ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅ ಕೇಳ್ ಕೇಳೆಲೊ ತತ್ವಜ್ಞಾನ ನಿನಗೆ ಬೋಧಿಸುವೆ ನಾ ಪ ವಾಹನ ನಾಟಕ ದರುಶನ ಹೋಟಲೊಳಗೆ ಸುಭೋಜನ ಇದೇ ಪೀಯೂಷಪಾನ 1 ವೇಶ್ಯಾಲಯ ಪ್ರವೇಶಿಸುವದೆ ಘುನ ಭಂಜನ 2 ಹರಿದಿನ ಮರುದಿನ ಇರುಳು ಹಗಲು ಉಂಬನ ನರನ ಜನ್ಮವೆ ಬಲು ಪಾವನ ಮಹಾಪಾಪನಾಶನ 3 ಸೋಪುಲೇಪನ ಕ್ರಾಫು ಬಿಡೋಣ ನಾಪಿತ ಕಾರ್ಯ ಕೈಗೊಳ್ಳೋಣ | ಇದೆ ವೇದಾಧ್ಯಯನ 4 ಸೋಡಾ ಪಾನ ಬೀಡಿ ಸೇದೋಣ ಭಂಜನ 5 ಕುಲದಭಿಮಾನ ಕಳೆದನುದಿನ ನಳದೊಳಗಿನ ಜಲಸ್ನಾನ ಮಹಕಲುಷ ನಾಶನ 6 ಈ ಕಲಿ ಬೋಧೆ ನಿರಾಕರಿಸುವವರಿಗೆ ಶ್ರೀಕರಶ್ಯಾಮಸುಂದರನ ದಿವ್ಯಾನಂದ ಭವನ 7
--------------
ಶಾಮಸುಂದರ ವಿಠಲ
ನೀನೇ ದಯಾಸಂಪನ್ನ ಭಕ್ತ ಪ್ರಸನ್ನಾ ಪ ಕಂದನಿನ್ನಯ ದಿವ್ಯಾನಂದ ಮೂರುತಿಯ ನಾ ಕುಂದದೇ ಭಜಿಸಲು ಮರುಗಿ ಬೇಗಾ ಇಂದಿರೇ ಅಜಭವರೆಂದೂ ಕಾಣದ ನಿಜ ವೆಂದೆಂಬೋ ರಾಜ್ಯದೊಳಿದ್ದ ಕಾರಣದಿಂದ 1 ಹರಿಸರ್ವೋತ್ತಮನೆಂದು ಪಿತನಾಜ್ಞೆಯ ಮೀರಲು ಹರಿರೂಪತಾಳ್ದು ದೈತ್ಯನ ಶಿರವಾ ಹರಿದು ಬಾಲನನೆತ್ತಿ ಸಲಹಿದ ಬಗೆಯಿಂದ ಕರುಣಾಕರನೆಂದು ಶ್ರುತಿಯು ಪೇಳುತ್ತಿರಲೂ 2 ಪಾತಕದಿಂದ ಗೌತಮಸತಿ ಶಿಲೆಯಾಗೆ ಭೂತಳದೊಳು ಪರಬೊಮ್ಮನೆಂಬೋ ಸೀತಾರಾಮಾವತಾರರಿಂದ ಸೌಂದರ್ಯ ನೂತನಪದ ಸೋಕಲು ನಿಜಸತಿಯಾದಳೋ 3 ಗುರುತನೂಜನ ಮಂತ್ರಶಕ್ತಿ ವೇದನೆ ತಡೆದೆ ಹರಿಯೆಂದು ಕರೆದ ಉತ್ತರೆಗೆ ಬೇಗಾ ವರಚಕ್ರವನು ಮರೆಮಾಡಿ ಪರೀಕ್ಷಿತನ ಪೊರೆಯೆ ತ್ರಿಜಗದೊಳು ಕೀರ್ತಿಯಾಹುದರಿಂದ 4 ಹರನಿಂದ ಉರಿಯ ಹಸ್ತವ ಪಡೆದು ಭಸ್ಮಾ ಸುರನು ಫಾಲಕ್ಷನ ಖತಿಗೊಳಿಸೆ ಸಿರಿವೇಲಾಪುರ ಚನ್ನಕೇಶವನಾವೇಶದಿಂ ಪರಿದಸುರನ ಕೊಂದು ಸ್ಥಿರವಾದಕಾರಣ 5
--------------
ಬೇಲೂರು ವೈಕುಂಠದಾಸರು
ಮಂಗಳಂ ಮಂಗಳಂ ದಯಾನಿಧೆಮಂಗಳಂ ಮಂಗಳಂ ಪ. ದೇವ ದೇವೇಶ ದೇಹಿ ಕಲ್ಯಾಣಂಶ್ರೀವರ ಶ್ರಿಂಗರ ಶ್ರೀ ಶ್ರೀನಿವಾಸ 1 ನಂದನಂದನ ದಿವ್ಯಾನಂದ ಸುತೇಜಇಂದಿವರಾಕ್ಷ ಮುಕುಂದ ಮುರಾರೆ 2 ರಾಜರಾಜಿತ ಗೋಪಾಲವಿಠಲ ಮಹಾ ರಾಜ ಭೋಜ ಕಲ್ಪರಾಜ ಸುತೇಜ 3
--------------
ಗೋಪಾಲದಾಸರು