ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ಯಾಸೆಪಡಬೇಡ ಅಸ್ಥಿರ ಸಂಸಾರ ಮತ್ತನಾಗದಿರೆಲವೊ ಪ ವೆತ್ಯಸ್ತ ಸ್ಥಿತಿಯಿಂದಾನಿತ್ಯಾ ಶರೀರವಿದು ಅ.ಪ ಜನರಾಡುವುದು ಕೇಳಿ ಮನಕೆ ಬಂದುದ ಕೋರಿ ಅನುಮಾನ ಚಿತ್ತನಾಗಿ ವನಿತೆಯರ ಬಲೆಯೊಳು ಸಿಲುಕಿ ಮೋಹಭ್ರಾಂತಿ ವಶನಾಗಿ ಧರ್ಮಾಧರ್ಮಗಳ ತಿಳಿಯದೆ 1 ಹೇಯ ಸುಖವ ಬಯಸಿ ಆಯಾಸ ಪಡುತಲಿ ಬಾಯ ಬಿಡುತ ಸತತ ನೋಯುತಾ ನುಡಿಯುತ ಕ್ರೋಧ ಲೋಭದಿ ಮುಳುಗಿ ನಾಯಿಯಂದದಿ ತಿರಿಗಿ ನಾನಾ ವಿಧದಲಿ 2 ದಾನಧರ್ಮಗಳಿಲ್ಲ ಜ್ಞಾನಸತ್ಯಗಳಿಲ್ಲ ಧ್ಯಾನವು ಮೊದಲೇ ಇಲ್ಲ ಮಾನಾಭಿಮಾನ ಅಜ್ಞಾನದಿ ಮುಳುಗಿ 3 ಪರರೊಡೆವೆಯ ತಂದು ಒಡಲ ಹೊರೆಯುತಲ- ನೆರೆಹೊರೆ ನೋಡಿ ಅವರಂತೆ ನಾನಿರಬೇಕೆಂದ 4 ಕರ್ಮ ಭಿನ್ನಇವರಿಗೆಲ್ಲ ಮುನ್ನಿನ ಕರ್ಮದಿ ಫಲ ಬೆನ್ನಬಿಡದು ಎಂದು ಪೇಳುವ ಶಾಸ್ತ್ರಗ- ಳನ್ನು ನಂಬದಲೆ ನಿನ್ನನ್ನೆ ನೀ ಪೊಗಳಿ ಕೊಂಡು 5 ನ್ಯಾಯಾರ್ಜಿತ ದ್ರವ್ಯದಿಂದ ಕಾರ್ಯಗಳವು- ಪಾಯದಂದಲಿ ನಡೆಸಿ ತಾಯಿ ಮಕ್ಕಳ ನೋಡುವಂತೆ ದೀನರಿಗೆ ಸ- ಹಾಯ ಮಾಡುತ ಜ್ಞಾನಿಗಳ ಸೇವಿಸುತಿಹರು 6 ಪೊರೆವೊ ಭಾರಕರ್ತ ಗುರುರಾಮವಿಠಲ ತಾ ಶರಣಾದವರಿಗೆ ಭಯವೇನು ಸ್ವಾಮಿ ಸರ್ವರ ಪಾಲಿಸುವನು ನಿನ್ನನು ಮಾತ್ರ ಬಿಡುವನೆ 7
--------------
ಗುರುರಾಮವಿಠಲ
ಏಕೆ ಚಿಂತಿಪೆ ನೀ ಎಲೆ ಕೋತಿಮನವೆ ಪಾದ ಗಟ್ಟ್ಯಾಗಿ ನಂಬದಲೆ ಪ ಹಿತದ ಭಕ್ತನು ಎಂದು ಮತಿಹೀನ ಭಸ್ಮಗುರಿ ಹಸ್ತವರವಿತ್ತ್ಹರನು ಮತಿದಪ್ಪೋಡುತಿರೆ ಗತಿನೀನೆ ಹರಿಯೆನಲು ಅತಿದಯದಿಂ ಶಿವನ್ನುಳಿಸಿ ಕೃತ್ತಿಮನ್ನಳದ ಹರಿ ಪತಿತಮಹಾತ್ಮರಿಯೆ 1 ಘುಡುಘುಡಿಸಿ ಹಿರಣ್ಯನು ಜಡಮತಿ ಹರಿಯೆಲ್ಲಿ ಗಡ ತೋರೀ ಕಂಬದಿ ಎಂದಾರ್ಭಟಿಸಿ ಬರಸೆಳೆಯೆ ನಡುನಡುಗಿ ಪ್ರಹ್ಲಾದ ಜಡಜಾಕ್ಷ ಪೊರೆಯೆನಲು ಮೂಡಿ ಕಂಬದಿ ಖಳನ ಒಡಲ ಬಗೆದದ್ದರ್ಹಿಯೆ 2 ಕುರುಪನ ಸಭೆಯೊಳಗೆ ಮೊರೆಯಿಟ್ಟ ದ್ರೌಪದಿಗೆ ಕರುಣದಕ್ಷಯವಿತ್ತು ಪೊರೆದ ಪರಮಾತ್ಮ ಕರುಣಾಳು ಶ್ರೀರಾಮ ಚರಣದಾಸರ ನೆರ ಅರೆಘಳಿಗೆ ಬಿಟ್ಟಿರನು ನಿರುತ ನೀ ಸ್ಮರಿಸೋ 3
--------------
ರಾಮದಾಸರು
ಬಿನ್ನವೆನ್ನೆಣೆಸದಿರು ಎಲೆ ಮಾನವಾ ಚನ್ನಕೇಶವ ಸ್ವಾಮಿ ಒಲಿದು ಪಾಲಿಸುವಾ ಪ ವಸುಧೆಯಲಿ ಚಲಿಸುತಿಂತ ಸಕಲ ಜಂತುಗಳೆಲ್ಲ ಹಸನಾಗಿ ತಿಳಿಯದೆ ನಿನ್ನಾತ್ಮವೆಂದು ತೃಷೆ ಕ್ಲೇಶಗಳು ಮುರಿದೊಗೆವ ಜೀವವನು ಕಸಕಸರಿ ಮಾಡದಿರು ಪರರಾತ್ಮವೆಂದು 1 ಅವರಿವರು ಬಂಧುಗಳು ಅಪ್ತೇಷ್ಟ ಸಹೃದರು ಇವರವರು ದೂಷಕರು ಪರಜಾತಿಯೆಂದು ಸವಿಸುತಲಿ ಮನಸನ್ನು ಪರಪಂಚವೆನಿಸುತ್ತ ಭವವನ್ನೆ ಸೆಲೆ ನಂಬಿ ಪರರಾತ್ಮವೆಂದು 2 ದಾಸದಾಸರಿಗೆಲ್ಲ ವಂದನೆಯ ಮಾಡುತ್ತ ದಾಸರೆಲ್ಲರು ಜಗದಿ ಏಕಾತ್ಮರೆಂಬ ವಾತನೆಯ ನಂಬದಲೆ ಬಿನ್ನಾತ್ಮರೆಂದೆಣಿಸಿ ವಾಸುಕೀಶಯನನೂ ಭಿನ್ನಾತ್ಮನೆಂದು 3
--------------
ಕರ್ಕಿ ಕೇಶವದಾಸ