ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿನಾ ಯಾಕೆ ಮರೆಯುವಿರಣ್ಣಾ | ಈ ಲೋಕದೊಳಗ | ಶುಭ ಧರೆಯೊಳು ದೀನರುದ್ಧರಿಸುತ ಮೆರೆವಾ ಪ ಮನಸಿನ ಜಾಡ್ಯ ತನವನು ಬಿಡಿಸಿ | ಶ್ರವಣಾದಿಗಳಿಂದ | ಅನುವಾಗಿ ಬೋಧಾಮೃತವನೆ ಕುಡಿಸಿ | ಭಕ್ತಿಯ ಕಳೆಯಂಬಾ | ಘನವಾದಲಂಕಾರವನೆ ತೊಡಿಸೀ | ಯೋಗದ ಸಿರಿಯಿಂದಾ | ಚಿನುಮಯ ಮಂದಿರವನು ತೋರಿಸುವಾ 1 ನೀರಿನಾ ಬೊಬ್ಬುಳಿಯಂತೀ ತನುವು | ಮಿಂಚಿನಾ ತೆರನಂತೆ | ಮೃಗ | ನೀರಂತೆ ಕಾಣದೆ ಮೋಹಿಪ ಮನವು | ಇದನೆಚ್ಚದೆ ಬ್ಯಾಗ | ಜಾರಿ ಶುಭೇಚ್ಛೆ ವಿಚಾರಕ ತಂದು 2 ವೇದಾಂತದ ನುಡಿಯಾ | ಲೋಹ ಪರಸವ ನೆಶಿದಾ | ಸ್ವಾನುಭವ ಸುಖದಾ | ಗತಿ ಮತಿ ಕೂಡಿಸಿ ಗತಿಯನೆ ಕೊಡುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬುದ್ಧಿ ಪೇಳಬಾರದೇನೆ ಗೋಪ್ಯಮ್ಮ ಕೃಷ್ಣಗೆಬುದ್ಧಿ ಪೇಳದಿದ್ದ ಕಾರಣ ಸದ್ದುಮಾಡದೆ ಮುದ್ದುಕೃಷ್ಣನುಮಿಕ್ಕ ಮಕ್ಕಳಂದದಿ ಕೃಷ್ಣನು ಚಿಕ್ಕವನೇನೆಸೀರೆ ದಡದಮ್ಯಾಲಿಟ್ಟು ನೀರಿನಾಟಗಳ ಮಾಡೆ ನಾವೆಲ್ಲರು ಪೋಗಿಕೇಳು ಕೃಷ್ಣನ ದುಡುಕುಗಳನು ವಿಶಾಲ ನೇತ್ರೆಯೋಳೆ
--------------
ಗೋಪಾಲದಾಸರು