ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ ಉದಯಾಸ್ತಮಾನವಿಲ್ಲದೆ ಸದೋದಿತ ಭಾಸುತಿದೆ ಧ್ರುವ ವಸ್ತುವಿದೆ ನಿತ್ಯವಾದ ಅತ್ತ್ಯೋತ್ತಮಾನಂದಬೋಧ ಎತ್ತ ನೋಡಿದರತ್ತ ಹತ್ತಿಲೆ ಸೂಸುತಲ್ಯದೆ 1 ಸತ್ಯಸದಾನಂದೋಬ್ರಹ್ಮ ನಿತ್ಯತೃಪ್ತ ನಿರುಪಮ ಅತ್ತಿತ್ತಲಾಗದೆ ಪೂರ್ಣಮತ್ತವಾಗ್ಯೆನ್ನೊಳಗದೆ 2 ಗುಪಿತ ನಿಜ ಸಕಲಾಗಮ ಪೂರಿತ ಶುಕಾದಿಗಳೂ ಸೇವಿತ 3 ಸರ್ವಸಾಕ್ಷಿ ಸರ್ವಾಧಾರ ಸರ್ವರೊಳು ಸರ್ವೇಶ್ವರ ಸರ್ವಮಿದÀಂ ಖಲುಬ್ರಹ್ಮವೆಂದು ಶ್ರುತಿ ಸಾರುತಿದೆ 4 ಇಹಪರ ಪರಿಪೂರ್ಣ ಮಹಾಗುರು ನಿರಂಜನ ಮಹಿಪತಿ ಬಾಹ್ಯಾಂತ್ರದೊಳು ಸಹಕಾರ ಸಾಕ್ಷಾತ್ಮವಿದೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ ಇಪ್ಪ ಮುಕುತರಿಗೆ ಸಲ್ಲದು ನಿದ್ರೆ ನಿನಗಿಲ್ಲ ಕಲ್ಪಾಂತದಲಿ ನಿತ್ಯವಾದ ವೇದವ ನೆನೆವ ಸುಪ್ರಭಾವನಿಗೇಕೆ ಹೀನಮನುಜರ ಸಾಮ್ಯ ಪ. ಹರಿನಾಲ್ಕು ಮನ್ವಂತ್ರಗಳನು ಹಗಲನು ಮಾಳ್ಪ ವಿಧಿ ನಿನ್ನ ಕುವರನೆ ನಿದ್ರೆಗೊಪ್ಪದೆ ಬಂದ ಇದು ಸರ್ವಸೊಪನ ಅನಿಮಿಷರೆಂಬ ಬಿರುದಿನವ ರಿದಕೆ ಕೋಪಿಸಿ ಬಂದರು ವಿಧಿ ತನ್ನ ಹಗಲ ನಡೆಸುತ ನಿನಗೆ ಈ ತೆರನ ಮದನಪಿತ ತಾಳದೆ ಇಳೆಗೆ ನಡೆತಂದ ಸದುಬುಧರು ತಮ್ಮ ವಿಷಯವ ನೆನೆವ ಜಂತುಗಳು ಇದು ತಾಳೆವೆನುತ ಬಾಗಿಲೊಳು ಬಂದೈದಾರೆ 1 ನಿದ್ರೆಗೈವರ ಹೃದಯದಲ್ಲಿ ಭೂಭೂಯೆಂಬ ಎದ್ದು ಬಹ ಶ್ವಾಸದಭಿಮಾನಿ ಮುಖ್ಯಪ್ರಾಣ ಕ್ಷುದ್ರಗತಿ ತನ್ನಾಳ್ದಗಿದು ಪುಸಿಯೆನುತ ಬಂದ ಮಧ್ವಸದ್ಭಾಷ್ಯಕಾರ ಹೊದ್ದಿ ಕರಗಳ ಮುಗಿದು ಜೀವರಿಗು ನಿನಗು ಪ್ರ- ಬುದ್ಧಜನೆನುತ ಬಂದ ವೇದಾಂತದೇವಿಯರು ನಿರ್ದೋಷ ನೀನೆತ್ತ ನಿದ್ರೆಯೆತ್ತೆನುತ ಪಾದ- ಪದ್ಮಗಳ ಪಿಡಿದು ಪಾಡುವ ಸಾಮಗಳ ಸವಿದು 2 ಅಪ್ರಾಕೃತನೆ ನಿನಗೆ ಈ ಪ್ರಕೃತಿಗುಣಗಳಿಂ- ದಿಪ್ಪ ಯುಕ್ತಿಗಳ ಸುಪ್ತಿಗಳು ಸಲ್ಲವು ದೇವ ಅಪ್ರಬುದ್ಧರ ಮುಂದೆ ಆಡುವಾಟಗಳು ಈ ಸುಪ್ರಬುದ್ಧರ ಸಭೆಯಲಿ ಸರ್ಪತÀಲ್ಪನೆ ತೋರಿದಯ್ಯ ಸಾಕೈನಟನೆ ಸುಪ್ರಭಾತವು ಬಂತು ಹಯವದನ ದಿನದಿನದಿ ತಪ್ಪದೆ ಮಾಡುವಘ್ರ್ಯದಿ ಸತ್ಕರ್ಮಗಳ ಒಪ್ಪುಗೊಳು ಅಪ್ರತಿಮಮಹಿಮ ತ್ರಿವಿಕ್ರಮರಾಯ 3
--------------
ವಾದಿರಾಜ
ಕೃಪೆ ನಿಮ್ಮದಾಗಬೇಕು ಸ್ವಾಮಿ ನಿಮ್ಮರಿಯಲಿಕ್ಕೆ ಅಪಾರ ಮಹಿಮೆ ನಿಮ್ಮ ಸುಂಪಾದ ತಿಳಿಯಲಿಕ್ಕೆ ಧ್ರುವ ಭ್ರಾಂತಗೆಲ್ಲಿಹುದಯ್ಯ ಪೂರ್ಣನಿಂತ ನಿಲಕಡೆಙÁ್ಞನ | ಎಂತುಹೇಳಿದರ ಖೂನ ಶಾಂತಹೊಂದದಯ್ಯಮನ | ಪಂಥ ಪರಮ ಗುಹ್ಯಸ್ಥಾನ ತಂತುವಿಡಿಯಲು ನಿರ್ಗುಣ | ಅಂತು ಇಂತು ಎಂಬುಂದೆ ನಾನಂತ ಗುನ ನಿಧಾನ 1 ಖೂನ ತಿಳಿಯಲಿಕ್ಯಗಾಧಗುರು ನಿಮ್ಮಶ್ರೀಪಾದ | ಬೋಧ ನೀಡಬೇಕು ಸುಪ್ರಸಾದ | ನೀನೆವೆ ನಿತ್ಯವಾದ ವಸ್ತು ಪರಿಪೂರ್ಣ ಸದಾ | ದೀನ ಬಂಧು ದಯದಿಂದ ಖೂನದೋರೊ ಆಶ್ರಯದ 2 ಮಂದ ಮತಿ ನಾನು ಭಕ್ತಿ ಮಾಡಲರಿಯೆನು ಒಡಿಯನಹುದಯ್ಯ ನೀನುಮಹಿಪತಿಯ ಕಾಮಧೇನು ಕೊಡಲಿಕ್ಕೆ ಪೂರ್ಣ ನೀನು ಸ್ವಾಮಿ ಕಾವ ಕರುಣನು ಪಿಡಿದಿಹ್ಯ ನಿಮ್ಮ ನಾನು ದಿವ್ಯ ಪಾದಪದ್ಮವನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತನ್ನ ತಾ ತಿಳಿದು | ಧನ್ಯನಾಗೊ ಬಗೆ ಇದು | ಖಿನ್ನವಳಿದು ಪೂರ್ಣ ಬ್ರಹ್ಮವನ್ನು ಕಾಂಬುದು ಪ ತತ್ತ್ವ ಶಾಸ್ತ್ರವನ್ನು ಓದಿ | ಭಕ್ತಿಯಿಂದ ಮನನ ಮಾಡಿ | ಯುಕ್ತಿ ಭಾವವೆಲ್ಲ ಕಳೆದು ಮುಕ್ತನಾಗುತಾ || ನಿತ್ಯವಾದ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು | ಸತ್ಯ ಶರಣರಡಿಯ ಪಿಡಿದು ಚಿತ್ತದಲ್ಲಿ ನಲಿವುದು 1 ಆಶೆ ಮೂರರಲ್ಲಿ ಇನ್ನು | ಬೇಸರಾಗಿ ವಿಷಯದ | ವಾಸನೆಗಳ ಜರಿದು ಪಾಶ ಕ್ಲೇಶವಳಿಯುತ || ನಾಸಿಕಾಗ್ರದಲ್ಲಿ ಮನವ | ಸೂಸದಂತೆ ನಿಲಿಸಿ ಜಗ- | ದೀಶನಾಟವನ್ನು ನೋಡಿ ನಾದ ಘೋಷ ಕೇಳ್ವುದು 2 ಹಿಂದೆ ಒಂದು ನೆನೆಸದಿನ್ನು | ಮುಂದೆ ಉಳಿದ ಕರ್ಮವನ್ನು | ಬಂದುದೆಲ್ಲ ಉಂಡು ಗೆದ್ದು ಹರುಷದಿಂದಲಿ || ತಂದೆ ಭವತಾರಕನ | ಹೊಂದಿ ಸದಾನಂದದಿಂದ | ಮುಂದೆ ಭವಕೆ ಬೀಳದಂತೆ ಛಂದದಿಂದ ನಲಿವುದು 3
--------------
ಭಾವತರಕರು
ಭಾಗವತರ ನೋಡುವಾ ಭಾಗ್ಯಸ್ವರೂಪಾ ಪ ಯೋಗಜನಗಳನು ರಾಗದಿ ಧ್ಯಾನಿಪ ಭೋಗಿಶಯನ ಸಂಪನ್ನ ಸದ್ಗುಣಪೂರ್ಣ ಭಾರ್ಗವೀಸತಿ ಬಿಡದೆ ವರಿಸಿರುವಾ ತಾಂಝಂ ತಂಝಂತ ತಂತಕನಾ ತಧಿಂಗಿಣತೋಂ ತಧಿಂಗೀಣತೋಂ ತಧಿಂಗಿಣತೋಂ 1 ನಿನ್ನಮುಖಕೇ ಸರಿಬಾರದೆ ಚಂದ್ರಮನು ಉನ್ನತ ಕಳಂಕಿಯಾಗಿರುತಿಹನೋ ಕಣ್ಣು ಸಾಹಸ್ರಕ್ಕೂ ಸರಿಬರದೆ ತಾಂಝಂ ತಂಝಂತ 2,ತಂಝಂ...ತಂತ 2 ಹೊಳೆವ ನಿನ್ನಯ ಕೊರಳಿಗೆ ಪಡಿಯಾಗದೆ ನಲಿದು ನಾರಾಯಣ ಎನ್ನುತ್ತಿದೆ ಶಂಖವು ನಳಿನಶರ ರೂಪಕ್ಕೆ ಸರಿಬರವೆ ತಾಝಂ ತಝಂತ 2,ತಝಂ...(ತ್ವಂತ) 3 ಭಕ್ತರು ಪಡೆವತಿ ಸೌಖ್ಯಕ್ಕೆ ಹೋಲದ ನಿತ್ಯವಾದ ಲೌಕಿದದಾಶೆ ಬಿಡಿಸಯ್ಯ ಮುಕ್ತಿಕೊಡುತೆನ್ನನ್ನು ನಿನ್ನಡಿಯ ತಾಝಂ ತಂಝಂತ ತಂತಕನಾ ತಧಿಗಿಣತೋಂ ತಧಿಗಿಣತೋಂ ತಧಿಗಿಣತೋಂ 4
--------------
ಶಾಮಶರ್ಮರು
ಮಾಧವ ರಕ್ಷಿಸು ಮಧುಸೂದನ ವೃಥಾ ಕ್ರೋಧವ್ಯಾಕೊ ಸುರ ಸೌಖ್ಯ ಸಾಧನ ಪ. ದೇಹದಲ್ಲಿ ಬಲ ಕುಂದುತಲಳುವೆ ಮುಂದ- ಕ್ಕಾಹ ರೀತಿ ತಿಳಿಯದೆ ಬಳಲುವೆ ಮೋಹ ಪಾಶದಲಿ ಸಿಕ್ಕಿ ನರಳುವೆ ಚಿತ್ಸಂ- ದೋಹ ಎಂದು ತವಪಾದ ನೆಳಲೀವೆ 1 ಯಾತಕಿಂತು ಸಾವಕಾಶ ಮಾಡುವಿ ದೀನ ನಾಥ ಬಹು ಪರಿಕಿಸಿ ನೋಡುವಿ ಪಾತಕಾಂಶವಿರಲು ನೀಡಾಡುವಿ ಎನ್ನ ಮಾತನ್ಯಾಕೆ ಮರೆತು ಮುಂದೋಡುವಿ 2 ನಿತ್ಯವಾದ ನಿನ್ನ ಸೇವೆ ನಡೆಸಲು ತಕ್ಕ ಶಕ್ತಿಯಿಲ್ಲ ಸ್ವರವನ್ನೆತ್ತರಿಸಲು ಒತ್ತಿ ಬಹ ವಿಧ ವಿಧ ಕೊರೆತವು ಗಂಡ ಕ್ಲೇಶ ಭರಿತವು 3 ಸಿರಿನಲ್ಲ ಹೀಗೆ ಭೃತ್ಯನನ್ನು ಬಿಡುವುದು ಥರವಲ್ಲ ದತ್ತ ಸ್ವಾತಂತ್ರ್ಯವರಿಯದ ಕ್ರಮವೆಲ್ಲ ತೀರಿ ಕತ್ತಲೆ ಮುಸುಕಿದಂತಿರುವುದಲ್ಲ 4 ಮಾಯಕ ಮೋಹದಿ ಸಿಕ್ಕಿ ನೊಂದೆನು ತಿಮ್ಮ ರಾಯ ಶೇಷ ಗಿರೀಶ ಕೇಳ್ಮುಂದೇನು ಬಾಯ ಬಿಟ್ಟು ಬಿರಿನುಡಿಯಂದೆನು ಲಕ್ಷ್ಮೀ ಪ್ರೀಯನೆಣಿಸದಿರದ ನೊಂದೆನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಶರೀರ ಜರಿಯಬೇಡಾ | ಬೆರಿಯಬೇಡಾ | ಸ್ಥಿರವಿದ್ದ ಕೈಯಲಿ ಗುರು ಶರಣವ ಹೊಕ್ಕು | ತಾರಿಸೋ ಭವದಿಂದ ನೀ ಮರಳು ಜೀವವೇ ಪ ಲೋಕದೊಳು ವಾರಿಜೋದ್ಭವ ನಿನ್ನ ಜನ್ಮ ಕೊಟ್ಟು | ನೂಕಲಾಗ ತಾಯಿ ಗರ್ಭದೊಳಾವರಿಸಿ ತಾನು ಧರಿಸಿ | ರೇಖೆ ರೂಪ ಲಾವಣ್ಯ ಅವಯವಂಗಳಿಂದ | ಸಾಕಾರವಾಗಿ ಸುಂದರೆನಿಸಿ ವರನೆನಿಸಿ | ಬೇಕಾದ ವಿದ್ಯವನು ಸರ್ವ ಸಂಪಾದಿಸಲು | ತಾ ಕಾರ್ಯವಾಗಿ ಅಭ್ಯಾಸದಿಂದಾ ಧ್ಯಾಸದಿಂದಾ | ವಾಕ್ಪಟುದಲಿ ಸಮರ್ಥನೆಂಬನಾಮ ಪಡೆದು | ಪ್ರಖ್ಯಾತವಾದೆ ಈ ಕಾಯದಿಂದ 1 ಸ್ನಾನವನು ಮಾಡಿ ತ್ರಿಕಾಲ ಸಂಧ್ಯಾನ ವಿಧಿಯನು | ಮೌನ ಜಪಗಳವನು ತಪಗಳನು | ಸ್ವಾನುಭಾವ ಸೂರ್ಯಾಡಲಾಗಿ ನೇಮವನುಷ್ಠಾನ ಮೊದಲಾದ | ಧ್ಯಾನ ಧಾರಣವನು ಕಾರವನು | ಜ್ಞಾನ ಭಕ್ತಿ ವೈರಾಗ್ಯ ಶಮದಮ ಕರುಣನು ದಿನಮಾಳ್ಪಾ | ಕರ್ಮ ನೈಮಿತ್ಯವಾದಾ ನಿತ್ಯವಾದಾ | ತಾನು ತನ್ನ ಉದ್ಧರಿಸಿಕೊಳಲಿಕ್ಕೆ ಭಾವದಿಂದಾ | ಮಾನುಭಾವg ದಯ ಪಡೆವುದರಿಂದಾ 2 ತಾನು ಕುಣಿಯಲಾರದೆ ಅಂಕಣವು ಡೊಂಕು ಎಂದು | ಹೀನೋಯಿಸಿ ನುಡಿವ ನಟ ವೇಷಿಯಂತೆ | ನೀನು ನೀಟ ನಡಿಯದ್ಹೋಗಿ ದೇಹ ಕಶ್ಮಲವೆಂದು | ಜ್ಞಾನ ರಹಿತನಾಗಿ ಹಳಿವುದು ಉಚಿತ ಇದು ಪ್ರಾಚೀತ | ಈ ನಾಲ್ಕೆರಡು ವೈರಿಗಳ ದಂಡಿಸದೇ ಬರಿದೇ | ಹೀನ ವೈರಾಗ್ಯವಾ ಶಣಸಬೇಡಾ ದಣಿಸಬೇಡಾ | ಕಾನನದ ಹುತ್ತಮ್ಯಾಲ ಬಡಿದರೇನು ವರಗಿರುವಾ | ಆ ನಾಗದರ್ಪಗುಂದದು ಕಂಡಾ 3 ಪರಿಪರಿ ಮುಮ್ಮುಳಿ ವಳಗಾಗಿ ಜೀವಿಸುವ | ತೆರನಂತೋಯಂದು ಚಿಂತಿಸಬಹುದು ಸುರಿಸಬಹುದು | ನೂರು ಭಂಡಿಗಳ ತÀುಂಬಿ ಬಂದರೇನು ತಾ | ಧರೆಯೊಳು ಸೂಲ ತಾ ಹಾವುದೊಂದೇ ನೋವುದೊಂದೇ | ಬರೆದ ಬರಹವೇ ಪಣಿಯಾಲಿದ್ದಪರಿ ತಪ್ಪದೈ | ವರ ಕೂಡಿ ಕೊಟ್ಟಡವಿ ಮಾಡುವದೇನು ನೋಡುದೇನು | ಪರಿ | ಪಡಿ ನೀನು 4 ಸಾಕ್ಷರಾವೆಂಬ ಮೂರಕ್ಷರವ ಬರೆದು ತಾ | ರಾಕ್ಷಸಾವೆಂಬುದೇ ಅರ್ಥವಹುದು ಅನರ್ಥ ವಹುದು | ಪರಿ ವಳಿತು ಹೊಲ್ಲೆ | ಪಕ್ಷದ್ವಯಕ ಬಾಹುದು ಮಾಡಿದಾಂಗ ಕೂಡಿದಾಂಗ | ರಕ್ಷಿಸೆಂದು ಮಹಿಪತಿಸುತ ಜೀವನಾದಿ ವಿಶ್ವಾ | ಭವ ಹಿಂಗು ಬ್ಯಾಗ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ಲೋ||ಶª-Àುದಮ ಸಹಿತೇನಸ್ವಾನುಭಾವೇನ ನಿತ್ಯಂಸಮಮತಿಮನುಯವ್ಯಣ ಸರ್ವದಾ ಸೇವಕಾನಾಂಯಮ ನಿಯಮ ಪರಾಣಾಮೇಕ ತತ್ಪಾದರಾಣಾಮಮಿತನಿಜ ಮಹಿಮ್ನಾ ದೇಶಿಕೇಂದ್ರೊ ವಿಭಾತಿಯೇನು ವಿಚಿತ್ರ ಪೇಳೆ ಯೇ ಮತಿಯೆ ನಿದಾನವನೆನ್ನೊಡನೆಮಾನಸ ವೃತ್ತಿಯಾತ್ಮನ ಕೂಡಿಬರಲೊಂದು ಗಾನ ತೋರುವುದಿದೇನೆ ಪಎಲ್ಲವನುಳಿದೀಗಲೂ ಬಗೆಗೊಂಡು ಮುದದಿಂದ ಬಂದು ನಿಂದುಸಲ್ಲಲಿತಾನಂದ ಪದವ ನೋಡುವೆನೆಂದು ಸವರಿಸಿ ಬರಲು ಮುಂದುಇಲ್ಲ ಮತ್ತೊಂದಾತ್ಮನಿಂದಧಿಕವೆಂದು ನಿಲ್ಲದೆ ಧ್ಯಾನಿಸಲುಝಲ್ಲನೆ ಜಲಧಿಯ ಮೊರವಿನಂದದಿ ತೋರಲಲ್ಲಿ ನಾ ಬೆರಗಾದೆನು 1ಅಂಜದೆ ಚಿಂತಿಸಲು ಮುರಜ ಭೇರಿ ಮಂಜುಳ ವೀಣೆಗಳಸಿಂಜಿತಗಳು ಮೇಘನಾದ ಮುಂತಾದವು ಸಂಜನಿಸಿದವೊಳಗೆರಂಜನೆುಂದವನು ಕೇಳುತ ಹೃತ್ಕಂಜದೊಳ್ಬೋಧೆಯೆಂಬಅಂಜನವಚ್ಚಲು ಬಿಂದು ಪೊಳೆುತು ನಿರಂಜನ ರೂಪಿನಲಿ 2ಮತ್ತೆ ಮುಂದೆ ನೋಡಲು ಬಿಂದುವೆಂಬುತ್ತಮ ಹಿಮಕರನಕತ್ತಲೆಗವಿದುದು ಅದ ನೋಡುತ ಮನ ತತ್ತರಿಸಿತು ನಿಲ್ಲದೆಚಿತ್ತವನಲುಗದೆ ಗುರುಪಾದವ ಧೃತಿವೆತ್ತು ಚಿಂತಿಸುತಿರಲುಕತ್ತಲೆ ಪರಿದು ಕಳಾ ವಿಶೇಷ ನೋಡಲೆತ್ತಲೆತ್ತಲು ತುಂಬಿತು 3ಛಂದದಿತೇಜವನು ನೋಡುತಲದರಿಂದಲಧಿಕ ಸುಖವೂಮುಂದೆ ಪುಟ್ಟಲದರನುಭವದಲಿ ಹಿಗ್ಗಿ ನಿಂದು ಜುಂಮುದಟ್ಟಲುಎಂದೆಂದು ಕಾಣದ ಸುಖದೊಳು ಮನ ಬಳಿಸಂದು ಲಯವನೈದಲುಒಂದಲ್ಲದೆರಡಿಲ್ಲದ ನಿಜ ನಿತ್ಯಾನಂದವೆ ನಾನಾದೆನೂ 4ತಾಪತ್ರಯಗಳಡಗಿ ಕರ್ಮಕಲಾಪವಿಲ್ಲದೆ ಪೋದುದುಗೋಪಾಲಾರ್ಯರ ಕೃಪೆುಂದ ಭವಬಂಧವೀ ಪರಿ ಬಯಲಾದುದುವ್ಯಾಪಾರವೆಲ್ಲವನಿತ್ಯವಾದವು ನಿರ್ಲೇಪತೆಯೆನಗಾದುದುದೀಪಿತ ವಿಜ್ಞಾನ ರತ್ನವೆಂದೆನಿಸುವ ದೀಪ ಸುಸ್ಥಿರವಾುತೂ 5
--------------
ಗೋಪಾಲಾರ್ಯರು