ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾಗಿ ನನಗಾಗಿ ನಮಿಸುವೆನು ಬಾಗಿ ನೀನಾಗಿ ಕೃಪೆಮಾಡೋ ದೀನಾನುರಾಗಿ ಪ ನಾನಿನ್ನ ಕೈಗೊಂಬೆ ನೀನೆಗತಿಯೆಂಬೆ ನೀನನ್ನ ಕರೆತಂದೆ ಶ್ರೀನಾಥ ನಾ ಬಂದೆ ಅ.ಪ ತರಳನ ಕರೆತಂದೆ ತರುಣಿಕೂಗಿ [ದರಿಕೆಬಿಡಿಸಿ ಮಾನಿನಿಯ ರಕ್ಷಿಸಿದೆ] ಹರಿಯೊಂದು ಜಲದಲಿ ನರಳಿದಕರೆಗೆ ಕರುಣದೊಳೋಡಿ ಬಂದು ಪೊರೆದೆ ನೀತಂದೆ 1 ಜ್ಞಾನಿಯು ನಾನಲ್ಲ ಮಾನಿಯುಮಲ್ಲ ಧ್ಯಾನದ ರೀತಿಯ ನಾನರಿತಿಲ್ಲ ನಾನಾ ಶಾಸ್ತ್ರಂಗಳ ಕಲಿತವನಲ್ಲ ನೀನೆ ಶರಣೆಂಬೆ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನಗಾಗಿ ನಾನೇನ ಕೊಡಬಲ್ಲೆನೋ ನನಗೇನು ಗತಿಯಿಲ್ಲ ಇದಬಲ್ಲೆನೋ ಪ ನನಗಾಗಿ ನೀನಿರುವೆ ಪರಮೇಶ್ವರಾ ನಿನಗಾವ ಕೊರೆಯುಂಟು ಸಕಲೇಶ್ವರಾ ಅ.ಪ ತನುಭಾವ ದಿನಚರ್ಯೆ ನಿನಗರ್ಪಿತ ಧನಧಾನ್ಯ ಮನದಿಷ್ಟ ಚರಣಾರ್ಪಿತ ಮನದಾಸೆ ಬೇಡ ಮಾಂಗಿರಿನಾಂiÀiಕಾ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬರಿದು ಬಂದಿಹೆನೀಗ ಹಿರಿಮೆಯನು ಕಂಡರಿತು ಹರಸು ಸಂಗವ ಕೊಟ್ಟು ದಡಹಾಯ್ದು ಬಂದಿಹೆನು ಪ ಹುಟ್ಟು ಸಾವಿನ ಗಂಟು ಕಡುಪಾಪಿಯಾಗಿಸಿದೆ ಮುಟ್ಟಿ ನಿನ್ನನು ನಾನು ಎಂತು ಕಾಣುವೆನಯ್ಯ ಅ.ಪ ದಣಿದು ಬಂದಿಹೆ ದೇವ ಗತಿಯ ಕಾಣದೆ ಮುಂದೆ ತಣಿದಬಾಳಿನ ನನ್ನ ಜೀವವ ಚಂದವಾಗಿಸು ರಂಗ ಕುಣಿದು ಬರುವನು ನೀನು ಸರಿದುಹೋಗುವೆ ನಾನು ಮಣಿಸಿ ಬಂಧವ ಬಂದು ತಡೆದು ಕಾಪಿಡೊ ರಂಗ 1 ಕಣ್ಣು ಹೋಗಿಸು ನಿನ್ನಲಿ ಮಣ್ಣು ಬಯಕೆಯ ತಪ್ಪಿಸು ಕಾ - ಮನ್ನ ಸೇರಿಸು ನಿನ್ನಲಿ ನಲಿದು ಹಾಡಿಸು ನನ್ನನು ಕಾ - ರುಣ್ಯ ತೋರೈ ನನ್ನಲಿ ಮನವು ನನ್ನದು ಆಗಲಿ ಅಣ್ಣ ಶೆಲ್ವದೇವ ನೀ ನನಗಾಗಿ ತೋರಿಸಿಕೋ 2
--------------
ಸಂಪತ್ತಯ್ಯಂಗಾರ್