ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಗಣಪತಿಗೆ ವಂದಿಸಿ ಕೆಳದಿಯ ಪುರದಭೋಗಮಂದಿರ ರಾಮೇಶ್ವರನ ರಂಭೋಗಮಂದಿರ ರಾಮೇಶ್ವರನ ಸನ್ನುತಿಸುತರಾಗದಿ ಪಾಡಿ ಪೊಗಳುವೆ ರಂ1 ವಾಣಿ ಪುಸ್ತಕ ವೀಣಾಪಾಣಿ ಪನ್ನಗನಿಭವೇಣಿ ಕಲ್ಯಾಣಿ ಶುಕ ರಂ-ವಾಣಿ ಶುಕವಾಣಿ ಬೊಮ್ಮನರಾಣಿ ಸನ್ಮತಿಯ ಕರುಣಿಸು ರಂ 2 ಧೃವ ಅಟ್ಠ ರೂಪಕ ಏಕತಾಳವು ಝಂಪೆತ್ರಿವಡೆ ತಾಳಗಳೊಡಂಬಡಲು ರಂ-ತ್ರಿವಡೆ ತಾಳಗಳೊಡಂಬಡೆ ಹೊಸ ಹರೆಯದಯುವತಿಯರೊಲಿದು ಹಾಡಿದರು ರಂ 3 ಗಂಗಾಧರ ಜಯ ಗೌರೀಪ್ರಿಯ ಜಯಅಂಗಜಹರ ಜಯವೆನುತ ರಂ-ಜಯವೆನುತಲಂಗನೆಯರುಪೊಂಗೋಲ ಪೊಯಿದು ಪಾಡಿದರು ರಂ 4 ಕಪ್ಪುಗೊರಳ ಜಯ ಸರ್ಪಭೂಷಣ ಜಯಮುಪ್ಪುರವನು ಜಯಿಸಿದವನೆ ರಂ-ಜಯಿಸಿದನೆ ಜಯವೆಂದುಒಪ್ಪದೆ ಪಾಡುತಾಡಿದರೆ ರಂ5 ದಿಮಿದಿಮಿ ದಿಮಿಕೀಟ ತಕಕಿಟನ ಕಕಿಟಕ್ರಮದಿ ನರ್ತಿಸುತಬಲೆಯರು ರಂ-ಅಬಲೆಯರು ಚಿನ್ನದ ಕೋಲಪ್ರಮುದದೊಳಾಡುತೊಪ್ಪಿದರು ರಂ6 ಅಚ್ಚ ಮುತ್ತಿನ ನಿಚ್ಚಳ ಸುಲಿಪಲ್ಲಒಚ್ಚೇರೆಗಣ್ಣು ಬಾಲೆಯರು ರಂ-ಬಾಲೆಯರು ಸಂಭ್ರಮದಿ ಮೈಮೆಚ್ಚುತ ಕೋಲನಾಡಿದರು ರಂ 7 ಭೃಂಗ ಕುಂತಳದ ಮತಂಗಜ ಗಮನದರಂಗುದುಟಿಯ ರಮಣೆಯರು ರಂರಮಣಿಯರು ಸೊಬಗನಾಂತುಹೆಂಗಳು ಪಾಡುತೊಪ್ಪಿದರು ರಂ8 ಜಲಜಗಂಧದ ನಳಿತೋಳ್ಗಳ ರಿಂಕಿದನೆಲೆಮೊಲೆಗಳ ತುಂಬಿಗುರುಳ ರಂಕರುಳ ಪದ್ಮಿನಿಯರುಚಳಕದಿ ಪಾಡುತಾಡಿದರು ರಂ9 ಪೊಂಬೊಗರಿಯ ತೆರದಿ ತುಂಬಿದ ಕುಚಗಳಬಿಂಬಾಧರದ ಕಂಬುಗಳದ ರಂಬಿಂಬಾಧರದ ಕಂಬುಗಳದ ಪದ್ಮಿನಿಯರುಸಂಭ್ರಮದಿಂದ ಪಾಡಿದರು10 ತೆಳುವಸುರಿನ ಕೊಬ್ಬಿದ ಕುಚಯುಗಳದಕಲಹಂಸಗತಿಯ ಮೋಹನದ ರಂಮೋಹನದ ಚಿತ್ತಿನಿಯರುಒಲಪಿನಂ ಪಾಡುತಾಡಿದರು ರಂ11 ಚಿನ್ನದ ಲತೆಯಂತೆ ಚೆನ್ನಾಗಿ ಬಳುಕುವಸನ್ನುತಾಂಗದ ಶಂಖರವದ ರಂರವದ ಶಂಖಿನಿಯರುಚೆನ್ನಾಗಿ ಪಾಡುತಾಡಿದರು ರಂ 12 ಅಪಳ್ಗಣ್ಣ ಮಂದಗತಿಯ ಮದಗಂಧದಶರೀರದ ಕೊಬ್ಬಿದ ಕೊರಳ ರಂಕೊರಳಿನ ಹಸ್ತಿನಿ(ಯರು)ತರುಣಿಯರೊಲಿದು ಪಾಡಿದರು ರಂ 13 ಸಿರಿಮೊಗದೊಳು ಬೆಮರೊಗೆಯೆ ಮೇಲುದುಜಾರೆ ಕರದ ಕಂಕಣ ಝಣರೆನಲು ರಂಕರದ ಕಂಕಣ ಝಣಝಣಝಣಝಣರೆನೆತರಳೆಯರ್ಪಾಡುತಾಡಿದರು ರಂ14 ದುಂಡುಮುತ್ತಿನ ಹಾರವಲುಗಲು ವಜ್ರದಕುಂಡಲಗಳು ನರ್ತಿಸಲು ರಂನರ್ತಿಸಲಂಗನೆಯರತಂಡ ಸಂಭ್ರಮದೊಳಾಡಿದರು ರಂ 15 ಕರುಣಸಾಗರ ಜಯ ಕರಿಚರ್ಮಾಂಬರ ಜಯವರದ ರಾಮೇಶ ಜಯವೆಂದು ರಂ-ವರದ ರಾಮೇಶ್ವರ ಪಾರ್ವತಿ ಜಯವೆಂದುಹರುಷದಿ ಕೋಲನಾಡಿದರು 16
--------------
ಕೆಳದಿ ವೆಂಕಣ್ಣ ಕವಿ
ಪಲ್ಲಕ್ಕಿ ಸೇವೆಯವಧಾನ ಆಳಪಲ್ಲಕ್ಕಿಯಲಿ ಮಂಡಿಪುದು ಶಿವ ನಿಧಾನ ಪ ಮದನ ಕೈಗಳ ಸುಭುಜ-ವಲಯದೊಳ್ತಳದ ಪೂರುಷರ ಸರಪಂಸೆಗಳತೊಳಪಗಜಪಕ್ಷಿಯಗ್ರಗಳಾ ದೇವಲಲನೆಯರ ಚಾಮರದ ಕರದ ಚಲನೆಗಳಾ 1 ವಂದಿಮಾಗಧರೆಲ್ಲ ಕರವೆತ್ತಿ ಪೊಗಳುತಿರೆದಾಂಧಣಧಣಾ ಎಂದು ಮೊಳಗೆ ಮಂಗಳವಾದ್ಯಚಂದ್ರಸೂರ್ಯರು ಜಗಜ್ಯೋತಿಯನುಪಿಡಿದಿರಲು ಗಂಧರ್ವತತಿ ಪಾಡುತಿರಲುಮುಂದೆ ರಂಭಾದಿ ಗಣಿಕೆಯರು ನರ್ತಿಸಲು ದೇವೇಂದ್ರ ಮುಕ್ತಾಛತ್ರಮಂ ಪಿಡಿದಿರಲು ಧನದಕುಂದಣದ ಪಾದುಕೆಯ ಪಿಡಿದಿರಲುವಾಯು ನಲವಿಂದ ಸೀಗುರಿಯ ವೀಜಿಸಲುಸುರರು ಮುಂದೆ ಜಯಜಯವೆಂದು ಓಲೈಸುತಿರಲು 2 ಸುರರು ಹೂಮಳೆಗರೆಯೆ ಸುರದುಂದುಭಿಯು ಮೊಳಗೆಪರಮಋಷಿವರರು ವೇದಂಗಳನು ಪಠಿಸೆ ತುಂ-ಬುರನಾರದರು ವೀಣೆಯನು ಬಾಜಿಸಲು ಗಣನಿ-ಕರ ಖಡ್ಗಶರವ ಪಿಡಿದಿರಲುಸರಸಿಜೋದ್ಭವನು ನಿಮ್ಮುನ್ನತಿಯನರುಹುತಿರೆಸುರರಾಜಮಂತ್ರಿ ಸಮಯವ ಸೂಚಿಸುತಿರಲುವರಕೆಳದಿಪುರವಾಸ ರಾಮೇಶ ಜಯವೆಂದುಹರಿ ಹಸ್ತಲಾಘವನು ಕೊಡಲು ಗೌರಿಹರುಷದಿಂ ಮುಂಬಿನೊಳು ರಂಜಿಸುತ್ತಿರಲು 3
--------------
ಕೆಳದಿ ವೆಂಕಣ್ಣ ಕವಿ
ಶ್ರೀ ವ್ಯಾಸರಾಜ ನರ್ತನ ಗೋಪಾಲಕೃಷ್ಣ ಸ್ತೋತ್ರ26ರಾಜಗರು ಶ್ರೀವ್ಯಾಸರಾಜರ ಭಾಗ್ಯಕ್ಕೆಈ ಜಗದಿ ಎಣೆಯುಂಟೆ ಅರಸಿನೋಡೆ ||ರಾಜೀವೇಕ್ಷಣ ಜ್ಞಾನಾನಂದ ಬಲಪೂರ್ಣ |ರಾಜ ಗೋಪಾಲ ಶ್ರೀ ಕೃಷ್ಣನು ಕುಣಿದ ಪಏನು ಯತ್ನಿಸಿದರೂ ತೆರೆಯಲಿಕ್ಕಾಗದ |ಸ್ವರ್ಣಮಂಜೂಷದೊಳು ಮೂರ್ತಿಗಳ್ ||ಮುನಿವರ ವ್ಯಾಸರು ಸ್ಪರ್ಶಿಸೆ ತೆರೆಯಿತು |ಕೃಷ್ಣಜ್ವಲಿಸಿದ ಭೈಷ್ಮೀ ಸತ್ಯಾ ಸಮೇತ 1ಭಕ್ತ ವಾತ್ಸಲ್ಯದಿ ಸರಿಮಿಗಿಲು ಇಲ್ಲವು |ಭಕ್ತವತ್ಸಲ ಶ್ರೀಯಃ ಪತಿಗೆ ಎಲ್ಲೂ ||ಭಕ್ತಾಗ್ರೇಸರುತರಳಪ್ರಹ್ಲಾದನಿಗೆ |ಎದುರಾರು ಉಳ್ಳರೈಧರೆಯ ಮ್ಯಾಲೆ 2ಬಾಲಕಸ್ತುತಿಸಿದ್ದು ನರಹರಿ ಹರುಷದಿ |ಕೇಳಿದನು ಆನಂದದಿ ತಾನರ್ತಿಸಲು |ಅಲ್ಲ ಸಮಯ ಆಗ ಎಂದು ಈಗ ಪ್ರಹ್ಲಾದ |ಇಳೆಯಲಿ ಮುನಿವ್ಯಾಸ ಎಂದು ತಾ ನಲಿದ 3ಸುಳಿಯುವ ಯುವ ಕರ್ಮದಿಂ ಕೌರವರೊಡೆ ಇದ್ದ |ಬಾಲ್ಹಿಕರಾಯನು ಭಕ್ತಿ ಕುಂದದ ಮನದಿ ||ಮಾಲೋಲನ ಲೀಲಾ ಮೆಚ್ಚಿತಾ ಭೀಮನ್ನ ತಾ ಒಲಿಸಿಕೊಂಡುಬಾಲಯತಿವ್ಯಾಸನಾಗಿ ಬಂದಿಹನೆಂದು ಹರಿಕುಣಿದ 4ಸೂರಿಜನ ಪ್ರಾಪ್ಯಗಘೃಣಿ ಆದಿತ್ಯಸೂರ್ಯನು |ವಿರಾಜಸುವ ಸೂರ್ಯ ದೇವಾಂಶ ಬ್ರಹ್ಮಣ್ಯ ||ತೀರ್ಥರಕರಅರವಿಂದೋತ್ಪನ್ನ ಈ |ಸೂರಿವರ್ಯ ವ್ಯಾಸರಾಯರು ಎಂದು ನರ್ತಿಸಿದ 5ಶಿಂಶುಮಾರನ ಪುಚ್ಛಾಶ್ರಿತ ಸ್ಥಿರ ಸ್ಥಾನದಿಂ |ಅಂಶದಲಿ ಜನಿಸಿ ಶ್ರೀಮಧ್ವಸಚ್ಛಾಸ್ತ್ರ ||ಅಸಮ ಕೋವಿದರೆನಿಪ ಶ್ರೀಪಾದ ರಾಜರÀಲಿ |ವ್ಯಾಸಂಗ ಮಾಳ್ಪ ಸಂಧೀ ಎಂದು ಹರಿಕುಣಿದ 6ಸಾರಾತ್ಮ ಸುಖಮಯಶ್ರುತಿವೇದ್ಯ ಮಹದಾದಿ |ಚರಾಚರ ಜಗತ್ಕರ್ತಪರಮಪೂರುಷನು ||ಮೂರಡಿ ಬೇಡಿದ ಮುರಳೀಧರ ಶ್ರೀಮನ್ನ್ನಾರಾಯಣ ಸರ್ವವಂದÀ್ಯನೇ ಸ್ವಾಮಿ 7ಈ ರೀತಿ ಹೊಗಳುವ ಸರಿಗಮ ಪದನಿ |ಸ್ವರಗಳಿಂ ಕೃಷ್ಣನ್ನ ಶ್ರೀ ವ್ಯಾಸರಾಜ ||ಪರಮಭಾಗವತಮಹಾತ್ಮರು ಕೀರ್ತಿಸೆ |ಶ್ರೀ ಕೃಷ್ಣ ಧಿಕ್ತೈ ಎಂದೆÉನುತ ಕುಣಿದ 8ಈ ಪದ್ಯಗತಿಯಲ್ಲಿ ಧಿಕ್ತೈ ಧ್ವನಿಸೂಚಿಸುತೆ |ಶಿಪಿವಿಷ್ಟ ವಿಶ್ವರೂಪ ಮುರಳೀಪಾಣಿಯನ್ನ |ಶುಭತಮಗುಣಕಥನ ಶ್ರವಣದಿಂ ಲಭ್ಯವು |ಶ್ರೀಭಾಗವತಾಷ್ಟಮ ದಶಮ ಏಕಾದಶದಿ 9ಅಖಿಲೇಷ್ಟದಾತಾ ಇಂದಿರೇಶ ಚಾರ್ವಾಂಗನು |ರುಕ್ಮಿಣಿ ಸತ್ಯಾಯುಕ್ಅಭಯವರದ ||ಶಂಖಾರಿಹಸ್ತಹಿರಣ್ಮಣಿ ನಿಭ ಕೃಷ್ಣ |ಜಗದೇಕ ವಂದ್ಯನು ಮುದದಿ ತಾಕುಣಿದ 10ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸ |ನರಸಿಂಹ ಪರಂಬ್ರಹ್ಮ ನಮೋವರಾಹ||ನಾರಾಯಣವಾಸುದೇವಸಂಕರುಷಣ |ಪರಂಜ್ಯೋತಿ ಪ್ರದ್ಯುಮ್ನ ಅನಿರುದ್ಧಪಾಹಿ11
--------------
ಪ್ರಸನ್ನ ಶ್ರೀನಿವಾಸದಾಸರು