ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಪನ್ನ ಆರ್ತ ಜನರ ಕಾವ ನೀನೆ ಹರಿ ಎಂಬರು ಆಪತ್ತು ಬಂದರೂ ನಿನ್ನನೇ ನೆನೆವರು ಸಂಪತ್ತು ಬಂದರೂೀ ನೀ ನಿತ್ತೆ ಎಂಬರು ನಿನ್ನಾಪ್ತರು ಕೃಷ್ಣಾ ಎಂದೊದರುವರು ಅನ್ಯ ದೇವರ ನೆನೆಯರೊ ನಿನ್ನವರು ನಿನ್ನರೂಹ ಆ ಕರುಣಾ ಆ ಆಭರಣ ಆ ನಿನ್ನ ನಿಜರೂಪ ಆ ಪರಮ ಪುರುಷ ನಿನ ಕಂಡು ನಲಿವರು ನಿನ್ನಾಧೀನ ನಾನೆಂಬರು ನಿನ್ನ ಭಕ್ತರು ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ಕೇಳಮ್ಮ ತಂಗಿ ಕೇಳಮ್ಮ ಪ ಕೇಳಿ ಪುರಾಣದಿ ಪೇಳಿದ ಕೃಷ್ಣನ ಲೀಲೆಯ ಪಾಡುತ ``ಬಾಳಮ್ಮ'' ಅ.ಪ ನಿಷ್ಟೆಯಿಂದಲಿ ಬಲು ಶಿಷ್ಟಳಾಗುತ ದುಷ್ಟರಿಂದ ದೂ``ರಾಗಮ್ಮ'' 1 ಹರಿದಾಸರಪದ ಹರುಷದಿ ಹಾಡುತ ಗುರು ಹಿರಿಯರ ಮನ ``ಕೊಪ್ಪಮ್ಮ'' 2 ಕಾಲ ಕಳೆಯದೆ ಶೀಲಮತಿ ನೀ “ನಾಗಮ್ಮ'' 3 ವಿದ್ಯೆಯ ಕಲಿತು ಬದ್ಧಿವಂತ | ಳಾ | ಗಿದ್ದರೆ ಸುಖ ಶತ “ಸಿದ್ಧಮ್ಮ'' 4 ವಂದಿಸಿ ತುಲಸಿ ವೃಂದಾವನ ಪೂಜಿಸು ಮುಂದೆ ನಿನಗೆ ``ಆನಂದಮ್ಮ'' 5 ಹೀನರ ಬೆರೆಯದೆ ಮೌನವ್ರತದಲಿ | ಜ್ಞಾನಿ ಜನರ ನೀ ``ನರಸಮ್ಮ'' 6 ಮೂಢ ಜನರ ಒಡನಾಡದೆ ಭಕ್ತಿಲಿ ಮಾಡುವ ಸಜ್ಜನರ ``ಸಂಗಮ್ಮ'' 7 ಧರ್ಮದಿಂದ ಸತ್ಕರ್ಮ ಮಾಡುತ ನಿರ್ಮಲಗೊಳಿಸಿ ಸಂತ ``ರಂಗಮ್ಮ'' 8 ಪವನ ಪಿತನ ಕಥಾಶ್ರವಣವೆ ಪುಣ್ಯವು ಭವ ವಿದು ಕತ್ತಲು ``ಕಾಳಮ್ಮಾ'' 9 ಸದನಕೆ ಬಂದಿಹ ಬುಧರಾವರಿಸಲು ಮಂದಬಲು ನಿನಗದ ``ರಿಂದಮ್ಮ'' 10 ಎಂದೆಂದಿಗು ಪರನಿಂದೆಯ ಮಾಡದೆ ಮಂದಿರದಿರುವದೆ ``ಚಂದಮ್ಮ'' 11 ಸಾರಿದ ಜನರಘದೂರಗೈದು ಹರಿ ತೋರುವ ನುಜಗುರು ``ಈರಮ್ಮ'' 12 ಅತ್ತಿಯ ಮನಿಗೆ ಹೆತ್ತವರಿಗೆ ಉತ್ತಮ ಕೀರ್ತಿ ``ತಾರಮ್ಮ'' 13 ಗೋವಿಪ್ರಾಳಿ ಸೇವಿಸುತಿರುವದೆ ಕೋವಿದರಿಗೆ ಬಲು ``ಜೀವಮ್ಮ'' 14 ಭಾವದೊಳಗೆ ಪರದೇವನೆ ಪತಿಯೆಂದು ಪಡಿ ``ಭೋಗಮ್ಮ'' 15 ಭೇದಜ್ಞಾನ ಸಂಪಾದಿಸು ಕ್ಷಮಿಸುವ ಶ್ರೀಧರ ನಿನ್ನಾಪ ``ರಾಧಮ್ಮ'' 16 ಕೋಪದಿ ಪರರಿಗೆ ತಾಪವ ಬಡಿಸಲು ಲೇಪವಾಗುವದು ``ಪಾಪಮ್ಮ'' 17 ಇಂಗಡಲಾತ್ಮಜನಂಘ್ರಿ ಸರೋಜಕೆ ಸತಿ ``ತುಂಗಮ್ಮ'' 18 ದಾಸಜನರ ಸಹವಾಸದೊಳಿರುವದೆ ಕಾಶಿಗಿಂತ ವಿ``ಶೇಷಮ್ಮ'' 19 ಕಲಿಯುಗದಲಿ ಸಿರಿನಿಲಯನ ನೆನೆದರೆ ಸುಲಭ ಮುಕ್ತಿ ತಿಳಿ ``ಕಂದಮ್ಮ'' 20 ಪತಿಯು ಸದ್ಗತಿಗೆ ಗತಿ ಎಂದರಿತಹ ಮತಿಯುತ ಸತಿಯೆ ``ಯವನಮ್ಮ'' 21 ಮಧ್ವಸಿದ್ಧಾಂತದ ಪದ್ಧತಿ ತಪ್ಪದೆ ಇದ್ದರೆ ಹರಿಗತಿ ``ಮುದ್ದಮ್ಮ'' 22 ಸೋಗಿಗೆ ನೀ ಮರುಳಾಗಿ ನಡೆದರೆ ಯೋಗಿ ಜನರ ಮನ ``ಕಲ್ಲಮ್ಮ'' 23 ಶೀಲೆ ಗುಣದಿ ಪಾಂಚಾಲೆಯು ಎಲ್ಲ ಬಾಲೆಯರೊಳು ``ಮೇಲಮ್ಮ'' 24 ನೇಮದಿ ನಡೆದರೆ ಪ್ರೇಮದಿ ಸಲಹುವ ಶಾಮಸುಂದರನು ``ಸತ್ಯಮ್ಮ'' 25
--------------
ಶಾಮಸುಂದರ ವಿಠಲ
ಗೋಪಾಲ ಹರಿ ವಿಠಲ ನೀ ಪಾಲಿಸಿವಳಾ ಪ ಪಾಪೌಘಗಳ ಕಳೆದು ಸುಪವಿತ್ರಳನೆ ಮಾಡಿಕೈ ಪಿಡಿದು ಪೊರೆಯಿವಳ | ಗೋಪಾಲ ಬಾಲ ಅ.ಪ. ನಿನ್ನ ಸೇವಿಸೆ ದಾಸ | ಘನ್ನ ದೀಕ್ಷೆಯ ಮನದಿಕನ್ಯೆ ಬಹು ಭಕ್ತಿಯಲಿ | ಬಿನ್ನವಿಸಿ ಇಹಳೊಮನ್ಯು ಸೂಕ್ತೋದಿತನೆ | ಚೆನ್ನ ತೈಜಸನಾಗಿಇನ್ನು ಪೇಳ್ದಂಕಿತವ | ಕನ್ಯೆ ಗಿತ್ತಿಹನೋ 1 ಪತಿಸೇವೆ ದೊರಕಿಸುತ | ಪತಿವ್ರತೆಯಳೆಂದೆನಿಸಿಅತುಳ ವೈಭವ ತೋರಿ | ಹಿತದಿಂದ ಪೊರೆಯೋವ್ರತತಿ ಜಾಸನ ಪಿತನೆ | ಗತಿಗೋತ್ರ ನೀನೆನಿಸಿಸುತೆಸಮಳ ಪೊರೆವುದಕೆ | ಮತಿ ಮಾಡೊ ಹರಿಯೇ 2 ತಾರತಮ್ಯ ಜ್ಞಾನ ಮೂರೆರಡು ಭೇದಗಳಸಾರತತ್ವಗಳುರುಹಿ | ಸಾರತಮ ನಿನ್ನಾಪಾರುಗಾಣದ ಮಹಿಮೆ | ಚಾರುಕೀರ್ತಿಸುವಂತೆತೋರೊ ಸನ್ಮಾರ್ಗವನು | ವಾರಿನಿಧಿ ಶಯ್ಯಾ 3 ಹರಿಗುರೂ ಸದ್ಭಕ್ತಿ | ಹಿರಿಯರಲಿ ಆಸಕ್ತಿಸರ್ವ ಕಾರ್ಯವು ಹರಿಯ ವರಸೇವೆಯೆಂಬಾವರಮತಿಯ ಕರುಣಿಸುತ | ಹರಿಯು ತಾನಿತ್ತುದನಹರುಷದಲಿ ಉಂಬಂಥ | ಅರಿವು ಕೊಡು ಸತತ 4 ಭಾವಜಾರಿಯ ತಾತ | ಪಾವಮಾನಿಯ ಪ್ರೀತಕೇವಲಾನಂದಮಯ | ಜೀವ ಪರತಂತ್ರಾಈ ವಿಧವು ಇರಲಾಗಿ | ನೀವೊಲಿಯಲಿನ್ಯಾರುಕಾವರನು ಕಾಣೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪ್ರಭುರಾಯ ಪ್ರಭುರಾಯ ಅಭಿನಂದಿಸುವೆನು | ಶುಭಮತಿ ಪಾಲಿಸು ಪ ಶ್ರೀಶಗುರಪ್ರಾಣೇಶದಾಸರಿಂದ ಪೋಷಿತನಾದ ಭೂಸುರ ಪ್ರೀಯ 1 ಭಾವÀಭಕ್ತಿಲಿ ಸೇವಿಸಿ ಸಂತಸ ಶ್ರೀವರದೇಂದ್ರರ | ನೀಮೊಲಿದ‌ಘನ 2 ಕೋಶಿಗಿ ಗುರು ಉಪದೇಶದಿಂದ ವರ ದೇಶವಿಠಲನ ದಾಸನೆಂದೆನಿಸಿದ 3 ಕಪ್ಪುಗೊರಳನುತ | ಕುಪ್ಪಿಯ ಭೀಮನ ತಪ್ಪು ಕ್ಷಮಿಸೆಂದು | ತಪ್ಪದೆ ಸ್ತವಿಸಿದ 4 ಅನ್ಯನಲ್ಲನಾ ನಿನ್ನಾಪ್ತನು ನಿಜ ವೆನ್ನುತ ಬಿನ್ನಪ ಮನ್ನಿಸಿ ನೋಡೋ 5 ರಾಮಸ್ತವನವನು ನೇಮದಿಗೈಯುವ ಕೋಮಲಾಂಗದ ಹೇಮಮ ಬಂಧು 6 ನಂದಜ ಶಾಮಸುಂದರವಿಠಲನ ಮಂದಜ ಮಧುಪ7
--------------
ಶಾಮಸುಂದರ ವಿಠಲ
ಶ್ರೀನಾಥ ಸಲಹೊ ಸತತ ನಿನ್ನ ಪದ ಧ್ಯಾನಾನಂದವಿತ್ತು ಪ ತಂದೆ ನಿನ್ನನುಗ್ರಹದಿ | ಜಗದೊಳಗೆ ಬಂದೆ ಭೂಸುರ ಜನ್ಮದಿ ಪೊಂದಿ ತ್ವತ್ವದ ಭಜಿಸದೆ ಭವದೊಳಗೆ ಬೆಂದು ಬೆಂಡಾದೆನು ನಾ1 ಪಗೆಯಾರುಖಳರು ಎನ್ನ | ಪಾಶದಲಿ ಬಿಗಿದು ಬಂಧಿನಿ ಎಳೆಯುತ || ಬಗೆ ಬಗೆಯ ಮಂಗನಂತೆ ಕುಣಿಸ್ಯಾಡಿ ಹಗರಣವ ಮಾಡುತಿಹರೋ 2 ಪರಸ್ವತಿಯರ ರೂಪನೋಡಿ | ಮರಳಾಗಿ ಬೆರೆತವಳ ಕ್ರೀಡಿಸುತಲಿ ಪರಗತಿಯ ಚಿಂತೆ ಬಿಟ್ಟು | ಪರಮಾತ್ಮ ನರಕಕ್ಕೆ ಗುರಿಯಾದೆನೋ 3 ಧನದಾಪೇಕ್ಷೆಯಿಂದ | ಧನಿಕರ ಮನೆಗ್ಹೋಗಿ ಲಜ್ಜೆ ತ್ಯಜಿಸಿ ಘನದಾತರೆಂದವರನು | ಬಲು ತುತಿಸಿ ದಿನಗಳೆದೆ ಶುನಕನಂತೆ 4 ಹರಿನಿನ್ನವಾಸರದಿ | ಉಪವಾಸ ಇರುಳು ಜಾಗರವ ಜರಿದು ಬರಿದೆ ಕಾಲವ ಕಳೆದೆನೋ ರವಿಸುತಗೆ | ಅರುಹಲು ಬಾಯಿಲ್ಲವೋ 5 ಪವಮಾನ ಕೃತಸುಶಾಸ್ತ್ರ | ಪ್ರವಚನವ ಕಿವಿಗೊಟ್ಟು ಕೇಳಲಿಲ್ಲ ಅವನಿ ದ್ವಿಜರ ಪಾದವ ಸೇವಿಸದೆ ಭಾರ ನಾನಾದೆನೊ 6 ಬಾಯೆಂದು ಕೂಗಿ ಕರೆವೆ | ಸರ್ವೇಶ ಓಯೆಂದು ಬೇಗ ಬಾರೋ || ಮಾಯಾ ಮೋಹವನೆ ಬಿಡಿಸೋ | ನಿನ್ನಂಘ್ರಿ ತೋಯಜಧ್ಯಾನವನಿತ್ತು 7 ಶಿಲೆಯಾದ ಸಲಹಿದ ತೆರದಿಲಿ ತುಳಿದು ಸಲಹಿದ ತೆರದಲಿ ಇಳಿಸುರನ ಮಹತ್ಪಾಪ ಕಳೆದವಗೆ ಸಲೆಮುಕ್ತಿ ಸಲಿಸಿದಂತೆ 8 ಇಂದಿನಾರಭ್ಯವಾಗಿ | ಎನ್ನಿಂದ ನಿಂದ್ಯಕರ್ಮವ ನಡೆಸದೆ ಮಂದರೋದ್ಮರನೆ ನಿನ್ನ |ಸದ್ಭಕ್ತ ವೃಂದದೊಳು ಕೂಡಿಸಯ್ಯ 9 ಅಪರಾಧ ಕ್ಷಮಿಸುವಲ್ಲಿ | ನಿನ್ನಂಥ ಕೃಪಣವತ್ಸಲ ಕಾಣೆ ಕೃಪೆಯಿಂದ ಕರಪಿಡಿಯೊ ಕರಿವರದ ಕೌಸ್ತುಭ ಕೃಷ್ಣ 10 ನಿನ್ನ ನಾಮದ ಭೂಸುರ ಕುಲಹೀನ ಕನ್ಯೆಯಳ ಸಂಗ ಮಾಡಿ ನಿನ್ನ ಪರ್ವತ ಮೆಟ್ಟಿಲು ಅವಗೊಲಿದು ನಿನ್ನಾಪ್ತನೆನಿಸಿದಂತೆ 11 ನಿನ್ನೊಲುಮೆ ಪಾತ್ರರಾದ ಗುರು ಜಗನ್ನಾಥಾಖ್ಯ ದಾಸಾರ್ಯರ ಸನ್ನಿಧಾನದಲಿ ಇಪ್ಪ | ಇವನೆಂದು ಮನ್ನಿಸೊ ಮಹಮಹಿನೆ 12 ದುರಿತ ರಾಶಿ | ಪೇಳಲ್ಕೆ ಭೂಮಿಧರಗಳವಲ್ಲವೋ ಪ್ರೇಮದಿಂದಲಿ ಪಾಲಿಸೋಮಮಸ್ವಾಮಿ ಶಾಮಸುಂದರ ದಯಾಳು 13
--------------
ಶಾಮಸುಂದರ ವಿಠಲ
ಶ್ರೀಆನಂದಮಯಸ್ತೋತ್ರ40ಪೂರ್ಣ ಸುಗುಣಾರ್ಣವನೆಅನಘಪರಮೇಶ್ವರನೆಆ ನಮಿಪೆ ಶ್ರೀರಮಣಆನಂದಮಯವಿಷ್ಣುಪನಿನ್ನಯ ಸುಮಹಿಮೆಗಳ ನಿನ್ನಿಚ್ಛೆಯಿಂದಲೇಚೆನ್ನಾಗಿ ತಿಳಿಸಿ ಅಚ್ಛಿನ್ನ ಭಕ್ತಿಯನೀಯೊ ಅಪಸುಖರೂಪ ಪಾಲನಾಲಯಕರ್ತ ಲಕ್ಷ್ಮೀಶನಿಷ್ಕಳನು ನೀ ಸದಾಕೈವಲ್ಯಸುಖದಆಗಮಸುಶಾಸ್ತ್ರೈಕ ವಿಜÉÕೀಯ ಪರಬ್ರಹ್ಮಅಂಗಾಂಗ್ಯಭಿನ್ನ ಆನಂದ ಸಂಪೂರ್ಣ 1ಬ್ರಹ್ಮಶಬ್ದದಿ ಮುಖ್ಯವಾಚ್ಯ ಬಹು ಆವರ್ತಿಬ್ರಹ್ಮಆನಂದಮಯನೀ ಇತರರಲ್ಲಬ್ರಹ್ಮಪರಿಪೂರ್ಣಹರಿಸರ್ವನಾಮದಿ ನೀನೆಬಹುರೂಪ ಸರ್ವಸ್ಥ ಈಶ್ವರಆನಂದಮಯ2ಚಿತ್ಪ್ರಕೃತಿ ನಾಲ್ಮೊಗನು ಅಷ್ಟಮೂರುತಿ ಎಂಬರುದ್ರನು ದೇವೇಂದ್ರ ಸುರಗುರುವಿಪ್ರಇಂಥ ಯಾರೂ ವಸ್ತು ಯಾವುದೊ ಅಲ್ಲವುಆನಂದಮಯನೀನು ವಿಷ್ಣು ಪರಬ್ರಹ್ಮ3ಪ್ರಕೃತಿ ಪ್ರಜಾಪತಿ ಸದಾನಂದ ದಶಪ್ರಮತಿರುದ್ರಾಷ್ಟಮೂರ್ತ್ಯಾದಿ ಸರ್ವ ಶಬ್ದಂಗಳುಪರನೆ ಬ್ರಹ್ಮನೆ ವಿಷ್ಣು ಮುಖ್ಯ ವಾಚಕ ನಿನಗೆಇರುವ ಈ ಸರ್ವರೊಳು ಸುಖಪೂರ್ಣ ಸ್ವಾಮಿ 4ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯಆನಂದಮಯಎಂಬ ಐದು ಶಬ್ದಂಗಳು 1ಆನಂದಮಯಶಬ್ದದಿಂದ ಗ್ರಹಿಸಲುಬೇಕುಆನಂದಮಯಬ್ರಹ್ಮ ನೀನೆ ಇತರರು ಅಲ್ಲ5ಶಿರ ಬಾಹುದ್ವಯ ಮಧ್ಯಚರಣಅಂಗಾಂಗಗಳುಪೂರ್ಣಆನಂದಮಯಎಂದೂ ಅಭಿನ್ನಉರು ಸುಗುಣ ಪರಿಪೂರ್ಣ ವಿಷ್ಣು ಆತ್ಮನು ಬ್ರಹ್ಮಶೃತಿಯು ಬಹುಸಾರುತಿದೆ ಸುಖಮಯನು ಎಂದು 6ಅನ್ನಮಯ ಅನಿರುದ್ಧ ಪ್ರಾಣಮಯ ಪ್ರದ್ಯುಮ್ನಮನೋಮಯ ಸಂಕರ್ಷಣನು ವಿಜ್ಞಾನಮಯನುಅನಘಮಾಯಾರಮಣ ಪರವಾಸುದೇವ ನೀಆನಂದಮಯಶ್ರೀಶ ನಾರಾಯಣ ಬ್ರಹ್ಮ7ಪಂಚ ಕೋಶಂಗಳಲಿ ತನ್ನಾಮ ತದ್ಭಿನ್ನಕಿಂಚಿತ್ತು ಲೇಪವಿಲ್ಲದೆ ಇದ್ದು ನಿಯಮಿಸುವೆಪಂಚ ಸುಖರೂಪದಿಂ ಪಂಚವರ್ಣದಿ ಜ್ವಲಿಪೆಸಂಚಿಂತಿಪರ್ಗೆ ಸುಖವೀವೆ ಸುಖಮಯ ಬ್ರಹ್ಮ 8ಅಧಿಕಾರಿ ಆನಂದಪ್ರಚುರಬಹುರೂಪ ನೀಸರ್ವರೂ ನಿನ್ನಿಂದ ಉಪಜೀವ್ಯರೊ ಸ್ವಾಮಿಸರ್ವರಿಗು ಪ್ರೇರಕನು ಸತ್ತಾಪ್ರವೃತ್ತಿದನುಸರ್ವೇಶ ಸುಖಪೂರ್ಣ ಸರ್ವವ್ಯಾಪಿಯೆ ದೇವ 9ಆನಂದಮಯನೀನೆ ಆನಂದೋದ್ರೇಕದಿಂಪ್ರಾಣಿಗಳ ಧರ್ಮಗಳ ಪ್ರವೃತ್ತಿ ಮಾಡುವೆಯೊಆನಂದೋದ್ರೇಕದಿಂ ಸರ್ವತ್ರವ್ಯಾಪ್ತ ನೀಆನಂದಮಯಇತರ ಲೋಕಚೇಷ್ಟಕರಿಲ್ಲ10ಅಂಗಾಂಗಿತ್ವದಿ ಭಗವಂತ ನೀ ಕ್ರೀಡಿಸುವೆರಂಗ ನೀ ಸತ್ಯಂ ಜ್ಞಾನಮನಂತಂ ಬ್ರಹ್ಮನೆಂದುಹೊಗಳುತಿದೆ ಶೃತಿಯು ಸುಖಸಾರಾತ್ಮ ಚಿನ್ಮಾತ್ರಚಾರ್ವಾಂಗ ನಿನ್ನ ತಿಳಿಯದೆ ಬೇರೆ ಗತಿಯಿಲ್ಲ 11ಸತ್ಯ ಸತ್ಸøಷ್ಟಿಕರ್ತ ಜೀವನಪ್ರದನುಸರ್ವ ಪ್ರವರ್ತಕನು ಸಂಹಾರಕರ್ತಅಶೇಷಸಾಮಾನ್ಯ ವಿಶೇಷಜ್ಞಾನವು ಜ್ಞಾನದೇಶಾದಿಪರಿಚ್ಛೇದ ಶೂನ್ಯವು ಆನಂತ 12ಅನ್ನಮಯದಿಂ ಸೃಷ್ಟಿ ಸಂಹಾರಜೀವನವುಪ್ರಾಣಮಯ ಶಬ್ದ ಸಹ ಜೀವನಪ್ರದವುಮನೋಮಯ ಶಬ್ದದಿಂ ಸಾಮಾನ್ಯಜ್ಞಾನವುವಿಜ್ಞಾನಮಯ ಶಬ್ದದಿ ವಿಶೇಷಜ್ಞಾನ 13ಆನಂದಮಯಶಬ್ದದಿಂದಲಿ ಜÉÕೀಯವುಆನಂದಾದ್ಯಖಿಳಗುಣ ಅಪರಿಚ್ಛಿನ್ಮತ್ವಅನ್ನಮಯ ಪ್ರಾಣಮಯ ಸತ್ಯಂ ಬ್ರಹ್ಮಮನೋಮಯ ವಿಜ್ಞಾನಮಯ ಜ್ಞಾನಂ ಬ್ರಹ್ಮ 14ಆನಂದಮಯಆನಂತಂ ಬ್ರಹ್ಮ ಎಂದೀ ರೀತಿಮಂತ್ರವರ್ಣೋಕ್ತ ಶಬ್ದಗಳಿಗೇಕಾರ್ಥಆನಂದಮಯಮೊದಲಾದ ಶಬ್ದಗಳಿಂದಆನಂದಪರಿಪೂರ್ಣ ವಿಷ್ಣು ನೀನೇ ವಾಚ್ಯ 15ಆತ್ಮ ನೀಆನಂದಮಯಇತರರು ಅಲ್ಲಆನಾತ್ಮರು ಸಂಪೂರ್ಣಸ್ವತಂತ್ರರು ಅವರುಚೇತನಾಚೇತನದಸತ್ತಾನಿನ್ನಿಂದಲೇಆನಂತ ನೀ ಸರ್ವಗನು ಆಸಮ ಪ್ರಭು ಐರ 16ಬ್ರಹ್ಮ ವಿದಾಪ್ನೋತಿ ಪರಂ ಎಂದು ಉಪನಿಷದ್ವಾಕ್ಯಬ್ರಹ್ಮಾಪರೋಕ್ಷವೇ ಮೋಕ್ಷಕ್ಕೆ ಕಾರಣಬ್ರಹ್ಮೇತರ ವಿರಿಂಚಾದಿ ಜೀವರ ಜ್ಞಾನಮೋಕ್ಷಕೊಡಲು ಎಂದು ಶೃತಿಯು ಪೇಳುತಿದೆ 17ತಮೇವಂ ವಿದ್ವಾನಮೃತ ಇಹಭವತಿನಾನ್ಯಃ ಪಂಥಾ ಅಯನಾಯ ವಿದ್ಯತಾಎಂಬ ಶೃತ್ಯನುಸಾರ ನಿನ್ನಾಪರೋಕ್ಷ ವಿನಾಮುಕ್ತಿಯು ಲಭಿಸದು ಅನ್ಯಜ್ಞಾನದಿ ಎಂದೂ 18ಆನಂದಪ್ರಚುರ ಪೂರ್ಣಾನಂದಮಯ ನೀನೆಆನಂದ ತರತಮದಿ ಜೀವರಲಿ ಉಂಟುಅತ್ಯಂತ ಭೇದವು ನಿನಗೂ ಜೀವರಿಗೂಅನಂತ ಅಪರಿಮಿತ ಆನಂದಿ ನೀನೆ 19ರುದ್ರನ ಶತಗುಣಿತ ಆನಂದ ನಾಲ್ಮೊಗನಒಂದು ಆನಂದವು ಎಂಬುವುದು ಶೃತಿಯುಆನಂದ ಪರಿಮಿತವು ಜೀವರಿಗೆ ಈ ರೀತಿಆನಂದ ಅಪರಿಮಿತ ನಿನ್ನಯ ಸ್ವರೂಪ 20ಸುಖಮಯ ನಿನ್ನಪರಿಮಿತಾನಂದಾದಿಗಳನುಸಾಕಲ್ಯತಿಳಿದವರು ಇಲ್ಲವೇ ಇಲ್ಲಸಾಕಲ್ಯಶಬ್ದಗಳು ಪೊಗಳಲರಿಯವು ನಿನ್ನಏಕಸುಖಮಯ ನೀನು ಜೀವರಿಗೆ ಭಿನ್ನ 21ತತ್ವಮಸ್ಯ ಹರಿಬ್ರಹ್ಮಾಸ್ಮಿ ಪುರುಷಯೇ ವೇದಂಸರ್ವಂ ಎಂಬಂಥಾ ಇಂಥ ಶೃತಿ ಮಾತುಗಳುಜೀವೇಶ ಐಕ್ಯವನು ಬೋಧಿಸುವವಲ್ಲವುಸರುವಿಚಾರ ನಿರ್ಣಯದಿ ಭೇದಬೋಧಕವೆ 22ಜೀವರಿಗೆ ಜನ್ಮಜೀವನಸತ್ತಾದಾತನುಸರ್ವಾಶ್ರಯ ಸರ್ವನಿಯಾಮಕನು ಆತ್ಮಜೀವರು ಪರಬ್ರಹ್ಮಜ್ಞಾನದಿಂ ಪೊಂದುವಸೋಚಿತಪೂರ್ಣತ್ವ ಕೊಡುವ ನೀ ಬ್ರಹ್ಮ 23ಸರ್ವಕ್ಕೂ ಭಿನ್ನ ನೀ ಸರ್ವತ್ರ ಸರ್ವದಾಸರ್ವದೊಳು ಇರುವಂಥ ಸರ್ವೇಶ್ವರಸರ್ವ ಸತ್ತಾದಿ ಪ್ರದತ್ವ ಸ್ವಾಮಿತ್ವದಿಂಸರ್ವ ನೀನೆಂದೆನಿಸಿಕೊಂಬೆಯೊ ದೇವ 24ಸರ್ವವಂದ್ಯನು ವಿಷ್ಣು ಸರ್ವಾಂತರ್ಯಾಮಿಯುಸ್ವತಂತ್ರ ಈಶನು ಸರ್ವಜೀವರಿಗೆ ಭಿನ್ನಸರ್ವಸ್ವಾಮಿಯು ನೀನು ಎಂದರಿತು ಭಜಿಪರಿಗೆಸರ್ವಶೋಕವ ಬಿಡಿಸಿ ಮೋಕ್ಷಸುಖವೀವೆ 25ಸರ್ವಜಡ ಚೇತನದಿ ಅಂತರ್ನಿಯಾಮಕನುಸರ್ವಜಗದಾಧಾರ ಏಕ ಬಹುರೂಪತ್ವಂ ಅಸೌ ಅಹಮೆಂದು ಸರ್ವನಾಮದಿ ವಾಚ್ಯಸರ್ವಜಡ ಚೇತನಕೆ ವಿಲಕ್ಷಣನು ಸ್ವಾಮಿ 26ಅತೀಂದ್ರಿಯವು ಬ್ರಹ್ಮವಿಷಯಕ ಜ್ಞಾನಶೃತ್ಯನುಸಾರವಿಲ್ಲದ ಅನುಮಾನದುಸ್ತರ್ಕದಿಂದಲಿ ಲಭಿಸದು ಯಾರಿಗೂಮೋದಮಯ ಶ್ರೀ ವಿಷ್ಣು ಜೀವರಿಂ ಭಿನ್ನ 27ಬದ್ಧರೊಳು ಮುಕ್ತರೊಳು ಇದ್ದು ನೀ ನಿಯಮಿಸುವೆಬದ್ಧರಂತೇ ಮುಕ್ತಜೀವರಿಗೂ ಭಿನ್ನಮುಕ್ತರಿಗೆ ಅವರವರ ಆನಂದ ಅನುಭವವುಅಧೀನ ನಿನ್ನಲ್ಲಿಆನಂದಮಯಶ್ರೀಶ28ಸದಮಲ ಬ್ರಹ್ಮ ನಿನ್ನ ಪರೋಕ್ಷಜ್ಞÕನಿಗೆಪದುಮಸಂಭವ ಸಹ ನೀನು ಸಹ ಇದ್ದುಒದಗಿಸುವೆ ಸೋಚಿತ ಮೋಕ್ಷಸುಖ ಅವರಿಗೆಹೇ ದಯಾನಿಧೇ ನಮೋ ಆನಂದಪೂರ್ಣ 29ಅನ್ನ ಪ್ರಾಣ ಮನೋವಿಜ್ಞಾನಆನಂದಮಯಪರಿಣಾಮ ಅಭಿಮಾನರಹಿತ ಅಧಿಕಾರಿಆನಂದ ಪ್ರಚುರನೇ ಲೋಕಚೇಷ್ಟಕ ನೀನೆಮಂತ್ರವರ್ಣೋಕ್ತ ಮಹಾಮಹಿಮ ಸುಖಪೂರ್ಣ 30ವನಜಾಸನಾದಿಗಳು ಆನಂದಮಯರಲ್ಲನಿನ್ನಿಂದ ಉಪಜೀವ್ಯ ಭಿನ್ನರು ಅವರುಆಮ್ನಾಯದಿಂ ವೇದ ದುಸ್ತರ್ಕಕತಿ ದೂರಆನಂದಮಯವಿಷ್ಣು ಮುಕ್ತರಿಗೂ ಆಶ್ರಯನು31ಜ್ಞಾನಸುಖಪೂರ್ಣ ಪ್ರಸನ್ನ ಶ್ರೀನಿವಾಸಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಎನ್ನ ಒಳಹೊರಗಿದ್ದು ನೀನೆ ನುಡಿದೀ ಗ್ರಂಥನಿನಗೆ ಅರ್ಪಣೆ ಸುಹೃದನಿತ್ಯಸಂತೃಪ್ತ32
--------------
ಪ್ರಸನ್ನ ಶ್ರೀನಿವಾಸದಾಸರು