋಲಿಗುಂಡು ನಾ ಕೊಡುವೆ ಬೆಂಡು ಬತ್ತಾಸವ ಕೊಂಡು ನಾ ಕೊಡುವೆ 1 ಚಿಣಿಕೋಲು ಮತ್ತೆ ಈಕ್ಷಣ ತಂದು ಕೊಡುವೆ ಮನಸಿಗೊಪ್ಪುವ ಚಿಂತಾಮಣಿ ತಂದು ಕೊಡುವೆ 2 ನಡಿಯೋ ನಿನಗೆ ದೊಡ್ಡ ಗುಡಿಯ ತೋರಿಸುವೆ ಒಡೆಯ ನಂತಾದ್ರೀಶನಡಿಯ ತೋರಿಸುವೆ 3 ಪದ್ಯ ಮತ್ತೇ ಮತ್ತೀಪರಿಯ ಒತ್ತಿ ಒದರಿದರೇನು ವ್ಯರ್ಥ ಬಾಲನು ಕಣ್ಣೆತ್ತಿ ನೋಡಲುವಲ್ಲ ಒತ್ತಿ ತೋಳುಗಳ್ಹಿಡಿದು ಎತ್ತಿನೋಡಿದನಾಗ ಯತ್ನದಿಂದಲ್ಲಿಯೆ ತಿತ್ತಿದಮ್ಮನೆ ದಣಿದು ಮತ್ತ ದೇವೇಂದ್ರ ಬಲು ಮೆತ್ತಗಾದ ವ್ಯರ್ಥ ಈ ಬಾಲಕನ ಎತ್ತಿ ನಗೆಗೀಡು ಈವತ್ತು ಆಯಿತು ಎಂದು ವೃತ್ರಾರಿ ತಾ ಮುಂದೆ ಅತ್ಯಂತ ಕೋಪದಲಿ ಎತ್ತಿದನು ವಜ್ರವನು ಎತ್ತಿದಾ ಕೈಬರದೆ ಮತ್ತಲ್ಲಿ ನಿಂತಿಹುದು ಚಿತ್ರದಲ್ಲಿಯ ಗೊಂಬೆ ಹಸ್ತದಂತೆ 1 ಪದ ಆಯಿತು ಈ ಪರಿಯು ದೇಹಕೆ ಆಯಾಸವೇ ಸರಿಯ ಪ ಮತ್ತೆ ಅಗ್ನಿಯು ಅಲ್ಲೆ ಬಾಲನ ಎತ್ತದೆ ದಣಿವುತಲೆ ಶಕ್ತಿ ಎತ್ತಿದ ಮೇಲೆ ಮತ್ತಾ ಶಕ್ತಿ ನಿಂತಿತು ಅಲ್ಲೆ1 ದಂಡಧರನು ಆಗ ಯೆತ್ತದೆ ಭಂಡಾದನು ಬೇಗ ದಂಡ ನೆತ್ತಿದನಾಗ ಎತ್ತಿದ ದಂಡ ನಿಂತಿತುಹಾಗೆ 2 ಮತ್ತೆ ನೈರತಿ ಅಲ್ಲೆ ಬಾಲನ ಎತ್ತದೆ ದಣಿವುತಲೆ ಕತ್ತಿಯೆತ್ತಿದ ಮೇಲೆ ಮುಂದಾ ಕತ್ತಿನಿಂತಿತು ಅಲ್ಲೆ 3 ಪಾಶಧರನು ಆಗ ಬಹು ಕಾಸೋಸಿ ಬಿಟ್ಟು ಬೇಗ ಪಾಶವೆತ್ತಿದನಾಗ ಮುಂದಾ ಪಾಶನಿಂತಿತು ಹಾಗೆ 4 ವಾಯು ಬಂದನಲ್ಲೆ ಬಳಲಿದ ಕಾಯಕ್ಲೇಶದಲ್ಲೆ ಕಯ್ಯನೆತ್ತಿದ ಮೇಲೆ ಮತ್ತಾಕೈಯು ನಿಂತಿತು ಅಲ್ಲೆ 5 ಸತ್ವರ ಬರವುತಲೆ ಕುಬೇರ ನಿಸ್ಸತ್ವನಾದನಲ್ಲೆ ಶಸ್ತ್ರಯೆತ್ತಿದ ಮೇಲೆ ಮುಂದಾ ಶಸ್ತ್ರ ನಿಂತಿತು ಅಲ್ಲೆ 6 ಶೂಲಧರನು ಅಲ್ಲೆ ಮತ್ತಾ ಬಾಲನಯೆತ್ತದಲೆ ಶೂಲನೆತ್ತಿದ ಮೇಲೆ ಮುಂದಾಶೂಲ ನಿಂತಿತು ಅಲ್ಲೆ7 ಬುಧಜನಕನು ಅಲ್ಲೆಬರವುತ ಗದಗದ ನಡುಗುತಲೆ ಗದೆಯನೆತ್ತಿದ ಮೇಲೆ ಮುಂದಾಗದೆಯು ನಿಂತಿತು ಅಲ್ಲೆ8 ಗೋಣನಲ್ಲಾಡುವ ತಲೆಯತ್ತಿದ ಹರಿ ತಾನು ಚಕ್ರವು ಮೇಲೆಖೂನದಿ ಅದು ಅಲ್ಲೆ ಆಯಿತು ಗೋಣವು ತಿರುವುತಲೆ 9 ಅಲ್ಲೆ ಪೂಷಣ ಬೇಗ ಕರಕರ ಹಲ್ಲು ತಿಂದನಾಗ ಹಲ್ಲು ಬಿದ್ದವಾಗ ತೋರಿದ ಎಲ್ಲ ದೇವತೆಗಳಿಗೆ 10 ಕೂಸನೆತ್ತದಾಗಿ ಎಲ್ಲರು ಮೋಸವಾದರು ಹೋಗಿ ಆ ಸ್ವಯಂವರಕಾಗಿ ಅನಂತಾದ್ರೀಶನ ಸಹಿತಾಗಿ 11 ಪದ್ಯ ಅಂಬುಜೋದ್ಭವ ತಾನು ಸ್ತಂಭಿತಾಗಿಸುರ ಕ ದಂಬವನು ಕಾಣುತಲೆ ಸಾಂಬನ ಮಹಿಮೆಯಿದು ಅಂಬಿಕೆಯ ತೊಡೆಯ ತಲೆಗಿಂಬು ಮಾಡಿಹ ಬಾಲ ಸಾಂಬನಿವನಹದೆಂದು ಸಂಭವಿಸಿದಾಗ ನಂಬಿ ಸ್ತುತಿ ಮಾಡಿದನು ಸ್ತಂಭೀತರು ಎಂದೆನಿಸಿ ಕೊಂಬುವರು ಎಲ್ಲಾರು ನಂಬಿ ಸ್ತುತಿಸಿದರು ಆ ಸಾಂಬಗೀಪರಿಯು ಪದ ಸಾಂಬಸದಾಸಿವನೆ ರಕ್ಷಿಸು ಬಾಲಕನೇ ಸಾಂಬಸದಾಶಿವನೆಂಬುವ ಬಾಲಕ ನೆಂಬುವದರಿಯದೆ ಸ್ತಂಭಿತರಾದೆವು ನಂಬಿಗೆ ತಿಳಿಯದೆ ನಂಬಿದೆವೋ ಜಗ ದಂಬೆಯ ತೊಡೆ ತಲೆ ಗಿಂಬು ಇಟ್ಟವನೆ ಪ ಪಟುತರನಾದಂಥವನೆ ತಿಳಿಯದೋ ನಿನ್ನ ಘಟಿತ ಘಟನೆ ಹರನೆ ಸ್ಫಟಿಕ ಸನ್ನಿಭ ಧೂರ್ಜಟಿಯೆ ನಿನಗೆ ಸಂ ಘಟಿತಳಾದ ಈ ಕುಟಿಲ ಕುಂತಳೆಯು ಹಟದಲಿ ಗೆಲವುದುವ ಹಟವೊಂದಿದು ಈ ಸ್ಪುಟವಾಯಿತು ಸಂಕಟ ಪರಿಹರಿಸು 1 ಸರ್ವರನೆಲ್ಲಾ ತರಿಸಿ ಸರಸ ಮಾಡಿದೆಯೊ ಗರ್ವವ ಪರಿಹರಿಸಿ ಉರ್ವಿಯೊಳಗೆ ನಿನಗಿರ್ವರಾರು ಸರಿ ಸರ್ವರನ್ನು ಮೀರಿರುವ ದೇವನೆ ಸರ್ವಪ್ರಕಾರದಿ ಸರ್ವರ ಅವಯವ ಪೂರ್ವದಂತಾಗಲಿ ಪಾರ್ವತಿಪ್ರಿಯನೇ 2 ಭೋ ಶಿಶುವರ ರೂಪ ಬೇಗನೆ ಬಿಡು ಈ ಸಮಯಕ್ಕೆ ಕೋಪ ಈ ಶಶಿವದನೆಯ ಆಶೆಗೆ ವ್ಯರ್ಥದಿ ಮೋಸಹೋಗಿ ಕಾಸೋಸಿ ಬಟ್ಟೆವು ಘಾತಿ ಮಾಡಬೇಡಾಸೆಯ ಪೂರಿಸು ಶ್ರೀ ಅನಂತಾದ್ರೀಶ ಪ್ರಿಯನೆ 3 ಪದ್ಯ ವಿರಳಾಟ ಈ ಸ್ತುತಿಗೆ ಮರುಳಾಗಿ ತಾನು ಗರಳ ಗೊರಲಿಸಾ ಮೂರುತಿಯ ಸರಳ ಮಾಡೆಲ್ಲವರು ಗುರುಳು ಗೂದಲದವ ಸರಳಾದವ ತೊಡೆಯಲ್ಲಿ ಹೊರಳೆದ್ದು ತೋರಿಸಿದ ಸರಳ ನಿಜರೂಪ ವಿರಳೆ ನೋಟದಲಿರುವ ತರಳೆ ಆ ಪಾರ್ವತಿಯು ಹೊರಳಿ ನೋಡುತಲೆದ್ದು ಹರಳಿನುಂಗರ ಕೈಯ್ಯ ಹೆರಳಿನೊಳಗಿರುವಂಥ ಅರಳಿದ್ಹೂವಿನ ದಿವ್ಯ ಸರಳ ಮಾಲೆಯ ಅವನ ಕೊರಳಿಗ್ಹಾಕಿದಳು 1 ಗಂಭೀರ ವಾದ್ಯಗಳೇಳು ಸಾರಿ ನುಡಿದವು ಆಗ ಸಾವಿರಬುಧರ ಎಲ್ಲ ವೃಷ್ಟಿಸೂರಿಮಾಡಿದರು ಚಾರ್ವನಂತಾದ್ರಿಯಲ್ಲಿರುವ ದೇವನ ಬಿಟ್ಟು ಸಾರ ಪರಮೇಶ್ವರಗೆ ಹಾರ ಹಾಕುವೆನೆಂಬ ಪಾರ್ವತಿಯ ಅಭಿಲಾಷೆ ಪೂರ್ಣವಾದಲ್ಲೆ ಸಂಪೂರ್ಣ ಸಾಂಬ ಮೂರುತಿಯ ದಯೆಯಿಂದ ಮೂರು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಅವನೇ ನಿಜಯೋಗಿ | ವಿರಾಗಿ | ಭೋಗಿ 1 ದಾವನ ನೋಟದಲಿ | ಸಮ ವಿಷಮಾ | ಭಾವನೆಗಾಯಿತು ಸೀಮಾ 2 ಮಾಯಾ ಕಲ್ಪಿತದಾ | ಜಗಮರೆತಾ | ನ್ಯಾಯದಿ ಚಿದ್ಘನವರಿತಾ 3 ಮಂದಗೆಡನು ಚರಸೀ | ತಾನಾಗಿ | ಬಂದದನುಂಬನು ತ್ಯಾಗಿ 4 ಬಲ್ಲವಿಕಿಲಿ ಬಿಗಿಯಾ | ದಾವನು | ಎಲ್ಲರಿಗ್ಯಾಗಿಹ ಹರಿಪ್ರಿಯನು5 ಮಹಿಪತಿ ಸುತ ಪ್ರಿಯನಾ | ತಿಳಿವಿಕೆಯಾ | ಸೋಹ್ಯವ ತಿಳಿದನು ನೆಲಿಯಾ6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರ ಮಗನೆಂದರಿಯೆವೆ ಇವ ನಮ್ಮಕೇರಿಯೊಳು ಸುಳಿದು ಪೋದ ಪ. ನೀಲವರ್ಣನ ಮೈಯ್ಯವ ತುಲಸಿ ವನ-ಮಾಲೆ ಕೊರಳೊಳು ಕೌಸ್ತುಭಬಾಲಪ್ರಾಯದ ಚೆನ್ನಿಗ ಬಂದು ಪೋ-[ಗ]ಲು ಸನ್ನೆಯ ಮಾಡಿದ1 ಚಿಕ್ಕಪ್ರಾಯದ ಚೆನ್ನಿಗ ಯೌವನದಲುಕ್ಕುವ ಕಡುಚೆಲುವನೆಚೊಕ್ಕಟಾದ ಚದುರನೊಬ್ಬ ಕುಚಕೆ ಕೈ-ಯಿಕ್ಕಿ ಕಸ್ತೂರಿ ಪೂಸಿದ 2 ಪೀತಾಂಬರನುಡಿಸಿದ ವಿನಯ ಸವಿ-ಮಾತುಮಾತಿಗೆ ನಗಿಸಿದಪ್ರೀತಿಯಿಂದಲಿ ತನ್ನ ಚೆಂದುಟಿಯ ಅಧರಾ-ಮೃತವನುಣಿಸಿದ3 ಪಾರಿಜಾತವ ಸೂಡಿದ ಕಸ್ತೂರಿಯಗೀರುನಾಮವ ತಿದ್ದಿದದೂರದಲಿ ನಿಂತು ಎನ್ನ ಸೋಗೆಗಣ್ಣಓರೆನೋಟದಿ ನೋಡಿದ4 ಆಗ ಮೊದಲಾಗಿ ತನುವಾ ಮದನಶರತಾಗಿ ಕಟ್ಟುಡುಗಿದಾವೆಬೇಗದಲಿ ಹಯವದನ ಬಂದೆನ್ನಮೋಹದಿಂದಲಿ ಕೂಡಿದ5
--------------
ವಾದಿರಾಜ
ಆವ ಜನುಮ ಸಖನೇ ನಮ್ಮಯ್ಯಾ ಪ ಅವಿದ್ಯ ಬಲಿಯೊಳು ಸಿಲುಕಿ ಬಳಲುವನ | ಸುವಿದ್ಯ ನೋಟದ ಕರುಣವ ಬೀರಿದನಾ1 ಏನರಿಯದಲಿರೆ ವಿಷಯ ಮದಾಂಧದಿ | ಜ್ಞಾನಾಂಜನವ ಮಾಡಿ ಕಂಗಳದೆರಿಸಿದನಾ 2 ಹೃದಯ ಭೂಮಿಗೆ ಹರಿ ನಾಮಬೀಜವ ಬಿತ್ತಿ | ಸದಮಲ ಭಕುತಿಯ ಬೆಳೆಗಳ ನುಣಿಸಿದನಾ 3 ಕೇಳದ ನುಡಿಗಳ ಹೇಳುತ ಕಿವಿಯೊಳು | ಕಾಲ ಕಾಲಕ ಎನ್ನ ಹಿತವನೆ ಯೋಜಿಪನಾ4 ತಂದೆ ಮಹಿಪತಿ ಕಂದನೆನಿಸಿತ್ತ ನಾ | ಪರ ಭಾಗ್ಯವ ನೀಡಿದನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆಳ್ವಾರಾಚಾರ್ಯ ಸ್ತುತಿಗಳು 1. ವಿಶ್ವಕ್ಸೇನ ಪ್ರಾರ್ಥನೆ ಶ್ರೀನಾಥಜ್ಞಾಪ್ರಕಾರ ನಡೆಯುವ ಸೂತ್ರವತೀರಮಣ ಮಾನಿತ ಪ್ರದಾನ ಮಂತ್ರೀ ಪೂಜಿಪೆ ವಿಘ್ನೇಶಾ ನಮಿಪೆ ಪ ಬಿಳಿಯುಡೆ ತುಂಬಿದ ತಿಂಗಳ ಬೆಳಗಾ ತೊಳಗುವ ನಾಲಕು ತೋಳುಗಳ ಒಲಿದಿಹ ನಗೆಮೋಗ ವಿಷ್ಣು ನೆನೆವೆ ಸುಲಭದಿ ಕಾರ್ಯವ ಗೈಸುವನೆ1 ದ್ವಿರದವಕ್ತ್ರತಾ ಮೊದಲಾಗಿರುವ ಪರಿಜನ ನೂರ್ವರಿಂದೊಪ್ಪಿರುವೇ ಪರಿಪರಿ ತಡೆಗಳ ತರಿದೋಡಿಸುತ ಪೊರೆ ವಿಶ್ವಕ್ಸೇನಾಶ್ರಿತ ನಾನು 2 ಬಿಡುಗಣ್ಣರ ಬೆಡಗಿನ ಒಡಲುಳ್ಳ ಕುಡಿನೋಟದ ತಾವರೆಗಣ್ಣ ಪಿಡಿದಹ ಶಂಖ ಚಕ್ರ ಗದಾಯುಧ ಒಡೆಯ ಮುಕುಂದ ದ್ವಾರನಿಲಯನೇ 3 ಬೊಮ್ಮ ಭವಸುರರು ನಯದಿಂ ಮೊದಲಾರಾಧಿಪರು ಶುಭ ಫಲದಾಯಕ
--------------
ಶಾಮಶರ್ಮರು
ಇಂದಿರಾರಮಣನ ಮಂದಿರದಲ್ಲೆ ನಾ- ರಂದ ತಾ ಬರುತಿರಲು ಕಂಡು ಕೃಷ್ಣನು ಕರೆತಂದು ಮನ್ನಿಸಿ ಬಂದಕಾರಣವೇನೆಂದನು 1 ಕಾರಣವೇನುಂಟು ಕಾರಣಪುರುಷನ ಕಾಣಬೇಕೆಂದೆನುತ ಕಾಮಿಸಿಬಂದೆನೊ ಕೊರಳ ತುಳಸಿ ಮಾಲೆ ನೀಡೊ ನೀ ಎನಗೆಂದನು2 ಏನು ಬೇಡಿದರು ನಾ ಕÉೂಡುವೆನು ನಾರಂದ ಪ್ರಾಣಪದಕ ತುಳಸಿ ನೀಡಲಾರೆನೊ ಮುತ್ತಿನ್ಹಾರವ ಕೊಡುವೆ- ನೆಂದು ಹೇಳುತಿದ್ದನು ಹರಿಯು 3 ನೀಡದಿದ್ದರೆ ನಾನು ಬೇಡಿ ಬಿಡುವನಲ್ಲ ನೋಡಿಕೋಯೆಂದೆನುತ ಆಡಿದ ಮಾತು ತಪ್ಪುವರುಂಟೆ ಶ್ರೀಕೃಷ್ಣ ಹೋಗಿಬರುವೆನೆಂದನು 4 ಸತ್ಯಭಾಮೆಯ ಮನೆ ಹೊಕ್ಕನು ನಾರಂದ ಹೆತ್ತಮ್ಮ ಕೇಳೆನುತ ಸುತ್ತಿಬಂದೆನು ಸುರಲೋಕದ ವಾರ್ತೆಯ ವಿಸ್ತರಿಸ್ಹೇಳುವೆನು 5 ಇಂದ್ರಲೋಕದಲಿ ದೇವೇಂದ್ರ ಶಚಿಯ ಕೂಡ್ಯಾ ನಂದದಿ ಕುಳಿತಿದ್ದನೆ ಅ- ಲ್ಲಿಂದ ಕೈಲಾಸ ಮಾರುದ್ರ ಪಾರ್ವತಿದೇವಿ ಚೆಂದವನ್ವರಣಿಸಲೆ 6 ಸತ್ಯಲೋಕದಿ ಸರಸ್ವತಿ ಕೂಡಿ ಬ್ರಹ್ಮ ಭಾ ಳುತ್ಸವದಿಂದಿದ್ದನೆ ಹಸ್ತಿನಾವತಿಯ ಪಾಂಡವರು ದ್ರೌಪದಿದೇವಿ ಅರ್ಥಿಯ ನೋಡಿ ಬಂದೆ 7 ದ್ವಾರಾವತಿಗೆ ಬಂದೆ ದೇವಿ ನಿಮ್ಮರಸನು ನಾರಿ ರುಕ್ಮಿಣಿ ಸಹಿತ ಭಾಳ ಸಂಭ್ರಮದಿಂದ ಕುಳಿತಿದ್ದ ಕಣ್ಹಬ್ಬವಾಗಿ ನಾ ಬಂದೆನಿಲ್ಲೆ 8 ಕರೆದು ರುಕ್ಮಿಣಿ ಕರದಿಂದೆ ಆಲಂಗಿಸಿ ತೊಡೆಯಮ್ಯಾಲಿಟ್ಟಿದ್ದನೆ ಅರಳುಮಲ್ಲಿಗೆ ತುರುವಿ(ಬೀ) ನಲ್ಲಿಟ್ಟು ನಿನಗಿನ್ನು ಸರಿಯಿಲ್ಲವೆಂತೆಂಬನೆ 9 ಹಾರಪದಕ ಇಬ್ಬರಿಟ್ಟಾಭರಣ ಬ್ಯಾರೆ ಬ್ಯಾರಾಗಿ ತೋರವಲ್ಲೆ ಸೂರ್ಯಚಂದ್ರರು ಕೂಡಿದಂಥ ಮುಖವು ನೋಡಿ ನಾ ಬೆರಗಾಗಿದ್ದೆನೆ 10 ಸತ್ಯಭಾಮೆಯೆ ನಿನ್ನ ಹೆತ್ತ ತಾಯಿತಂದೆ ಮಿರ್ತಾಗಿದ್ದರೆ ನಿನಗೆ ಕೊಟ್ಟರೀ ಕಪಟನಾಟಕ ದಯಹೀನಗಿ- ನ್ನೆಷ್ಟು ನಾ ಸೈರಿಸಲೆ 11 ಒಂದೊಂದು ಗುಣಗಳ ವರಣಿಸಲಿಕ್ಕೆ ಹ ನ್ನೊಂದೊ (ದ್ವ?) ರುಷವು ಸಾಲದೆ ಕಂಡು ಬಂದ್ವಾರ್ತೆಯ ಖರೆಯ ನಾ ಹೇಳುವೆ ಸಂದೇಹ ಮಾಡದಿರೆ 12 ಕೇಳಿ ಸತ್ಯಭಾಮೆ ತಾಳಲಾರದೆ ಮುನಿ ಪಾದದ ಮ್ಯಾಲೆ ಬಿದ್ದು ಹೇಳಿ ಉಪಾಯ ಮುಂದಕೆ ಪೋಗೊ ಶ್ರೀ- ಕೃಷ್ಣ ತಾನೊಲಿದಿರುವಂದದಿ13 ದಾನವಾಂತಕÀನ ನೀ ದಾನವÀ ಮಾಡಲು ದಾವಜನ್ಮಕÀು ನಿನ್ನನು ತಾನಗಲದೆ ಮುಂದೆ ಸೇರಿಕೊಂಡಿರುವೊ ಉಪಾಯ ಹೇಳುವೆನೆಂದನು 14 ರಂಗರಾಯನ ಕರೆತಂದುಕೊಟ್ಟವರಿಗೆ ಹಿಂಗದೆ ಸೌಭಾಗ್ಯವ ಎಂದೆಂದಿಗವರ ರಕ್ಷಿಸುವೋನೆಂದೆನುತಲಿ ಅಂಗನೆಯರನಟ್ಟಿದಳು 15 ದೂತೇರ ಸಹಿತಾಗಿ ಬಂದು ತಾ ಭರದಿಂದೆ ಪ್ರೀತಿಲೆ ಸತ್ಯಭಾಮ ಮಾತುಳಾಂತಕ ನಮ್ಮ ಮನೆಗೆ ಬಾರೆನುತ ಶ್ರೀ- ನಾಥನೆಯೇಳೆಂದಳು16 ಮಡದಿ ರುಕ್ಮಿಣಿ ಭಾಮೆ ಮಂದಿರಕ್ಕೊ ್ಹೀಗುವೆ ಕಡುಕೋಪ ಮಾಡದಿರೆ ತಡೆಯದೆ ನಾಳೆ ಬರುವೆನೆಂದು ಶ್ರೀಕೃಷ್ಣ ಗ- ರುಡನ ಹೆಗಲೇರಿದ 17 ವಾರಕಾಂತೆಯರು ಬಾಜಾರ ಮಧ್ಯದಿ ಸೋಳಸಾವಿರ ಸತಿಯರನೆ ವಾರೆನೋಟದಿ ನೋಡಿ ನಗುತ ಸತ್ಯಭಾಮೆ ಬಾಗಿಲ ಮುಂದಿಳಿದ 18 ಎದುರಿಗೆ ನಿಂತು ತಾ ಚೆದುರೆ ಸತ್ಯಭಾಮೆ ಪದುಮ ಪಾದಕೆ ಎರಗಿ ಮುದದಿಂದ ಮುದ್ದು ಶ್ರೀಕೃಷ್ಣನ ಮುಂಗೈಯ್ಯ ಪಿಡಿದು ತಾ ನಡೆದಳಾಗ 19 ಕೃಷ್ಣರಾಯನೆ ನಿನ್ನ ಕೊಟ್ಟೇನು ದಾ ನವ ಬಿಟ್ಟೆನ್ನ ಅಗಲದಂತೆ ಸತ್ಯಭಾಮೆಯ ನೋಡಿ ನಗುತ ಈ ಕಾರ್ಯ ಅ- ಗತ್ಯಮಾಡೆಂದೆನುತ 20 ಎರೆದು ಪೀತಾಂಬರವುಡಿಸಿ ಮಾಣ Âಕ್ಯದ ಆ- ಭರಣವ ತಂದಿಟ್ಟಳು ತರಿಸಿ ತಾಂಬೂಲ ದಕ್ಷಿಣೆಯನ್ನು ಬ್ರಾಂಬರ ಕÀರೆಸಿದಳಾಕ್ಷಣದಿ 21 ಆಚಾರ್ಯ ನೀವ್ ಬನ್ನಿ ವಾಸುದೇವನ ದಾನ ಈ ಕ್ಷಣದಲ್ಲೆ ಕೊಡುವೆ ನಾಶರಹಿತ ನಮ್ಮ ಮನೆಯೊಳಗಿರಲಿಕ್ಕೆ ಗ್ರಾಚಾರವೇನೆಂದರು 22 ವಿದ್ಯಾರ್ಥಿಗಳು ಬನ್ನಿ ಮುದ್ದು ಶ್ರೀಕೃಷ್ಣನ ವಿಧ್ಯುಕ್ತದಲಿ ಕೊಡುವೆ ಮೂರ್ಜಗದೊಡೆಯ ತಾ ಮಂದಭಾಗ್ಯರ ಮನೇಲಿದ್ದಾನ್ಯಾತಕೆ ಎಂದಾರೆ 23 ಭಟ್ಟರೆ ನೀವ್ ಬನ್ನಿ ಸೃಷ್ಟಿಪತಿಯ ದಾನ ಕೊಟ್ಟು ಬಿಡುವೆನೆಂದಳು ಅಷ್ಟದರಿದ್ರರಿಗಾಲಕ್ಷ್ಮೀವಲ್ಲಭ ದಕ್ಕುವೋನಲ್ಲೆಂದರು 24 ಯತಿಗಳೆ ನೀವ್ ಬನ್ನಿ ಪೃಥಿವಿಗೊಡೆಯ (ನನು) ಹಿತದಿ ದಾನವ ಕೊಡುವೆ ಗತಿಯಿಲ್ಲ ನಮಗೆ ಶ್ರೀಪತಿ ಸಲಹÀಲು ನಿನ್ನ ಪತಿ ಬ್ಯಾಡ ನಮಗೆಂದರು&
--------------
ಹರಪನಹಳ್ಳಿಭೀಮವ್ವ
ಇಂದು ಇಂದು ಇಲ್ಲಿ ಚಂದ್ರವದನೆ ಇಂದಿರಾದೇ'ಗಂಡುಗಲಿಯ ವೇಶತಾಳಿ ಗೆಂಡಾಸುರನ ಕೊಂದು ನಗುತಅ.ಪಜಗದೀಶನ ಮಡದಿಯಂತೆ ಮಗಗೆ ನಾಲ್ಕು ಮುಖಗಳಂತೆಮಗನ ಮಗ ಬೈರಾಗಿಯಂತೆ ಅಗಜೆ ಅವಗೆ ಒಲಿದಳಂತೆ 1ಹರಿಯ ಹೃದಯದಲ್ಲಿ ಸದಾ ಅಗಲದೆ ತಾ ಇರುಳಂತೆಆದಿಮಾಯಾ ಶಕ್ತಿಯಾಗಿ ಜಗದ ವ್ಯಾಪಾರ ಮಾಡುವಳಂತೆ 2ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರಸೇವೆಸಾಟಿಇಲ್ಲದೆ ಮೂಡಿ ಪೂರ್ಣ ನೋಟದಿಂದ ಸುಖಿಪಳಂತೆ 3ಛಕ್ರಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿನಿಂತುಚಿತ್ತಚರಿತನಾದ ಹರಿಯ ನಿತ್ಯ ಸೇವೆ ಮಾಡುವಳಂತೆ4ಗಂಡ ಹೆಂಡಿರ ಜಗಳವಂತೆ ಕೊಲ್ಹಾಪುರದಿ ಇರುವಳಂತೆಗಂಡ ವೈಕುಂಠ ಮಂದಿರಬಿಟ್ಟು ವೆಂಕಟಗಿರಿಯಲಿ ಇರುವನಂತೆ5'ೀರಪುರುಷ ವೇಷವಂತೆ ಕ್ರೂರ ದೈತ್ಯನ ಸೀಳಿದಳಂತೆಯಾರಿಗು ಗೊತ್ತಾಗದಂತೆ ರಾತ್ರಿ ಊರೊಳಗೆ ಬರುವಳಂತೆ 6ಭಾರತಹುಣ್ಣಿಮೆ ಜಾತ್ರಿಯಂತೆ ಭಾರಿಜನರು ಕೂಡುವರಂತೆಭಾರಿ ಡೊಳ್ಳು ಹೊಡಿವರಂತೆ ಭೂಪತಿ'ಠ್ಠಲ ನಗುವನಂತೆ 7ಹನುಮಂತದೇವರು
--------------
ಭೂಪತಿ ವಿಠಲರು