ಒಟ್ಟು 11 ಕಡೆಗಳಲ್ಲಿ , 9 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಪರಿಯಲಿ ನಿನ್ನನು ವೊಲಿಸುವೆ ದೇವ ಎನ್ನೊಳಗೆ ಒಂದಾದರೂ ಗುಣವಿಲ್ಲಾ ಪ ಅರಿಯೆ ಧರ್ಮವ ಪಾಪ | ಮರಿಯೆ ಉತ್ತಮರನ್ನ ಕರಿಯೆ ನಾಮಕೆ ಬಾಯಿ | ತೆರಿಯೆ ಸುರಿಯೆ ಜರಿಯೆ ಮೋºಕೆ ಮನ | ಮುರಿಯೆ ವ್ಯಾಕುಲ ಜ್ಞಾನಾಂ | ಕುರಿಯ ನಿನ್ನವರೊಳು | ಬೆರಿಯೆನರಿಯೆ ಸರಿಯೆ ದುಸ್ಸಂಗ ಕಥಾ | ಬರಿಯೆ ಕರದಿ ಯಾತ್ರಿಗೆ ಹರಿಯೆ ಪುಣ್ಯ ತೀರ್ಥ | ವರಿಯೆ ಮೊರಿಯೆ ಹರಿಯೆ ಜಗದೊರೆಯೆ | ಸಿರಿದೊರೆಯೆ ಅಘ ಕರಿಗೆ ಕೇಸರಿಯೆ ಮತ್ತಾ | ರರಿಯೆ ನಿನ್ನವರ ಮರಿಯೆ1 ನಡಿಯೆ ಸುಮಾರ್ಗ ವ್ರತವಿಡಿಯೆ ಮುಡಿದ ಪೂವು ಮುಡಿಯೆ ಕಾಮದ ಮರ್ಮ | ತಡಿಯೆ ಕಡಿಯೇ ಕುಡಿಯೆ ಪಾಪೋದಕವ ನುಡಿಯೆ ಮಂಗಳ ವಾರ್ತಿ ಪಿಡಿಯೆ ಭಕುತಿ ನೀತಿ ಪಿಡಿಯೆ ಗುಡಿಯೇ ಸುಕೃತಿ ಕಾಳ | ಗೆಡಿಯೆ ಪರರೊಸ್ತಕ್ಕೆ ತೊಡಿಯೆ ಚಿಂತಾತುರವ | ವುಧಿಯೆ ಹೊಡಿಯೆ ಕೊಡಿಯೆ ಎನ್ನಗೊಡಿಯೆ ನೆಂ | ದೆಡೆಯಲ್ಲಿ ಸೂಸಿದಾ ಪುಡಿಯಲ್ಲಿ ವೊಡಬೆರಸೆ | ಅಡಿಗಡಿಗೆ ಎನ್ನ ಕಡಿಗೆ 2 ಸುಳಿಯೆ ಕೀರ್ತನಿಗೆ ಮದ | ವಳಿಯೆ ಗುರುನಿಂದಕರ ಹಳಿಯೆ ಕಾಮದ ಕುಪ್ಪೆ | ಕಳಿಯೆ ಬಳಿಯೆ ತೊಳಿಯೆ ಮನನ ನರಕಕ್ಕೆ | ಮುಳಿಯೆ ಸುಮತಿಮಾರ್ಗ ತಿಳಿಯೆ ಪದವಿಗೆ ಪೋಗಿ | ಇಳಿಯೆ ಬೆಳಿಯೆ ಛಳಿಯೆ ಮುಂದಿನ ಜನನ | ಹೊಳೆಯೆಂಬೋದು ಅರಿದು ಸಂಚಿತ ಕರ್ಮ | ವಳಿಯೆ ತುಳಿಯೆ ವುಳಿಯೆ ಬೊಬ್ಬುಳಿಯೆ ಈ | ಕಳೆಯೇನುವಲ್ಲನಭ ಸುಳಿ ಹೃದಯಾವಳಿಯಲ್ಲಿ | ವಿಜಯವಿಠ್ಠಲವೊಳಿಯೆ3
--------------
ವಿಜಯದಾಸ
ಗುರುರಾಜ ಕರುಣದಿ ನೋಡಯ್ಯ ಪ ಸುರಗಣ ಒಡೆಯನೆ ಕರವೆತ್ತಿ ಮುಗಿಯುವೆ ಕರೆಕರೆ ಮಾಡದೆ ಚರಣವ ತೋರಿಸು ಅ.ಪ. ಭವ ಮೋಚಕನ ಬಿಟ್ಟು ಭವಣೇಗಳನೆಪಟ್ಟು ನಾ ಒದ್ದಾಡುವೆ ಇಂದು ಅವನಿಯ ಜನರೊಳು ಅವಗುಣ ಪ್ರತಿಮೆಯ ತವಕದಿ ಪೊರೆಯದೆ ಜವನಡಿಕಳಿಸೊದೇ 1 ಅನುದಿನದೀ ನಾನು ಅನುಮಾನದಿಂದಲಿ ನೊಂದೆ ಅನಿಲನ ಹಾದಿಯ ಬಿಟ್ಟು ಅನ್ಯರಾನಂಬೀ ಕೆಟ್ಟೆ ತನುಮನ ನಿನ್ನಡಿ ಅರ್ಪಿಸಿನಂಬಿದೆ ದಿನದಿನ ದಯದಿಂ ನಿನ್ನವರೊಳು ಸೇರಿಸೊ 2 ಕಾಮಕೇಳಿಯಲಿ ಮುಳುಗಿ ಕಾಮಿನಿಯರ ಬರೆದೆ ಕಾಮಜನಕನ ಮರೆತೆ ಸೋಮಶೇಖರ ಪ್ರಿಯನೆ ಶಮದಮಪಾಲಿಸಿ ತಾಮಸ ಓಡಿಸಿ ಸಾಮಜವರದನ ಪ್ರೇಮವ ಕೊಡಿಸೋ 3 ಜ್ಞಾನಶೂನ್ಯನು ಆಗಿ ಶ್ವಾನಂದದಿ ಇರುವೆ ಮಾನಾಭಿಮಾನವನ್ನು ನಿನಗೆ ಅರ್ಪಿಸಿದೆನೊ ಅನಿಲನಶಾಸ್ತ್ರದಿ ಜ್ಞಾನವ ನೀ ನೀಡಿ ಮನದಲಿ ನಲಿನಲಿ ಮುನಿಗಳ ಒಡೆಯಾ 4 ವಿಧವಿಧ ಟೀಕೆಗಳನು ಮುದದಿಂದಲಿ ಮಾಡಿ ಮೋದವಂತದ ತತ್ವಗಳ ಮುಂದಕ್ಕೆ ತಂದೆಯೋ ಸದಯದಿ ಜಯಮುನಿ ವಾಯ್ವಾಂತರ್ಗತ ಮಾಧವ ಕೃಷ್ಣವಿಠಲನ ತೋರುತ 5
--------------
ಕೃಷ್ಣವಿಠಲದಾಸರು
ಗೋವಿಂದ ಗೋವಿಂದ ಕೃಷ್ಣ ಹರಿ ಪ ಗೋವಿಂದ ಮುಕುಂದ ಗೋಪಾಲಕೃಷ್ಣ ಅ.ಪ ಕಡೆಗಣ್ಣಿಲಿಂದೊಮ್ಮೆ ನೋಡೋ ನಿ-ನ್ನಡಿಗೆರಗುವೆನೋ ನೀ ದಯಮಾಡೋಬಿಡದೆನ್ನ ನಿನ್ನವರೊಳು ಕೂಡೋ ಎ-ನ್ನೊಡೆಯ ನಿತ್ಯಾನಂದ ನೀ ನಲಿದಾಡೋ 1 ಮಕ್ಕಳಿಗೊಡೆಯ ನೀನಾಗಿ ಹಸುಮಕ್ಕಳ ಕೂಡೆ ನೀನಾಡ ಹೋಗಿಸಿಕ್ಕದೆ ಬಹು ದಿನಕಾಗಿ ದಿಂಧಿ-ಮಿಕ್ಕೆಂದು ಕುಣಿಸುವೆ ಬಾ ಚೆನ್ನಾಗಿ2 ಹೃದಯ ಕಮಲದೊಳಗೆನ್ನ ನಿನ್ನಪದಕಮಲವನೀ ದಯೆಗೈಯೊ ಮುನ್ನಚದುರಕುಣಿಯೊ ಚೆಲ್ವರನ್ನ ವಿ-ಬುಧರೊಡೆಯನೆ ನಿತ್ಯಾನಂದ ಕೃಷ್ಣ 3
--------------
ವ್ಯಾಸರಾಯರು
ಜನ್ಯಧರ ದೂರ್ವಾಸ ಪ್ರಮುಖ ಮುನಿ ಸ ನ್ಮಾನ ಕರುಣಿ ವಿಲಾಸ ಶ್ರೀ ಶ್ರೀನಿವಾಸ ಪ ಎನ್ನವಗುಣ ಸಹಸ್ರವೆಣಿಸದೆ ನಿನ್ನವರೊಳಗೆಣಿಸಿ ಅನುದಿನ ಮನ್ಮನಾಲಯದೊಳು ನೆಲಸು ಮೈ ಗಣ್ಣನನುಜ ವರಾಭಯ ಶ್ರೀಕರ ಅ.ಪ. ಕಾಮಿತಪ್ರದಕೋಲಾ ಅಂಜನಾಧಿರÀ ಧಾರ ಧಾಮ ಭೂಮಿ ವಿಲೋಲಾ ಶಂಖಣನೃಪವರದ ಹೇಮ ಲೋಚನ ಕಾಲಾ ದ್ವಿಜ ಮಹಿಳೆಯುಳುಹಿದ ಶಾಮಲಾಂಗ ಸುಶೀಲಾ ವೆಂಕಟ ಕುಲಾಲ ಭೀಮಗೊಲಿದ ಮಹಾಮಹಿಮನೆ ಪಿ ತಾಮಹನ ನಾಸೋದ್ಭವನೆ ವಿಯ ಜಾಮಾತ ಕಟಿಸು ತ್ರಾಮಸುತಸೂತ ಪ್ರಮೋದಾಸು ಧಾಮ ಸೌಖ್ಯ ಪ್ರದವರಾಹ ತ್ರಯೀಮಯನೆ ಪ್ರಣತಾರ್ತಿಹರ ಬಲ ಸದನ ಸಹಸ್ರನಾಮ ಸಾಮಜಪತಿ ಪೋಷಕ ರಿಪುವನ ಧೂಮಧ್ವಜ ವಿಧಿಭ ಸೇವಿತ ವ್ಯೋಮಾಳಕಸಖ ಸರ್ವಜ್ಞರ ಮಾಮನೋಹರ ಮನ್ನಿಪುದೆಮ್ಮ 1 ದೀನಜನ ಮಂದಾರ ದೇವಕಿಸುತ ಜಗ ತ್ರಾಣ ಗುಣ ಗಂಭೀರ ಪೃಥ್ವೀಶ ತೋಂಡ ಮಾನವರದ ಉದಾರ ಲುಬ್ದಕನ ವಿಷ್ವ ವೈನತೇಯ ವರೂಥ ಖಳ ಸ್ವ ರ್ಭಾನುವಿನ ತಲೆಗಡಿದು ರವಿಶಶಿ ಕವಿ ಶನಿಗಳ ಶ್ರೇಣಿಯಲಿ ಮಾನಿಗಳ ಮಾಡ್ಡ ಮ ಕಲಿಮಲಾಪಹಾರಿ ಕೃ ಶಾನುಸಖ ಸಂಪೂಜ್ಯ ಸುಮನಸ ಧೇನು ಶರಣ ಜನರ್ಗೆ ಸಂತತ ಆ ನಮಿಸುವೆ ನಳಿನಜಪಿತ ನಿ ನಿರವದ್ಯ ನಿರುಜ ಬ್ರ ಹ್ಮಾಣಿ ಸುರನಿಕರ ನಿಲಯನುಸಂ ಧಾನಕೆ ಕೊಡು ಬಹುವಿಧಕರ್ಮ 2 ಸೇವ್ಯ ದಾರವಿಂದ ಮಹಂತಾ ಸತ್ವಾದಿ ತ್ರಿಗುಣವಿ ದೂರ ದಿತಿಜ ಕೃತಾಂತಾ ಗುಣರೂಪ ಪಾರಾ ವಾರ ವಿಗತಾದ್ಯಂತಾ ಶ್ರೀ ಭೂಮಿಕಾಂತಾ ಕಮಠ ವರಹ ಕ ಕಶಿಪು ವಿದಾರಣನೆ ಭಾ ಗೀರಥಿಯ ಪದನಖದಿಪಡದಂಗಾರ ವರ್ಣನೆ ಭೃಗುಕುಲೋದ್ಭವ ವಾರಿನಿಧಿಬಂಧನ ವನೌಕಸ ವಾರ ಪೋಷಕ ನಂದಗೋಪ ಕು ಮಾರ ತ್ರಿಪುರ ವಿದೂರ ತುರಗವನೇರಿದ ಜಗನ್ನಾಥವಿಠಲ ಸಾರುವೆ ತವÀ ಪದಪಂಕಜ ಜಂ ಭವ ಭಯ ತಾರಕ ನಿನ್ನವರೊಳು ತತ್ವ ವಿಚಾರಕೊಡು ಚಿರಕಾಲದಲಿ 3
--------------
ಜಗನ್ನಾಥದಾಸರು
ನೀನೆ ಗತಿ ಮುಕುತೆನೆಗೆ ಅನಂತ ಜನುಮಗಳಲಿ ಪ ಆನೇನರಿಯೆ ಗರುಡಗಮನ ಸಿರಿಕೃಷ್ಣ ರಾಯಾ ಅ.ಪ ಅನ್ಯವಾರ್ತೆ ಅನ್ಯಸಂಗ ಅನ್ಯಜನರಾರಾಧನೆಅನ್ಯಸತಿ ಅನ್ಯಕರ್ಮ ಮೊದಲು ಸಕಲತನ್ನು ಮನ್ನ(=ತನುಮನ) ವಾಕ್ಯಗಳಿಂದ ಜರಿದೆ ನಿನ್ನವರೊಳುಎನ್ನ ಕೂಡಿಸೊ ನಿನ್ನ ಚರಣ ಭಕುತಿಯಲಿ ಶ್ರೀಶ 1 ಅಂದು ವೇದೋದ್ಭವಳ ಮೊರೆಯನು ಕೇಳಿ ಕಾಯ್ದಂತೆಮಂದ ಗಜೇಂದ್ರನಿಗೊಲಿದು ರಕ್ಷಿಸಿದ ಪರಿಯಂತೆತಂದೆತಾಯಿ ಬಂಧುಬಳಗ ಎಂದೆಂದು ನೀನೇ ದಯಾ-ಸಿಂಧು ನಿನ್ನ ದಾಸರ ದಾಸನೆಂದೆನಿಸೆನ್ನ2 ಪಾದ ಜಂಘೆ ಜಾನೂರುಕಟಿಘನ್ನ ಬಾಹು ಉದರವಕ್ಷ ಭುಜ ಕುಂತಳದಿಚನ್ನ ಕಿರೀಟ ಸರ್ವಾಲಂಕಾರದಿಂ ಶೋಭಿಸುವನಿನ್ನ ಮೂರ್ತಿಯನ್ನೆ ತೋರೊ ಭಕ್ತವತ್ಸಲ ಸಿರಿಕೃಷ್ಣ3
--------------
ವ್ಯಾಸರಾಯರು
ಪನ್ನಗಾಚಲವಾಸ-ಪ್ರಪÀನ್ನರ ಪಾಲಕ ಶ್ರೀಶಾ-ಸರ್ವೇಶಾ ಕನಕ ರತುನಮಯ ಮುಕುಟಾಧಾರ ಘನ ನವಮಣಿಮಯ ಕುಂಡಲಧರ ಇನಕೋಟಿಪ್ರಭಕೌಸ್ತುಭಹಾರ ಮನಸಿಜಧನುಸಮ ಭ್ರೂಸಮಾಕಾರ ಘನ ಚಂಪಕಗೆಣೆ ನಾಸ ಗಂಭೀರ ವನಜದಳಾಯತೇಕ್ಷಣಾಕಾರ ವನರುಹಾ ಘನ ಸ್ಮಿತ ಸುಗಂಭೀರ ಮುನಿಮಾನಸಮಂದಿರ ಸುವಿಹಾರ ಅಪ್ರಾಕೃತ ಶರೀರ ತನುಮನ ವಚನದಿ ಅನವರತದಿ ಕಿನ್ನರ ಸುರಮುನಿಗಣ ತನುಸದನದಿ ಹೃದ್ವನಜದಿ ಘನಪದ ವನರುಹ ಧೇನಿಸಿ ದೃಢಸ್ನೇಹದಿಂದಿರುವ ಕರ್ಮ ಒಪ್ಪಿಸುವ ಘನಮೋದದಿಂದಲಿರುವಾ ನುತಿಸುವಾ ಬೇಡುವಾ ಜನುಮ ಸ್ಥಿತಿ ಮೃತಿಗೆ ಬೆದರದಿರುವಾ ನಿನ್ನವರೊಳು ತನ್ನಿರವ ತೋರಿಸುಹ ಘನ್ನಪಾತಕವ ಕಳೆದುನ್ನತ ಸಾಧನವನ್ನೆ ಕೊಟ್ಟು ನನ್ನಿಯಿಂದಲೆ ಪೊರೆವಾ ತನ್ನಧಾಮದಿ ಕಾಪಿಡುವಾ 1 ಉತ್ತಮ ಮೌಕ್ತಿಕ ಸರಿಗೆ ನ್ಯಾವಳ ಒತ್ತೊತ್ತಾಗಿಹ ತ್ರಿವಳಿಯ ಮಾಲಾ ರತುನ ಪದಕದಾ ಸರದ ವಿಹಾರ ಅತಿಮನೋಹರ ಹೃದಯ ವಿಶಾಲ ಸಲೆಸಿರಿವತ್ಸ ವಕ್ಷದಿ ಲೋಲ ಸುತ್ತಿದ ಭಾಪುರಿ ಭುಜದ ವಿಸ್ತಾರ ಸಿತಾನಿಸಿತ ಉಪವೀತದಿ ಲೊಲ ದಾತಾಪಿತ ತವನಾಭಿಯ ಕಮಲ ಉತ್ತಮಕಮಲ ಕಲ್ಹಾರದ ಮಾಲ ಹಸ್ತಾಭರಣದಿ ಮೆರೆಯುತ ಪೊತ್ತಿಹ ಚಕ್ರಾಧ್ಯಾಯುಧನೆತ್ತಿ ದುರುಳೊನ್ಮತ್ತರ ಸದೆದು ತ್ವದ್ಭಕ್ತರ ಮನೋರಥ ಪೂರ್ತಿಗೈವ ಪುರುಷೋತ್ತಮ ಭವಭಯಹಾರೀ ನಿತ್ಯನೂತನವಿಹಾರೀ-ಪ್ರಣವಸ್ತನೆ ನೀ ಕಂಸಾರೀ ಪೃಥಕ್ ಪೃಥಕ್ ತದಾಕಾರೀ-ನರಹರೀ-ಶ್ರೀಹರೀ ಹೃತ್ಪುಷ್ಕರದಳ ವಿಹಾರೀ ಭಕ್ತವತ್ಸಲ ಅವ್ಯಕ್ತನೆ ಜಗದುತ್ಪತ್ತಿ ಸ್ಥಿತಿಲಯ ಕರ್ತ ವ್ಯಾಪ್ತ ನಿರ್ಲಿಪ್ತ ಸತ್ಯಸು- ಹೃತ್ತಮ ನೀನೆ ಮುರಾರೀ ಉತ್ತಮ ಸಮರಹಿತ ಶೌರೀ 2 ಪಕ್ಷಿಧ್ವಜ ಸುಖಭರಿತ ವಿಹಾರ ಕುಕ್ಷಿಯೊಳು ಅಬ್ಜಾಂಡಕೋಟಿಗಾಧಾರ ತ್ರಕ್ಷಾದ್ಯಮರನುತ ಗುಣಾಧಾರ ಸಾಕ್ಷಿಮೂರುತಿ ಸರ್ವಕಾಲಾಧಾರ ವಕ್ಷದೊಳು ಶ್ರೀವತ್ಸ ಗಂಭೀರಾ ಮು- ಮುಕ್ಷುಗಳೊಡೆಯನೆ ವೈಕುಂಠಾಗಾರ ಅಕ್ಷರಕ್ಷರರವಿಲಕ್ಷಣಧೀರ ರಕ್ಷಕ ಭಕುತಜನರುದ್ಧಾರ ದಕ್ಷಿಣಾಕ್ಷಿಕಂಠ ಹೃದಯವಿಹಾರ ರಕ್ಷಕ ತ್ರಿಜಗದಾಧ್ಯಕ್ಷ ಕರುಣಕಟಾಕ್ಷದಿ ಈ ಜಗ ವೃಕ್ಷದೊಳು ನಿರಪೇಕ್ಷನಾಗಿ ಫÀಲಭಕ್ಷಿಪ ಜೀವರ ಲಕ್ಷಕೋಟಿ ನೀ ಸಾಕ್ಷಿಯಾಗಿಹೆ ನೀ ರಕ್ಷ ಕಮಲಾಕ್ಷ ಪಕ್ಷಿವಾಹನನೆ ನಿನ್ನ ಪರೋಕ್ಷಾಪೇಕ್ಷಿಗಳಿಗೆ ನಿನ್ನ ಕ- ಟಾಕ್ಷವೀಕ್ಷಣದಿಂದ ಪ್ರತ್ಯಕ್ಷ ರಿಪುಶಿಕ್ಷ ಅಧ್ಯಕ್ಷ ಸಾಕ್ಷಿಯಾಗಿಹೆ ನೀ ರಕ್ಷಾ ಮೋಕ್ಷ ಜೀವರಿಗಪರೋಕ್ಷವನಿತ್ತು ನಿ- ಷ್ಪಕ್ಷನಾಗಿ ಜಗರಕ್ಷಿಸುತ್ತ ಸುರಪ ದಕ್ಷ ಚತು- ರಾಕ್ಷರಸ್ಥ-ನರಹರ್ಯಕ್ಷ ಶರಣಜನರ ಕಲ್ಪವೃಕ್ಷ3 ಪಟುತರಾಂಗ ಸುಕಟಿಯ ವಿಸ್ತಾರ ತೊಟ್ಟಿಹÀರತುನದ ಪಟ್ಟವಿಹಾರ ಉಟ್ಟಿಹ ಪಟ್ಟೆ ಪೀತಾಂಬರ ಧಾರಾ ಬಟ್ಟ ಜಾನುದ್ವಯ ಜಂಘಾಶೂರ ಇಟ್ಟಿಹ ಸಾಲಿಗ್ರಾಮದ ಹಾರ ದಟ್ಟವಾಗಿಹ ಕಾಲಂದಿಗೆಯ ವಿಹಾರ ಇಟ್ಟಿಹ ಬೆರಳಲಿ ರತ್ನದುಂಗುರ ಶ್ರೇಷ್ಟಪದದಿ ಧ್ವಜಚಿಹ್ನಾಕಾರ ದಿಟ್ಟಿ ನಖಾಗ್ರದಿ ತಟಿತ ಪ್ರಭಾಕರ ಪಟುತರ ಕರಪಾದ ಚಟುಲರೂಪ ಮನ- ತಟದಿ ಇಟ್ಟು ಲವತೃಟಿಯು ಬಿಡದೆ ಸುರ- ನಿತ್ಯ ಕರಪುಟದಿ ನಮಿಸಿ ಉತ್ಕಟದಿ ಗುಣಗಳ ಪಠಣದಿಂದಿರೆ ಮುದದಿ ಪಟುತರ ಭಕುತಿಯ ಭರದೀ ನಟಿಸುತ ತನು ಮರೆದಾತುರದಿ ಉ- ತ್ಕಟದಲಿ ನುತಿಸುತ ಭರದೀ ನಟಿಸುವಾ ಸ್ಮರಿಸುವಾ ಭಕುತಜನರ ಕಂಟಕವಾ ಆ ಧಿಟರು ನೀತ ಭಟರಂದು ನಿಜ ಜಠರಾಲಯದಿ ಇಂ- ಬಿಟ್ಟು ಭಕುತರ ಕಟಕಪೊರೆದು ಭವಾಬ್ಧಿಯ ಕಂಟಕ ಜಗಶಿಕ್ಷಾ 4 ಸ್ವಗತಭೇದವಿವರ್ಜಿತಶೂನ್ಯ ನಿಗಮಾತೀತ ದೇವವರೇಣ್ಯ ಬಗೆಬಗೆ ಸ್ವರ ಶಬ್ದವಾಚ್ಯವರೇಣ್ಯ ಅಗಣಿತಗುಣಗಣಪೂರ್ಣ ಸಂಪೂರ್ಣ ಯೋಗಿಗಳ್ ಪೊಗಳುವ ಸವಿತೃವರೇಣ್ಯ ಬಗೆಗಾಣರೊ ಸಾಕಲ್ಯದಿ ನಿನ್ನ ತ್ರಿಗುಣ ವಿರಹಿತನಾಗಿಹನ್ನ ನಗಜಾಧವ ಪಿಕನುತಪಾವನ್ನ ದುರ್ಗಾ ಶ್ರೀ ಭೂದೇವಿಯರಮಣ ಯುಗ ಯುಗದೊಳು ಜಗಕಾರ್ಯದಿ ಧರ್ಮ ಪ್ರಘಟ- ನೆಗೋಸುಗ ಸ್ವಗತರೂಪ ತಾ ನೆರಹಿ ಕ್ರೂರ ಪಾ- ಪೌಘರ ಮಡುಹಿ ಜಗದೇಕ ವೀರ ಮಿಗೆ ಜನಿಸಿದೆ ಜಗದೀಶಾ ಸುಗುಣ ಸಾಕಾರ ಸರ್ವೋತ್ತಮ ಶ್ರೀಶಾ ಜಗಜ್ಜಾಲ ಲೀಲಾವಿಲಾಸ ಜಗವೆಲ್ಲಾ ಈಶಾವಾಸ್ಯ ಸೃಜಿಸಿ ನೆಲೆಸೀ ಸ್ವಪ್ರಯೋಜನ ರಹಿತನೆನಿಸೀ ಖಗವರೂಥÀ ಶ್ರೀ ವೇಂಕಟೇಶ ಪನ್ನಗಗಿರಿಯೊಳು ನೆಲೆಸಿ ಜೀವರ ಯೋಗ್ಯಸಾಧನೆ ಇತ್ತು ಮನೋಭೀ-ಷ್ಟವನ್ನೆ ಸಲಿಸಿ ಉರಗಾದ್ರಿವಾಸವಿಠಲನೆನಿಸೀ 5
--------------
ಉರಗಾದ್ರಿವಾಸವಿಠಲದಾಸರು
ಮನ್ನಿಸೆನ್ನ ಮಧುಸೂದನ ಪ. ಮದನನಯ್ಯ ಮೋಹನಕಾಯಉನ್ನತಗುಣನಿಲಯ ಉಡುಪಿನ ಕೃಷ್ಣರಾಯ ಅ.ಪ. ಶ್ರುತಿಗಳ ತಂದೆ ಮುನ್ನ ಸುರಮುನಿಗಳ ಮನ-ಕತಿ ಹರುಷವ ಕೊಟ್ಟೆ ಅಗಣಿತಗುಣರನ್ನಯತಿಗಳ ಪಾಲಿಸಿದೆ ಮುಂದುವರಿವದಿತಿಜರ ಸೋಲಿಸಿದೆ ಈ ಮಹಿಯೊಳುಮತಿವಂತರ ಪೊರೆದೆ ಮಹಿಮೆಯಿಂದ ಮೆರೆದೆ1 ಅಚ್ಚಹಾರಶೋಭಿತ ಕಂಠ ಆಶ್ರಿತರಿಗೆ ನೀ ನಂಟಮೆಚ್ಚಿದ ಪಾರ್ಥನ ಮಿತ್ರನೆನಿಸಿದೆ ಸುಚರಿತ್ರಮೆಚ್ಚಿದ ನಿನ್ನಯ[ಭಕ್ತÀ್ತ]ವೈಕುಂಠದಮುಚ್ಚಳ ತೆಗೆಸಲು ಶಕ್ತ ಅಚ್ಚುತ ನಿನ್ನಅರ್ಚಿಸಿದವ ಕೃತಾರ್ಥ ಅವನೆ ಸರ್ವಸಮರ್ಥ2 ಎಂದೆಂದು ನಿನ್ನವರೊಳು ಎನ್ನ ಕೂಡಿಸೊ ಕೃಪಾಳುವಂದ್ಯ ಗರುಡನ ಸ್ಕಂಧವೇರಿ ಬಹ ಗೋವಿಂದತಂದೆ ನೀನೆ ತಾಯಿ ನೀನೆ ಹಯವದನಬಂಧು ನೀನೆ ಬಳಗ ನೀನೆ ಮತ್ತದರಿಂದಕುಂದುಮಾಡುವುದು ಬಿಡೋ ಕಂಡು ಕರುಣವ ಮಾಡೋ 3
--------------
ವಾದಿರಾಜ
ಯಾಕೆ ನಿನ್ನವರೊಳು ದೂರದೃಷ್ಟಿ ಪ್ರಭುವೆ ಲೋಕಬಂಧು ದಯಾಸಿಂಧು ದಾಸಜನರರಸ ಪ ಭ್ರಷ್ಟನಿವ ನಿತ್ಯದಲಿ ಮುಟ್ಟಿ ಸ್ನಾನಗೈಯನೆಂದು ಬಿಟ್ಟಿ ಬೇಸರ ಮಾಡಿ ಸಿಟ್ಟಗೆದ್ದಿರುವ್ಯೋ ಪುಟ್ಟಿ ಜತೆಗೂಡಿಲ್ಲೆ ಬಿಟ್ಟು ಅಗಲುವ ದೇಹ ಎಷ್ಟು ತೊಳೆದರೇನೆಂದು ಗಟ್ಟಿಮಾಡಿಬಿಟ್ಟೆ 1 ಕಡುಹೀನ ಕುಲಯೋಗ್ಯ ಮಡಿ ಅರಿಯ ಇವನೆಂದು ಕಡುಗೋಪದಿಂದೆನ್ನ ನುಡಿಕೇಳದಿರುವ್ಯೋ ಮುಡಿಚೆಟ್ಟಿನಲಿ ಬಂದು ಕಡುಹೊಲಸು ತುಂಬಿರ್ದ ಜಡದೇಹಕ್ಯಾತರ ಮಡಿಯೆಂದು ಬಿಟ್ಟೆ 2 ನಿತ್ಯನೇಮವರಿಯದ ಅತ್ಯನಾಚಾರಿಯೆಂದು ನಿತ್ತರಿಸದೆನ್ನ ಮುಖವೆತ್ತಿ ನೋಡದಿರುವ್ಯೋ ಪಿತ್ತ ರಕ್ತ ಮಜ್ಜ ಮಾಂಸ ಮತ್ತೆ ಮಲ ಮೂತ್ರ ಕ್ರಿಮಿ ಹೊತ್ತ ಭಾಂಡಿದೆಂದರಿತು ನಿತ್ಯನೇಮ ಬಿಟ್ಟೆ 3 ಸತ್ಯಕರ್ಮದ ಮಹಿಮೆ ಗೊತ್ತಿಲ್ಲದಧಮ ಮಹ ಧೂರ್ತ ಪಾತಕಿಯೆಂದು ಮರ್ತೆನ್ನಬಿಟ್ಟ್ಯೋ ಎತ್ತನೋಡಲು ನೀನೆ ಸುತ್ತಿ ವ್ಯಾಪಿಸಿ ಜಗವ ಹೊತ್ತು ಆಳುವುದರಿತು ಸತ್ಕರ್ಮ ಬಿಟ್ಟೆ 4 ನೀನೆ ನಿರ್ಮಿಸಿದಭವ ನಾನಾಲೋಕ ವೇದಶರ್ಮ ನೀನೆ ವಿಶ್ವಾತ್ಮಕನೈ ನೀನೆ ಸೂತ್ರಧಾರಿ ಧ್ಯಾನದಾಯಕ ಮಮಪ್ರಾಣ ಶ್ರೀರಾಮ ನಿನ್ನ ಧ್ಯಾನವೊಂದೆ ಅಧಿಕೆಂದು ನಾನಾಕರ್ಮ ಮರೆದೆ 5
--------------
ರಾಮದಾಸರು
ಶ್ರೀನಿವಾಸ ನಿನ್ನ ಪಾದಧ್ಯಾನವ ಪಾಲಿಸಿ ಎನ್ನ ಮಾನಸಾನಂದಿಸೋ ಶತಭಾನುತೇಜನೆ ಪ ಸಾನುರಾಗದಿಂದ ನಿನ್ನ ಧ್ಯಾನಿಪಜನರ ಭವ ಕಾನನಾದಹನ ಚಿತ್ರಭಾನು ದನುಜಾರಿಹರಿ ಅ.ಪ ಇಂದಿರಾರಮಣ ನಿನ್ನ ಸುಂದರ ಚರಣಕೆ ನಾಂ ವಂದನೆಯ ಮಾಡುವೆನಯ್ಯಾ ಇಂದುವದನಾ ಇಂದುಧರ ನುತ ಮುಚುಕುಂದವರದನೆ ಗುಣ ಬಂಧುರಾ ಶ್ರೀ ಪುಲಿಗಿರಿ ಮಂದಿರ ಮಂದರಧರ1 ಇಷ್ಟುದಿನ ನಿನ್ನ ಮನಮುಟ್ಟಿ ಭಜಿಸದೆ ಬಲು ದುಷ್ಟಮನುಜರ ಕೂಡಿ ಭ್ರಷ್ಟನಾದೆನು ಇಷ್ಟ ಫಲದಾಯಕ ತ್ರಿವಿಷ್ಣಪಾದಿಪಾನುಬವ್ಯ ಅಷ್ಟಸಿದ್ಧಿಪ್ರದ ನಿನ್ನ ಗಟ್ಟಿಯಾಗಿ ನಂಬಿದೆನು 2 ಲೋಕಪತಿ ಪಿನಾಕೆಯನ್ನು ವೃಕನೆಂಬ ಭೀಕರಾಸುರನು ಉರಿಹಸ್ತ ಬೇಡಲು ಆಕಪಾಲಿಯಿತ್ತು ಅವಿವೇಕದಿಂದ ಲೋಡುತಿರೆ ಲೋಕ ಮೋಹಿನಿಯ ರೂಪ ಸ್ವೀಕರಿಸಿ ಶಿವನಕಾಯ್ದೆ3 ಆಡಿಸೋ ನಿನ್ನವರೊಳು ಪಾಡಿಸೋ ನಿನ್ನಯ ಕೀರ್ತಿ ಮೂರ್ತಿ ಬೇಡಿಸದಿರು ಆಡಿಸದೆ ಭವವೆಂಬ ಕಾಡಿನೋಳ್ಕಟಾಕ್ಷದಿಂದ ನೋಡಿ ನಿನ್ನ ನಾಡಿನೊಳಗಾಡಿಸೋ ಮುರಾರಿಹರಿ4 ವಾಸುಕಿಶಯನ ಪೀತವಸನ ದಿವ್ಯಭೂಷಣ ವಿ ಭೂಷಿತ ಲಲಿತಶುಭ ವೇಷವಿಪುಲ ಭಾಸಮಾನ ವ್ಯಾಘ್ರಶೈಲಾವಾಸ ಶ್ರೀನಿವಾಸ ಭಕ್ತ ಪೋಷಣ ದುರಿತಗಣ ಶೋಷಣ ಶ್ರೀ ವರದವಿಠಲ5
--------------
ವೆಂಕಟವರದಾರ್ಯರು
ಹೌರನೆ ಮತಿಯಿತ್ತು ಸಲಬೇಕೆನ್ನ ಪ ಗೌರವ ಗಾತುರ ತೌರ ಮನೆಯ ಹರ ಕೌರವಾಂತಕನೊಳು ಶೌರಿಯ ತೋರಿಸೋ ಅ.ಪ. ಮೃಗಲಾಂಛನ ಸನ್ಮೌಳಿ ಶಿವ ಮಹಾದೇವ ತ್ರಿಗುಣಾತುವ ಗಾತುರ ಭಕ್ತ ಸಂಜೀವ ನಿಗಮತುರಗ ಪಾವ ವನಮಾಲ ಪಾವಾ ಮೃಗಪಾಣಿ ಮೃತ್ಯುಂಜಯ ಸುಪ್ರಭಾವ ನಗೆಪಗೆ ಮಗನನು ಮೃಗನೆವನದಿ ಕಾ ಅಗಣಿತ ಗುಣಮಣಿ ವಾಲಗ ನಿನ್ನವರೊಳು ಮಗಳೆ ಮಗುಳೆ ಕೊಡು ಗಗನೇಶ ಜನಕ 1 ಅವನಿಯೋಳ್ ಕೈಲಾಸ ವಾಸ ಅಪ್ರತಿ ನವ ವಿಧ ಭಕುತಿ ಕೊಡು ಶಂಭು ಪಶುಪತಿ ದಿವಸ ದಿವಸ ವೈಶ್ರವಣ ಬಾಂಧವ ದೇ ಹವೆ ನಿನಗೊಪ್ಪಿತು ಅವನಿಯೊಳುತ್ತಮ ಶ್ರವಣದೊಳಗೆ ರಾಘವನ ಕಥಾಮೃತ ಸವಿದೋರುವುದೋ ಭುವನ ಪವಿತ್ರ 2 ಅಜಭೃಕುಟ ಸಂಭೂತ ಭೂತಗಣೇಶ ಕುಂಡಲ ವಿಭೂತಿ ಭೂಪ ನಿಜ ಮಹಾ ಸ್ಮಶಾನವಾಸ ಉಗ್ರೇಶ ತ್ರಿಜಗಪಾವನ ಗಂಗಾಧರ ವಿಶ್ವೇಶ ಸುಜನರ ಹೃದಯ ಪಂಕಜದೊಳ್ ಮಿನುಗುವ ಗಜ ಪಾಲಕ ರಂಗ ವಿಜಯವಿಠ್ಠಲನಂಘ್ರಿ ಭಜನೆಯ ಕೊಡು ಭೂಭುಜ ದೇವೋತ್ತಮ ಗಜ ಅಜಿನಾಂಬರ 3
--------------
ವಿಜಯದಾಸ
ಪಾರ್ವತೀ ಪತಿಪಾಹಿ ಹರಹರ ಪಪಾರ್ವತೀಪತಿ ನೀನೊಲಿದು ಮನಸಿನೊಳುತೋರ್ವದು ಕೇಶವನ | ಹರಹರ ||ಅ. ಪ||ವಿಜಯನಿನ್ನೊಳಗಂದು ವಿಜಯಿಸಲಸ್ತ್ರವ |ತ್ರಿಜಗವರಿಯ ಕೊಟ್ಟ ||ಮಜ ಭಾಪುರೆಅಂಬುಜಸುತ ನಂದನ |ಗಜಚರ್ಮಾಂಬರನೆ | ಹರಹರ 1ಜಾತವೇದಸಶಶಿತರಣಿನಯನ |ಮಾತರಿಶ್ವತನಯ ||ಭೂತ ಗಣಪ ಗುಣವ್ರಾತ ನಿನ್ನವರೊಳು |ಪ್ರೀತಿಯಿಂದಲೆ ಕೂಡಿಸು | ಹರಹರ 2ಕ್ಷಿತಿಧರ ಶರ ಮನ್ಮಥಪುರಹರಣ| ಪ್ರಮಥಾಧಿಪ ಹರಿಣಾಂಕ ||ನತಿಸುವೆ ನಿನ್ನನು ಪ್ರತಿದಿನದಲಿ | ಸನ್ಮತಿ ಕರುಣಿಸು ತ್ವರಿಯಾ || ಹರಹರ3ಸುರಸೇವಿತ ಪದ ಅರವಿಂದಅನಘ|ಮುರರಿಪುಸುಖಕಪರ್ದಿ||ಚರಣವ ನಂಬಿದವರ ಭಯವಾರಿದ |ಮರುತಕುಶನಂದನನೆ || ಹರಹರ4ಖಟವಪಾಣಿಖಳಆಟವಿವಹ್ನಿಧೂ |ರ್ಜಟ ಹರ ಪ್ರಾಣೇಶ ||ವಿಠಲನ ಭಜನೆಯು ಘಟಿಕ ತಪ್ಪದಲೆ |ಘಟನೆ ಮಾಡಿಸುವುದೋ || ಹರಹರ 5
--------------
ಪ್ರಾಣೇಶದಾಸರು