ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯದಿ ವರಗಳ ನೀಡು ಮಮಸ್ವಾಮಿ ಸರ್ವಂತರ್ಯಾಮಿ ನಯದಿ ಬೇಡುವೆ ಭಕುತಜನ ಪ್ರೇಮಿ ಮಮ ಸರ್ವಸ್ವಾಮಿ ಪ ಸವಿನಯದಿ ಪ್ರಾರ್ಥಿಸುತ ಬೇಡುವೆ ಸುಮನರಸರ ಪ್ರಿಯ ಚಿತ್ಸುಖಪ್ರದ ಅಮಿತ ವಿಕ್ರಮ ಅಪ್ರಮೇಯನೆ ರಮೆಯರಮಣನೆ ರಕ್ಷಿಸೆನ್ನನು ಅ.ಪ ತೀರ್ಥ ಕ್ಷೇತ್ರಗಳನು ಚರಿಸುತಲೆ ಶ್ರೀ ಹರಿಯಗುಣ ಸ- ತ್ಪಾತ್ರರಿಂದನವರತ ತಿಳಿಯುತಲೆ ಶ್ರೋತ್ರಿಯನ ಸಂಗದೊಳು ನಲಿಯುತ್ತಾ ಮನನಲಿದು ನಿನ್ನಯ ಕೀರ್ತನೆಗಳನುದಿÀನದಿ ಕೀರ್ತಿಸುತ ಪಾರ್ಥಸಾರಥೆ ನಿನ್ನ ಪೊಗಳುತ ರಾತ್ರಿ ಹಗಲೆಡಬಿಡದೆ ಸ್ತುತಿಪರ ಗಾತ್ರಮರೆಯುತಲವರ ಸೇವಿಪ ಸಾರ್ಥಕದ ಸೇವೆಯನೆ ನೀಡೈ 1 ಗೋಕುಲಾಪತಿ ಹರಿಯೆ ಗೋವಿಂದ ನೀ ಕಡಿಯೋ ಬಂಧ ನೂಕಿ ಉದ್ಧರಿಸೆನ್ನ ಭವದಿಂದ ಕಾಕುಮತಿಗಳ ಬಿಡಿಸು ದಯದಿಂದ ನೀ ಪೊರೆಯದಿರಲು ಯಾತಕೀ ನರದೇಹ ಮುಕುಂದ ಮಾತುಮಾತಿಗೆ ನಿನ್ನ ಸ್ಮರಿಸದ ಮಾತುಗಳ ಫಲವೇನು ಕೇಶವ ಮದನ ಜನಕ ಮಾಧವ ಮುರಮರ್ದನ ಹರೇ 2 ಕರುಣಿಗಳೊಳು ದೇವನಿನಗೆಣೆಯೆ ದಯ ಮಾಡು ಹರಿಯೆ ಕರಿಯ ಪೊರೆದವನಲ್ಲೆ ನರಹರಿಯೆ ಕರೆಕರೆಯ ಸಂಸಾರ ಇದು ಖರೆಯ ಇದರೊಳಗೆ ಬಳಲಿದೆ ಕರೆದು ರಕ್ಷಿಪುದೆಂದು ಮೊರೆ ಇಡುವೆ ಕಮಲ ಮುಖಿ ಶ್ರೀ ಭೂಮಿ ಸಹಿತದಿ ಕಮಲನಾಭ ವಿಠ್ಠಲನೆ ಭಕುತರÀ ಮಮತೆಯಲಿ ಕೈ ಪಿಡಿದು ಪೊರೆಯುವ ಮನ್ಮಥನ ಪಿತ ಮನ್ನಿಸುತ ಪೊರೆ 3
--------------
ನಿಡಗುರುಕಿ ಜೀವೂಬಾಯಿ
ನಮೋ ನಮೋ ಗುರು ಸುಶೀಲೇಂದ್ರ | ಶ್ರೀ ಸಂ ಯಮಿ ಕುಲೋತ್ತಮ ಮಧ್ವಮತ ಸುಮತಾಬ್ಧಿ ಚಂದ್ರ ಪ ಶ್ರೀ ಸುವೃತೀಂದ್ರ ಕುಮಾರ | ಜಿತ ಪೂತರ ಭಾಸುರ ಚರಿತ ಉದಾರ ಭೂಸುರ ಸೇವಿತಧೀರ | ಮೂಲ ದಾಶರಥಿಯ ಪಾದಾಂಭೋಜಭಾರ 1 ಶ್ರೀರಾಘವೇಂದ್ರ ಪ್ರಿಯ ಗುರುವರದ ತೀರ ಶೋಭಿಪರಿತ್ತಿ ಸುಕ್ಷೇತ್ರ ನಿಲಯ ಭವ | ದೂರ ದಯಾಂಬುಧಿ ದ್ವಿಜಕುಲ ಪರಿಯ 2 ಶಮಸುಂದರ ದಾಸಾಗ್ರಣಿಯೆ | ಬುಧ ಸ್ತೋಮವಂದಿತ ಪದನತ ಸುರಮಣಿಯೆ ಈ ಮಹಿಯೊಳು ನಿನಗೆಣೆಯೆ | ಮಮ ಸ್ವಾಮಿ ಕುಮತ ಕುಲತಮಗೆ ದ್ಯುಮಣಿಯೆ 3
--------------
ಶಾಮಸುಂದರ ವಿಠಲ
ಭಂಗ ಪ ಶೃಂಗಾರ ಗುಣನಿಧಿ ಕೃಪಾಂಗ ಎನ್ನನು ಕಾಯೊ ಅ. ಪ. ಸುಜನ ಅಜನಂದನ ರುದ್ರ ವೀರಭದ್ರಾ ಕುಜನಮತವನು ಬಿಡಿಸೊ ನಿಜಪಥವ ತೋರಿ ಸಾಂಬ ಪ್ರಾಣ ಪ್ರತಿಬಿಂಬ 1 ನೀಲಕಂಧರ ವಿಶಾಲಗುಣ ಸುಂದರ ಫಾಲಲೋಚನ ಭಜಕ ಕಾಲಹರ ಪಾರ್ವತಿ ಲೋಲ ಭಕ್ತರ ಪಾಲ ಸಿರಿ ಲೊಲನಪ್ರಿಯ 2 ದುರ್ವಾಸ ಶುಕಮುನಿಯೆ ಉರ್ವಿಯಾಳ್ ನಿನಗೆಣೆಯೆ ಓರ್ವ ಮೂಕನ ಕೊಂದು ಮರಳೆ ಬಂದು ದೇವ ದೇವ ನಮ್ಮ ವಿಜಯವಿಠ್ಠಲರೇಯ ಸರ್ವೋತ್ತಮನೆಂಬ ನಾಮರಸ ಉಂಟಾ 3
--------------
ವಿಜಯದಾಸ
ಎಲೆ ಗುರುವೆ ಜನುಮ ಜನುಮ ಜನುಮದೊಳು ಗುರುವೆಯಲಗುರದ ಹನುಮಂತ ಗೆಲಿಸು ಭವಪಂಥ ಪ.ಮೂಜಗದೊಳಾರು ನಿನಗೆಣೆಯೆ ಋಜುಗಣಪತಿ ಸರೋಜಭವಪದ ಗಮ್ಯ ರಮ್ಯಭೂಜಾತೆಯಳಶೋಕಬಿಡಿಸಿದ ಬಲಾಧಿಕ ಬಿಡೌಜಾರಿಪಿತ ಹೃದಯನೊದೆದೆ 1ಲಾಕ್ಷಾಗೃಹದಿ ಧರ್ಮಜರ ಹೊರೆದು ಕಿಮ್ರ್ಮೀರರಾಕ್ಷಸ ಹಿಡಿಂಬರನು ತರಿದೆಭಕ್ಷಿಸಿದೆ ವಿವಿಧನ್ನ ಶಿಕ್ಷಿಸಿದೆ ಬಕನ ತಾಮ್ರಾಕ್ಷ ಭಾಗವತಜನಪಕ್ಷ 2ಉನ್ಮತ್ತಮತಂಗಳನು ಅಳಿದೆ ಯತಿರೂಪದಿ ಜಗನ್ಮಯನ ಭಕುತಿರಸ ಜಗದಿನಿನ್ನ ಬಂಟರಿಗೆರೆದೆನಿರಯತಪ್ಪಿಸಿದೆ ಪ್ರಸನ್ನವೆಂಕಟನಾಥ ಪ್ರೀತ 3
--------------
ಪ್ರಸನ್ನವೆಂಕಟದಾಸರು
ಶರಣು ಮುನಿಪಮಣಿಯೆ ಸುಮತೀಂದ್ರಕರುಣಾಮೃತದ ಖಣಿಯೆಶರಣೆಂದವರಿಗೆ ವರಚಿಂತಾಮಣಿಯೆಧರೆಯ ಮೇಲಿನೊಬ್ಬ ದೊರೆ ನಿನಗೆಣೆಯೆ ಪ.ಸಂತತ ಸೇವಕ ಸಂತರಿಗೊಲಿದೀಗಸಂತತಿ ಸಂಪದವಿತ್ತೆ ಬೇಗಶಾಂತ ಶುಭಗುಣ ವಸಂತನೆಂಬೊ ಕೀರ್ತಿ ವಿಶ್ರಾಂತಿಯಮಿತ ದಿಗಂತಕೆ ವಾರ್ತಿ 1ತಾಳ ತಮ್ಮಟೆಕಂಬುಕಾಳೆ ಬಿರುದುಬುಧಮೇಳದಿಂ ಶಿಷ್ಯ ಜನಾಲಯಕೆ ಸಾಲದೀವಿಗೆಯೊಳು ಮಾಲಿಕೆ ಗ್ರಹಿಸಿ ಆಂದೋಳಿಕಿಳಿದು ಬಂದು ಪಾಲಿಪೆಅವರ2ಶ್ರೀಗುರು ಪ್ರಸನ್ನವೆಂಕಟಾಚಲವಾಸ ರಾಮನಪಾದನಿಶಿದಿನಾರ್ಚಿಸುವೆ ಸಂತೋಷಸಾಂದ್ರಋಷಿಯೋಗೀಂದ್ರರಕರಬಿಸಜಜ ಯೋಗೀಂದ್ರಸುಶರಧಿ ಸಂಭವಶಶಿಸುಮತೀಂದ್ರ3
--------------
ಪ್ರಸನ್ನವೆಂಕಟದಾಸರು