ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾ ರಮಣ ಗೋವಿಂದನಾ ಜ್ಞೆಯ ಪಡೆದು ಬಂದಿರುವ ದಾಸರಿವರು ಪ ಇಂದು ಧರ್ಮದಿ ಹರಿಯ ಬಾಂಧವರ ಗೃಹ ಸ್ವರ್ಣ ಮಂದಿರವಾಗುವುದೆಂದು ಸಂದೇಶ ಕಳಿಸಿರುವ ಅ.ಪ ಸತ್ವ ರಜ ತಮ ಭೇದವಿಹುದು ದಾನಗಳಲ್ಲಿ ಕರ್ತವ್ಯವೆಂದರಿತು ಭಕ್ತಿಯಿಂದ ಉತ್ತಮೋತ್ತಮ ದೇಶ ಪಾತ್ರ ಕಾಲಗಳರಿತು ಪ್ರತ್ಯುಪಕೃತಿಯ ಗಣಿಸದಿತ್ತ ದಾನವೇ ಶ್ರೇಷ್ಠ 1 ಶ್ರಾವಣದ ಶನಿವಾರ ಶ್ರೀ ವ್ಯಾಸರಾಜರ ಮಾಧವ ದೇಶಕಾಲ ಪಾತ್ರ ಈ ವಿಧದ ಯೋಗವಿನ್ಯಾವ ಜನಗಳಿಗುಂಟು ನೀವು ನೀಡುವ ದಾನ ಕಾವುದಾಪತ್ತಿನಲಿ 2 ಒಂದು ಹಿಡಿಯವಲಕ್ಕಿ ತಂದಿತಾ ಬ್ರಾಹ್ಮಣಗೆ ಎಂದೂ ಕೇಳದ ಸಕಲ ಸೌಭಾಗ್ಯವ ಇಂದು ನೀಡಿರಿ ಮಿತ್ರ ಬಾಂಧವರೆ ದೇವಕಿಯ ಕಂದನ ಪ್ರಸನ್ನತೆಯ ಬಂದು ಪಡೆಯಲಿಬಹುದು 3
--------------
ವಿದ್ಯಾಪ್ರಸನ್ನತೀರ್ಥರು
ಹರಿಸರ್ವೋತ್ತಮನೆಂದರಸುವರು ಪ ಹರಿದಾಸರಿವರು ಧರೆಯೊಳಿವರಿಗೆ ಸರಿಗಾಣೆ ಕೇಳಮ್ಮ ಜಾಣೆ ಅ.ಪ ಸಾಧುಸಜ್ಜನರಿಗೆ ಬಾಗುವರು ವೇದಕೆ ನಮಿಸುವರು ವಾದವಾಂಛಲ್ಯವ ತೊಡದಿಹ್ಯರು ಭೇದಿಲ್ಲದಿವರು 1 ಕಾಮ ಕ್ರೋಧಾದಿಗಳು ಜೈಸಿಹ್ಯರು ತಾಮಸಬಿಟ್ಟಿಹರು ಭೂಮಿ ಮೋಹಾದಿಗಳನಳಿದಿಹ್ಯರು ಸ್ವಾಮಿನ ಭಜಿಸುವರು 2 ಕ್ಲೇಶಪಂಚಕದಿಂದುಳಿದಿಹ್ಯರು ಮೋಸಕೆ ಒಳಪಡರು ಅಶಪಾಶಗಳೆಲ್ಲ ತುಳಿದಿಹ್ಯರು ವಾಸನೆ ತೊಳೆದಿಹ್ಯರು 3 ಮೆಚ್ಚದೆ ಸಂಸಾರ ತುಚ್ಛೀಕರಿಸಿಹ್ಯರು ಎಚ್ಚರಗೊಂಡಿಹ್ಯರು ಅಚ್ಚುತಾನಂತನೆ ಗತಿಯೆಂಬುವರು ಬಚ್ಚಿಟ್ಟು ನೆನೆಯುವರು 4 ಹರಿಯೆ ಪರದೈವವೆಂದರಿತಿಹ್ಯರು ಹರಿಯ್ಹೊರತಿಲ್ಲೆಂಬುವರು ಸರುವ ಜಗಭರಿತನೆಂದವರು ಸಿರಿರಾಮನ್ನ ತಿಳಿದಿಹ್ಯರು 5
--------------
ರಾಮದಾಸರು