ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

7. ನಾರಾಯಣಶರ್ಮರ ಹೆಚ್ಚಿನ ಕೃತಿಗಳು (1) ರಾಮನುಜ ಸ್ತುತಿ ಗುರುಸ್ತುತಿಯ ಮಾಡಬೇಕಯ್ಯ ಗುರುವೆ ಗಮ್ಯ ತೋರುವನಯ್ಯ ಪ ಗುರುವಿಂದ ಹರಿಪಾದ ಸುಲಭವಯ್ಯ ಗುರುವಿಲ್ಲದೆ ಮೋಕ್ಷವಿಲ್ಲ ನೋಡಯ್ಯ ಅ.ಪ ಗುರುನಮ್ಮಯತಿರಾಜ ರಾಮಾನುಜ ಗುರುನಮ್ಮ ಕ್ಷಿತಿಪೂಜ್ಯ ಗೋದಾನುಜ ಗುರುವೆ ಸರ್ವಸ್ವ ಹರಿಸ್ವರೂಪ ಗುರುಪಾದ ದರ್ಶನವೇ ಸಾಯುಜ್ಯವೆನಿಪ 1 ದಾಸದಾಸರದಾಸರಾಳ್ವಾರರ ಪೋಷ ದೋಷರಹಿತ ದಾಸೋತ್ತಮ ಧನು ರ್ದಾಸನ ಶ್ರೀಪಾದತೀರ್ಥವ ಸೇವಿಸಿ ದಾಸಸೇವೆಯೆ ಈಶ ಸೇವೆಯೆನಿಸಿದ 2 ಚೆನ್ನ ತಮಿಳಿನ ಶ್ರೀರಂಗದಿಂ ಬಂದು ಚೆನ್ನಚೆಲುವಿನ ಮೇಲುಕೋಟೆಯಲಿ ನಿಂದು ಹನ್ನೆರಡು ವರುಷದ ಮೇಲ್ಪಟ್ಟು ಸಂದು ಇನ್ನಿಂದು ಜಾಜಿಪುರೀಶನಾದ ನಮ್ಮ3
--------------
ನಾರಾಯಣಶರ್ಮರು
ದೇವಿಯನೆತ್ತಿದನಾರೆಲಮ್ಮಾ ನಮ್ಮದೇವ ಸಿರಿಪತಿ ಕಾಣೆಲಮ್ಮಾದೇವಿ ನಮ್ಮ ದೇವರು ಬಂದರು ಕಾಣಮ್ಮ ಪ.ಕಣ್ಣೆವೆ ಇಕ್ಕದೆ ಮಾತಿಗೆ ಮನವಿಟ್ಟಸಣ್ಣದೊಡ್ಡನಾಹನಾರೆಲಮ್ಮಉನ್ಮತ್ತಖಳಸೋಮಕನವೈರಿಹೊಸ ಹೊನ್ನಬಣ್ಣದ ಮಚ್ಛವತಾರಿ ಅಲ್ಲೇನಮ್ಮ 1ಸಾರಿಸಾರಿಗೆ ಉಯ್ಯಾಲಿಡುತಲಿ ಮುಸುಡನುತೋರಿ ಜಾರಿದವನಾರೆಲಮ್ಮಆರಿಗು ಮೀರಿದಮಂದರಬೆನ್ನಲಿಭಾರಾಂತ ಶ್ರೀಕೂರ್ಮನಲ್ಲೇನಮ್ಮ 2ಘರ್ಘರಿಸುತ ಕಾಲಕೆದರಿ ಜಗದಗಲಭೋರ್ಗರೆವುತಲಿಹನಾರೆಲಮ್ಮದುರ್ಘಟ ದೈತ್ಯನ್ನ ದಂಷ್ಟ್ರದಿ ಚುಚ್ಚಿದನಘ್ರ್ಯವರಾಹದೇವನಲ್ಲೇನಮ್ಮ3ಕೂಗುತÀ ಕೊಲ್ಲುತ ಕಿಡಿಯನುಗುಳುತಲಗುಬಗೆದವನಾರೆಲಮ್ಮನೀಗಿದುಷ್ಟನ ಶರಣಾಗತ ಶಿಶುರಕ್ಷಯೋಗಿನರಹರಿ ಅಲ್ಲೇನಮ್ಮ4ಭೂಮಿ ಆಕಾಶಕೆ ಒಬ್ಬನೆ ಹಬ್ಬುತಸೀಮೆಯ ಮುಚ್ಚುವನಾರೆಲಮ್ಮಹೇಮಹೋಮದಿಮತ್ತಬಲಿಯನೊತ್ತ್ಯಾಳಿದಸಾಮದ ವಾಮನನಲ್ಲೇನಮ್ಮ 5ಸಾವಿರ ಕೈಯ್ಯವನಳಿದು ಕಡಿದು ತಾನೆಹೇವದಟ್ಟಿವನಾರೆಲಮ್ಮಈ ವಸುಧೆಯ ಭಾರವಿಳುಹಿದ ವೀರ ಭೂದೇವಕುಲದ ರಾಮನಲ್ಲೇನಮ್ಮ 6ಕರಡಿಕೋಡಗಕೊಂಡು ಕಡಲೊಳಗಾಡಿದಹುರುಡಿಲ್ಲದ ಬಿಲ್ಲನುಳ್ಳನಾರೆಲಮ್ಮಸರಕುಮಾಡಿ ರಕ್ಕಸರನೊದ್ದಸಮೀರಜವರದ ಸೀತಾರಾಮ ಅಲ್ಲೇನಮ್ಮ 7ಬಂಡಿ ಕುದುರಿ ಗೂಳಿ ಹಕ್ಕಿ ಸೀಳಿ ಗೊಲ್ಲಹೆಂಡಿರೊಳಾಡುವನಾರೆಲಮ್ಮಪಾಂಡವಪಾಲ ರುಕ್ಮಿಣಿ ವಿಜಯನುಬಂಡಿಕಾರ ಕೃಷ್ಣನಲ್ಲೇನಮ್ಮ 8ಉಡುಗೆಯನುಡದಂತರಾಟದಿ ಕದ ತಪ? ವಿದ್ದಮಡದೇರ ಕೆಡಿಸಿದನಾರೆಲಮ್ಮಮೃಡಸುರರುಬ್ಬಸಬಡಿಸುವ ಬೌದ್ಧರಕೆಡಿಪ ಮೋಹನ ಬುದ್ಧನಲ್ಲೇನಮ್ಮ 9ವಾಜಿಯನೇರಿ ಠೇವಿಡಿದು ಗಡಬಡಿಸಿಮೂಜಗ ಸುತ್ತುವನಾರೆಲಮ್ಮಮಾಜಿದ ಪುಣ್ಯವನೆತ್ತಿ ಕಲಿಯ ಕೊಂದಸೋಜಿಗದ ಕಲ್ಕಿ ಅಲ್ಲೇನಮ್ಮ 10ಮುಗ್ಧರಾಗಲಿ ಪ್ರೌಢ ಬಂಟರಾಗಲಿ ಕರೆದರೆದ್ದೋಡಿ ಬಂದವನಾರೆಲಮ್ಮಸಿದ್ಧಪುರುಷ ಪ್ರಸನ್ವೆಂಕಟಪತಿಸಾಧಿಸಿ ಪಾಡಿದಲ್ಲಿದ್ದನಮ್ಮ 11
--------------
ಪ್ರಸನ್ನವೆಂಕಟದಾಸರು
ಸಾಕು ಸಾಕು ಸಂಸಾರ ಸಂಖ್ಯಾಗಿಲ್ಲ ಒಲ್ಲೆ ಒಗೆತನವ ಪ.ಆರುಮಂದಿ ಗಂಡರಾಳುವರು ಎನ್ನಆರುಮಂದಿಗೆ ಮೂರು ಸುತರೆನಗೆಆರು ಮೂರೇಳ್ಪರುಭಾವ - ಮೈದುನರೆಲ್ಲಆರರೆಂದರೆ ಬಿಡರು ಆರಿಗುಸುರಲಮ್ಮ 1ಹತ್ತುಮಂದಿ ಬೆನ್ನ ಮುತ್ತಿಕೊಂಡರೆಮತ್ತೆ ಬಿಟ್ಟೆನೆಂದೆ ಬಿಡಗೊಡರುಅತ್ತಿಗೆ ನಗೆಹಣ್ಣಿ ಹೊತ್ತು ಹೊತ್ತನೊಳೆಮ್ಮನೆತ್ತಿಯೊಳು ಹಸ್ತವಿಟ್ಟೆನ್ನ ಸಲುವರಮ್ಮ 2ಪಂತರೈವರು ಎನ್ನ ತೊಂತ ಹಂತಯೆಂದುಸಂಚಿತದ ಕರ್ಮವನುಣಿಸುವರುವಂಚನೆಯಳಿದ ಪ್ರಪಂಚವನು ಕಳೆದಿಹಮಿಂಚಿನ ಪರಿಯವಿರಿಂಚಿಬರೆದಿಹನಮ್ಮ3ಜೇಷ್ಠನಾಗಿಹ ಪುತ್ರ ಧರ್ಮನ ಅಗಲಿಸಿಭ್ರಷ್ಟ ಆತ್ತೆಯು ಮೈತ್ಯುವಾಗಿಹಳುಮೆಟ್ಟಿಲಿನ ಹೊರಗೆ ಕಣ್ಣಿಟ್ಟು ಸಾಧುಗಳನುದೃಷ್ಟಿಸಿ ನೋಳ್ಪನೆಂದರೆ ಕ್ಷಣ ಬಿಡರಮ್ಮ 4ಒಂಬತ್ತು ಬಾಗಿಲ ಊಳಿಗವನು ಮಾಳ್ಪಕುಂಬತದ ನರತ ಕಾವರ ದಾಳಿಢಂಭಕವನು ಬಿಟ್ಟು ಇಂಬಿನೊಳಟ್ಟು ವಿಶ್ವಂಭರ ಪುರಂದರವಿಠಲ ಧ್ಯಾನದಗುಟ್ಟು5
--------------
ಪುರಂದರದಾಸರು