ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೃತ್ಯವನವಧರಿಸು ಮಾಯೆಯ ನ್ಯತ್ಯವನವಧರಿಸು ಪ ಕೃತ್ಯವು ಶ್ರೀಹರಿ ಕಟ್ಟಳೆಯಾಗಲು ಅ.ಪ ಸ್ವರವೆನೆ ಪ್ರಣವದ ಸೌಮ್ಯದ ನಾದವು ಯೆರಡೊಂದೆಂದರೆ ಈಶನು ಪ್ರಕೃತಿಯು 1 ಮರ್ದಳವೆಂದರೆ ಮೊದಲ ಮಹತ್ತದು ಮಾನಿನಿ ಮಾಯೆಯೆಂದೆನಿಪಳು2 ರಂಗವು ನಿನ್ನಯ ರತಿಕರ ನೋಟವು ಸಂಗಿಸೆ ನಮ್ಮಯ ಶಿರದಲಿ ಕುಣಿವಳು 3 ಭಂಗಿಸಿ ಭಂಗಿಸಿ ಭವದಲಿ ಮೆಟ್ಟುತ ಹಿಂಗದ ರೀತಿಗೆ ಹೀಗಾಡುವಳು4 ಮುಂಗುಡಿಯೆಂದರೆ ಮೊದಲಹಂಕಾರವು ತೊಂಗುತ ಭೂತಂಗಳ ಸಾಗಿಪುದು 5 ಮೊದಲಿನ ಕೊನೆಗಳು ಮಾತ್ರೆಗಳೈದವು ವೊದಗಿದ ಭೂತಗಳೊಡಲಾಗುವವು 6 ನಡದೀ ಕೊನೆಗಳು ನೂಕುತ ಬೆಳೆಯಲು ನೆಡುವವು ವೃಕ್ಷದ ನಿಡುಬೇರುಗಳು 7 ಒಡೆದಾ ಭೂತಗಳೊಂದೊಂದೈದವು ಬಿಡದವ ಬೆರಸುತ ಬಹುವಾಗುವವು 8 ಇಂತೀ ಲೋಕಗಳೀರೇಳೆಂತಲು ನಿಂತೇ ಕುಣಿವಳು ನಿನ್ನಯ ಮಾಯೆಯು 9 ಆಗಲು ಪ್ರಾಣಿಗಳಮಿತಗಳಿವರೊಳು ಭೋಗದ ಬಯಕೆಯೆ ಬಹು ರಾಗಗಳು10 ಲಯೆಗಳು ಕ್ರಿಯೆಗಳು ಲೋಕಗಳತಿಗಳುನಿಯಿಮಿಸಿ ತಿರುಪತಿ ನಾಯಕ ನಿಂತವು11
--------------
ತಿಮ್ಮಪ್ಪದಾಸರು
ಪೂಜೆಯ ನಾನೇನ ಮಾಡುವೆ|ವiಹಾ ರಾಜರಾಜ ಕುರುಣಾನಂದ ಮೂರುತಿ ಹರಿಯೇ ಪ ಧ್ಯಾನಧಾರಣ ಮಂಗಳ ಮೂರ್ತಿಯ ಮಾಡುವೆನೆಂದರೆ| ನಿನ್ನ ಸುಖದ ನೆಲೆಯ ಇಂದಿರಾ ದೇವಿಯರಿಯಳು ಹರಿಯೇ 1 ಶಂಖೋದಕದಿ ಅಭಿಷೇಕ ಮಾಡುವನೆಂದರೆ|ನಿನ್ನಪದ ಪಂಕಜದಲಿ ಭಾಗಿರಥಿ ಬಂದಳೂ ಹರಿಯೇ2 ವಸ್ತ್ರವನುಡಿಸುವೆನೆಂದರೆ ದ್ರೌಪದಿಯವಸರದಿ|ನಿನ್ನಯ ವಸ್ತ್ರದಿಂಡಿನ ಎಣಿಕೆಯ ದೋರದೆನಗೆ ಹರಿಯೇ3 ಗಂಧಪುಷ್ಪವನೀವೆನೆಂದÀರೆ ನಿನ್ನ ಚರಣಾಬ್ಜದಾ|ಮಕ ಭ್ರಮರ ಅಜಭವರಾದರು ಹರಿಯೇ 4 ಆರೋಗಣೆಯ ಮಾಡಿಸುವೆನೆಂದರೆ ನಿನ್ನಕೈಯದಿ|ಸುರರು ಆರೋಗಣೆಯ ಮಾಡಿ ಅಮರರಾದರು ಹರಿಯೇ 5 ನೀರಾಂಜನ ಮಾಡುವನೆಂದರೆ ಕೋಟಿ ಸೂರ್ಯಪ್ರಭೆಯತೇಜ| ಮೀರಿತು ಸ್ತುತಿಗಿನ್ನು ಶ್ರುತಿಗಳು ನಿಂತವು ಹರಿಯೇ6 ಗುರುವರ ಮಹೀಪತಿನಂದನ ಸಾರಥಿ|ನಿನ್ನ ಸ್ಮರಣೆಯ ಕೊಟ್ಟನುದಿನದಿ ರಕ್ಷಿಸುಹರಿಯೇ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕ್ತರ ಪ್ರೇಮಿ ಫಕೀರ ಸ್ವಾಮಿ | ಭಕ್ತರ ನಿರ್ಮಿಸಿಭಕ್ತಿಯ ಪ್ರಕಟಿಸಿ | ಯುಕ್ತಿಯ ಬೋಧಿಸಿ | ಶಕ್ತಿಯನೊದಗಿಸಿ | ತ್ಯಕ್ತ ವಿಷಯ ವಿರಕ್ತಿಯ ಸೇರಿಸಿ |ಮುಕ್ತನೆನಿಸಿ ಅವ್ಯಕ್ತವ ಕರಗಿಸಿ1<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬೋಧವ ಬೋಧಿಸಿ ಭೇದವ ಛೇದಿಸಿ |ವಾದವ ಅರಗಿಸಿ ಕ್ರೋಧವ ಕರಗಿಸಿ |ಛೇದ-ವಿಚ್ಛೇದದ ಹಾದಿಯ ಹಾರಿಸಿಓದುವ ನುಡಿ ವೇದಾಗಮವಾದವು2ನೀನೇ ನಿನ್ನ ನೀನೆ ನಿನ್ನೊಳು ನೀನೆ ಜಗದೊಳುನೀನೆ ಎನ್ನೊಳು ನೀನೆ ಸರ್ವವು ನೀನೆ ಎಲ್ಲವು |ನೀನೆ ನಿನ್ಹೊರತೇನೊಂದಿಲ್ಲ3ಶ್ರುತಿಸ್ವ .............. ನಿಂತವುಸ್ಮøತಿಗಳು ನಿಂತವು .........................ಮತಿಗಳು ಸ್ತುತಿಗಳದ ನಿಮ್ಮ ನಾ ಕಂಡು4ಮಾರಮದ ಸಂಹಾರ ತಿಸರ ಆಸಾರ ಸುಖ ಸಾಕಾರಾ |ಶಂಕರ ಶೂರಾಭವಭಯಹಾರಾಶ್ರೀ ಫಕೀರ................... ಜಗದೋದ್ಧಾರ ಸದ್ಗುರು5
--------------
ಜಕ್ಕಪ್ಪಯ್ಯನವರು
ಮುಕ್ತನಾದೆನೋ ನಿನ್ನ ಮರೆತು ನೆನೆಯಲಿ ಮುನ್ನಮುಕ್ತನಾಗುವುದೇನು ಗುರುನೀ ಮುಟ್ಟಿಲಿಕೆಂದುಪಪಾಶವೆಂಟು ಹರಿದು ಪರಿದು ತ್ರಿಗುಣಂಗಳಕ್ಲೇಶಪಂಚಕವು ಕೆಡೆದುಪೋದುವುಆಸೆ ಮೂರೆಂಬುವು ಆಕ್ಷಣ ಉರಿದವುಘಾಸಿಯಾದವು ಸಪ್ತವ್ಯಸನ ಗಳಿಗೆಯೊಳು1ನಾಲ್ಕು ಕರಣಂಗಳು ನಾಸ್ತಿಕವಾದುವುಬೇಕೆಂಬ ತ್ರಯತಾಪ ಬೆಳೆನಿಂತವುಪೋಕರಾದವು ಷಡುವರ್ಗ ಷಡಪುಗೆಟ್ಟುಹೋಕೆಮರೆತವುದುರ್ಭಾವಹೊಲಬುದಪ್ಪಿ2ಕನಕಪರುಷ ಮುಟ್ಟೆಕನಕಪರುಷವಾಗದುಘನಗುರುವಿನ ಮುಟ್ಟೆ ಗುರುವಹನುಚಿನುಮಯ ಚಿದಾನಂದ ಚಿದ್ರೂಪನಾದವರಿಗೆಜನನ ಮರಣಗಳೆಂಬ ಜನಿತವೆಲ್ಲಿಹುದಯ್ಯ3
--------------
ಚಿದಾನಂದ ಅವಧೂತರು