ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಾರಿಗೆಲ್ಲಿಹದು ಫುಲ್ಲನಾಭನ ಸೇವೆ ಸುಲಭವಲ್ಲವಿದು ದುರ್ಲಭ ಸದ್ಗುರು ಮಾರ್ಗ ಧ್ರುವ ಕೋಟ್ಯಾನುಕೋಟಿಗೊಬ್ಬ ಮುಟ್ಟಿ ಕಂಡಿದರಲಿ ನೆಟ್ಟಿಸಿ ತನ್ನೊಳು ತಾ ದೃಷ್ಟಿಸಿ ಗುರುಪಾದ 1 ಮಾತಿನಂತಲ್ಲವಿದು ಜ್ಯೋತಿರ್ಮಯದ ಸುಖ ನೆÉೀತಿನೆÉೀತಿವೆಂಬುದು ಶ್ರುತಿ ಸಾರುತದ ವಾಕ್ಯ 2 ಹರಡಿಸಿರಾಗದು ಮೂರುಲೋಕದೊಳಗ ಕರುಣಿಸಿದರಾಹುದು ಗುರು ಕೃಪೆಯಿಂದ 3 ವರ್ಮ ತಿಳಿಯದೆಂದೆಂದು ಕರ್ಮತಮಂಧರಿಗೆ ಬ್ರಹ್ಮ ಸುಖದೋರುವ ಸ್ವಾಮಿ ಸದ್ಗುರು ಧರ್ಮ 4 ಸೇವೆ ಸೂತ್ರನರಿಯದ ಭಾವಿ ಮಹಿಪತಿಗೆ ಭಾವಭಕ್ತಿಯ ಕೊಟ್ಟು ಪಾವನಗೈಸಿದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದ್ಹೇಳಲಿ ಸ್ವಾನಂದ ಘನ ಸುಖವು ಧ್ರುವ ಮಾತಿನಂತಲ್ಲ ಜ್ಯೋತಿರ್ಮಯದ ಸುಖ ನೇತಿ ನೆÉೀತಿವೆಂಬುದು ಶ್ರುತಿವಚನ 1 ಹೋಲಿಕೆಯ ಮಾತಿಗಿದು ಕೇಳು ಸಿಲುಕುವುದಿಲ್ಲ ಮೂಲ ತಿಳಿದವನೆ ಬಲ್ಲ ಮ್ಯಾಲೆ ಮಂದಿರದ 2 ಅಂಜನೆ ಇಟ್ಟ ಗುರು ಕೃಪೆಯಿಂದ ನಿಜ ಗುರುತು ಕಂಡವನೆ ಬಲ್ಲ ಹರಿಮಹಿಮೆಯ 3 ಸ್ವಾನುಭವದ ಸುಖಜ್ಞಾನಿಗಳಿಗಲ್ಲದೆ ನೀನು ನಾನೆಂಬವರಿಗೆ ಖೂನ ತಿಳಿಯದು 4 ಮನಕರಿಗಿ ಮಹಿಪತಿ ಘನ ಬೆರೆದ ಗುರುತ ಏನೋ ಎಂತೋ ತಿಳಿ ಮಾತ ಆನಂದಭರಿತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು