ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ಪ ಪರಮ ಪದದೊಳಗೆ ವಿಷಧರನ ತಲ್ಪದಲಿ ನೀಸಿರಿ ಸಹಿತ ಕ್ಷೀರವಾರಿಧಿಯೊಳಿರಲುಕರಿರಾಜ ಕಷ್ಟದಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೆ 1 ಕಡುಕೋಪದಿಂ ಖಳನು ಖಡುಗವನು ಪಿಡಿದು ನಿ-ನ್ನೊಡೆಯನೆಲ್ಲಿಹನೆಂದು ಜಡಿದು ನುಡಿಯೆದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆಸಡಗರದಿ ಕಂಬದಿಂದೊಡೆದೆ ನರಹರಿಯೆ 2 ಯಮಸುತನ ರಾಣಿಗಕ್ಷಯ ವಸನವನ್ನಿತ್ತೆಸಮಯದಲಿ ಅಜಮಿಳನ ಪೊರೆದೆಸಮಯಾಸಮಯವುಂಟೆ ಭಕ್ತವತ್ಸಲ ನಿನಗೆಕಮಲಾಕ್ಷ ಕಾಗಿನೆಲೆಯಾದಿಕೇಶವನೆ 3
--------------
ಕನಕದಾಸ
ಪರಾಕುಮಾಡದೆಪರಾಮರಿಸಿಎನ್ನಪರಾಧಂಗಳ ಕ್ಷಮಿಸೋ ಪಧರಾರಮಣ ಫಣಿಧರಾಮರಾರ್ಚಿತಸುರಾಧಿಪತಿವಿಧಿಹರಾದಿ ವಂದಿತಅ.¥ Àನರರೊಳಗೆ ಪಾಮರನು ನಾನಿಹಪರಕೆ ಸಾಧನವರೀಯೆ ಶ್ರೀಹರಿ ||ಚರಣಕಮಲಕೆ ಶರಣುಹೊಕ್ಕೆನುಕರುಣದಿಂದ ನಿನ್ನ ಸ್ಮರಣೆಯೆನಗಿತ್ತು 1ಜಪವನರಿಯೆನು ತಪವನರಿಯೆನುಉಪವಾಸ ವ್ರತಗಳ ನಾನರಿಯೆ ||ಕೃಪಾವಲೋಕನದಿಂದ ಆ ಪಾಪಗಳನೆಲ್ಲಅಪಹತವ ಮಾಡೋ ಅಪಾರಮಹಿಮನೇ 2ಕರಿರಾಜನುದ್ಧರಿಸಿ ದ್ರೌಪದಿಯಮೊರೆಯ ಲಾಲಿಸಿ ತರುಳಗೊಲಿದು ನೀಸಿರಿರಮಣ ನಿನ್ನ ಸರಿಯಾರ ಕಾಣೆಪುರಾರಿನುತಸಿರಿಪುರಂದರವಿಠಲ3
--------------
ಪುರಂದರದಾಸರು