ಒಟ್ಟು 27 ಕಡೆಗಳಲ್ಲಿ , 12 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿವಿನ ಅರಿವಾ ತಿಳಿ ಜೀವಾ ಆನಂದರೂಪದ ಸಿರಿಯಾ ಅದೇ ನೀನು ಜೀವಾ ಜೀವಾ ಅದೇ ನೀನು ಜೀವಾ ಪ ಅನಿಸಿಕೆಯಡಗಲು ಉಳಿಯುವ ಸತ್ಯವೆ ನೀನಿಹೆ ನೀನಿಹೆ ಮನಸಿನ ತೋರಿಕೆಅಡಗುವಿಕೆಗಳಿಂ ಬೇರಿಹೆ ಬೇರಿಹೆ ಈ ನಾನೆಂಬುದು ಮನಸಿನದು ಆನಾನೆ ನೀನಾಗಿರುವಿ ಅದೇ ನಿಜವು ಜೀವಾ 1 ಪರಿ ನೋಡು ನೀ ನೋಡು ನೀ ನಾನಾವಿಧಗಳು ಪುಸಿಯಾಗಿಹವೈ ದೂಡು ನೀ ದೂಡು ನೀ ಆನಂದಾತ್ಮನೆ ನೀನಿರುವೀ ಆನಂದದಿಂದಲಿ ತಿಳಿಯೈಶಂಕರಾನಂದಬೋಧಾ ತಿಳೀನೀನೆ ನಿನ್ನೋಳ್ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಇಟ್ಹಾಂಗಿರಬೇಕು ಮಾಂ ಇಟ್ಹಾಂಗಿರಬೇಕು ಸೃಷ್ಟೀಶ ನಮ್ಮ ಧ್ರುವ ಸಕಳವೆಲ್ಲ ಹರಿ ಸೂತ್ರವು ಇರಲಿಕ್ಕೆ | ವಿಕಳಿತಗೊಂಬುವದ್ಯಾಕೆ ಮಾಂ | ಅಖಿಳ ಭುವನಕೆಲ್ಲ ಸಾಕಿ ಸ - | ಹಕಾರ ನೊಬ್ಬ ಶ್ರೀಪತಿಯ ಮಾಂ | 1 ಯಂತ್ರಜೀವ ತಂತ್ರ ಶಿವ ಇರಲಿಕ್ಕೆ ಸ್ವ | ತಂತ್ರವೆ ನಾನೆಂಬುದ್ಯಾತಕೆ ಮಾಂ | ಚಿತ್ರ ವಿಚಿತ್ರವು ದೋರುವ ಸೂತ್ರವು | ಕರ್ತು ಸದ್ಗುರು ಸುತಂತ್ರವು ಮಾಂ 2 ಅಂತ್ರ ಬಾಹ್ಯ ವ್ಯಾಪಕನಾಗಿರಲಿಕ್ಕೆ | ತಂತ್ರ ಮಂತ್ರಗಳ್ಯಾತಕೆ ಮಾಂ | ಜಂತ್ರ ಮಾಡಿ ಜನ್ಮ ಮರಣದ ತಿರಿಹುವಾ | ಗಂತ್ರವು ಎಂದಿಗೆ ತಿಳಿಯದು ಮಾಂ 3 ಇಟ್ಹಾಂಗ ಇರಬೇಕು ಕೊಟ್ಹಾಂಗ ಕೊಂಡಿನ್ನು | ತುಟ್ಟಿಲೆ ಮಿಸುಕದೆ ಗುಟ್ಟಿಲೆ ಮಾಂ | ಹೊಟ್ಟಿಗಾಗಿ ಅಷ್ಟು ಸಾಯಾಸ | ಬಟ್ಟರೆ ಸಾರುಸದೇ ಅಟ್ಟಿಸುವದು ಮಾಂ 4 ಇಟ್ಹಾಂಗ ಇರೋ ಮಹಿಪತಿ ಸೃಷ್ಟಿಯೊಳಿನ್ನು | ಘಟ್ಟಿಗೊಂಡ ಗುರುಪಾದವು ಮಾಂ | ಮುಟ್ಟಿ ಮುದ್ರಿಸಿ ಕೃಪಾದೃಷ್ಟಿಲೆ ಹೊರೆವನು | ಕೊಟ್ಟು ನಿನಗೆ ಸ್ವಾನುಭವವು ಮಾಂ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ಧ್ರುವ ಎನ್ನೊಳು ಗುರು ತನ್ನ ಮರ್ಮವು ತೋರಿದ ಇನ್ನೇನಿನ್ನೇನು 1 ಮುನ್ನಿನ ಕರ್ಮವು ನಿರ್ಮೂಲವಾಯಿತು ಇನ್ನೇನಿನ್ನೇನು 2 ಎನ್ನೊಳು ಘನಬ್ರಹ್ಮವಸ್ತು ತಾನಾಯಿತು ಇನ್ನೇನಿನ್ನೇನು 3 ನಾನು ನಾನೆಂಬುದು ನೆಲಿಯು ತಾನಾಯಿತು ಇನ್ನೇನಿನ್ನೇನು 4 ಏನೆಂದು ತಿಳಿಯದ ಅನುಮಾನ ಗಳೆಯಿತು ಇನ್ನೇನಿನ್ನೇನು 5 ಪರಮ ತತ್ವದ ಗತಿ ನೆಲೆ ನಿಭ ತೋರಿತು ಇನ್ನೇನಿನ್ನೇನು 6 ಎನ್ನೊಳಾತ್ಮ ಖೂನ ಕುರುಹವು ತಿಳಿಯಿತು ಇನ್ನೇನಿನ್ನೇನು 7 ಕನಸು ಮನಸು ಎಲ್ಲ ನಿನ್ನ ಸೇವೆ ಆಯಿತು ಇನ್ನೇನಿನ್ನೇನು 8 ಹಗಲಿರುಳೆಂಬುದು ಹಗರಣವಾಯಿತು ಇನ್ನೇನಿನ್ನೇನು 9 ಅರಹು ಮರಹಿನ ಇರುವು ತಿಳಿಯುತು ಇನ್ನೇನಿನ್ನೇನು 10 ಭಾವದ ಬಂiÀiಲಾಟ ನಿಜವಾಗಿ ದೋರಿತು ಇನ್ನೇನಿನ್ನೇನು 11 ಜೀವಶಿವನ ಗತಿ ಸೋಹ್ಯವು ತಿಳಿಯಿತು ಇನ್ನೇನಿನ್ನೇನು 12 ಆಯವು ದಾಯವು ಸಾಹ್ಯವು ದೋರಿತು ಇನ್ನೇನಿನ್ನೇನು 13 ಜೀವನ್ನ ಜಾತಿಯ ಕೀಲವು ತಿಳಿಯಿತು ಇನ್ನೇನಿನ್ನೇನು 14 ಜನ್ಮ ಮರಣದಾ ಜಂತ್ರವು ಮುರಿಯಿತು ಇನ್ನೇನಿನ್ನೇನು 15 ಸಂದೇಹ್ಯ ಸಂಕಲ್ಪ ಸೂಕ್ಷ್ಮವು ಹರಿಯಿತು ಇನ್ನೇನಿನ್ನೇನು 16 ಮರಣದ ಗತಿಗಳ ಮಂತ್ರವು ತಿಳಿಯಿತು ಇನ್ನೇನಿನ್ನೇನು 17 ಸುಷಮ್ನ ನಾಳದ ಸೂಕ್ಷ್ಮವು ದೋರಿತು ಇನ್ನೇನಿನ್ನೇನು 18 ಇಮ್ಮನವಿದ್ದದು ಒಮ್ಮನವಾಯಿತು ಇನ್ನೇನಿನ್ನೇನು 19 ಆಧಾರಚಕ್ರದ ಹಾದಿಯು ತಿಳಿಯಿತು ಇನ್ನೇನಿನ್ನೇನು 20 ಸದ್ಗುರು ಕೃಪೆಯಾದಾ ಸಾಧನವಾಯಿತು ಇನ್ನೇನಿನ್ನೇನು 21 ಇನ್ನೇನಿನ್ನೇನು 22 ಅಂತರಾತ್ಮನ ಸೂತ್ರಾಂತ್ರವು ತಿಳಿಯಿತು ಇನ್ನೇನಿನ್ನೇನು 23 ಇನ್ನೇನಿನ್ನೇನು 24 ಎನ್ನೊಳು ಭಾಸ್ಕರ ಗುರು ತಾನೆಯಾದನು ಇನ್ನೇನಿನ್ನೇನು 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಈ ನೀಚಮನಸಿಗೆ ಮಾಡಲಿನ್ನೇನು ಥೂ ನಾಚಿಕಿಲ್ಲದಕೆ ಉಪಾಯವೇನು ಪ ಹರಿಚರಣ ಸ್ಮರಿಸುವುದು ಹರಿದಾಟ ಮರಿವಲ್ಲದು ಪಿರಿದುನುಡಿಯಾಡುವುದು ಕಿರಿಗುಣವ ಬಿಡದು ಪರಲೋಕ ಬಯಸುವುದು ನಿರುತದಿಂ ನಡಿವಲ್ಲದು ಶರಣರೊಡನೆನದಿಹ್ಯದು ಪರನಿಂದೆ ಬಿಡದು 1 ಜ್ಞಾನನುಡಿ ಪೇಳುವುದು ನಾನೆಂಬುದಳಿವಲ್ಲದು ಧ್ಯಾನದೊಳಗಿರುತಿಹ್ಯದು ಶ್ವಾನಕಲ್ಪನ್ಹಿಂಗದು ದಾನಗುಣ ಬೋಧಿಪುದು ಜೀನತ್ವ ತೊರಿವಲ್ಲದು ಆನಂದ ಬೇಡುವುದು ಹೀನಭ್ರ್ರಾಂತಿ ಬಿಡದು 2 ಸಾದುಪಥದಾಡುವುದು ಭೇದ ಕಡಿವಲ್ಲದು ವೇದಾಂತ ಕೇಳುವುದು ಸಾಧನಕೆ ಒಲ್ಲದು ಪಾದಭಕ್ತಿ ಬೇಡುವುದು ಕ್ರೋಧ ತೊಡಿವಲ್ಲದು 3 ನಾಮಭಜನೆ ಮಾಡುವುದು ತಾಮಸವ ತುಳಿವಲ್ಲದು ಸ್ವಾಮಿಯೊಲುಮೆ ಕೋರುವುದು ಪಾರತ್ವ ಬಿಡದು ಕಾಮಿತೊಲ್ಲೆನೆನ್ನುವುದು ಭಾಮೆ ಭೂಮಿಪ್ರೇಮ ಬಿಡದು ಕ್ಷೇಮ ಸದಾ ಬೇಡುವುದು ನೇಮನಿತ್ಯ ಒಲ್ಲದು 4 ಶಾಸನವ ಪೇಳುವುದು ತಾಸು ಸ್ಥಿರ ನಿಲ್ಲದು ನಾಶಜಗವೆನುತಿಹ್ಯದು ಕಾಸು ಒಲ್ಲೆನ್ನದು ದೋಷನಾಶನ ಜಗದೀಶ ಶ್ರೀರಾಮನಡಿ ದಾಸನಾನೆಂಬುವುದು ವಾಸನೆಯ ಬಿಡದು 5
--------------
ರಾಮದಾಸರು
ಏನಾಯಿತೇನಾಯಿತು ಮನವೆ ನಾನೆಂಬುದೇನಾಯಿತು ಧ್ರುವ ಕರಿಯ ನುಂಗಿದ ಬೆಳವಲಣ್ಣಿನಂತಾಯಿತು 1 ಅಪ್ಪಿನೊಳುಪ್ಪು ಬೆರದಂತಾಯಿತುಮನವೆ 2 ಕಪ್ಪರವ ಸುಟ್ಟರಹಿಟ್ಟಂತಾಯಿತು 3 ಮಹಿಪತಿಯ ಮನವೆ ಕೇಳೆನ್ನಾ ಮನವೆ 4 ಎನ್ನೊಳು ಘನ ಬ್ರಹ್ಮತಾನಾಯಿತು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರಿಸು ಬೇಗಿಲ್ಲಿಗೆ ಹರಿಯೆ ನಿನ್ನವರ ಅರಸಿಕ ದೇಶದಿ ಬಳಲಿಕೊಂಡಿಹನ ಪ. ಸರ್ವಜ್ಞ ನಿನಗರಿಪುವದೇಸು ವಿವರ ಸರ್ವ ಪ್ರಕಾರದಿ ಕಾವೆ ನಿನ್ನವರ ಪೂರ್ವದಂದದಿ ಪರಿಚಾರಕ ಜನರ ಇರ್ವಲ್ಲಿ ತಂದು ಕೂಡಿಸು ದೇವ ಪ್ರವರ 1 ವೇಳೆ ವೇಳೆ ನಿನ್ನ ಪೂಜಾದಿಗಳನು ತಾಳ ಮೃದಂಗಾದಿ ಸನ್ನಹಗಳನು ಮೇಳೈಸಿ ಕೀರ್ತನೆಗೈವ ದಾಸನನು ನಾಳೆ ನಾಡದು ಎಂದು ತಾತ್ಸಾರ ಮಾಡದೆ 2 ಶಕ್ತಿಹೀನ ನಾನೆಂಬುದ ಬಲ್ಲೆ ನೀನು ಭಕ್ತವತ್ಸಲ ನೀನೆಂದರಿತು ನಂಬಿಹೆನು ನಿತ್ಯ ಚಿಂತನೆಯನು ತಪ್ಪಿಸು ಸುರಧೇನು ಶಕ್ತ ವೆಂಕಟರಾಜ ಸಂಶಯವಿನ್ನೇನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರೆದಾಗ ಬಳಿಸಂದು ನಿಲ್ಲಬಾರದೆ ಶರಣಾರ್ಥಿನಾನೆಂಬುದರಿವಾಗದೆ ರಂಗ ಪ ಕರುಣಾಳು ನೀನೆಂದು ನೆರೆನಂಬಿದೆ ಅ.ಪ ಶಿಲೆಯಾದ ಪತ್ನಿಯು ಪೊರೆಯೆಂದಳೆ ಆ ಬಲುಪಾಪಿ ಅಜಮಿಳನು ಬಾರೆಂದನೆ ಖಗ ಕೇಳ್ದನೇ 1 ನೆರೆ ದಾನಧರ್ಮಗಳ ಕುಡಲಾರೆನೋ ವರ ಯಾಗಯೋಗಗಳ ಕೊಡಲಾರೆನೋ ಮಾಂ ಗಿರಿರಂಗ ಭಜನೆಯ ಬಿಡಲಾರೆನೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೈಹಿಡಿದೆನ್ನನು ನಡೆಸೋ ರಂಗ ಚೋಹವ ಬಿಡಿಸಿ ನಿನ್ನಡಿಗಳ ಹಿಡಿಸೊ ಪ ಮೋಹ ಮಾತ್ಸರ್ಯದ ದಾಹವ ಬಿಡಿಸೋ ಶ್ರೀಹರಿ ನಿನ್ನ ನಾಮಂಗಳ ನುಡಿಸೋ ಅ.ಪ ಇಂದಿರೆಯರಸ ಮುಕುಂದ ನಿನ್ನ | ಕಂದನ ಮರೆವರೆ ತಂದೆ ಗೋವಿಂದಾ | ಮಂದಮತಿಯು ನಾನೆ ಗೋಪೀ ಕಂದ | ಮಂದರಧರ ಕಾಯೋ ನಿತ್ಯಾನಂದ1 ಮಂಗಳಕರ ಶುಭನಾಮ | ಹಿಂಗದೆ ಭಜಿಪೆನು ಅರಿಕುಲಭೀಮ ಭಂಗಿಸು ದುರಿತವ ಮಾಂಗಿರಿಧಾಮ 2 ದಾಸರದಾಸ ನಾನೆಂಬುದನುಳಿಸೋ ವಾಸುದೇವ ನಿನ್ನ ಬೇಡುವುದೆನಿಸೊ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗಂಡಾಂತರ ಪರಿಹರಿಸು ಗರುಡಾಂಕಗಮನ ಹರಿ ಪುಂಡರೀಕಾಯತಾಕ್ಷ ಮೊಂಡತನ ತಾಳಿರುವ ಲಂಡರಸನಭಿಮತವ ಖಂಡಿಸು ಕೃಪಾಂಬುರಾಶಿ ಗ್ರಹವಾಸಿ ಪ. ನಿನ್ನ ಸೇವೆಯ ಮಾಳ್ಪ ನಿರಪರಾಧಿಯ ಮ್ಯಾಲೆ ಅನ್ಯಾಯ ಕೃತಭಾರವ ತನ್ನಂತೆ ಪೊರಿಸಬೇಕೆಂನುವರ ನೀನೆಂತು ಮನ್ನಿಸುವೆ ಮಾನ ಕಾವ ಭಿನ್ನ ಭಾವನೆ ತಾಳ್ದ ಭೂಪತಿಗೆ ಭಯದೋರಿ ಎನ್ನ ಕಾಪಾಡುವ ದೇವ ಭವನಾವ 1 ಅಡಿಗಡಿಗೆ ನಿನಗಂಜಿ ನಡೆವೆ ನಾನೆಂಬುದನು ಒಡೆಯ ನಿನಗೆಂಬುದೇನು ಕಡು ಮೂರ್ಖ ಜನರೆನ್ನ ಕಷ್ಟಗೊಳಿಪುದ ನೋಡಿ ಬಿಡಲ್ಯಾಕೆ ಭಾಗ್ಯವೇನು ಒಡೆಯ ಕಂಭದಿ ಬಂದು ಪಿಡಿದಾದಿ ದೈತ್ಯೇಯ- ನೊಡಲ ಬಗೆದಂಥ ಧೀರ ಬಲಸಾರ 2 ಪರಿಯಂತ ಪಾಲಿಸದ ಶೇಷಾದ್ರಿ ಶಿಖರವಾಸ ಬ್ಯಾಸತ್ತು ಬಹು ವಿಧದಿ ಬಳಲಿ ಬೆಂಡಾಗಿಹೆನು ದೋಷವೆಣಿಸದಿರು ಲೇಶ ನೀ ಸಲಹು ನಿಗಮಭೂಷ ಹೇ ಶ್ರೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ತಾನಾ ತಂದನಾನಾ ತಾನೆಂಬುವದರ ಖೂನ ಏನೆಂದರಿಯ ಹೀನ ಮನುಜ ಪಾಮರ ಪೂರ್ಣ 1 ತಾನೆಂಬುದೆ ತಾ ದೈವ ನಾನೆಂಬುದೆ ತಾ ಜೀವ ಜ್ಞಾನದಿಂದ ತಿಳಿವ ಅನುಭವ ಆಶ್ರೈಸುವ2 ತಾನೆ ತಂದರ ನಾನಾ ತನ್ನಿಂದವೇ ಜೀವನ ನಾನೆಂಬುದವಗುಣ ಜನ್ಮಕಿದೆ ಸಾಧನ 3 ತಾನೆ ತಂದರ ತಾರಕ ನಾನೆಂದರೆ ನರಕ ಜ್ಞಾನ ಗುರುಮುಖ ಖೂನ ತಿಳಿವುದು ಸುಖ 4 ತಾನೆಂದವ ತಾ ಬ್ರಹ್ಮ ನಾನೆಂದರ ಅಹಮ್ಮ ಅನುಭವದಿಂದ ವರ್ಮ ಖೂನಾದರ ಸಂಭ್ರಮ 5 ಅರ್ಕ ನಾನೆಂದರೆ ತಾ ತರ್ಕ ಹೀನಗುಣ ಸಂಪರ್ಕ ಏನೆಂದರಿಯ ಮೂರ್ಖ 6 ತಾನೆಂದರೆ ತಾಂ ಮಾನ್ಯ ನಾನೆಂದರಮಾನ್ಯ ಖೂನಮಾಡಿ ತಾರ್ಕಣ್ಯ ಅನುಭವಿಸಲು ಧನ್ಯ 7 ತಾನೆಂದರೆ ತಾ ಬಂದೆ ನಾನೆಂದು ಬಲು ನೊಂದೆ ಅನೇಕ ಜನ್ಮದಿಂದ ದಣಿದು ನಾ ಸಾಕೆಂದೆ 8 ತಾನೆಂಬುದು ಸುಜ್ಞಾನ ನಾನೆಂಬುದು ಅಜ್ಞಾನ ತಾನೆಂದರೆ ಅಣುರೇಣು ನಾನೆಂದರನುಮಾನ 9 ತಾನೆಂಬುದ ತೋರಿಸಿ ನಾನೆಂಬುದ ಮರಸಿ ತಾನೆತಾನಾದ ಋಷಿ ಆನಂದೋಬ್ರಹ್ಮ ಸೂಸಿ 10 ತಾನೆ ತಾನಾಗಿ ಒಂದೆ ಖೂನ ದೋರಿದ ತಂದೆ ಭಾನುಕೋಟಿ ತೇಜೊಂದೆ ಪೂರ್ಣ ಮಹಿಪತಿಗೊಂದೆ11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾನೆ ತಾನಾದನಮ್ಮಾ ಎನ್ನೊಳು ಘನಬ್ರಹ್ಮ ಧ್ರುವ ಕಣ್ಣಿಲೆ ನೋಡಲಿಕ್ಕೆ ಕಣ್ಣಿನೊಳಾದನಮ್ಮ ಕಣ್ಣಿಗೆ ಕಣ್ಣಾಗಿ ಪೂರ್ಣ ಕಾಣಿಸಿದಾನಂದೋಬ್ರಹ್ಮ ಅಣುರೇಣುದೊಳು ವ್ಯಾಪಿಸಿ ಜನ ಮನ ದೊಳು ತುಂಬಿಹ ತನುಮನದೊಳು ತಾನೆತಾನಮ್ಮ 1 ಎತ್ತ ನೋಡಿದತ್ತ ಸುತ್ತ ಸೂಸುವನಮ್ಮ ನೆತ್ತಿ ಒಳಗೆ ಪೂರ್ಣ ಮೊತ್ತವಾದ ಪರಬ್ರಹ್ಮ ಅನುದಿನ ಸಂತತ ಸದ್ಗುರು ಪೂರ್ಣ ಅಂತರಾತ್ಮದೊಳಗಿಹನಮ್ಮ 2 ನಾನು ನಾನೆಂಬುದಿದು ಇಲ್ಲದಂತಾಯಿತು ನಮ್ಮ ತಾನೆ ತಾನಾದ ನಿಜ ಓಮಿತ್ಯೇಕಾಕ್ಷರ ಬ್ರಹ್ಮ ಚೆನ್ನಾಗಿ ಮಹಿಪತಿಗೆ ಸನ್ಮತಸುಖದೋರಿತುಉನ್ಮನವಾಗ್ಯೆನ್ನೊಳಗೆ ಘನಸುಖ ಹೊಳೆಯಿತು ಸಂಭ್ರಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾನೀಯದಿದ್ದರೆ ನೀನೇನನೀವೆ ಪ ನಾನು ಎಂಬುದು ಮಾತ್ರ ನಾ ನಿನಗಿತ್ತರೆ ಏನನೀಯುವೆ ರಂಗ ದೀನದಯಾಳು ಅ.ಪ ಅವಲಕ್ಕಿಯನು ತಂದವಗೆ ಭಾಗ್ಯವನಿತ್ತೆ ನವಫಲವನಿತ್ತವಳಿಗೆ ಒಲಿದೆ ನವನೀತವಿತ್ತರ್ಗೆ ಸುವಿಲಾಸಗಳನಿತ್ತೆ ಭುವಿಯೆಲ್ಲವಿತ್ತಂಥವನ ಬಾಗಿಲಕಾಯ್ದೆ 1 ಗಜರಾಜನಂದು ಪಂಕಜವೊಂದನಿತ್ತಂದು ಅಜಗರನನು ಕೊಂದು ಸೌಜನ್ಯವನಿತ್ತೆ ಭುಜದ ಮೇಲೆ ನಿನ್ನನಂಗಜ ಪೊತ್ತು ತಿರುಗಲು ರಜತಪದವಿಯನಿತ್ತು ವಿಜಯ ನೀ ಗೈದೆ 2 ಮಡದಿಮಣಿಯು ತಾನುಟ್ಟ ಪೀತಾಂಬರ ದೆಡ್ಡೆಯ ಹರಿದು ನಿನ್ನ ಅಡಿಗೆ ಕಟ್ಟಲ್ಕೆ ಮಡದಿಗೆ ಅಕ್ಷಯದುಡುಗೆಯ ನೀನಿತ್ತೆ ಮೃಡನು ತಾನೇನು ಕೊಡಲೋ ಗೋವಿಂದಾ 3 ಜಗಜಟ್ಟಿ ಹನುಮನು ಬಗೆದು ನಿನ್ನಯ ದುಗುಡವ ಬಿಡಿಸಿದ ಬಗೆಯ ನೀನÀರಿತೂ ಜಗದೊಳು ಸರಿಯಾದುಡುಗರೆಯಿಲ್ಲದೆ ನಗುತ ನಿನ್ನನು ನೀನೆ ಸೊUಸಿನಿಂದಿತ್ತೆ 4 ನಾನೆಂಬುದಲ್ಲದೆ ಏನುಂಟು ಎನ್ನೊಳು ನೀನೀವೆನಿದ ಮಾತ್ರ ಶ್ರೀನಾಯಕೇಶ ಏನನಾದರೂ ಸರಿ ನೀನೀಯೋ ಮುರವೈರಿ ನಾನು ನನ್ನದು ನಿನ್ನಧೀನ ಮಾಂಗಿರಿರಂಗ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾನ್ಯಾರೋ | ಶ್ರೀಹರಿ ಪೇಳೋ ನಾನ್ಯಾರೋ ಪ ನಾನ್ಯಾರೆಂಬುದ ಪೇಳಿ ನೀನ್ಯಾರೆಂಬುದ ತಿಳುಹಿ ಸಾನುರಾಗದಿ ಪೊರೆವ ಪ್ರಭು ನೀನೆ ಬೇರಿಲ್ಲಅ.ಪ. ಎಲ್ಲಿಂದ ಬಂದೆ ನಾನಿಲ್ಲಿಗೆ ಮುಂದೆಲ್ಲಿಗೆ ಪಯಣ ಕೊಂಡೊಯ್ಯುವುದೇನೆಂಬುದರಿಯೆ1 ಜನನಗೊಂಡು ಮಾನುಷ ದೇಹ ತಳೆದನಾ ನೆನಗೆ ಹಿತವಹ ಕಾರ್ಯವನೇನನೆಸಗಿದೆ 2 ದೇಹವೆ ಮನಸೆ ಬುದ್ಧಿಯೇ ನಾನೆಂಬುದನಾರೆಂದರಿಯೆ ನೇಹದಿಂದಿರುವಂತರಾತ್ಮ ತೊಲಗಲು ಮುಂದೀ ದೇಹವು ಕಸಕಿಂತ ಕಡೆಯೆನಿಪುದ ಬಲ್ಲೆ 3 ಕರ್ಮಿ ಜೀವನು ನೀ ಸಾಕ್ಷಿ ನಿರ್ಲಿಪ್ತನು 4 ಏನರಿಯದಲ್ಪನ ಕೈಬಿಡದಿರು ನೀನೆ ಗತಿ ರಘುರಾಮವಿಠಲ ತಂದೆ 5
--------------
ರಘುರಾಮವಿಠಲದಾಸರು
ನಿನಗೇನು ಕಡಿಮೆ ಪೇಳೈ ಎನಗೆಲೊ ರಂಗಾ ಪ ಕ್ಷೀರಾಬ್ಧಿ ನಿನ್ನದು ಸಂಸಾರಾಬ್ಧಿ ಎನ್ನದಯ್ಯ ಮೂರೇಳವತಾರ ನಿನಗೆ ನೂರೆಂಟು ಎನಗೇ1 ನಿನಗೆ ಸುರಮುನಿಗಣ ಎನಗೆ ಭೂಸುರಗಣ ನಿನಗೆ ಸತ್ವದ ಗುಣ ಎನಗಾಸೆ ದ್ವಿಗುಣ2 ಜಗವು ಉದರವೆಂದು ಬಗೆದು ಪೋಪೆನೀ ಜಗದ ಸರ್ವಾರ್ಥವ ಮಿಗೆ ಬಯಸುವೆನಾ 3 ನಿನಗೆ ಭಕ್ತರೆ ಪ್ರಿಯ ಎನಗೆ ಮುಕ್ತಿಯೆ ದೈವ ನಿನಗೆ ರಕ್ಷಣೆನಾಮಾ ಎನಗೆ ಭಕ್ಷಣೆ ಕಾರ್ಯಾ 4 ವರಷಡ್ಗುಣವು ನಿನಗೆ ಅರಿಷಡ್ವರ್ಗವು ಯನಗೆ ದುರಿತ ತೃಪ್ತತೆ ಯೆನಗೆ 5 ನಿನಗೆ ನಾನೆಂಬುದಿಲ್ಲ ಎನಗೆ ನಾನೆಂಬುದುಂಟು ರಂಗನಾಥ ಶ್ರೀಶ ತುಂಗವಿಕ್ರಮ ನೀ 6 ಕ್ಷಮಿಸೆನ್ನಪರಾಧವ ವಿಮಲಾಂಗ ಮಾಧವ ಕಮಲಾಕ್ಷ ಪೊರೆದೇವ ರಾಮದಾಸನುತಾ 7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನ ಮಾತ ಕೇಳಿ ಗಾಳಿ ನಿಲ್ಲಬೇಕೆ ಶೀತವನ್ನು ಸಹಿಸು ನೀನು ಮಾಯಾಬಲೆಗೆ ಸಿಲುಕೆ ಪಮುನ್ನ ಕಾಯವೆತ್ತಬೇಡವೆಂದಡದಕೆ ನೀನುಧನ್ಯನಾಗದೀಗ ಋತುಧರ್ಮಕಳುಕೆ ಅ.ಪಬಲೆಯ ಬೀಸಬೇಡವೆಂದು ಪಕ್ಷಿ ಪೇಳಲು ಕೇಳಿಬಲೆಯ ಬೀಸುದಿಪ್ಪುದೆಂತು ಪಕ್ಷಿ ಸಿಕ್ಕಲುಅಳುಕಿ ಸಾದು ಬಲೆಯ ಬಾಧೆ ಬಲಿಗನಾಗಲು ಹಾಗೆಛಳಿಯು ನಿನ್ನ ಬಾಧಿಸದು ಪರಮನಾಗಲು1ಬಲಿಗನಂತು ಪಕ್ಷಿ ಭಕ್ಷಣೆಯ ಮಾಳ್ಪನು ಹಾಗೆನಳಿನನಾಭ ತಾನು ವಿಷಯಾಸಕ್ತನೊ ಯೇನುಸಿಲುಕದಿಪ್ಪನೊಂದರೊಳಗೆಂಬುದಿದೇನು ಎಂದುಬಲಿಯವಾಗೆ ಶಂಕೆ ಮನವೆ ನಿನಗೆ ಪೇಳ್ವೆನು 2ಇಲ್ಲವಾದ ಜಗª ಮಾಯೆುಂದ ನಿರ್ಮಿಸಿ ತಾನುಅಲ್ಲಿ ಪೊಕ್ಕು ಉಳ್ಳದೆಂಬಹಾಗೆ ನಟಿಸಿನಿಲ್ಲಲೀಸದಿದನು ಮತ್ತೆ ಕ್ಷಣದೊಳಳಿಸಿ ಕೂಡೆನಿಲ್ಲುವನು ನಿಜದಿ ನಿರ್ವಿಕಾರಿಯೆನಿಸೀ 3ತಾನು ಸುಖಿಸುವಂತೆ ಎನ್ನ ಸುಖಿಸಬಾರದೆ ಲೋಕದೀನಬಂಧುವೆಂಬ ನುಡಿಯ ಹೋಗಲಾಡದೆಮಾನವರ ತನ್ನ ಹಾಗೆ ಕಾಣಬಾರದೆ ಎಂದುನೀನು ಕೇಳೆ ಪೇಳ್ವೆ ನಿನ್ನ ಮಾತ ಮೀರದೆ 4ಆನಂದರೂಪಗೆ ದುಃಖ ತೋರಿಸುವದೆ ಆತನೀನೆಂದೊಮ್ಮೆ ತಿಳಿಯೆ ನಿನಗೆ ದುಃಖ ಮರೆಯದೆಭಾನುವಿನ ಮುಂದೆ ತಮವು ನಿಲ್ಲಬಲ್ಲುದೆ ಜೀವನಾನೆಂಬುದರಿಂದ ಸುಖವು ಮರೆಸಿಕೊಂಡಿದೆ 5ವೇದದಲ್ಲಿ ಪೇಳಿದಂತೆ ಋಗಳೆಲ್ಲರೂ ತಾವುವೇದವೇದ್ಯಬ್ರಹ್ಮವೆಂದು ಸುಖವ ಕಂಡರೂಆದಿಮಧ್ಯತುದಿಗಳಲ್ಲಿ ಬ್ರಹ್ಮವೆಂಬರು ಅದಸಾದರದಿ ಸಾಧಿಸಲು ಸುಖವ ಕಾಂಬರು 6ಅರಿವು ಮರವೆ ಎರಡು ಬಳಿಕ ಕರಣಧರ್ಮವೂ ತಾವುಕರಣಸಾಕ್ಷಿಯಾದ ನಿಜವನರಿಯಲರಿಯವುಕುರುಹನಿಟ್ಟು ನೋಡಲರಿವಿನೊಳಗೆ ಬೆರೆವವೂ ಕೂಡೆತಿರುಪತೀಶ ವೆಂಕಟೇಶನೊಳಗೆ ಬೆರೆವವೂ7ಕಂ||ತನು ತಾ ಜೀವನ ನುಡಿಗೇಳ್ದನುವಾಗಿ ಮೇಲೆ ಮುಕ್ತಿಮಾರ್ಗಕ್ಕೆತನದಿಅನುಕೂಲನಪ್ಪೆನು ನಾ ನಿನ್ನನು ಮೀರೆನೆನುತ್ತ ಪೇಳುತ ತನುವಾದಿಪುದು
--------------
ತಿಮ್ಮಪ್ಪದಾಸರು