ಒಟ್ಟು 15 ಕಡೆಗಳಲ್ಲಿ , 11 ದಾಸರು , 14 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಗುರುರಾಯರ ನಂಬಿದೇ - ಶ್ರೀ ರಾಘವೇಂದ್ರ ಪ ವರಮಂತ್ರಾಲಯದಲ್ಲಿ ಇರುತ ಸೇವೆಯಗೊಂಬ ಅ.ಪ ಗ್ರಾಸ ಬೇಡಿದ ಮುನಿಯಾಶೆಯ ತಣಿಸಿದ ದಾಶರಥಿಯ ಭಕ್ತ ದೇಶಿಕವರ್ಯರ 1 ಸಂತಾನಸೌಭಾಗ್ಯ ಚಿಂತಿತಾರ್ಥವನೀವ ಪಾದ ಸ್ವಾಂತದಿ ಭಜಿಸುವ 2 ಅಜ್ಞಾನ ತಿಮಿರಕ್ಕೆ ಸುಜ್ಞಾನಪರಿಪೂರ್ಣ ಪ್ರಜ್ಞರ ಗುರುವ್ಯಾಸರಾಜ್ಞಾಧಾರಕರಾದ 3
--------------
ಲಕ್ಷ್ಮೀನಾರಯಣರಾಯರು
ಆತ್ಮನಿವೇದನೆ ಅಂಬುಜೇಕ್ಷÀಣ ನಂಬಿದೇ ನಿನ್ನ ಪ. ಅಂಬುಜೇಕ್ಷಣ ನಿನ್ನ ನಂಬಿದ ಭಕ್ತರಘ ದ್ಹಂಬನು ಕಡಿದು ನಿನ್ನಿಂಬನು ತೋರುವೆ ಅ.ಪ. ಅನುಪಮ ಚರಿತ ಅಪ್ರಮೇಯನೆ ಕೃಷ್ಣ ತನುಮನಧನಗಳಾ ನಿನಗರ್ಪಿಸುವೆ ಎನ್ನ ಚಿನುಮಯ ರೂಪನೆ ಮನುಮಥ ಪಿತನೆ ನಿನ್ನ ಸರಿಯಾರೋ ಹನುಮದೀಶ ಕೃಷ್ಣ 1 ಉತ್ತಮರುಗಳನು ನಿತ್ಯದಿ ಸೇವಿಪ ಚಿತ್ತವೆನಗೆ ಕೊಡೋ ಉತ್ತಮೋತ್ತಮನೆ ತೆತ್ತೀಸ ಕೋಟಿ ದೇವರ್ಕಳು ನಿನ್ನನು ಸುತ್ತಿ ಸ್ತುತಿಪರೋ ನರ್ತನ ಗೈಯ್ಯುತ 2 ಪದುಮ ಸಂಭವ ಪಿತ ಪದುಮಿಣಿಯರಸನೆ ಒದಗುತ ಭಕ್ತರಾಪ್ತನು ನೀನಲ್ಲೆ ಸದನದಿ ಕಾಯುತ ಮುದವನು ಬೀರುತ ನೀ ಚದುರ ಶ್ರೀ ಶ್ರೀನಿವಾಸ ಕದನವಿನ್ಯಾತಕೋ ರಾಮ 3
--------------
ಸರಸ್ವತಿ ಬಾಯಿ
ತಾಳು - ತಾಳು - ತಾಳಬೇಕೆನ್ನುವಿರೋ ಗುರುವೇ ಪ ಇನ್ನೆಷ್ಟುದಿನ ತಾಳಬೇಕೋ ತಿಳಿಯಾದೋ ಅ.ಪ. ಆಶ್ರಿತಜನ ರಕ್ಷಕನೆಂದೂ ನಂಬಿದೇನೊ ಪ್ರಭುವೇ | ಪಾದ ಶ್ರೀ ರಾಘವೇಂದ್ರ ಪ್ರಭವೇ 1 ತನುವಿನೊಳಗೆ ಬಲವು ಇಲ್ಲಾ ಮನದೊಳಗೆ ಧೃಡಾವಿಲ್ಲ ಇನ್ನಾದರು ದಯಮಾಡಿ ಸಲಹಯ್ಯ ಪ್ರಭವೇ2 ದುರಿತ ರಾಶಿಗಳ ನಾಶಗೊಳಿಸೆ ನಿನ್ಹೊರತ್ಯಾರಿಲ್ಲ ಪ್ರಭುವೇ ತ್ವರಿತದಿ ಕರುಣ ಕಟಾಕ್ಷದಿ ನೋಡು ಶ್ರೀ ರಾಘವೇಂದ್ರ ಗುರುವೇ 3 ಈ ಸಂಸಾರ ಶರಧಿಯೋಳ್ ಮುಳುಗಿ ಬಳಲಿದೆ ಗುರುವೇ ಘಾಸಿಗೊಂಡಿಹೆ ಕೃಪೆಮಾಡೈ ಶ್ರೀ ರಾಘವೇಂದ್ರ ಗುರುವೇ 4 ತಡೆಮಾಡದೆ ಕಡೆಹಾಯಿಸೋ ಶ್ರೀ ರಾಘವೇಂದ್ರ ಪ್ರಭವೇ 5
--------------
ರಾಧಾಬಾಯಿ
ನಂಬಿದೇ ಗುರುವರಾ ನಂಬಿದೇಪ ನಂಬಿದೆ ಗುರುಸಾರ್ವಭೌಮಾ ತುಂಟುಮನದೊಳು ಹರಿಭಕ್ತಿ ನಿಸ್ಸೀಮಆಹಾ ಅಂಬುಜೋದ್ಭವಪಿತನ ಕಂಭದಿ ತೋರಿದ ಶಂಬರ ಕುಲದೀಪ ಪ್ರಹ್ಲಾದ ವ್ಯಾಸಮುನಿಯೇ ಅ.ಪ. ದಾಸನೆಂದಡಿಗೆ ಬಿದ್ದೆನೋ ಈಗ ದೋಷ ನಾಶಮಾಡೋ ಎನಗೆ ಬೇಗ ಆಹಾ ವಾಸುಕಿಶಯನನ ಬ್ಯಾಸರದೆ ಸ್ತುತಿಸಿ ಈಶನ ಸರ್ವತ್ರವ್ಯಾಪ್ತಿಯನರುಹಿದ ಭೂಪ 1 ಪಾತಕರೊಳಗೆ ಅಗ್ರೇಸರನಾನು ಪೂತಮಾಡುವರೊಳಗೆ ನಿಸ್ಸೀಮ ನೀನು ಆಹಾ ತಾತನಪ್ಪಣೆಯಂತೆ ವ್ಯಾಸರಾಜಾಎನಿಸಿ ಖ್ಯಾತಿಯಿಂದಲಿ ತರ್ಕತಾಂಡವರಚಿಸಿ ಮೆರೆದೇ 2 ತಾಪಸಶ್ರೇಷ್ಠ ಬ್ರಹ್ಮಣ್ಯಕುವರನಾದೆ ಗೋಪಾಲಕೃಷ್ಣನ್ನ ಕುಣಿಕುಣಿದಾಡಿಸಿ ಭೂಪನ ಕುಹಯೋಗ ಕಳೆದ ಯತಿಕುಲತಿಲಕ 3 ಮಧ್ವಶಾಸ್ತ್ರಗಳ ಮಂದರರಿಯದಿರಲು ಮುದದಿಂದ ಪದಸುಳಾದಿಗಳ ರಚಿಸಿದೆ ನೀನು ಆಹಾ ಆದರದಿಂದಲಿ ಪುರಂದರಕನಕರಿಗೆ ಸದುಪದೇಶವ ಕೊಟ್ಟು ಜಗದುದ್ಧಾರಮಾಡಿದ ಪ್ರಭುವೇ 4 ಮತ್ತೆ ಪುಟ್ಟಿದೆ ವೆಂಕಣ್ಣಭಟ್ಟ ನೆಂದೆನಿಸೀ ಮತ್ತ ಕೇಸರಿಯಂತೆ ಮಧ್ವಶಾಸ್ತ್ರದಿ ಮೆರೆದೇ ಆಹಾ ಕತ್ತಲೆ ಅದ್ವೈತವಾದಗಳಿಗೆಲ್ಲಾ ಕತ್ತಿಎನಿಸಿದ ಪರಿಮಳಾಚಾರ್ಯ ಗುರುವೇ 5 ವಿಪ್ರನು ದಿಟ್ಟತನದಿ ನಿನ್ನ ಗಂಧವ ತೇದುಕೊಡುಎನೆ ಕ್ಷಿಪ್ರದಿ ತೋರಿದೆ ನಿನ್ನ ಮಹಿಮೆಯಜಗಕೇ ಆಹಾ ಅಪ್ಪ ಶ್ರೀರಾಮರ ಪೂಜಿಸಬೇಕೆಂದು ಒಪ್ಪಿಸನ್ಯಾಸವ ರಾಘವೇಂದ್ರನಾದ 6 ಮುದದಿ ದೇಶ ದೇಶವ ಚರಿಸಿದೇ ಸಮಯದಿ ಸುಜನರಕ್ಲೇಶಗಳಳಿದೇ ಆಹಾ ಮೋದಮುನಿಯ ಗ್ರಂಥಗಳಿಗೆಲ್ಲ ಟಿಪ್ಪಣಿ ಮಾಡುತ ಬುಧರಿಗೆ ತತ್ವ ಕನ್ನಡಿ ತೋರ್ದ ಗುಣಗಣನಿಧಿಯೇ7 ಪರಿಪರಿ ಮಹಿಮೆಯ ತೋರುವ ಗುರುವೇ ಸುರತರು ಅಂದದಿ ಹರಕೆ ಗಳೀವೆ ಪ್ರಭುವೇ ಆಹಾ ಮೂರೆರಡು ಒಂದುನೂರು ವರುಷ ಪರಿಯಂತ ಸಾರಿಸಾರಿದವರ ಪೊರೆದು ಮೆರೆಯುವ ದಿವಿಜವಂದಿತ ಗುರು8 ದಯದಿಂದ ನೋಡೆನ್ನ ದೀನೋದ್ಧಾರ ಭವ ಬಿಡಿಸು ಕರುಣಾಸಾರ ಆಹಾ ಜಯತೀರ್ಥವಾಯ್ವಂತರ್ಗತ ಶ್ರೀಕೃಷ್ಣ ವಿಠಲನ ಹೃ- ದಯಮಂದಿರದಿ ತೋರೆನಗೆ ಗುರುಸಾರ್ವಭೌಮ 9
--------------
ಕೃಷ್ಣವಿಠಲದಾಸರು
ನಂಬಿದೇ ನರಹರಿಯೆ ನಾ ಪ ನಂಬಿದೆನೊ ಬ್ರಹ್ಮಾದಿ ವಂದಿತ ಪೂರ್ಣ ಸುಗುಣ ಕಂದಂಬ ನಿರುಪಮ ನಿತ್ಯಮುಕ್ತಾಮುಕ್ತ ಜೀವದ ವಿಶ್ವ ಭಾಸಕ ಮುಕ್ತಿದನೇಕನೆಂಬುದಾ ಅ.ಪ ನೊಂದು ನೊಂದೆನೊ ಭವದಿ ಹಿಂದುಮುಂದನು ಕಾಣೆ ಬಂಧ ನೀಡುವ ನೀನೆ ಬಂಧಾ ಬಿಡಿಸಲುಬೇಕೊ ಸ್ವಾಮಿ ಸಂಶಯವೆಂದು ಪೊಗಳುವೆ ಪೂರ್ಣ ಪೂರ್ಣಾನಂದ ಸಜ್ಜನನಂದ ಕಾಮದ ಸಾಮ ಪೂರ್ಣಚಂದ್ರ ಸುತೇಜಭವಹರ 1 ಕರ್ಮ ಅಡ್ಡಿಯಾಗಿದೆ ಸುಖಕೆ ವಡ್ಡುವೆ ಸರ್ವಸ್ವನಿನಗೆ ದೊಡ್ಡವನು ನೀವಲಿಯೆ ಎನ್ನಯ ದಡ್ಡತನ ನಿನ್ನೇನುಮಾಳ್ಪದು ಸಡ್ಡೆಮಾಡದೆ ದೋಷರಾಶಿಯ ಮಮತೆ ತೊಲಗಿಸಿ ಗುಡ್ಡಹೊತ್ತ ಮಹಾಂತರೊಡೆಯನೇ 2 ಸಿರಿ “ಕೃಷ್ಣವಿಠಲ”ನೆ ನಿನ್ನಾಕರುಣವೆ ತಾರಕ ಇನ್ನುಮುನ್ನು ನಿನ್ನ ನಂಬಿಹೆ ಜ್ಞಾನಮಾನವ ನೀಡ್ವದಾತನೆ ಸಣ್ಣವನ ಪಿಡಿದಿನ್ನು ನೀ ಪ್ರಸನ್ನನಾಗೆಲೊ ದೇವದೇವನೆ ನಿನ್ನದಾಸರ ಭಾಗ್ಯವೊಂದೇ ಸಾಕು ಸಾಕೈಯೆಂದು ಬೇಡುವೆ ಅನ್ಯರೊಳ್‍ರತಿ ಇಲ್ಲದಿರಲೈ ಮಾನ್ಯ ಮಧ್ವರ ಮತದಿ ನಿಲಿಸು 3
--------------
ಕೃಷ್ಣವಿಠಲದಾಸರು
ನಿಜದಿ ಸುಖಪದ ಕೊಡುವೆಯೋ ಭಜಕರಿಗೆ ಶುಭದಾಯಿಯೋ ಪ ತ್ರಿಜನ ಪೂಜೆಯಗೊಂಬೆಯೋ ಅಂ- ಗಜಜನಕ ಗೋಕಾಯ್ದೆಯೋ ಅ.ಪ ಸುತನಕೊಂದೇ ಸತಿಯ ತೊರೆದೇ ಅತಿಯ ದುಃಖವ ನಟಿಸಿದೇ ಸತತ ಸರ್ವವ್ಯಾಪಿಯೆಂಬರು ಹಿತನೆ ಕಾಣಿಸೆಯೆಲ್ಲಿಹೇ 1 ನಾರಿಯರ ಸೆರೆ ನೀಗಿಸೀ ಹದಿ ನಾರು ಸಾವಿರ ಸೇರ್ದೆಯೋ ಚೋರನೆನ್ನಿಸಿ ಸೀರೆಕದ್ದು ಮಾರಕನೆ ತಾಮಮೃತನೇ 2 ಕೂರ್ಮ ವರಾಹನೇ ನರ ಕೇಸರೀ ವಾಮನನು ನೀ ಹಸ್ತಪರಶು ಶ್ರೀ ರಾಮಕೃಷ್ಣನೆ ವಿಶ್ವ ಬುದ್ಧನೆ ಕಲ್ಕಿಯೇ 3 ಘೋರ ದೈತ್ಯ ವಿದಾರಿಯೋ ಹರಿ ಸಾರಿ ಹಲವವತಾರದಿಂ ತೋರಿದವ ನೀನಾದರೂ ಜಾ ಮಾಧವ ನಂಬಿದೇ 4
--------------
ಶಾಮಶರ್ಮರು
ಪಾದ ಮುಖ್ಯ ಪ್ರಾಣಾ ನಂಬಿದೇ ನಿನ್ನಯ ಪಾದಾ ಡಂಬರ ತೊಲಗಿಸಿ ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ಪ ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಹಂಸಮಂತ್ರ ತಪ್ಪದೆ ದಿನದಿನ ಒಪ್ಪದಿಂದಲಿ ಭಜಿಸಿ ತಪ್ಪಿಸೋ ಭವವಾ ಸ ಮೀಪದ ಜೀವ ಕೊ ಅಪ್ಪನಂದದಿ ಪುಣ್ಯ ವಪ್ಪಂತೆ ಕರುಣಿಸೊ ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ 1 ಹತ್ತೇಳು ಎರಡಾಯುತ ನಾಡಿಯೊಳು ಉತ್ತರÀ ಪಾಲಿಸೋ ಉತ್ಕ್ರಮಣದಲ್ಲಿ ನೆತ್ತಿಯದ್ವಾರದಿಂದ ಎತ್ತಮರಿಯಲೀ ಸದದೆ ತತ್ತುವರೊಳು ಜೀವೋ ತ್ತಮನೆ ಸತ್ ಚಿತ್ ಎನಗೆ ಕೊಡು ಉತ್ತರ ಧರಿಸೋ 2 ಅಂತರಂಗದಿ ಉಸುರಾ ಹೊರಗೆ ಬಿಟ್ಟು ಅಂತರಂಗಕ್ಕೆ ಸೇರುವ ಪಂಥದೊಳು ನೀನೆ ನಿಂತು ನಾನಾಬಗೆ ತಂತು ನಡಿಸುವ ಹೊಂತಕಾರಿ ಗುಣವಂತ ಬಲಾಢ್ಯ 3 ಪಂಚಪರಣ ರೂಪನೆ ಸತ್ವ ಕಾಯಾ ಪಂಚೇಂದ್ರಿಯಗಳ ಲೋಪನೆ ಪರಮೇಷ್ಟಿ ಸಂಚಿತಾಗಾಮಿ ಬಿಡಿಸಿ ಕೊಂಚ ಮಾಡೋ ಪ್ರಾರಬ್ಧ ವಂಚನೆ ನೆನೆದೊ ಅಂಚಗಂಚಿಗೆ ಪರಪಂಚವೆ ಓಡಿಸಿ ಪಂಚವಕ್ತ್ರ ಹರಿ ಮಂಚದ ಗುರುವೇ 4 ಯೋಗಾಸನದೊಳಿಪ್ಪ ಯಂತ್ರೋದ್ಧಾರಾ ಭಾಗವತರಪ್ಪಾ ಯೋಗಿಗಳೀಶಾ ವ್ಯಾಸಾ ಯೋಗಿಗೊಲಿದ ವ್ಯಾಸಾ ಶ್ರೀ ತುಂಗಭದ್ರಾ ವಾಸಾ ಬಾಗುವೆ ಕೊಡು ಲೇಸಾ ಜಾಗರ ಮೂರುತಿ5
--------------
ವಿಜಯದಾಸ
ಮುದ್ದು ಮೋಹನ ದಾಸರೇ ನಿಮ್ಮ | ಶುದ್ಧ ಪಾದವ ನಂಬಿದೇತಿದ್ದಿಯೆನ್ನಯನಾದ್ಯ ವಿದ್ಯೆಯ | ಬುದ್ಧಿ ನಿಲಿಸಿರಿ ಹರಿಯಲೀ ಪ ನಡುಮನೆ ದ್ವಿಜನೆಂಬನಾ | ವಡ್ಡಲೊಳು ಉದಿಸೀದನಾ |ಆಡ್ಯಮತವನುಕರಿಸಿದಾ | ದೊಡ್ಡ ಬಳ್ಳಾಪುರದಲೀ1 ವಿಕೃತಿ ಸಂವತ್ಸರದಲೀ | ಪ್ರಕೃತ ಜನ್ಮವ ಪಡೆದನಾಸುಕೃತ ಪೊಗಳುವ ಜನರ ದು | ಷ್ಕøತವ ನೀ ಪರಿಹರಿಸುವೀ 2 ಚಿಪ್ಪಗಿರಿ ಸುಕ್ಷೇತ್ರದೀ | ಗೊಪ್ಪ ಶ್ರೀ ಅಂಕಿತವನೂ ಅಪ್ಪ ಶ್ರೀ ವರರಿಂದಲೀ | ವಪ್ಪಿ ನೀ ಕೈಗೊಂಡೆಯೋ 3 ಮೂರೊಂದು ಸಲ ಶ್ರೀಕಾಶಿಗೇ | ಭೂರಿಸಲ ಶ್ರೀ ಉಡುಪಿಗೇಸಾರಿ ವೆಂಕಟ ಪತಿಯನೂ | ಬಾರಿ ಬಾರಿಗೆ ನೋಡಿದೇ4 ದಾಸ ಪೀಳಿಗೆ ಬೆಳೆಸಲೂ | ಶೇಷನಾಮಕ ದಿವಿಜಗೇಭಾಸಿಸುವ ಅಂಕಿತವನಿತ್ತೂ | ಪೋಷಿಸಿದೆ ಸದ್ವೈಷ್ಣವತತ್ವ 5 ಸುಜನ ಜನ ಸಂಸೇವಿಸೆ | ವಿಜಯ ವಿಠಲನ ಸ್ಥಾಪಿಸೇಭಜನೆ ಗೈಯುತ ಮೆರೆದೆಯೊ | ನಿಜಪುರದಿ ನೀ ನಿಲ್ಲುತಾ 6 ಸಿರಿಯಧರಿಸಿ ಮೆರೆಯುವ ಗುರು | ಗೋವಿಂದ ವಿಠಲನ ಭಜಿಸುವಾಪರಮ ಗುರುಗಳೆ ನಿಮ್ಮ ಚರಣವ | ಪರಿಪರೀಯಲಿ ಪೂಜಿಪೆ 7
--------------
ಗುರುಗೋವಿಂದವಿಠಲರು
ಯಾಕೆ ನಿರ್ದಯವೋ ದೇವ ದೇವ ಸ್ವಭಾವ ಯಾಕೆ ಮರೆತೆ ದೇವಾ [ಎನ್ನನು] ಪ ಯಾಕೆಂಬುದರಿಯೆನಾ ಶ್ರೀಕರಾಂಬುಜನೇತ್ರ ಕಾಕುಮನುಜನೆಂದು ನೀಕರಿಸಿದೆಯೋ ಅ.ಪ ಉದರ ಪೋಷಣೆಗಾಗಿ ವಿಧ ವಿಧ ದೇಶದಿ ಬಧಿರ ಹೆಳವ ಮೂಗ ಅಧಿಕರೋಗಿಯು ಅಂಧಾ ವಿದಿತ ವೇಷಗಳಿಂದ ಅಧಿಕ ಬಳಲಿದೆನಯ್ಯ ಪದುಮಾಕ್ಷ ಪರಂಧಾಮ ಮುದದೆ ಪೋಷಿಸಲು1 ಪರರ ನಿಂದನೆ ಗೈದೆ ನೆರೆಯವರನು ಕೊಂದೆ ಪರರ ಸ್ವತ್ತನು ತಂದೆ ಪರರನ್ನವನು ತಿಂದೆ ದುರಿತಕಾರ್ಯವಗೈದೆ ನರಹರಿ ನಿನ್ನ ಮರೆದೆ ಪರರು ಕಾವವರಿಲ್ಲ ನೆರೆನಂಬಿದೇ ನಿನ್ನ 2 ಸಾವು ಜನ್ಮಂಗಳಿಂದ ನೋವು ಬಂಧನವಡೆದು ಬೇವಿನಂದದೆ ದುರ್ಗುಣಭಾವವ ತಳೆದೆನೋ ಕಾವರಿಲ್ಲವೋಯೆನ್ನ ಶ್ರೀವನಿತಾರನ್ನ ಸಾವುನೋವನು ಬಿಡಿಸೊ ಮಾವಿನಕೆರೆರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೆಂಕಟಾಚಲ ನಿವಾಸಾ-ಜಗದೀಶ ಸಂಕಟ ಹರಿಸೋ ಶ್ರೀಶಾ ಪ ಪಂಕಜಾಸನ ಪ್ರಮುಖ ಶಶಾಂಕಸುರವರಪೂಜಿತ ಅಕಳಂಕಮಹಿಮ ಖಗಾಂಕ ಚಕ್ರಗದಾ ಶಂಖಶ್ರೀಕರಕಂಜಧರಪಾಣೀ ಅ.ಪ ಲೋಕನಾಥ ಲೋಕಬಂಧು-ದಯಾಸಿಂಧು ಭಕುತರನಿಮಿತ್ತಬಂಧು-ಎಂದೆಂದೂ ಭಕುತರ ಬೆಂಬಲನು ಎಂದೂ-ಇಂತೆಂದೂ ಪಾಕಶಾಸನಪೂಜ್ಯ ಪಿನಾಕಿಪಿತ ಸುರಜೇಷ್ಠವಂದ್ಯ ಏಕಮೇವ ನೀ ಕೈಬಿಡದೆ ಕರ್ಮ- ಪಾಕಮಾಡಿಸೋ-ಕಾಲನಾಮಕ1 ಬಂಧಕಗಳ ತಂದೊಡ್ಡೀ-ಭಕುತರ ಮನ ಪರಿ ಧೃಢಮಾಡಿ-ಪರಿಯುನೋಡಿ ಬಂದ ಬಂಧವ ಹರಿಸಿ-ಹೃದ್ವಾಸೀ ಹಿಂದುಮುಂದೂಕಾಣದ ಮಹ- ಅಂಧಕಾರಣ್ಯದಲಿ ಸಲಹಿದೆ ಬಂಧ ಮೋಚಕನಹುದೋ ಅನಾಥ ಬಂಧು ನೀನೆಂದು ನಂಬಿದೇ 2 ಕರುಣಾಸಾಗರನೇ ನಿನ್ನಾ-ನಾ ನಂಬಿದೆ ಸ್ಮರಣೆಯೊಂದನೆ ಪಾಲಿಸೋ ಈ ಜನುಮದೀ ಪರಮಸಾಧನ ಕಾಣದೇ-ಪರಿತಪಿಸುವೇ ನಿರುತ ಭವಸಂಕೋಲೆಯಾ ಕಡಿದು ಪೊರೆಯುವುದೋ ಶ್ರೀ ವೆಂಕಟೇಶನೆ ಸ್ಮರಿಪರಘ ಪರಿಹರಿಪ ಶ್ರೀ- ಉರಗಾದ್ರಿವಾಸವಿಠಲ ಪ್ರಭೋ 3
--------------
ಉರಗಾದ್ರಿವಾಸವಿಠಲದಾಸರು
ಶ್ರೀರಂಗನಾಥ ನಂಬಿದೇ ನಿನ್ನ ನಾನೇ ಅನಾಥ ಪ ಅನಾಥರಕ್ಷಕ ಎನ್ನಾ ಪ್ರೀತಿಯಿಂದಲೆ ಕಾಯೊ ಲೋ ಕನಾಥನೆಂದು ಬಂದು ನಂಬಿದೆ ನಿನ್ನ ಅ.ಪ ನಿಮ್ಮ ರಘುಪತಿ ನಿಮ್ಮ ವಿಭೀಷಣಗೆ ಕೊಡಲು ತಾಮುನ್ನಾ ಶ್ರೀರಂಗಕ್ಷೇತ್ರದಿ ನೆಲಸಿ ಸಂತೋಷದಿ ಧರ್ಮವರ್ಮಾದಿ ಚೋಳೇಂದ್ರ ಪೂಜಿತಪಾದ 1 ಕಂದ ಪ್ರಹ್ಲಾದ ಕರೆಯೆ ಕಂಬದಿಂದಲೆ ಬೇಗ ಬಂದು ಅವನ ತಂದೆಯನು ಸಂಹರಿಸಿದೆ ಕಂದನ ಕಾಯ್ದ ಗೋವಿಂದ ರಕ್ಷಿಸೊ ಎನ್ನ 2 ಅಜಮಿಳ ಕರೆಯೆ ಆಪತ್ತಿಗೆ ಬಂದು ನೀನೊದಗೆ ನಿಜಸ್ಮರಣೆ ಮಾತ್ರದಲವನ ದುರಿತವೆಲ್ಲವ ಕಳೆದು ನಿಜ ಪಾದವನಿತ್ತೆ ಕರುಣದಿಂದಲೆ ರಂಗ 3 ಕಂದ ಧ್ರುವ ತಾನು ಅಡವಿಯಲಿ ನಿಂತು ತಪವನು ಚಂದದಿ ಮಾಡಲು ಬಂದು ಸೇವೆಯನಿತ್ತೆ ಆ ನಂದಪದವನಿತ್ತ ಸುಂದರಾಯನೆ ನೀನು 4 ಅರ್ಕಸುತನಾಗ ನಿಮ್ಮನ್ನು ಸೇರಿ ಸೌಖ್ಯವ ಬೇಗ ಮಾಡೆ ಸೊಕ್ಕಿದ ವಾಲಿಯನೊಂದು ಬಾಣದಿಂ ಕೊಂದು ಮರ್ಕಟಗೆ ರಾಜ್ಯವನಿತ್ತ ರಂಗಯ್ಯ ನೀನು5 ಮಕರಿ ಕಾಲ್ಪಿಡಿಯೆ ಮತಂಗಜ ನಿಮ್ಮನು ಕರೆಯೆ ನಕ್ರವ ಕೊಂದು ಚಕ್ರದಿ ಅತಿವೇಗದಿಂ ಕರಿಯ ರಕ್ಷಿಸೆ ಬಂದೆ ಕರುಣದಿಂದೆ 6 ಭವಕೆ ನಾ ಬೆದರಿ ಬಂದೆನೊರಂಗ ಕಾಯೋ ನೀ ಭವದಿ ಈಶಣತ್ರಯವನ್ನು ಬಿಡಿಸಿ ನಿನ್ನಯ ಪಾ ದವಾಸವ ಮಾಡಿಸೊ ವಾಸುಕಿಶಯನನೆ 7 ಆರುಜನ ಕಳ್ಳರು ಎನ್ನಲಿ ಸೇರಿ ಬಾಧಿಸುತಿಹರು ದೂರಮಾಡವರನ್ನು ಸೇರಿಹೃದಯದಲ್ಲಿ ಶ್ರೀನಿವಾಸನೆ ನಿಮ್ಮ ಪಾದದೊಳಿರಿಸೆನ್ನ 8
--------------
ಯದುಗಿರಿಯಮ್ಮ
ಶ್ರೀರಮಾರಮಣ ಶರಣಾರ್ತಿನಿವಾರಣಾ ಪ ಸಾರಸಾಕ್ಷ ಕರುಣಾರಸಪೂರ್ಣ ಭೂರಿ ಸುವೈಭವ ಭುವನರಕ್ಷಣಅ.ಪ ನಾನು ನಿನ್ನೊಳು ಮೊರೆಯಿಡುತಿರುವೆನೊ ನೀನೆನ್ನೊಳು ದಯೆದೋರು ಹರಿಯೆ ದೀನಪಾಲನಾಪರ ನೀನೆನ್ನುತ ಲಾನು ಬಂದೆನೊ ಶ್ರೀನಿಕೇತನ 1 ಹಿಂದೆಯನೇಕರ ಕಾಪಾಡಿರುವೆ ಮುಂದೆಯು ಭಕ್ತರ ಬೆಂಬಿಡದಿರುವೈ ತಂದೆ ಬಂದು ಗಜರಾಜನ ಸಲಹಿದೆ ಯೆಂದು ನಂಬಿದೇ ಮಂದರಾದ್ರಿಧರ 2 ಸುಧಾಮ ಅಜಮಿಳ ಅಂಬರೀಷ ದ್ರೌ ಪದಿಯರ ಸಮಯದಿ ಕಾಯ್ದವನೇ ವಿಧಿಪಿತ ನೀನದುಭುತಮಹಿಮನಯ್ಯ ಸುಧಾ[ಮ] ನ ಬಂಧುವೆ ಜಾಜೀಶಾ 3
--------------
ಶಾಮಶರ್ಮರು
ಶ್ರೀವಾಯು ದೇವರು ಅನುದಿನ ಸ್ತುತಿಸುವೆ ದೀನಮನುಜನ ಜನುಮಗಳಳಿಸೋ ಪ ವಾಣಿವಂದಿತ ಪಾದಪದ್ಮನೆ ಕಾಯೋ ಈಗಲೇ ಅ.ಪ. ಜಾನಕೀರಮಣನ ಪ್ರಿಯ ದಾನವಾಂತಕ ಕಾಯ ಮಣಿಮಂತಾದಿಗಳ ಶೂಲ ಘನ ಪರಾಕ್ರಮ ಭೀಮ ಜ್ಞಾನದಾಯಕ ವಪುಷ ಆನಂದ ತೀರ್ಥಪ್ರಖ್ಯಾತ ಮೌನಿಮಾನಸ ಚಂದ್ರ ಅನಿಮಿಶೇಷಗಳಾದಿಗೊಡೆಯ ಭಾನುಕುಲತಿಲಕ ದೂತನೆ ಭಾನುಕೋಟಿತೇಜರೂಪನೆ ಗಣಿಸಲಾಗದ ಸತ್ವಮಂದಿರ ಮೌನಿಗಳ ಕಲಶ ಪ್ರಾಯನೆ ಕನಕವರ್ಣದಶುಭಗಾತ್ರನೆ ಧ್ಯಾನಗೋಚರ ವಿಶ್ವರೂಪನೆ ಮಾನದಿಂದಲಿ ಪಾಲಿಸಯ್ಯ 1 ವಾರಿಧಿ ದಾಟಿದಶೂರ ಭಾರಿವನವ ಕಿತ್ತವೀರ ಜರಾಸಂಧನ ಕೊಂದ ಧೀರ ವೈರಿತಿಮಿರಕೆ ಸೂರ್ಯ ಹರಿಯ ಹರಡಿದ ರಾಯ ಪರಾಶರಾತ್ಮಜಪ್ರಿಯ ಕರಿರಾಜವರದನೆ ಪ್ರಥಮಾಂಗ ಭಾರತಿ ರಮಣಮುಖ್ಯಪ್ರಾಣ ಹರಿಯು ಆಗಿ ಹರಿಯ ಒಲಿಸಿದೆ ವೀರಮಾರುತಿ ದೇವ ದೇವನೆ ಬಗೆದು ಧರಿಸಿ ಮೆರೆದೇ ಎಂದು ಸಾರಿದೆ ತೋರಿಸಿ ಕಾಯೊ ಸೂತ್ರನೆ 2 ಅಕ್ಷಯನ ಕೊಂದು ಮೆರೆದ ಲಕ್ಷ್ಮಣನ ಪ್ರಾಣವನುಳಿದ ರುಕ್ಮಿಣೀ ಪತಿಯ ಕಿಂಕರನಾದ ಲಕ್ಷ್ಯವಿಲ್ಲದೆ ಸೈನ್ಯಗಳಳಿದಾ ಪಕ್ಷವಾಹನನೆ ದೈವವೆಂದ ಮೋಕ್ಷಸಾಧನಗಳ ತೋರಿನಿಂದ ವೈರಿ ಅನಿಲ ರಕ್ಷಿಸು ರಕ್ಷಿಸು ತತ್ವೇಶರೊಡೆಯ ಲಕ್ಷ್ಮಿಮಾತೆಯಕಂಡುವಂದಿಸಿ ಲಂಕೆ ಸುಟ್ಟು ಸೊಕ್ಕೂ ಮುರಿದೆ ಅಕ್ಷನಾಟವ ಸೋತುನಟಿಸಿ ಕಾಂತೆಗಭಯವ ನೀಡಿ ಪೊರೆದೆ ಅಕ್ಷರೇಡ್ಯನ ಕರುಣದಿಂದಲಿ ಸೂತ್ರಭಾಷ್ಯವ ರಚಿಸಿ ಮೆರೆದೇ ಇಕ್ಷುಚಾಪನ ಪಿತನ ತೋರಿಸೋ ದಕ್ಷಿಣಾಕ್ಷಿಗವತ್ಸರೂಪಿಯೆ 3 ವಿಷಉಂಡುಪೊರೆದ ರೋಮರೋಮಕೆ ಕೋಟಿ ಲಿಂಗಗಳುದುರಿಸಿ ಬಂದ ಧಾಮಸಕಲ ಗುಣಕೆಂದೆನಿಕೊಂಡ ಅನಾದಿ ಅಪರೋಕ್ಷದೇವ ರಾಮಭಕ್ತಾಗ್ರೇಸರನೆನಿಸಿದ ತಾಮಸಾಂತಕ ವಿಜಯರಥಧ್ವಜ ಭಾಮೆಯರೂಪವ ತಾಳಿಮೆರೆದ ಭೀಮವಿಕ್ರಮ ಸಪ್ತಶಿವಧರ ಸಾಮಗಾಯನ ಲೋಲ ಕೃಷ್ಣನ ಪ್ರಿಯದಾಸ ಮೋದಮುನಿಯೆ ಎನಿಸಿಮೆರೆಯುವೆ 4 ವಾನರರೂಪಿಲಿ ಬಂದ ಜಾನಕಿ ಗುಂಗುರಕೊಟ್ಟು ನಿಂದ ರಾಜಸೂಯವ ಮಾಡಿನಿಂದ ಹರಿಯು ಎಂದ ವನಜನಾಭನಮುಖ್ಯ ಪ್ರತಿಬಿಂಬ ಕ್ಷಣದಿ ಸಂಜೀವನವ ತಂದೆ ವಾನರರ ಪ್ರಾಣ ಉಳಿಸಿದೆ ದ್ರೋಣಸುತನ ಅಸ್ತ್ರನಿಲಿಸಿದೆ ಸಾಮ ದೂರ ಖ್ಯಾತನಾಮನೆ ವಾಯು ಅಂತರ ವಿಶ್ವ ಚರಣ ನಂಬಿದೇ 5
--------------
ಕೃಷ್ಣವಿಠಲದಾಸರು
ಎನ್ನ ಪಾಲಿಸಯ್ಯಾ ಪನ್ನಗಾಭೂಷಣ |ನಿನ್ನ ನಂಬಿದೇನೋ | ನೀಲಕಂಧರನೇ ಪಕಂಡೆ ನಿನ್ನನೀಗ | ರುಂಡಮಾಲಧಾರಿ |ದಂಡಧರನ ಮುರಿದ | ಮಾರ್ಕಂಡೇಯಪಾಲ 1ಮಾರವೈರಿ ನೀನೆ | ಪಾರ್ವತೀಯ ವರನೇಸಾರಿ ನುತಿಪೆ ನಿನ್ನ ತ್ರಿಪುರಾರಿ ದೇವಾ 2ಚಂದ್ರಶೇಖರನೇ | ಗೋವಿಂದನ ಸಖನೆ |ನಂದಿವಾಹನ£É |ಬಂದು ಮುಖವ ತೋರಿ 3
--------------
ಗೋವಿಂದದಾಸ