ಒಟ್ಟು 7 ಕಡೆಗಳಲ್ಲಿ , 2 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆವೆ ಧನ್ಯ ನೋಡಿ ಅವನ ದರುಶನ ಮಾಡಿ ಪ. ಹರಿಧ್ಯಾನ ಹೃದಯದಲ್ಲಿ | ಹರಿನಾಮ ಜಿವ್ಹದಲಿ | ಹರಿಕಥೆ ಶ್ರವಣದಲ್ಲಿ| ಹರಿಯಾ ಸೇವೆ ಅಂಗದಲ್ಲಿ1 ಹರಿಭಕ್ತಿಯೊಳು ಕೂಡಿ | ಹರಿ ಕೀರ್ತನೆಯ ಮಾಡಿ | ಹರಿ ಪ್ರೇಮ ತುಳಕಾಡಿ | ಹೊರಳುವ ನಲಿದಾಡಿ 2 ತಂದೆ ಮಹಿಪತಿ ದಯಾ ದಿಂದ ಪಡೆದು ವಿಜಯಾ ಹೊಂದುವ ತಿಳಿದು ನೆಲಿಯಾ ಛಂದವಾದಾ ಪುಣ್ಯಕಾಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅವನೇ ನಿಜಯೋಗಿ | ವಿರಾಗಿ | ಭೋಗಿ 1 ದಾವನ ನೋಟದಲಿ | ಸಮ ವಿಷಮಾ | ಭಾವನೆಗಾಯಿತು ಸೀಮಾ 2 ಮಾಯಾ ಕಲ್ಪಿತದಾ | ಜಗಮರೆತಾ | ನ್ಯಾಯದಿ ಚಿದ್ಘನವರಿತಾ 3 ಮಂದಗೆಡನು ಚರಸೀ | ತಾನಾಗಿ | ಬಂದದನುಂಬನು ತ್ಯಾಗಿ 4 ಬಲ್ಲವಿಕಿಲಿ ಬಿಗಿಯಾ | ದಾವನು | ಎಲ್ಲರಿಗ್ಯಾಗಿಹ ಹರಿಪ್ರಿಯನು5 ಮಹಿಪತಿ ಸುತ ಪ್ರಿಯನಾ | ತಿಳಿವಿಕೆಯಾ | ಸೋಹ್ಯವ ತಿಳಿದನು ನೆಲಿಯಾ6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆವಧನ್ಯರೋ ಸುಖಿಸುವರು ಗೋಕುಲದವರು | ಗೋವಿಂದನೊಳು ಕ್ರೀಡಿಸುವರು ಗೋಗೋವಳರು ಧ್ರುವ ಭಾವಿಸೆ ಮಖದಲ್ಲಿದಾವ ಸಾರಾಯ ಕೊಂಬಾ | ದೇವಗೋಪಾಲಕರ ಕರಿಸಿ | ಬುತ್ತಿಯ ತರಿಸಿ | ಸವಿಸವಿದುಂಬುವರ ವೆರಸಿ | ಕೈಯೊಳಿರಿಸಿ | ಅವರತನ್ನಂಜಲೆಂಬ ದೂರಿಸಿ ನಲುವಾದರಿಸಿ 1 ಸಿರಿರಮಣಿಯ ಕೂಡ ಸರಸದಿ ಕುಚವಿಡಿದಾ | ಕರದಿನವೀನ ತೃಣವಾ ಕಡಿದು ಕವಳವಿಡಿದು | ಕರೆದು ಆವಿನ ಪೆಸರಾ ನುಡಿದು ಕುಡವಾವಿ ನಡೆದು | ಕರುಣದಿ ಚಪ್ಪರಿಸುವಾ ಜಡಿದು ಮೈಯನಡದು 2 ಅನಂದಿನ ಧ್ಯಾಯಿಸುವಾ ಮುನಿಮನದಲ್ಲಿ ಹೊಳೆಯಾ | ಚಿನುಮಯ ಗೋಪಿಯರಾವಳಿಯಾ ಯೋದ್ಧುಳಿಯಾ | ಅನುವಾಗಿದೋವರ್ತನಕಳಿಯಾ ವರ ಬಳಿಯಾ | ಘನಮಹಿಪತಿ ಸ್ವಾಮಿ ನೆಲಿಯಾ ಬೊಮ್ಮತಾ ತಿಳಿಯಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇನ್ನೇನು ನೋಡುವಿ ನೆಲಿಯಾ | ಬನ್ನ ಬಿಡಿಸಿ ಕಾಯೋ ಶ್ರೀ ಗುರುರಾಯಾ ಪ ದಾಸಿಗೆ ಕರುಣಿಸಿ ರಾಯರಂಭೆಯ ಮಾಡಿ | ದೋಷವೆಣಿಸುವನೆ ಮುನ್ನಿನ ನೋಡಿ 1 ಸರಿ ತಾ ಹರಿದು ಬಂದು ಗಂಗೆಯಾ ಕೂಡಲಿ | ತಿರುಗಿ ನೂಕುವದೇನು ಜರೆಯುತಲಿ2 ತಂದೆ ಮಹಿಪತಿ ನಿಮ್ಮ ನಂದನನೆನಿಸುತ | ಕುಂದ ನಾರಿಸುವದು ಬಿರುದಿಗುಚಿತಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಂಡೆನಮ್ಮಾ ಕೌತುಕದಾ ಗಾರುಡಿಗನಾ | ಕೊಂಡಾಡಲಳವಲ್ಲ ಹೇಳಲೇ ನಾ ಪ ಬೋಧದನಾಗರ ನೂದುವನಾ 1 ಭಕ್ತರುದ್ದೇಶಕ ಬಂದ ಜವದಿ 2 ಸಕಲ ತೇಜದ ಬಬ್ಬುಳಿಯೋ ರೂಪ ನೆಲಿಯಾ | ಪ್ರಕಟ ತಿಳಿಯದು ನಿಜ ಕಳಿಯನಾ 3 ಅರಿಶಿಕ್ಷಾ ಭಕುತರ ಪಕ್ಷಾವೆಂಬ ನಾನಾ | ಬಿರುದು ಕಟ್ಟಿಹ ಮಹಿಮನಾ 4 ಕಾಳ ಸರ್ಪದ ನಿಜ ಮುಖ ಬಂಧವನ ಮಾಡಿ | ಜಾಳಿಸಿದನು ಭಯ ಈಡ್ಯಾಡಿ 5 ಹಮ್ಮಿನ ಗಾವ ಗುಂಡ ಗಜದಂತ ಶರಣರಿಗೆ | ವಮ್ಮಿಲೆ ಕಲೆಗಳ ದೋರುದೀಗನಾ 6 ತಂದೆ ಮಹಿಪತಿ ಸುತ ಸ್ವಾಂಮಿ ದುರ್ಲಭದಾ | ನಂದವ ತೋರಿದಾ ದಯದಿಂದಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾವನು ಗುರುಸಹವಾಸಿ ಅವನಿದ್ದದ್ದೇ ಸ್ಥಳ ಕಾಶಿ ಧ್ರುವ ಕೂಡಿದವರ ತ್ರಿತಾಪಭಂಗಾ ರೂಢಿಗೆ ಮೆರೆವಳು ಙÁ್ಞನಗಂಗಾ ಮೂಡಿಹ ಆತ್ಮಜ್ಯೋತಿ ಲಿಂಗಾ ಕಂಡಿಹ ಗುಣರಾಸೀ 1 ವಿವರಿಸಿ ತಾರಕಮಂತ್ರದ ನೆಲಿಯಾ ಕಿವಿಯೊಳು ಹೇಳಲು ಗುರುರಾಯಾ ಭವ ಭಯಾ ಸ್ವಾನಂದವ ಬೆರೆಸೀ2 ಜನದಲಿ ನಾನಾ ಸಾಧನ ಜರಿದು ಮನದಲಿ ಒಂದೇ ನಿಷ್ಠಿಯ ಹಿಡಿದು ಅನುಮಾನದ ಸಿದ್ಧಾಂತಗಳದು ಸದ್ಭಾವನೆ ಒಲಿಸೀ 3 ಪ್ರೇಮಿಯ ನಿಜಸುಖ ಪ್ರೇಮಿಕ ಬಲ್ಲಾ ಈ ಮನುಜರಿಗಿದು ಭೇದಿಸುದಲ್ಲಾ ಶ್ರೀ ಮಹಿಪತಿ ಬೋಧಿಸಿದನು ಸೊಲ್ಲಾಪೂರಿಸಿ ಮನದಾಸಿ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಾಕ ವದಗಲೊಲ್ಲೆಯನ್ನಯ ಬಿನ್ನಹಕ ಲೋಕ ರಕ್ಷಕ ಬಂದು ಯನ್ನ ನುದ್ದರಿಸಯ್ಯಾ ಪ ಅರಿಯದ ಶಿಶು ಮಹಾನದಿ ಜಲದೊಳು ಪೋಕ್ಕು ತರಿಸಲರಿಯದಸು ದೊರೆಯುತಿದೆ ಇರಲು ತಾರಕದಡಿಯಲಿ ಸುಮ್ಮನೇದಯಾ ಜರಿದು ನೆಲಿಯಾ ನೋಡುತಹುದೇನಯ್ಯಾ 1 ಅರಿಗಳು ಪಟಳದಿಂದೋರ್ವ ಮನುಜಾ ಅರತು ನೃಪರಬೆನ್ನಬೀಳಲು ಭರದಿಂದಾ ಪಡಿತಂದವರಾಕೈಯ್ಯಲಿಕುಡೆ ಧರೆಯೊಳುಸಕಲ ಜನರು ಏನೆಂಬು ವರೈಯ್ಯಾ 2 ಪತಿತರ ಪಾವನ ಮಾಡುವಾಧೊರಿಯೆಂದು ಶೃತಿ ನಾಲ್ಕರಲಿ ಕೊಂಡಾಡುತಿರೆ ಮತಿಹೀನ ನೆಂದು ಕೈಯ್ಯಾ ಬಿಡದಿರೋ ಮಹೀ | ಮತಿ ಸುತಪ್ರಭು ಪರಿಚರೆನಿಸುವ ಬಳಿಕಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು