ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಮಂಗಳಕರ ದೋರಿತು ಎನಗೆ ಪ ಇಂದು ಮಂಗಳಕರ ದೋರಿತು ಎನಗೆ | ಇಂದು ಕುಲದೀಪಕ ಬಂದನು ಮನೆಗೆ 1 ರಂಗ ಬಂದನಂತರಂಗದೊಳಾಡುತ 2 ಇಂದಿರಾಪತಿ ಬಂದನು ಸುಖಬೀರುತ | ತಂದೆ ತಾಯಿ ಬಂಧು ಬಳಗೆನಗಾಗುತ 3 ತುಂಬಿ ತುಳುಕುತಾನಂದದೊಲವಿಲಿ | ಅಂಬುಜಾಕ್ಷ ಬಂದಾಮೃತಗರೆವುತ 4 ಎಂದೆಂದೆಗನಾನಂದದ ಮೂರುತಿ | ಸಾರಥಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನುಡಿ ಜ್ಞಾನದ ಮಾತು ಒಡನೆ ನಂಬುದ್ಹೇತು ನಡಿ ಜ್ಞಾನದ ಮಾತು ಕಡೆಗಾಣಿಸಿತು ಧ್ರುವ ನುಡಿಯ ಒಡಲೊಳಗಿಟ್ಟು ನಡಿಯೊಳಗ ನುಡಿದೋರಿ ಕೊಡುವರಿಗ್ಯದೆ ಘನಮಹಿಮೆ ನೋಡಿ ನುಡಿದಂತೆ ನಡೆದರೆ ನಡೆನುಡಿ ಆಗುವದು ನುಡಿ ಅಡಿ ತೋರುವರಿಗೆಲ್ಲಿ ನಡೆನುಡಿ 1 ನಡೆಯೊಳಗ ನುಡಿಯದೆ ಪಡೆದುಕೊಂಬವ ಬಲ್ಲ ಒಡನೆ ಸದ್ಗುರು ದಯದೊಲವಿಲಿದ್ದು ನಡೆನುಡಿ ನಿಜವಾಗಲರಿಯದೆ ನಾಡೊಳಗೆ ಅಡಿಗಡಿಗೆ ಹೇಳ್ಯಾಡು ಮಾತೆ ಬರದು2 ನುಡಿವುದೆ ವೇದಾಂತ ನಡೆವುದೆ ಸಿದ್ಧಾಂತ ನಡೆನುಡಿಗೆ ಸಾಕ್ಷ ಶ್ರೀದೇವದತ್ತ ನುಡಿಗೆ ನಿಜ ನೆಲೆದೋರಿ ನಡಿಗೆ ನಿಲುಕಡೆ ಮಾಡಿ ಕೊಡುವನೊಬ್ಬನೆ ಮಹಿಪತಿ ಗುರು ಸಮರ್ಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡು ಮನವೆ ವರಯತಿಯಾ | ನಡೆ | ನೋಡು ಸದ್ಭಾವದಿಂದಲಿ ಮಹಿಪತಿಯಾ ಪ ದುರುಳ ದುರ್ಜನರನು ಶಿಕ್ಷಿಸಲಾಗಿ | ಭೋಗಿ 1 ಕೆಲವು ದುಷ್ಕರ್ಮ ಮಾಡಿದಾ ಫಲದಿ | ದೊಲವಿಲಿ ತಾರಿಸುತಿಹನು ಭರದಿ 2 ಹರುಷದಿ ಲೋಲ್ಯಾಡುತಿಹಾನಂದದೊಳು | ಕೃಷ್ಣನ ಜೀವ ಜೀವಾಳು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು