ಕಾಯಯ್ಯ ರಘುನಾಥ ಧೀನಜನೋದ್ದಾರಿ ಪ
ಕೇವಲ ಪತಿತ ಪಾಮರ ನಾನು
ಕೇವಲ ಪಾವನ ಮೂರುತಿ ನೀನು
ಕೇವಲ ಘನ ಅಪರಾಧಿಯು ನಾನು
ದೇವನೀ ಕರುಣಾ ಸಾಗರ 1
ಭಾವ ಭಕ್ತಿಯ ಕೀಲವ ನರಿಯೇ
ವಿವೇಕ ಮತಿ ನೀ ನೀಡುವ ಧೊರೆಯೇ
ಆವಾಗ ವಿಷಯಾ ಸಕ್ತನು ಹರಿಯೇ
ಕಾದ ದೈವನು ನೀನೈ 2
ನತ ನಾದೇ
ತರಳನ ಕುಂದಾಲಿಸದಿರು ತಂದೇ
ಗುರು ಮಹಿಪತಿ ಪ್ರಭು ನಮೋಯಂದೇ
ಶರಣಾಗತ ಸಹಕಾರೀ 3