ಒಟ್ಟು 7 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಡಲೆರಡಂತೆ ಅಸುವೊಂದಂತೆ ನುಡಿಯಿದು ನಿಜವೇ ಪೇಳೇ ಗೋಪಮ್ಮ ಪ ನಡೆ ನುಡಿ ಭಾವಗಳೊಂದೇಯಂತೆ ಹುಡುಗನೇನೇ ಕೃಷ್ಣ ಪೇಳೇ ಗೋಪಮ್ಮ ಅ.ಪ ಸೋದರಿಯರು ಇದ ಹೇಳುವರಮ್ಮ ನಾದ ನರ್ತನ ದೇಹಕಾಂತಿಗಳಲ್ಲಿ ಭೇದವಿಲ್ಲೆಂಬರು ನಿಜವೇನಮ್ಮಾ 1 ಬಾಲೆಯು ತಾನೆ ಗೋಪಾಲನೆನುವಳಂತೆ ಬಾಲಕೃಷ್ಣನು ರಾಧೆ ತಾನೆಂಬನಂತೆ ಬಾಲನಾರಿದರಲ್ಲಿ ಬಾಲೆಯಾರಿವರಲ್ಲಿ ಮೂಲತತ್ವವ ನೀನೆ ಹೇಳೇ ಗೋಪಮ್ಮ 2 ಯುಗ ಯುಗದಲ್ಲಿ ತಾನವತರಿಸುವ ಕೃಷ್ಣ ಜಗದೀಶ್ವರನೆ ತಾದಿಟವಮ್ಮ [ಮಿಗೆ] ಭಾಗ್ಯವೆ ನಿನ್ನದಾಗಿಹುದಮ್ಮ 3 ನಿರುಪಮ ಭಕ್ತಿಯಮೂರ್ತಿಯು ರಾಧೆ ಮುರಳೀಧರನಲಿ ಒಂದಾಗಿಹಳು ಅರಿತುದ ಪೇಳ್ವೆನು ಮಾಂಗಿರಿರಂಗನ ಶರಣರಿಗೀತತ್ವ ಕರಗತವಮ್ಮಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನನ್ನ ಸ್ವಾಮಿಯು ನೀನಲೆ ಪ ನನ್ನನುದ್ಧರಿಪುದು ನಿನ್ನದಾಗಿರಲಯ್ಯ ಅ.ಪ ನಿನ್ನ ಚರಿತೆಯ ಕೇಳಲಿ ಕಿವಿ ನಿನ್ನನೀಕ್ಷಿಸಲೆನ್ನ ಕಂಗಳು ನಿನ್ನ ಪೂಜಿಸಲೆನ್ನಕೈಗಳು ನಿನ್ನ ಹೊಗಳಲೆನ್ನ ರಸನೆಯು 1 ತಂದೆ ನೀನೆನ್ನತಂದೆ ನಾನು ಅದರಿಂದ ಬಂದೆ ನಿನ್ನಯ ಹಿಂದೆ ಮುಂದೆ ಪೋಗುತಲಿ ಒಂದೆ ನಿಮಿಷದಲಿ ಕಂದನೆನ್ನಿದಿರಿಂದ ಮರೆಯಾದೆ 2 ಅಂದಿನಿಂದ ಮುಕುಂದ ನಿನ್ನರವಿಂದಚರಣದ್ವಂದ್ವ ವಿರಹದಿ ನೊಂದು ನಿಂದೆಡೆನಿಲ್ಲದಲೆವೆನೋ ತಂದೆ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನಾಧೀನ ----------- ವೆಂಕಟಾದ್ರಿವಾಸ ವೆಂಕಟ ಪರಹರಿಸೊ ನೀ ಎನ್ನ ಸಂಕಟ ಪ ಚಿನ್ಮಯ-----ನಾದ-----ಶ್ರೀನಿವಾಸ ಪರಮಪುರಷ ಮುನ್ನ ನಾ ಮಾಡಿದ ದೋಷದಿಂದ ಅಮಲನಾಗಿ ವ್ಯರ್ಥ ಬಳಲುತಿಹೆನಾ ------ ಘನವೆ ನಿನಗೆ ಇರುವುದಿನ್ನು ಅನಿಮಿಷವು ನಿಮ್ಮ ಧ್ಯಾನದಲ್ಲಿ ಮಗ್ನರಾದ ಅವರಾ 1 ಶರಣರಾದ ಅವರಾ ಪೊರೆವ ಬಿರುದು ನಿನ್ನದಾಗಿ ಇರಲು ಪರಮ ಪತಿತ ಪಾವನನೆ ಭಕ್ತ ಜನರ ಬಿಡದೆ ಕಾಯ್ವ ಧೊರಿಯು ನೀನೇ ಎಂದು ನಿನ್ನ ಚರಣಕಮಲ ನೆಚ್ಚಿದವನಾ ಪರಿವೆ ಮಾಡದೆ ಇರುವುದಿನ್ನು ಭರದಿ ಮೋಚನ ಪಾಪನಾಶನ 2 --------ದೊಳಧಿಕನಾದವನ ವರಹೊನ್ನ ನಿ--------- ನಿಗಮಗೋಚರ 'ಹೊನ್ನವಿಠ್ಠಲಾ’ ನಿತ್ಯ ಸತ್ಯ ಜಗವಿಲಾಸ --------ಯಿಂದ ನಿನ್ನ ಪಾಡುವಂಥ ಭಜಕರನ್ನ------------- ರಕ್ಷಿಸುವ ಅಭಯ ನಿನ್ನದಾಗಿ ಇರಲೂ 3
--------------
ಹೆನ್ನೆರಂಗದಾಸರು
ನೀ ಕೈಯ ಬಿಡಬೇಡವೋ ನರಹರಿ ಪ ನೀ ಕೈಯ ಬಿಡಬೇಡ ನಾಕೆಟ್ಟರೂ ಬೇಡ ನೀ ಕೊಟ್ಟ ಫಲವಿನ್ನು ಸಾಕೋ ಮಾಂಗಿರಿರಂಗ ಅ.ಪ ನನ್ನ ಕಾಯುವ ಭಾಗ ನಿನ್ನದಾಗಿರಲಯ್ಯ ಇನ್ನಾವುದನು ಕೇಳ್ವುದೆನ್ನ ಭಾವದೊಳಿಲ್ಲ ಸನ್ನುತಾಂಗ ಕೃಷ್ಣ ಪನ್ನಗಶಯನ [ಉನ್ನತದಿ ಸದಾ ಭಜಿಸುವೆನು ನಿನ್ನ] 1 ಆಡುವಾ ನುಡಿಗಳು ನೋಡುವಾ ನೋಟವು ಮಾಡುವ ಕಾರ್ಯವು ನಿನ್ನದಾಗಿರಲು ಮೂಡಿಸು ಮನದಲ್ಲಿ ತವಪಾದಭಕ್ತಿಯ ಜೋಡಿಸಿ ಕೈಗಳ ಮುಗಿವೆನೋ ರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನಾರು ನಾನಾರು ನೀನೆನ್ನೊಳಿರಲು ನಾನಾರು ನೀನಾರು ನಾನಿನ್ನೊಳಿರಲು ಪ ನೀನೇನ ಮಾಡಿಸುವೆ ನಾನದನು ಮಾಡುವೆ ನೀನೇನ ಮಾಡಿದರೂ ನಾನದನು ಮಾಡುವೆ ಅ.ಪ ಎನ್ನದೆಂಬುವುದೆಲ್ಲ ನಿನ್ನದಾಗಿರುವಾಗ ನನ್ನದೇನುಂಟಯ್ಯ ಪನ್ನಗಾಧೀಶಾ ನಿನ್ನವನು ನಾನಯ್ಯ ನನ್ನವನು ನೀನಾದೊ ಡಿನ್ನೇನು ನಾನೀನು ಎನ್ನುವಂತಿಲ್ಲ 1 ಇಂದಿರಾನಂದ ಗೋವಿಂದ ತವಪಾದಾರ ವಿಂದಸೇವೆಯ ಮಾಳ್ಪೆನೆಂದು ಕಾದಿಹೆನೋ ಮುಂದೆನಗೆ ಜನ್ಮಂಗಳೊಂದಾದರೂ ಬೇಡ ತಂದೆ ಮಾಂಗಿರಿರಂಗ ಬಂದುಕಾಯೋ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್