ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆದೆಡೆಗೆ ತಾ ಬರುವ ಕರೆದೆಡೆಗೆ ತಾ ಬರುವ ಪ ಬರುವೆ ತರುವ ಸುಖವ ಮುರುಳೀಧರನು ಅ.ಪ ತಿಳಿಯ ಭಕುತಿಯ ಪಡೆದ ಜನರಿಗೆ ಗೆಳೆಯನಿವ ಬಲು ಸುಲಭನು ಇಳೆಯಸುರರಾದರದಿ ಕರೆಯಲು ಹರುಷದಲಿ ನಲಿನಲಿಯುತಲಿ 1 ಸದನದಲಿ ಹದನಿಲ್ಲ ಈತನಿ ಗೊದಗಿಸುವುದತಿ ಸಾಹಸ ವಿಧಿಯ ಬರಹವು ಇಲ್ಲವೆನುತಲಿ ಹೆದರದಿರಿ ಮಧುಸೂಧನನು 2 ಇದು ನನದು ಇದು ನನದು ಎನುವ ಮದದ ವಚನಕೆ ನಗುತಲಿ ಇದು ನಿನದು ಎನ್ನಲು ಪ್ರಸನ್ನನು ವಿದುರನಾಲಯ ಪೊಕ್ಕಿಹ3
--------------
ವಿದ್ಯಾಪ್ರಸನ್ನತೀರ್ಥರು
ಮಾತು ಶ್ರೀಹರಿ ಮಾತು ಬಳಿಸರೀಗ ಪ ಮಾತÀು ಕೇಳಿದರೆ ಪ್ರೀತಿಯಣ್ಮದು ಸೋತು ನಡೆದರೆ ಕಾತರ ಪೋಪುದು ರೀತಿ ನೀತಿ ಬೆಳಗೆ 1 ಮದನನದು ತಾಪವು ಕನಸಿನೊಳಿರದು ಮನದಘ ಮಹಿಮಹಿಮನ ಮನೆ ಯೆನಿಪುದು ಜನನ ಮರಣವಿಲ್ಲಾ 2 ನರಸಿಂಹ ವಿಠಲನ ಕರುಣವೆ ಸ್ಥಿರವು ದುರಿತಗಣಗಳು ಸರಿದೋಡುವವು ಹರಿಕರುಣವ ಒಲವು3
--------------
ನರಸಿಂಹವಿಠಲರು