ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡು ಬಿಡು ಮನವೇ ನಿನ್ನಾ ದುರ್ಗುಣದಾ ಸಂಗಾ | ಪಿಡಿಯೋ ಸಾಧುಜನರಾ ನೆರಿಯಾ ಕಾವಾ ಶ್ರೀರಂಗಾ ಪ ನೆನೆಯಲಿಕ್ಕೆ ವಿಷಯ ಸಂಗದಿಂದ ಕಾಮ ಕ್ರೋಧ | ಜನಿಸಿ ಮೋಹ ಸ್ಮತಿಯಗೆಟ್ಟು ಕೆಡುವಿ ಮತಿಮಂದ 1 ಗರಳ ವೇರಿದವಗ ಬೇವು ಸಿಹಿ ದೋರುವಂತೆ | ನಿರುತ ಇಂದ್ರಿಯ ವಿಷಯ ಸುಖವು ಅದರಂತೆ 2 ಪಿತ್ತವಡರಿದಾಗ ಎಂತು ಲೋಕ ತಿರುಗಿಹುದು | ಮತ್ತ ಗುರು ಹಿರಿಯರ ಬಗೆವೀ ಮನುಜರಿವರೆಂದು 3 ಎಂತು ಹೇಳಲಿ ನಿನಗ ಹರಿನಾಮ ನಂಬುಗೆಯಿಲ್ಲಾ | ಪಂಥದರವ ಜ್ಞಾನದ ದೃಷ್ಟಿ ತೆರೆಯದಾಯಿತಲ್ಲಾ 4 ತಂದೆ ಮಹಿಪತಿ ಸ್ವಾಮಿ ನಮಿಸಿ ಕೇಳು ಹಿತವಾ | ಮಂದಭವದಿ ತೊಳಲ ಬ್ಯಾಡಾ ಹೊಂದು ನಿಜಪಥವಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರೆಯದಿರುವರೋ ನಿನ್ನ ಸ್ಮರಣೆಯಾ ನೀನು ಪ ಗರಿಯಾ ಚರಿಯಾ ಮರಿಯಾ ನೆರಿಯಾ | ಸೇರಿ ಕ್ರೂರ ಮಾರಿದಾರಿ ಜಾರಿ ದೂರಸಾರದೇ ಅ.ಪ ಕಡಲಶಯನೆಚ್ಚರಾ ಕಳೆದು ಹೊರಿಯಲುದರಾ | ಬಿಡದೋಲೈಸಿ ಘನಮದರಾ | ಕಡಿಯಾ ಕಿಡಿಯಾ ನುಡಿಯಾ ಪಡಿಯಾ | ಬೇಡಿ ಕಾಡಿ ಓಡಿ ಆಡ ಬ್ಯಾಡ ಗಾಢ ಮೂಢನೇ 1 ತರಳ ಪ್ರಾಯ ಮುಪ್ಪಿಂದೆ ತೀರಲಾಯುಷ್ಯ ಬರುದೇ | ಯರಗುವಾಯಮ ತಾ ನಿಲದೇ | ತ್ವರಿಯಾ ಧರಿಯಾ ಕುರಯಾ ಮರಿಯಾ | ವೈರಿ ಮೀರಿ ಹಾರಿ ತೂರಿ ಹೊರುವಂದದಿ 2 ಮಿನಗು ಬೆಳಗ ಘನ ಮಹಿಪತಿ ಸುತ ಪ್ರಿಯನಾ | ಅನುಭದಿಸದಿಹುದೇನಾ | ಅನುವೇ ಮನವೇ ಗುಣವೇ ದನವೇ | ಜ್ಞಾನ ಹೀನ ಮಾನ ದೀನ ಆನನದಲೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು