ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿನ ದಿನ ಸುದಿನ ನಾಳೆಗೆಂದರೆಂದು ಕಠಿಣ ಮಂದಮತಿಯು ನೀನಾಗದೆ ಈಗ ಮುಕುಂದನ ನಾಮ ಕೀರ್ತನೆಯ ಮಾಡುವುದಕೆ ಪ ಯೋಗಿಗಳೊಡನಾಡು ವಿಷಯದ ಭೋಗವ ನೀಡಾಡು ನಿನ್ನ ನೀ ತಿಳಿವುದಕೆ 1 ಅಸ್ಥಿರ ದೇಹವಿದುನಾನಾವಸ್ಥೆ ಬಾಧಿಸುತಿಹುದು ಬಿಡನೊಡನಾಡುವುದಕೆ 2 ಸಾಧು ಸಂಗತಿಯಿಂದ ಪಾಪವಿಚ್ಛೆದನವದರಿಂದ ಲಕ್ಷ್ಮೀರಮಣನ ಪೂಜಿಸಲಿಕೆ 3
--------------
ಕವಿ ಪರಮದೇವದಾಸರು
ನರ ಹರಿನಾಮವ ನೀ ನೆನೆದರೆ| ಧರಿಯೊಳು ಸಾಲದೇ ಇಹಪರ ದೋರದೆ| ಬರದೇ ಸಾಯಾಸ ಬಡುವರೇ ಪ ಆದಿ ಯುಗಂಗಳಲಿ ತಾಪಸರು| ಸಾದರ ಬಹುದಿನದಿಂದಾ| ಸಾಧಿಸುವಗತಿ ಕೊಡುವ ನೊಂದೆ ಕ್ಷಣದಿ| ಶ್ರೀಧರ ತಾ ದಯದಿಂದಾ1 ಸಂತರ ಸಂಗದಿ ಶ್ರವಣವ ಮಾಡಿ| ಆಂತರ್ಭಾವನೆ ಬಲಿಸೀ| ಭ್ರಾಂತ ನೀನಾಗದೆ ಅನ್ಯ ಸಾಧನದಲಿ| ಸಂತತ ಕೀರ್ತನೆ ಬೆರೆಸೀ2 ಸಾವಿರಕೊಂದೆ ಈ ನುಡಿ ನಿಜವೆಂದು| ಸಾವಧವನಾದವ ಮನುಜಾ| ಭಾವಿಸು ಗುರುಮಹಿಪತಿ ಪ್ರಭು|ನುಡಿಸಿದ| ಆವನಂಬವನೇ ದನುಜಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು