ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸೆನೀಗೋ ಹೇಸಿಮನವೆ ಕೇಶವನಂಘ್ರಿ ದಾಸನಾಗೊ ಪ ಸಕಲಭೋಗಭಾಗ್ಯ ಬರುವ ಅಖಿಲ ಸುಖದು:ಖಂಗಳೆಲ್ಲ ಭಕುತಿದಾರ್ಯಗರ್ಪಿಸಿ ಹರಿ ಭಕುತಿಯಿಂದಪಮೃತ್ಯು ಗೆಲಿಯೊ 1 ವಂದನೆ ಸ್ತುತಿ ಮಾನ ಮನ್ನಣೆ ಬಂದು ಕುಂದು ನಿಂದೆಯೆಲ್ಲ ಮಂದರಾದ್ರಿಯ ನಿಲಯಗೆಂದಾ ನಂದದಿಂ ಭವಬಂಧ ಗೆಲಿಯೊ 2 ಪೊಡವಿಸುಖಕೆ ಮೋಹಿಸದೆ ನೀ ಕೆಡುವಕಾಯಮೋಹ ತೊಡೆದು ಒಡೆಯ ಶ್ರೀರಾಮನಂಘ್ರಿ ಕಮಲ ಧೃಢದಿ ಭಜಿಸಿ ಮುಕ್ತಿ ಪಿಡಿಯೊ 3
--------------
ರಾಮದಾಸರು
ಚಿಂತೆಮಾಡಲಿ ಬೇಡೋ ಮನವೇ ಭ್ರಾಂತಿಪಡಲಿ ಬೇಡೋ ಪ ಚಿಂತೆಭ್ರಾಂತಿಗಳೆಲ್ಲ ಕಂತುಜನಕಗೆಂದು ಸಂತಸವಹಿಸು ನಿನಗೆಲ್ಲಿದೆ ಕೇಡೋ ಅ.ಪ ಮಾನವಮಾನವೆಲ್ಲ ಮನವೆ ಹೀನಭಾಗ್ಯ ಸಕಲ ಧ್ಯಾನದಾಯಕ ಶ್ರೀವೇಣುಗೋಪಾಲಗೆಂದು ಆನಂದ ತಾಳುಮತ್ತ್ಹಾಳು ನಿನಗಿಲ್ಲೋ 1 ದು:ಖ ಸಂಕಟವೆಲ್ಲ ಮನವೆ ಮಿಕ್ಕ ಕಂಟಕವೆಲ್ಲ ಅಖಿಲವ್ಯಾಪಕ ಶ್ರೀಭಕುತಿದಾಯಕಗೆಂದು ಸುಖವಹೊಂದು ಮತ್ತು ದು:ಖ ನಿನಗಿಲ್ಲೋ 2 ಕುಂದು ನಿಂದೆಯೆಲ್ಲ ಮನವೆ ತಾಪ ನಿಖಿಲ ಸಿಂಧುನಿಲಯ ನಮ್ಮ ತಂದೆ ಶ್ರೀರಾಮನಿಗೆಂದು ನಂಬು ಭವಬಂಧ ನಿನಗಿಲ್ಲೋ 3
--------------
ರಾಮದಾಸರು