ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ದೊರೆವುದೋ ಇಂತು ನರದೇಹ ಮುಂದೆ ಬಾಹ ದಿನ್ನೆಂದಿಗೆ ಇಚಿದು ಕರುಣಿಸಿ ಸಲಹುಯನ್ನ ಮು| ಕುಂದ ನಿನ್ನಂಘ್ರಿಗಳ ತೋರಿಸಿ 1 ಮೊದಲೇ ದುರ್ಲಭ ಮನುಷ್ಯಾಂಗವು ಅದರೊಳುತ್ತಮ ವರ್ಣದಿ ಉದಿಸಿ ಭಗವಂತಾಂಘ್ರಿ ದರುಶನ ವದಗಿ ಗತಿಗೈದಿಸುವ ಜನುಮವು 2 ಗುರುಹಿರಿಯರೆಂದೆರಿಸಿ ಅವರನು ಸ್ಮರಿಸಿ ಭಕ್ತಿಗೆ ಸೇರಿಸಿ ಮರೆಸಿ ಅನ್ಯವ ಬೆರೆಸಿ ನಿಜದೊಳು ತರಿಸಿ ತಾರಿಸುತಿಹ ಜನುಮವು 3 ಹರಿಯ ಲಾಂಛನ ಪೌಂಡ್ರವು ಕೊರಳು ತುಳಸಿಯ ಮಾಲೆಯಾ ಧರಿಸಿದಂಡಿಗೆ ವಿಡಿದು ಮಾಧವ ಚರಿತ ಪಾಡುತ ನಲಿವ ಜನುಮವು 4 ತನ್ನವರ ಪರಿಚಾರಕೆನಿಸುವ ಘನ್ನ ಬಿರದಿಗೆ ಪಾಲಿಸೀ ಸನ್ನುತನೆ ಗುರುಮಹಿಪತಿ ಪ್ರಭು ನಿನ್ನ ವಲುಮಿಂದಾದರಾಗಲಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನನು ನೀ ಜರೆವೆ ಜೀವನೆನಿನ್ನನೀ ತಿಳಿದೆನೆಂದೂಮುನ್ನ ಮಾಡಿದ ಪುಣ್ಯಕರ್ಮಂಗಳೆನ್ನಿಂದ ಮನ್ನಿಸದುಪಕಾರವಾ ಜೀವಾ ಪದೇಹವು ಹೇಯವೆಂಬೆ ಮತ್ತೀಗದೇಹದೊಳಿರುತಿರುವೆದೇಹದಾಧಾರದಲ್ಲೀ ಧ್ಯಾನಿಸಿಸೋಹಂ ಭಾವನೆ ಬಂದುದೂಉಹಾಪೋಹಗಳಲ್ಲಿ ಚದುರನು ನಾನೆಂಬೆಓಹೊ ನಾನಿಲ್ಲವೆ ಜೀವಾ 1ಚಿತ್ತೆ ತಾ ಪ್ರಕೃತಿಯಾಗೀ ಭೂತದಮೊತ್ತವೆಂದೆನಿಸಿತಲ್ಲೈಮತ್ತೆ ಭೂತಂಗಳವೂ ನಾಲ್ಕುಳ್ಳತತ್ವವಿಪ್ಪತ್ತಾುತುಹತ್ತಿಂದ್ರಿಯಂಗಳಿಂದ ವಿಕರ್ಮಗಳು ಪುಟ್ಟಿಮುತ್ತೆರನಾುತಲ್ಲೈ ಜೀವಾ 2ಕನಕವೆ ಕುಂಡಲಾದಿ ಭೂಷಣಭಣಿತೆಯ ತಾಳಿರಲುಕನಕವಲ್ಲವೆ ಭೂಷಣ ಯೆಣಿಸಲುಚಿನುಮಯಾತ್ಮಕನಿಂದಲೆಜನಿಸಿ ದೃಶ್ಯತ್ವದಿ ತೋರಿದಡೇನಾುತುತನುವಾತ್ಮನಲ್ಲವೇನೈ ಜೀವಾ 3ಮಾಡಿದ ಉಪಕಾರವ ಮರೆಯುವಮೂಢಗೆ ನರಕವೆಂದುಆಡದೆ ಶೃತಿನಿಕರ ನೀನದನೋಡದೆ ನುಡಿಯುತಿಹೆಕೂಡಿಕೊಂಡೆನ್ನನು ನಿಜದೊಳು ಬೆರೆದರೆಪ್ರೌಢ ನೀನೆನಿಸಿಕೊಂಬೆ ಜೀವಾ 4ಕಾರ್ಯಕಾರಣ ರೂಪವಾ ನೋಡಲುಕಾರ್ಯಕಾರಣವಲ್ಲವೆಸೂರ್ಯನಿಂದಾದುದಕ ಬೆರೆಯದೆಸೂರ್ಯನ ಮರಳಿ ನೋಡೂಧೈರ್ಯಶಾಲಿಯೊಳಿಪ್ಪ ಧೈರ್ಯತ್ವವಾತನವೀರ್ಯವಲ್ಲವೆ ನೋಡಲೂ ಜೀವಾ 5ರೂಪನಾಮಗಳೆರಡೂ ಸತ್ತಾನುವ್ಯಾಪಿಸಿ ಜಗವಾದುದುದೀಪದೊಳಗೆ ಕಾಳಿಕೆ ತೋರ್ಪಂತೆಈ ಪರಿಯಲಿ ಮಾಯೆಯುವ್ಯಾಪಾರಂಗಳನುಪಸಂಹರಿಸಲು ಕಾಯವ್ಯಾಪಕನೊಳು ನಿಂದುದೂ ಜೀವಾ 6ಪೊಳೆದೆನು ನಾ ಮೊದಲೂ ಆಮೇಲೆಪೊಳೆದೆ ನೀ ಪ್ರತಿಫಲಿಸಿಜಲಗತ ಪ್ರತಿಬಿಂಬವೂ ನಿಜವಲ್ಲದಳಿವಂತುಪಾಧಿುಂದಾನಿಲುವುದು ನಿಜಬಿಂಬವಾಭಾಸ ನೀ ಪುಸಿನಿಲುವೆ ನಾ ನಿಜದೊಳಗೆ ಜೀವಾ 7ಬಂಜೆಯ ಮಗ ನಿಜವೊ ಅವನಿಗೆಮುಂಜಿಯೆಂಬುದು ನಿಜವೋಅಂಜಿಕೆದೋರಿಸಿತು ರಜ್ಜುವುರಂಜಿಸಿ ಸರ್ವನಾಗಿವ್ಯಂಜಿಸಿ ಕರಣದಿ ನಿದ್ರೆಯೊಳಭಂಜಿಸಿ ಮಂಜಿನಂದದಿ ಪೋಪೆಯೈ ಜೀವಾ 8ಇರಿಸಲು ಬೇರೆನ್ನನು ತೆರಹಿಲ್ಲಬೆರೆಸಾತ್ಮನೊಳು ಬಿಡದೆಕಿರಣಂಗಳು ರವಿಯ ಬಿಟ್ಟೊಮ್ಮೆಇರಬಲ್ಲವೆ ನೋಡಲುತಿರುಪತಿನಿಲಯ ಶ್ರೀ ವೆಂಕಟರಮಣನಚರಣನಾನಲ್ಲವೇನೈ ಜೀವಾ 9 ಕಂ||ಇಂತೀ ಪರಿಯಲಿ ಜೀವನನಿಂತಿರುವವನಿಲ್ಲದವನ ನುಡಿವದು ಸಹಜವುಎಂತಾದರು ತನ್ನ ತಿಳಿಯದೆಮುಂತೋರದ ನುಡಿುದೇನೆನೆ ಮುಳಿದಂ ಜೀವಂ
--------------
ತಿಮ್ಮಪ್ಪದಾಸರು
ನೀ ಮನದೊಳು ಜಪಿಸೆಲೊ ಮನುಜ ಪ ಸಾರದ ಪದವಿಯ ಸೇರಿರುತಿರುವರೆ ಅ.ಪ ಸಂಚರಿಸದೆ ನಿಶ್ಚಿಂತೆಯೊಳಿರುವರೆ 1 ಪೃಥಿವಿಯ ಭೋಗವಸ್ಥಿರವೆನುತ 2 ನಿಲ್ಲಿಸಿ ಭಾವಿಸಲಲ್ಲಿರುತಿಹನು 3 ಹೊಂದುತೆಲ್ಲ ಗೋವಿಂದನಿಚ್ಛೆಯೊಳು 4 ನಿರತಾನಂದದೊಳಿರು ನೀ ನಿಜದೊಳು 5
--------------
ಸದಾನಂದರು
ಮರತರ ತಾ ಮರವಲ್ಲದು ನೋಡಲು | ಅರತರತಾ ಅರವಲ್ಲದು ನಿಜದೊಳು | ಘನದರುವೇ ತಾನಾಗಿ | ಕುರುವಿನೊಳಿರುವಾಗಿಹ ಸ್ವಾನಂದದಿ | ತೆರವಿಲ್ಲದೆ ಸಲೆ ತುಂಬಿತುಳುಕುತಿಹ | ಜಯ ಜಯತು 1 ತೋರುವ ದೃಶ್ಯವ ಕಾಂಬುವ ನಯನಕ | ಸಾರಿಯಮನವನು ನೋಡುವ ಬುದ್ಧಿಗೆ | ನಿತ್ಯ ನಿರಂಜನ ವಿಶ್ವ ಭರಿತನೆಂದು || ಸಾರುವ ಶೃತಿಯಿಂದಾತ್ಮ ಪ್ರಚೀತಿಯ | ಭವ | ವಾರಿಸಿ ಚಿತ್ಸುಖಲಿರಿಸಿದ ಮಹಿಪತಿ | ಸದ್ಗುರು ಜಯ ಜಯತು 2 ಮೊದಲಿಗೆ ಜಯದಾರ್ಜ ಲಕ್ಷಣವನು | ಹೃದಯದಿ ನೆಲೆಗೊಳಿಸಿ | ಇದರದರಿಸಿ ಭವದ್ಹೆದರಿಕೆÉ ಹಾರಿಸಿ | ಸದಮಲ ಬ್ರಹ್ಮನ ಕಳೆಯನು ತೋರಿಸಿ | ಗುರುಮೂರ್ತಿಗೆ ಶರಣು 3 ಆಡುವ ರೇಚಕ ಪೂರ್ವಕ ನಂದಿಯ | ಜೋಡಿಸಿ ಯರಡನೆ ಮೆರೆವಸುಷಮ್ನಿಯ | ನಿಜವiನ ಸಾರಥಿಯಾ | ಕೂಡಿಸಿ ಹರುಷದ ತೇರಿ ನಡಸುತ ಸ | ಫಾಡಿರೆಯಿಂದಲಿ ಮೇಲ್ಗಿರಿಯಾತ್ರೆಯ | ಗುರುಮೂರ್ತಿಗೆ ಶರಣ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮರೆತರತಾಮರ ವಲ್ಲದು ನೋಡಲು | ಅರತರತಾ ಅರವಲ್ಲದು ನಿಜದೊಳು | ಅರಹು ಮರಹು ಎರಡನೇ ಮೀರಿಹ | ಘನದರುವೇ ತಾನಾಗಿ | ಕುರುವಿನೊಳಿರುವಾಗಿಹ ಸ್ವಾನಂದದಿ | ತೆರವಿಲ್ಲದೆ ಸೆಲೆತುಂಬಿ ತುಳುಕುತಿಹ | ಪರವೆಂದೆನಿಸಿದ ಶರಣ ರಕ್ಷಕ | ಗುರು ಮಹಿಪತಿ ಜಯ ಜಯತು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರೆಯದ ಭಾವಗೋಚರವಾುತಯ್ಯಾಕರುಣಿ ವೆಂಕಟದಾಸವರ್ಯ ಸದ್ಗುರುವೆ ಪಸನ್ನಿಕರ್ಷವನಾದರಣ ಹೇತು ಮಾನವರಿಗೆನ್ನುತಾನಂದ ರಸರುಚಿ ದೋರಿಸಿನಿನ್ನನೆ ತೊಳಲಿ ಬಳಲುತ ನಿನ್ನೊಳೆರಗುವಂತುನ್ನತರ ಮಾಡಲಂತರ್ಧಾನವಡೆವೆ 1ಗೋಪಿನಾರಿಯರಿಗಾನಂದ ರೂಪವ ತೋರಿತಾಪಬಡುವಂತಗಲಿ ುದ್ಧವರ ಮುಖದಿಸೋಪಾಯವಚನದಿಂ ತಿಳು'ದರ್ಥವ ನೆನೆಯಲೀ ಪರಿಯ ತೋರಿತೆನಗೆಲೆ ದಯಾನಿಧಿಯೆ 2ನೆರೆಧನ್ಯರಾದೆವಾ'ಲ್ಲ ಸಂದೇಹ ಗುರುವರ ವಾಸುದೇವಾರ್ಯ ಚಿಕನಾಗಪುರದೀಪರತತ್ವವರುಪಿ ವೆಂಕಟದಾಸ ವೇಷದಿಂಮರಳಿ ನಿಜದೊಳು ನಿಂದೆ ಕರುಣಾಸಮುದ್ರಾ 3
--------------
ತಿಮ್ಮಪ್ಪದಾಸರು