ಒಟ್ಟು 10 ಕಡೆಗಳಲ್ಲಿ , 7 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಬಾ ಮೂಕಾಂಬಾ ಪಾಹಿ ಭಕ್ತಾವಲಂಬಾ ಅಂಬಾ ಮೂಕಾಂಬಾ ಪಾಹಿ ಪ ಶುಂಭ ದನುಜ ಸಂಹಾರಿಣಿ ತಾರಿಣೇ ಶಾಂಭವಿ ಶೂಲಿನಿ ವರಗೌರೀ ಸಾಂಬಶಿವೇ ಸಚರಾಚರ ಸಾಕ್ಷಿಣೆ 1 ಕಾಮ ಜನನಿ ಕರುಣಾ ಜಲಧೇ ಶುಭ ಫಲದೇ ಕಾಮೇಶ್ವರಿ ಕಮಲಾಸನ ಸನ್ನುತೇ ಭೀಮ ಪರಾಕ್ರಮಿ ಭವಭಯ ಭಂಜಿನಿ 2 ವರ ಕುಟಿಜಾಚಲಪುರ ನಿಲಯೇ ಸುರಮುನಿ ಸೇವಿತೆ ಸಹೃದಯೇ ಶರಣಾಗತ ಪರಿಪಾಲಿತೆ ಸುಲಲಿತೆ ಗುರುವಿಮಲಾನಂದಭರಿತೆ ಮೂಕಾಂಬಿಕೆ ಶ್ರೀ ಶ್ರೀ ಶ್ರೀ 3
--------------
ಭಟಕಳ ಅಪ್ಪಯ್ಯ
ಜಯ ಕೊಲ್ಹಾಪುರ ನಿಲಯೇಶ್ರೀನಿವಾಸನ ಸತಿಯೇ ಸಾಗರರಾಜನ ಸುತೆಯೇನಾರಿಯರೆಲ್ಲದು ಕೂಡಿ ಆರತಿ ಬೆಳಗುವೆವು ಪ ಬಿಳಿಯ ಪತ್ತಲವುಟ್ಟು ಕಡಗ ಕಂಕಣ ತೊಟ್ಟುಜಡೆಗೆ ಮಲ್ಲೆಯ ಮಾಲೆ ಮುಡಿದಾ ವರಮಹಾಲಕ್ಷ್ಮಿಗೆ 1 ಮರುಗ ಮಲ್ಲಿಗೆ ಜಾಜಿ ಪಾರಿಜಾತದ ಕುಸುಮಸಿರಿಯ ಚರಣಕೆ ಅರ್ಪಿಸಲೆಂದು ಜಯ ಜಯ ಜಯ 2 ಬಡವರಾ ಮನೆತನಕೆ ಅಭಿಮಾನವನ್ನಿಟ್ಟುನಿರುತ ಕಳಶದಿ ಕುಳಿತ ಮಹಾಲಕ್ಷ್ಮೀಗೆ ಹಾಡುತ ಪಾಡುವೆವು 3 ಇಂದು ನಮ್ಮ ಸದನಕ್ಕೆ ಬಾ ಎಂದುಗದುಗಿನ ವೀರನಾರಾಯಣನ ಅರಸಿಗೆ ಹಾಡುತ ಪಾಡುವೆವು 4
--------------
ವೀರನಾರಾಯಣ
ಮಂಗಳ ಪದ್ಯಗಳು ಜಯ ಜಯ ಶ್ರೀ ಮಹಾಕಾಳಿ ಗೋಕರ್ಣೆ ಮಹಾಬಲ ಪೂಣ್ಯವಧು ಭಯವಿರಹಿತ ಭವನಾಶಿನಿ ಸುಲಲಿತೆÀ ಭಕ್ತ ಜಿಹ್ವಾಗ್ರ ಮಧು ಪ ಪರಮೇಶ್ವರಿ ಪರಿಪೂರ್ಣಾಂಬಿಕ ನಿಜ ಪರಮಾನಂದ ಪರೇ ಪರತರವಸ್ತು ಪರಾತ್ಪರ ಶಾಂಭವಿ ಸುರಮುನಿ ಅಭಯಕರೇ ಜಯಜಯ 1 ವೀಣಾ ಪುಸ್ತಕಧಾರಿಣೆ ಅಗಣಿತ ಪಾನಪಾತ್ರಪ್ರಿಯೇ ವಾಣಿನಿತ್ಯಕಲ್ಯಾಣಿ ವಂದಿತಗುಣ ಶ್ರೇಣಿ ಮುನೀ ಸಾಹ್ಯೇ ಜಯಜಯ 2 ಹರಿಮೋಹಿನಿ ಹರಿವಾಹಿನಿ ಗಿರಿಸುತೆ ಹರಿಣಾಂಕಿಣಿ ಭವ್ಯಮುಖೆ ಹರಿಸಖ ಪ್ರಾಣಸಖೇ ಜಯಜಯ 3 ಸರ್ವಗುಣನಿಲಯೇ ಸರ್ವಾತ್ಮಕಿ ಸರ್ವಯಂತ್ರರೂಪೇ ಶರ್ವಾಣೆ ಸರ್ವೇಶ್ವರಿ ಸದಾಶಿವೇ ಸರ್ವ ಮಂತ್ರರೂಪೇ ಜಯಜಯ 4 ಮೂಲಾಧಾರೇ ಮುಕುಂದಾರ್ಚಿತ ಪದ ಬಾಲಾ ತ್ರಿಪುರಹರೇ ಮಾಲಿನಿ ಮಂತ್ರಾತ್ಮಕಿ ಮಹಾದೇವಿ ತ್ರಿ ಶೂಲಿನಿ ಶಶಿಶಿಖರೇ ಜಯಜಯ 5 ನಿತ್ಯಾರ್ಚನಿ ಸುಖಭೋಗಿನಿ ಸುಲಲಿತೇ ನಿತ್ಯಾನಂದಮಯೇ ನಿತ್ಯಾನಿತ್ಯ ಸ್ವರೂಪಿಣಿ ನಿರ್ಗುಣೆ ಸತ್ಯ ಸಾಧು ಹೃದಯೇ ಜಯಜಯ 6 ಶಂಭಾಸುರಮಹಿಷಾ ಸುರಮೇಕ್ಷಕ ದಂ¨ ಮುಕುಟಧರೇ ಅಂಬಾ ಶ್ರಿ ಮಹಾಕಾಳಿ ವಿಮಲಾನಂದ ಸುಖ ಶರೀರೇ ಜಯ ಜಯ 7 ಇತಿ ಶ್ರೀ ಮಹಾಕಾಳ್ಯಷ್ಟಕ ಸ್ತೋತ್ರಂ ತ್ರಿಕಾಲಪಠತೆ ನಿತ್ಯಂ ನಿತ್ಯಂ ನತಿಸುತಧನ ಪೌತ್ರಾದಿ ಕೃತಾರ್ಥಂ ಭವತಿ ಸತ್ಯಂ ಸತ್ಯಂ ಜಯಜಯ 8
--------------
ಭಟಕಳ ಅಪ್ಪಯ್ಯ
ಲಕ್ಷ್ಮೀದೇವಿ ಅಂಬೋರುಹೇಕ್ಷಣೆ ಅಂಬಾಲತೇ ಜಗ ದಂಬಾ ಪೊರೆಯೆ ಸತತ ಗಂಭೀರ ಗಜಗಮನೆ ಪ ನಂಬಿದೆ ನಿನ್ನ ಪದಾಂಬುಜಯುಗಳವ ಕಂಬು ಕಂಧರಿ ಕನಕಾಂಬರ ಧಾರಿಣಿ ಬೆಂಬಲವೀಯೆ ವಿಳಂಬವ ಮಾಡದೆ ಅ.ಪ `ಯಂಕಾಮಯೇ'ತ್ಯಾದಿ ಶೃತಿಗಳೆಲ್ಲಾ ಪಂಕಜಭವಮುಖ ಸುಮನಸರು ಕಿಂಕರರೆನ್ನುತ ಪೊಗಳುತಿರೆ ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿ ಶ ಶಾಂಕ ಸೋದರಿ ಆತಂಕವ ಬಿಡಿಸೆ 1 ನೀರಜಾತಗಣ ಕೃತ ನಿಲಯೇ ಮಾರಜನಕ ಹರಿ ಪ್ರಿಯ ಜಾಯೆ ಕೋರುವೆ ನಿನ್ನಯ ಪರಮದಯೆ ಸಾರಸಾಕ್ಷಿ ಸರಿಯಾರು ನಿನಗೆ ಕರು ಣಾರಸಮಯೆ ಸುವಿಶಾರದೆ ಜನನಿ 2 ಕನ್ಯೆ ನಿಖಿಲ ಸುರನರರೊಳಗೆ ಮಾನ್ಯೆ ನಿನ್ನ ಪೋಲುವರನ್ಯರುಂಟೆ ನಿನ್ನ ದಾಸನಾದ ಎನ್ನ ಮನೋರಥ ವನ್ನು ತಿಳಿಸೆ ಪ್ರಸನ್ನ ಶ್ರೀ ಹರಿಯಲಿ 3
--------------
ವಿದ್ಯಾಪ್ರಸನ್ನತೀರ್ಥರು
ವಾ - ರಿಜ - ನಿಲಯೇ - ಕ್ಷೀರವಾರಿಧಿ - ತನಯೆ ಪ ಭವ ಭಾರ ಕಳೆಯುವೇ ಅ.ಪ. ಪತಿ ಪ್ರೀಯೆ ತ್ರೈಗುಣಕಾರ್ಯ ಪ್ರವರ್ತಕೆ ಕಾಯುವುದೆನ್ನ1 ನಿತ್ಯಾ - ಅನಿತ್ಯಾ ಜನಕೆ - ಆಧಾರಳೆಮುಕ್ತಾ - ಮುಕ್ತಾವಿನುತೆ ||ವ್ಯಕ್ತಾ ಅವ್ಯಕ್ತಳೆ - ಗುಪ್ತ ಮಹಿಮೆ ಜಗವ್ಯಾಪ್ತೆ ನಿರ್ಲಿಪ್ತಳೆ - ಭೃತ್ಯಾಭಿಷ್ಟದೆ 2 ಅರಿ ವೃತ್ತಿಗಳನು ಹರಿಸುತ್ತಲೆನ್ನ ತವ - ಭೃತ್ಯನೆಂದೆನಿಸೇ 3 ಪೊಂಬಸಿರ - ಮಾತೆಯೇ - ಕೊಡು ಪತಿಹಂಬಲದ - ನೀತಿಯೇ ||ಉಂಬುಡುವೋ ಕ್ರಿಯ - ಬಿಂಬ ಮಾಡಿಸೆ ಪ್ರತಿಬಿಂಬಕುಂಟೆಂಬುವ - ಬಿಂಬ ಕ್ರಿಯಜ್ಞೆ 4 ಸಿಂಧು ಸತಿ 5
--------------
ಗುರುಗೋವಿಂದವಿಠಲರು
ವಾರಿಜಗಣ ನಿಲಯೇ ಕಮನೀಯೆ ತಾಯೇ ಕಾಯೇ ನರಹರಿ ಜಾಯೇ ಪ ಸಾರಸಭವಮುಖ ಸುರ ಮಹನೀಯೆ ಚಾರುವದನೆ ಜಾಂಬೂನದ ಛಾಯೆ ಅ.ಪ ನಿನ್ನ ಕಟಾಕ್ಷ ಮಹಾಸುರಧೇನು ನಿನ್ನ ಮನವು ಚಿಂತಾಮಣಿಯು ನಿನ್ನಯ ಕರಗಳು ಸುರತರುವೆನಗೆ ಇಂದಿರೆ 1 ಹೃನ್ಮಂದಿರದಲಿ ಜ್ಞಾನವನು ಮನ್ಮಂದಿರದಲಿ ಭಾಗ್ಯವನು ಅಮ್ಮ ಬೆಳಸೆ ಕಮಲೆ ಸುವಿಮಲೆ ಇಂದಿರೆ 2 ಈಶನಂಘ್ರಿಯಲಿ ಭಕ್ತಿಯನು ಹರಿ ದಾಸದಾಸ್ಯದಲಿ ಶಕ್ತಿಯನು ಮೋಸಕೆ ಸಿಗದ ವಿರಕ್ತಿಯನು ಕರುಣದಲಿ ನೀಡೆ ಪ್ರಸನ್ನೆ3
--------------
ವಿದ್ಯಾಪ್ರಸನ್ನತೀರ್ಥರು
ವೇಣುಗೋಪಾಲನಿಲಯೇ ವೀಣಾವಿನೋದವಲಯೇ ಪ ವಾಣಿ ಗೌರಿನುತೆ ತಾಯೆ | ಪ್ರಾಣತ್ರಾಣದಾತೆ ಸದಯೆ ಅ.ಪ ಬೃಂದಾವನ ವನವಾಸಿನಿ ಮಂದಾಕಿನಿ ಪ್ರಿತಮೋಹಿನಿ ಮಂದಾತ್ಮಜ ಸಹಚಾರಿಣಿ ಬೃಂದಾರಕ ಸುಖವರ್ಧಿನಿ 1 ಇಂದೀವರ ಸುಮಭೂಷಿಣಿ ವಂದೇ ಮಾಂಗಿರೀಶ ತೋಷಿಣಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಮಹಾಲಕ್ಷ್ಮೀ ಬಂದು ನಿಲ್ಲೇ ಎನ್ನ ಮಂದಿರದಲ್ಲೇ ಕೊಲ್ಲಾಪುರ ನಿಲಯೇ ಪ. ಇಂದಿರಲಾರೆನು ಮುಂದರಿಯೇ ಇಂದಿನ ದಿನ ಅ.ಪ. ನವಮೋಹನಾಂಗಿಯೇ ನೀನು ನೀಲಾಂಬರವನುಟ್ಟು ಜರತಾರಂಚಿನ ಕುಪ್ಪಸ ಬಿಗಿದು ತೊಟ್ಟು ಪಾದಕೊಪ್ಪುವ ಪೈಜಣ ಋಳಿ ಕಾಲುಂಗರವಿಟ್ಟು ಲಲಾಟದ ಕುಂಕುಮ ಬಟ್ಟು 1 ಕರದಲಿ ಕಂಕಣ ಬೆರಳಲಿ ಉಂಗುರ ನಿಮ್ಮ ಮುಖದಿ ಸೂರ್ಯನ ಕಿರಣ ನಾನಾಲಂಕೃತ ಭರಣ ದೇವಿ ನಾ ಮಾಡುವೆ ಶರಣು 2 ನಿನ್ನ ಹೊರತಿನ್ನು ಜಗದೊಳಗೆ ಅನ್ಯರ ಕಾಣೆನೊ ನಿರುತ ನಂಬಿದೆ ನೀಲವೇಣಿ ಪಂಕಜಪಾಣಿ ಕಾಳೀಮರ್ಧನಕೃಷ್ಣನ ರಾಣಿ3
--------------
ಕಳಸದ ಸುಂದರಮ್ಮ
ಶ್ರೀ ಲಕ್ಷ್ಮೀಸ್ತುತಿ ಅಪರೋಕ್ಷಜ್ಞಾನ ಸಂಚಯೇ ಶ್ರೀಪದ್ಮನಾಭ ನಿಲಯೇ ಪ ತಪಯೋಗ ಭಕ್ತಿನಿಧಿಯೆ ಅಪಾರಮಹಿಮಾವಲಯೇ ಅ.ಪ ಕಮಲಾ ಕಮಲಸದನೆ | ಕಮಲನಯನೆ ಕಮಲವದನೆ ಕಮಲಾಂಬರೆ ಕುಂದರದನೆ | ಕಮಲಾಂಬಿಕೆ ಮನಮೋಹನೆ 1 ಸರಸೀರುಹಜಾತನಮಿತೆ | ವರ ಮಾಂಗಿರಿರಂಗಪ್ರೀತೆ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾಗರಾಜ ನರಸುರ ನಮಿತೇ |ಸಾಗರ ಕರುಣೀ ಸರಸ್ವತೀ ||ಕೋಗಿಲ ಗಾನವಿನೋದಿತೇ ಬೇಗನೆವರಗಳ ಕೊಡು ಮಾತೇ ಪಶೃಂಗೇರಿ ಪುರವರ ನಿಲಯೇ |ಮಂಗಲಚರಣೆ ಶಾರದೆಯೇ |ಭೃಂಗಕುಂತಲೆಭವಭಂಗನಿವಾರಿಣಿ |ರಂಗನ ಸುತನರ್ಧಾಂಗಿಯೆ ರಕ್ಷಿಸು 1ಪುಸ್ತಕಹಸ್ತಜಗದ್ಭರಿತೇ ಉತ್ತಮಳೆಮಕುಟಾನ್ವಿತದಾತೇ |ಪೃಥ್ವಿಪಾಲ ಮನದರ್ಥಿಯ ಸಲಿಸುವ |ಸ್ವಸ್ತಿಶ್ರೀಮನ್ಮಥನತ್ತಿಗೆ ಶಾರದೆ 2ಕುಂದಮಂದಾರಪುಷ್ಪಗಳ |ಚಂದಣ ಕುಂಕುಮ ಗಂಧಂಗಳಮಂದಗಮನೆ ಅರವಿಂದನಯನೆ ಗೋವಿಂದನ ಸೊಸೆಗಾನಂದದೊಳರ್ಚಿಸಿ 3
--------------
ಗೋವಿಂದದಾಸ