ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂಟ ಪ ಕನಕಕಶಿಪು ತನಯ ತನ್ನ ಜನಕನ ಹಿಂಸೆ ತಡೆಯದೆಲೆ ದನುಜಹರನೆ ರಕ್ಷಿಸೆನಲು ಕ್ಷಣದಿ ಬಂದು ಸಲಹಿದೈಯ್ಯಾ 1 ನಾರಿ ದ್ರುಪದನಂದನೆಯಳ ಸೀರೆ ಖಳನು ಸೆಳೆಯುತಿರಲು ವಾರಿಜಾಕ್ಷ ನಿನ್ನ ಸ್ಮರಿಸೆ ಯಾರು ಅರಿಯದಂತೆ ಬಂದೆ 2 ದಾಸಜನರ ಸಕಲ ಪಾಪ- ರಾಸಿಗಳನು ದಹಿಸೆ ಪೊರೆವೆ ಶ್ರೀಶ ನಿನ್ನ ಭಜಿಸಿದರೆ ರಂ- ಗೇಶವಿಠಲರೇಯ ನೀನು 3
--------------
ರಂಗೇಶವಿಠಲದಾಸರು
ಮಂಗಳಾರತಿಯ ಪಾಡಿರೆ ಮಾನಿನಿಯರು ಪ ಅಂಧಕನನುಜನ ಕಂದನ ತಂದೆಯಕೊಂದನ ಶಿರದಲಿ ನಿಂದವನಚಂದದಿ ಪಡೆದವನ ನಂದನೆಯಳ ನಲವಿಂದ ಧರಿಸಿದ ಮುಕುಂದನಿಗೆ 1 ರಥವನಡರಿ ಸುರ ಪಥದಲಿ ತಿರುಗುವನಸುತನಿಗೆ ಶಾಪವನಿತ್ತವನಖತಿಯನು ತಡೆದನ ಸತಿಯ ಜನನಿ ಸುತನಸತಿಯರನಾಳಿದ ಚತುರನಿಗೆ 2 ಹರಿಯ ಮಗನ ಶಿರ ತರಿದನ ತಂದೆಯಹಿರಿಯ ಮಗನ ತಂದೆಯ ಪಿತನಭರದಿ ಭುಜಿಸಿದವನ ಶಿರದಲಿ ನಟಿಸಿದವರ ಕಾಗಿನೆಲೆಯಾದಿಕೇಶವಗೆ 3
--------------
ಕನಕದಾಸ