ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೇ ಗತಿಯೆನಗಿನ್ನು ದೀನನಾದೆನು ಬಹಳ ನೀನಲ್ಲದಾರು ಬಳಿಕಾ ದೇವಾಏನು ಸಾಧನವುಂಟು ಶ್ರುತ್ಯರ್ಥಗೋಚರವೆ ಧ್ಯಾನಧಾರಣೆ ದೂರವು ದೇವಾ ಪಕಾಣದೇ ನಿನ್ನಂಘ್ರಿಕಮಲವನು ಭವವೆಂಬಕಾನನಕೆ ಗುರಿಯಾದೆನು ದೇವಾಪ್ರಾಣರಕ್ಷಕರಿಲ್ಲದತಿ ಕಷ್ಟಕೊಳಗಾದಏಣ ಕುಣಕನೊಲಾದೆನು ದೇವಾಏನೆಂಬೆ ಮೂಢತ್ವವೇ ಮೌಲ್ಯವೆನಗಾಯ್ತುಜ್ಞಾನ ದೊರಕೊಂಬುದೆಂತು ದೇವಾಜ್ಞಾನವಿಲ್ಲದೆ ಬಂಧ ಪರಿಹರಿಸದೆಂದೀಗಮಾನಸದಿ ಮರಗುತಿಹೆನು ದೇವಾ 1ದುರಿತಕೋಟಿಗಳ ಜನ್ಮಂಗಳಲಿ ಮಾಡಿದರೆದೊರಕಿತದರಿಂದ ಜಡವು ದೇವಾಪರಿಪರಿಯ ಕರ್ಮಗಳು ಜನ್ಮಗಳ ಕೊಡುವದಕೆತರತರದಿ ಕರವಿಡಿದಿವೆ ದೇವಾಗುರಿಯಾದೆನೀ ಪರಿಯ ಕರ್ಮಶರಧಿಯ ತೆರೆಗೆಪರಿಹರವ ಕಾಣೆನಿದಕೆ ದೇವಾಪರಮ ಪಾವನವಾದ ದುರಿತಹರ ನಾಮಕ್ಕೆಕರಗದೋ ನನ್ನ ಕರ್ಮ ದೇವಾ 2ಲೋಕದೊಳಗಿಹ ಪಾತಕರು ತಾವು ಜೊತೆಯಾಗಿಬೇಕೆಂದು ಪಾತಕವನು ದೇವಾಜೋಕೆಯಲಿ ಛಲವಿಡಿದು ಪಾಪರಾಶಿಯ ಮಾಡೆಸಾಕೆ ನಾಮದ ಸೋಂಕಿಗೆ ದೇವಾನೂಕುವುದು ನಿಷ್ಕøತಿಗೆ ಮಲತ ಪಾಪವ ನಾಮಬೇಕೆ ನೆರವೆಂಬುದದಕೆ ದೇವಾಯಾಕೆ ನಾನೊಬ್ಬ ಮಾಡಿದ ಪಾಪರಾಶಿಯನುನೂಕದಿಹ ಬಗೆುದೇನು ದೇವಾ 3ದುರಿತವೆನಗಿಲ್ಲೆಂದು ಸ್ಥಿರಬುದ್ಧಿುಂದೊಮ್ಮೆುರುತಿಹೆನು ಧೈರ್ಯವಿಡಿದು ದೇವಾಅರಿವು ಸಿಕ್ಕದೆ ಮರವೆ ಮುಂದಾಗಿ ನಿಂದಿರಲುಮರುಗಿ ಮತ್ತೊಮ್ಮೆ ಮನದಿ ದೇವಾಅರಿವೆಂತು ಸಿಕ್ಕುವದು ದುರಿತಭರಿತನಿಗೆಂದುಸ್ಥಿರಬುದ್ಧಿ ನಿಲ್ಲದಿಹುದು ದೇವಾಉರುಳುವುದು ಮನವೆಲ್ಲಿ ಪರಿವುತಿಹೆ ನಾನಲ್ಲಿಸ್ಥಿರವೆಂದಿಗೆನಗಪ್ಪುದು ದೇವಾ 4ಏನಾದಡೇನಘವು ಬಹಳವಾಗಿಹುದಿದಕೆಹೀನಬುದ್ಧಿಯೆ ಸಾಕ್ಷಿಯು ದೇವಾನಾನಿನಿತು ದೋಯಾದಡದೇನು ದೋಗಳನೀನೈಸೆ ರಕ್ಷಿಸುವನು ದೇವಾಭಾನುವಿನ ಮುಂಭಾಗದಲಿ ತಿಮಿರ ತಾ ನಿಂದುಏನಾಗಬಲ್ಲುದೈ ದೇವಾದೀನತನವಳಿವಂತೆ ಜ್ಞಾನವನು ಬಳಿಕಿತ್ತುಆನತನ ನೀ ರಕ್ಷಿಸು ದೇವಾ 5ಕಾಲ ಬಂದರೆ ಮೋಕ್ಷ ತಾನೆ ದೊರಕುವದೆಂದುಮೇಲಾಗಿ ಶ್ರುತಿ ನುಡಿಯಲು ದೇವಾಕಾಲವೆಂಬೀ ನದಿಗೆ ಕಡೆುಲ್ಲ ಮೋಕ್ಷಕ್ಕೆಕಾಲ ತಾ ಬಹು ದೂರವು ದೇವಾಕಾಲಕರ್ಮಗಳೆಂಬ ನೇಮವನೆ ದೃಢವಿಡಿಯೆಕಾಲವೇ ಕಲ್ಪಿತವದು ದೇವಾಲೀಲೆುಂ ನಿರ್ಮಿಸಿದ ಸಂಸಾರ ಭಂಜನೆಗೆಕಾಲವದು ನಿನ್ನ ಕೃಪೆಯು ದೇವಾ 6ನನ್ನ ನಂಬಿದವರ್ಗೆ ಸಂಸಾರಗೋಷ್ಪದವುಚೆನ್ನಾಗಿ ನಂಬಿಯೆಂದು ದೇವಾನಿನ್ನ ನುಡಿುಂದ ಗೀತೆಯಲಂದು ಬೋಧಿಸಿದೆಧನ್ಯನಾದನು ಪಾರ್ಥನು ದೇವಾಉನ್ನತದ ಯೋಗಾದಿ ಸಾಧನದಿ ಪರಿಹರವೆನಿನ್ನ ಕೃಪೆಯೇ ಮುಖ್ಯವು ದೇವಾನಿನ್ನ ನಂಬಿದೆನು ತಿರುಪತಿಯ ವೆಂಕಟರಮಣಧನ್ಯ ಧನ್ಯನು ಧನ್ಯನೂ ದೇವಾ 7ಕಂ|| ಬುಧವಾರದರ್ಚನೆಯನಿದಮುದದಿಂ ಸ್ವೀಕರಿಸಿ ನನ್ನ ಮೊರೆಯಂ ಕೇಳ್ದಾಬುಧ ಸಂಗವನಿತ್ತು ನಿನ್ನಪದಸೇವಕನೆನಿಪುದೆಂದು ವೆಂಕಟರಮಣಾಓಂ ಕಾಳೀಯ ಫಣಾಮಾಣಿಕ್ಯರಂಜಿತ ಶ್ರೀಪದಾಂಬುಜಾಯ ನಮಃ
--------------
ತಿಮ್ಮಪ್ಪದಾಸರು
ಶ್ರೀ ಪಾದರಾಜರ ಶ್ರೀ ಪಾದಾರ್ಚನೆ ಮಾಳ್ಪ- ರೀ ಪೃಥುವಿಯೊಳು ಧನ್ಯರು ಪ ಗೋಪಿನಾಥ ಪದಾಬ್ಜ ಮಧುಪ ದ- ಯಾ ಪಯೋನಿಧಿ ಸುಜನರಂತಃ- ಸ್ತಾಪಹಾರಕ ಗೋಪ ಸಕಲ ಕ- ಲಾಪವಿದ ತಾಪತ್ರಯಾಪಹ ಅ.ಪ. ಊರೆಲ್ಲಿ ತೋರೆಷ್ಟು ದೂರದಲ್ಲಿಹುದೆಂದು ಹೀರ ವರ್ಣರು ಬಂದು ಕೇಳಲು ತೋರಿ ತುರುಗಳ ಗತಿಯ ಸೂರ್ಯನ ತೋರಿ ತಮ್ಮಯ ಪೋರ ವಯಸನು ಸೂರಿಗಳೇ ನೀವರಿಯರೆನ್ನುತ ಚಾರು ಉತ್ತರವಿತ್ತ ಧೀರರ 1 ಭೂದೇವನನು ಕೊಂದು ಬಾಧೆಗಾರದೆ ನೃಪ ತಾ ದೈನ್ಯದಲಿ ನಿಂದು ಬೇಡಲು ಪಾದ ಪದ್ಮಾ- ರಾಧನೆಯ ತೀರ್ಥವನು ಪ್ರೋಕ್ಷಿಸಿ ಆದರದಲೀಕ್ಷಿಸುತ ಭೂಪನ ಕಾದ ಕಾಂಚನದಂತೆ ಮಾಡಿದ 2 ಶಂಕಿಸಿ ದ್ವಿಜವೃಂದ ಆತಂಕಗೊಳ್ಳುತಲಿರೆ ಮಂಕುಗಳಾ ಡೊಂಕು ತಿದ್ದಲು ಬಿಂಕದಲಿ ತರಿಸಿ ಗೇರೆಣ್ಣೆ ಪಂಕದೊಳಗದ್ದಿರುವ ವಸ್ತ್ರಕೆ ಕಲುಷ ಹಾರಿಸಿ ಕಿಂಕರ ಮನಶಂಕೆ ಬಿಡಿಸಿದ 3 ಹರಿಗರ್ಪಿಸಿದ ನಾನಾ ಪರಿಯ ಶಾಖವ ಭುಂಜಿಸೆ ನರರು ತಾವರಿಯದೆ ಜರಿಯುತ್ತಿರೆ ಹರುಷದಿಂದಲಿ ಹಸಿಯ ವಸ್ತುಗ- ಳಿರವ ತೋರಿಸಿ ಮರುಳ ನೀಗಿಸಿ ಶರಣು ಶರಣೆನಲವರ ಪಾಲಿಸಿ ಮೆರೆದ ಬಹು ಗಂಭೀರ ಗುರುವರ 4 ಘೋರಾರಣ್ಯದಿ ದಿವ್ಯ ಕಾಸಾರ ನಿರ್ಮಿಸಿ ನಾರಸಿಂಹನ ನೆಲಸಿ ಊರು ಮಂದಿಯು ನೋಡುತಿರಲಾ- ವಾರಿ ಮಧ್ಯದಿ ಬಂದ ಗಂಗೆಗೆ ಸೀರೆ ಕುಪ್ಪಸ ಬಾಗಿನಂಗಳ ಧಾರೆಯೆರೆದಪಾರ ಮಹಿಮರ 5 ಫಣಿ ಬಂಧ ನಿವಾರಿಸಿ ಭಾಷಿಸಿ ಫಣಿಪನ್ನ ತೋಷಿಸಿ ಕಾಶಿ ಗಯಾ ಶ್ರೀ ಮುಷ್ಣದ್ವಾರಕ ಶೇಷಗಿರಿ ಮೊದಲಾದ ಪುಣ್ಯ ಪ್ರ- ದೇಶಗಳ ಸಂಚರಿಸಿ ಭಕ್ತರ ದೋಷರಾಶಿಯ ನಾಶಗೈಸಿದ 6 ಕಸ್ತೂರಿತಿಲಕ ಶ್ರೀಗಂಧ ಲೇಪನದಿಂದ ನಿತ್ಯ ಮಹೋತ್ಸವಗೊಳುತ ಮುತ್ತಿನಂಗಿಯ ಮೇಲ್ಕುಲಾವಿಯು ರತ್ನ ಕೆತ್ತಿದ ಕರ್ಣಕುಂಡಲ ಬಿತ್ತರದಿ ಧರಿಸುತ್ತ ರಥವನು ಹತ್ತಿ ಬರುತಿಹ ಸ್ತುತ್ಯ ಬಿರುದಿನ 7 ಆರ ಬೃಂದಾವನ ಸೇವೆಯ ಮಾಡಲು ಕ್ರೂರ ಭೂತಗಳೆಲ್ಲ ದೂರವು ಆರ ಬೃಂದಾವನದ ಮೃತ್ತಿಕೆ ನೀರು ಕುಡಿಯಲು ಘೋರಕ್ಷಯ ಅಪ- ಸ್ಮಾರ ಗುಲ್ಮಾದಿಗಳ ಉಪಟಳ ಹಾರಿ ಪೋಪುದು ಆ ಮುನೀಶ್ವರ 8 ಪರವಾದಿಗಳ ಬೆನ್ನುಮುರಿವ ವಜ್ರದ ಡಾಣೆ ಶರಣ ರಕ್ಷಾ ಮಣಿಯೆ ದುರಿತ ತಿಮಿರಕೆ ಮೆರೆವ ದಿನಮಣಿ ಎನಿಸಿ ಪೂರ್ವ ಕವಾಟ ನಾಮಕ ಪುರದ ನರಕೇಸರಿ ಕ್ಷೇತ್ರದಿ ಸ್ಥಿರದಿ ಶ್ರೀ ಕಾಂತನನು ಭಜಿಸುವ 9
--------------
ಲಕ್ಷ್ಮೀನಾರಯಣರಾಯರು
ನಿನ್ನ ಧ್ಯಾನ ಶುಭಮೂಹೂರ್ತ ನಿನ್ನ ಭಜನ ಶುಭದಿನವು ಪನಿನ್ನ ನಾಮ ಜಯಕಾರವು ನಿನ್ನ ಸ್ಮರಣ ಶುಭತಿಥಿಯುನಿನ್ನ ಸ್ತುತಿಯೆ ಶುಭಕಾಲ ಅನ್ಯ ಎಲ್ಲಪುಸಿಮಾಧವದೇವಅಪನಿತ್ಯನಿರುಪಮ ನಿನ್ನ ನಿತ್ಯದಲ್ಲಿ ಪೊಗಳುವುದೆಉತ್ತಮ ಶುಭವಾರವುಚಿತ್ತಜಪಿತ ನಿನ್ನ ಚಿತ್ತದಲಿ ನೆನೆಯುವುದೆಅತ್ಯಧಿಕ ಪಕ್ಷಮಾಸವುಮೃತ್ಯುದೂರನೆ ನಿನ್ನ ಸತ್ಕಥೆಯನಾಲಿಪುದೆ ನಕ್ಷತ್ರ ಶುಭಕರಣವುಭಕ್ತವತ್ಸಲ ನಿನ್ನ ಭಕ್ತಿಯಿಂ ಪಾಡುವುದೆನಿತ್ಯಅಮೃತಯೋಗವು ನಿಜವು1ದಿವನಿಶೆಯ ಇಡದೊಂದೆಸವನೆ ನಿನ್ನರಸುವುದೆರವಿಚಂದ್ರ ಭೌಮ್ಯ ಒಲವುಭವಪರಿಹರ ಸಿರಿಧವ ನಿನ್ನ ಸಚ್ಚರಿತಕವಿಗುರುಸೌಮ್ಯ ಬಲವುಬುವಿಯರಸ ನಿನ್ನಸಮ ಸುವಿಲಾಸ ಲೀಲೆ ಕೇಳಾವುದಮಿತ ಶನಿಬಲವುಭುವಿಜಪತಿ ಭಕ್ತಿಯ ಭವಭವದಿ ರಾಹುಕೇತುನವಗ್ರಹಂಗಳ ಬಲವು ಗೆಲವು 2ಕರಿಧ್ರುವರ ಪೊರೆದ ತವಪರಮ ಬಿರುದುಗಳನ್ನುಸ್ಮರಿಸುವುದೆ ಭವದೂರವುಹರದಿಗಕ್ಷಯವಿತ್ತ ವರದ ನಿನ್ನಡಿ ದೃಢವುಸ್ಥಿರಶಾಂತಿ ಸುಖಸಾರವುಸುರಗಣಕೆ ಸೌಖ್ಯವನು ಕರುಣಿಸಿದ ನಿಮ್ಮ ಮೊರೆಪರಲೋಕ ನಿಜಸ್ವಾದವುವರದ ಶ್ರೀರಾಮ ನಿಮ್ಮ ಚರಣದಾಸತ್ವದೆವರಮುಕ್ತಿ ಕೈಸಾಧ್ಯವು ಸ್ಥಿರವು 3
--------------
ರಾಮದಾಸರು
ನೋಡುವ ಬನ್ನಿರಯ್ಯ ಪಕಾವೇರಿಯ ಭವಹಾರಿಯ |ಮುಕ್ತಿಕಾರಿಯ ನೋಡುವ ಬನ್ನಿರಯ್ಯ ಅ.ಪಮಾತೆಯ ನುತಜನಜಾತೆಯ ಹರಿಮನಃ |ಪ್ರೀತೆಯ ಭುವನವಿಖ್ಯಾತೆಯ ||ನೀತಿಯುನ್ನತಕರದಾತೆಯ ಶಿವನ ಸಂ-|ಭೂತೆಯ ನೋಡುವ ಬನ್ನಿರಯ್ಯ 1ಬಂದು ಸಕಲ ಮುನಿವೃಂದ ನೆರರೆಯೆ ವಿೂಯ-|ಲಂದು ನಾರದಮುನಿ ಪೊಗಳುತಿರೆ ||ಸಂದೇಹವಿಲ್ಲ ನೋಡಿದಡೆ ಮುಕುತಿಯಹು-|ದೆಂದರೆ ಮುಳುಗಲದೇತಕಯ್ಯ? 2ಅರ್ಕಚಂದ್ರವಹ್ನಿಪುಷ್ಕರದೊಳು ಮಿಂದು |ಚಕ್ರತೀರ್ಥದೊಳಗೋಲಾಡಿ ||ಗಕ್ಕನೆ ಸದ್ಗತಿಯಹುದೆಂದು ಮನೆಗಳ |ಕಕ್ಕುಲತೆಯ ಬಿಟ್ಟು ನಡೆಯಿರಯ್ಯ 3ಕಂಡರೆ ಸಕಲಪಾತಕಪರಿಹಾರ, ಪಡೆ-|ದುಂಡರೆ ದುರಿತ-ದುರ್ಜನ ದೂರವು ||ಕೊಂಡಾಡಿದವರಿಗನಂತ ಫಲವು ನೀ-|ರುಂಡರೆ ಭವಬಂಧ ಮೋಕ್ಷವಯ್ಯ 4ಗಂಗೆ-ಯಮುನೆಗೆ ಹೋದಡೆ ಮೂರೈದುದಿ-|ನಂಗಳಿಗಹುದು ಮುಕುತಿಯೆಂದಡೆ ||ಹಿಂಗದೆ ಕಾವೇರಿಯ ನೋಡಿದಾಕ್ಷಣ ಪಾ-|ಪಂಗಳಿರದೋಡಿ ಪೋಪುವಯ್ಯ 5ಯಾಗಾದಿ ಸ್ವರ್ಗಯೋಗದಿ ಪೊಕ್ಕು ಕಾಶಿಯೊಳು |ಆಗಲೆ ತನುವ ಬಿಡಲು ಮುಕುತಿ |ಭೋಗಿಶಯನನ ದಿನದಲಿ ಕಾವೇರಿಗೆ |ಹೋಗಿ ಮಿಂದವರಿಗಿದೇ ಗತಿಯಯ್ಯ 6ಕಾವೇರಿಯ ಗಾಳಿ ಸೋಕಿದ ದೇಶದೊ-ಳಾವಾವ ಮನುಜರು ಸುಕೃತಿಗಳೇ ||ಕಾವೇರಿಯ ತೀರವಾಸಿಗಳಿಗೆ ಮಕ್ತಿಆಹೋದು ಸಂದೇಃವಿಲ್ಲವಯ್ಯ 7ಆವಾವ ಜನ್ಮಕರ್ಮಂಗಳು ಸವೆವರೆಕಾವೇರಿಯ ಕಾಡು ಸುಖಬಾಳಿರೈ ||ಶ್ರೀವರ ಸ್ವಾಮಿ ಶ್ರೀಪುರಂದರವಿಠಲನಸೇವೆಯೊಳನುದಿನವಿಪ್ಪುದಯ್ಯ 8
--------------
ಪುರಂದರದಾಸರು
ಶ್ರೀ ವಿಷ್ಣುಮಹಿಮೆ ಸಂಕೀರ್ತನೆ ಸರ್ವದಾ ವಿಸ್ಮøತಿಯನೀಗಿಮಾಡಿ ವೈಷ್ಣವರುಪ.ಪುಣ್ಯಮಾರ್ಗವನರಿಯದ ಮೂಢರಿಗೆಉನ್ನತಕುಟಿಲಪಾಮರಮನುಜರಿಗೆಘನ್ನ ಸಾಧನವಿದೆ ಮತ್ತೊಂದು ಕಾಣೆಪುಣ್ಯಶ್ಲೋಕನ ವಾರ್ತೆ ಕೀರ್ತನೆಯ ಪಠನೆ 1ಜನ್ಮ ಮರಣವಿಲ್ಲ ಅವ ಜೀವನ್ಮುಕ್ತಧನ್ಯ ವಿಶುದ್ಧಾತ್ಮ ನಿಜ ಹರಿಭಕ್ತಚಿನ್ಮಯಾಚ್ಯುತನ ಚಾರಿತ್ರ್ಯವಿಸ್ತರವವರ್ಣವರ್ಣಂಗಳಿಂದೆ ಪಾಡಿ ನಲಿಯುತ 2ಧರ್ಮ ಸುಮಾರ್ಗವರ್ಜಿತ ಕಲಿಯುಗದಿನಿರ್ಮಲಮನ ಹೊಂದಲೀಸದ ಭವದಿಧರ್ಮಪ್ರಭು ಶ್ರೀ ಹರಿಗುಣಕೀರ್ತನೆಉಮ್ಮಯದಲಿ ಮಾಡುವುದು ಹರಿಪ್ರಾರ್ಥನೆ 3ನಿರುತ ವಿಶುದ್ಧಾಂತರಾತ್ಮ ಶ್ರೀಹರಿಗೆಗುರುಸುಖತೀರ್ಥರ ತೀರ್ಥಜೀವರಿಗೆಹರಿಹರಿಹರಿಎಂದು ಕೂಗಿ ಬಾಳ್ವರಿಗೆ4ಅಘೋರ ಯಮಮಾರ್ಗ ನರಕ ಶ್ರೀಮದ್ಗರುಡಧ್ವಜ ನಾರಾಯಣಾಪವರ್ಗರಾಮ ರಾಮ ರಾಮ ರಾಮ ರಾಮನೆಂಬನಾಮಪಾಠಕರಿಗೆ ಸ್ವಪ್ನದಿ ವಜ್ರ್ಯ 5ಹೃದಯದಿ ಹರಿರೂಪ ಮುಖದಿ ಸದ್ಗಾನಉದರದಿ ನೈವೇದ್ಯ ಶಿರದಿ ನಿರ್ಮಾಲ್ಯಸುದರ್ಶನಶಂಖಾಂಕಿತ ಭುಜದವರಿಗೆಪದ್ಮನಾಭನ ನಾಮಕೀರ್ತನೆಕೈವಲ್ಯ6ಶತಕೋಟಿ ರಾಮಾಯಣ ಕೀರ್ತನೆ ಹನುಮಂತಯತಿ ಶುಕಾಚಾರ್ಯ ಭಾಗವತಶಾಸ್ತ್ರಸತತ ನಾರದದೇವ ಮುನಿತತಿ ನೃಪರೆಲ್ಲರತಿಪತಿಪಿತನ ಪೊಗಳಿ ಮುಕ್ತಾಗಿಹರು 7ಕಲಿಕಾಲದಲಿ ಕೇಶವಗೆ ಪ್ರಿಯ ಕೀರ್ತನೆಲಲಿತಸಾಧನವೆನಿಪುದೀ ಕೀರ್ತನೆಬಲುಶ್ರುತಿಮಥಿತಾರ್ಥಸಾರವೆ ಕೀರ್ತನೆಹುಲುಮಾನವರಿಗೆ ದೂರವು ಹರಿಕೀರ್ತನೆ 8ಭವರೋಗಭೇಷಜಹರಿನಾಮಕೀರ್ತನೆಭವವಾರ್ಧಿಪೋತ ಭವಾಟವಾಗ್ನಿಭವವಿಧಿಕೀರ್ತಿತಪದ ಪ್ರಸನ್ವೆಂಕಟಭವನದಾಸರು ಸವಿದುಂಬಾಮೃತವು 9
--------------
ಪ್ರಸನ್ನವೆಂಕಟದಾಸರು