ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟೆಂದು ಬಣ್ಣಿಪೆ ಗುರುಸತ್ಯಪೂರ್ಣನದೃಷ್ಟಾಂತವ ಕಾಣೆನಾಶಿಷ್ಟ ಜನರಿಗೆ ಚಿಂತಾಮಣಿ ದೊರಕಿದಂತಿಷ್ಟಾರ್ಥದಾಯಕನಾ ಪ.ಶ್ರೀರಾಮ ವ್ಯಾಸರ ಸೇವೆಗೆ ಪೂರ್ವದಲ್ಲಾರಾಧನೆ ಮಾಡುತಧಾರುಣಿ ಮೇಲವತರಿಸಿದ ದ್ವಿಜಕುಲವಾರಿಧಿಚಂದ್ರನಂತೆ1ವೇದ ವೇದಾಂತ ಸಕಳಶಾಸ್ತ್ರಕ್ಷಿಪ್ರದಿಂದೋದಿ ಶ್ರೀ ಮಧ್ವಶಾಸ್ತ್ರಬೋಧವಕೇಳಿಮಹಾಭಕುತಿಲಿಗುರುಪಾದಾಬ್ಜ ನಂಬಿ ನಿಂತ 2ಬ್ರಹ್ಮಚರ್ಯಾಶ್ರಮ ಮೊದಲಾಗಿ ದಿನ ದಿನನಿರ್ಮಲ ಕಳೆಯನಾಂತಉಮ್ಮಯದಿಂದ ಷಟ್ಕರ್ಮಸಾಧನವಾದದsÀರ್ಮದ ದಾರಿಲಿ ನಿಂತ 3ತಾಯಿ ಮಕ್ಕಳ ಸಾಕಿದಂತೆ ಗುರುಕೃಪಾಪೀಯೂಷವನುಂಡು ತಾಬಾಯೆಂದು ಕರೆಸಿಕೊಂಡಖಿಳಾರ್ಥ ಪಡೆದ ನಿಷ್ಕಾಯನ ತೇಜವಂತ 4ನಿತ್ಯದಿ ಕರ್ಮಕೆ ಕುಂದಾಗಲಿಲ್ಲಗ್ನಿಹೋತ್ರ ಸಹಿತ ಸುವಾನಪ್ರಸ್ಥನಾಗಿ ಭೋಗಾಸಕ್ತಿಯ ತೊರೆದ ವಿರಕ್ತಿಭಾಗ್ಯಾನ್ವಿತನ5ಬಣ್ಣವಿಟ್ಟಿಹ ಚೊಕ್ಕ ಚಿನ್ನನೊ ಅಭ್ರಗೆದ್ಹುಣ್ಣಿಮೆ ಚಂದ್ರಮನೊಉನ್ನತಗುರು ಸತ್ಯಾಭಿನವ ತೀರ್ಥರಪುಣ್ಯವೆ ನೀನೊ ಯತಿರನ್ನನೊ 6ಹೀಗೆಂದು ಸುಜನರು ಹೊಗಳಲು ಶ್ರೀಪಾದಯೋಗಿತಾನೆನಿಸಿದನುಮ್ಯಾಗೆ ಮ್ಯಾಗದ್ಭುತ ಪಾಂಡಿತ್ಯವೆಂಬ ವಲ್ಲಿಗೆ ಹಬ್ಬುಗೆನಿತ್ತನು 7ಗುರುಗಳಭೀಷ್ಟೆ ಪೂರೈಸಿತು ಶ್ರೀರಘುವರನ ಮೂರ್ಧನಿಯಲಿಟ್ಟುಸ್ಥಿರ ಪಟ್ಟಾಭಿಷೇಕವಾಂಗೀಕರಿಸಿ ಜಗದ್ಗುರುವೆ ತಾನಾದಕರ್ತ8ದಿವ್ಯ ನಾಚಾರ ಕ್ಷೇತ್ರದಿ ಹರಿಸ್ಮರಣಿಂದಹವ್ಯಸಾಂಕಿತ ಗುರುಗಳುಆ ವ್ಯಯಾಬ್ದ ಜ್ಯೇಷ್ಠಾಧಿಕ ಶುದ್ಧ ಚತುರ್ದಶಿದಿವಸ ದಿವಿಗೆ ಸಾಗಲು 9ಹರಿಪಾದಯಾತ್ರೆಗೆ ಗುರುಗಳೈದಿದÀ ಮೇಲೆಪರಮದುಃಖಿತಮೌಳಿತ್ವರಿಯದಿ ವೃಂದಾವನ ವಿರಚಿಸಿದ ಮುನಿವರನ ಮಹಿಮೆಯಕೇಳಿ10ಪೃಥ್ವಿಪರಿಂದ ಪೂಜಿಸಿಕೊಂಡುದುರ್ವಾದಿಮೊತ್ತವ ಗೆಲುತಲಿಹಅರ್ಥಿಲಿ ಜಯಪತ್ರವನು ಜಯಿಸುತಗುರುಚಿತ್ತಕರ್ಪಿಸುತಲಿಹ 11ನಿಜಗುರುದಯದಿಂದ ದುರಿತತಮವ ಗೆದ್ದಂಬುಜ ಸಖನಂತೊಪ್ಪುವತ್ರಿಜಗವಂದಿತರಾದ ವೇದ ವ್ಯಾಸಾಂಘ್ರಿಯಭಜನ ಭಾಗ್ಯದೊಳೊಪ್ಪುವ 12ಧ್ಯಾನ ಮೌನ ಸದ್ವ್ಯಾಖ್ಯಾನ ಪೂರ್ಣನುಜ್ಞಾನ ಭಕುತಿಪೂರ್ಣನುಏನೆಂಬುವಿರೊ ಕರುಣಗುಣ ಪೂರ್ಣನುದಾನ ಮುದ್ರಾಪೂರ್ಣನು 13ಗುರುಸತ್ಯಾಭಿನವ ತೀರ್ಥರ ಸತ್ಯಪೂರ್ಣನು*ವರದರಾಜಯತಿಯೊಳು ದಯಾಪೂರ್ಣನುಸರಸೋಕ್ತಿ ಪರಿಪೂರ್ಣನು 14ತಂದೆ ಸತ್ಯಾಭಿನವಾಂಬುಧಿಜಾತ ತತ್ವಾರ್ಥವೃಂದರುಚಿರ ಪೂರ್ಣನುಎಂದು ಪ್ರಸನ್ವೆಂಕಟ ಪ್ರಿಯಾನಿಲಮತಸಿದ್ಗಾಂತದಿ ಪೂರ್ಣನು 15
--------------
ಪ್ರಸನ್ನವೆಂಕಟದಾಸರು
ಒಗತನದೊಳು ಸುಖವಿಲ್ಲ ಒಲ್ಲೆಂದರೆ ನೀ ಬಿಡೆಯಲ್ಲಜಗದೊಳುಹಗರಣಮಿಗಿಲಾಯಿತು ಪನ್ನಂಗನಗನಗರ ನಿವಾಸಮೂರು ಬಣ್ಣಿಗೆಯ ಮನೆಗೆ ಮೂರೆರಡು ಭೂತಗಳುಐದುಮಂದಿ ಭಾವನವರು ಐದುಮೈದುನರು ಕೂಡಿಆರಾರು ಎರಡುಸಾವಿರ ದಾರಿಲಿ ಹೋಗಿ ಬರುವರುಒಬ್ಬ ಬೆಳಕು ಮಾಡುವ ಮತ್ತೊಬ್ಬ ಕತ್ತಲೆಗೈಸುವಆರುಹತ್ತರ ಮೂಲದಿ ಆರುಮಂದಿ ಬಿಡದೆ ಎನ್ನಹಡೆದ ತಾಯಿ ಮಾಯದಿ ಹಿಡಿದು ಬದುಕು ಮಾಡಿಸುವಳುಅತ್ತೆ ಅತ್ತಿಗೆಯು ಎನ್ನ ಸುತ್ತಮುತ್ತ ಕಾದುಕಟ್ಟಿಮನೆಯೊಳು ನಾಳಿನ ಗ್ರಾಸಕ್ಕನುಮಾನ ಸಂದೇಹವಿಲ್ಲನಿನ್ನ ಹೊಂದಿ ಇಷ್ಟು ಬವಣೆಯನ್ನು ಬಡಲೀ ಜನರು
--------------
ಗೋಪಾಲದಾಸರು
ಹರಿಯಲ್ಲದನ್ಯ ದೈವಂಗಳು ಕೈವಲ್ಯವೀವವೇನೈ ಶ್ರೀಹರಿಯ ಕರುಣಾಸಾಗರಕೆ ಕೂಪವಾಪಿಯು ಹೋಲ್ವವೇನೈ ಪ.ಹಳುವದ ಬಿದಿರಮೃತದ ಮಳೆಯಲಿ ಇಕ್ಷುವಹದೇನೈಹಲಕಾಲವರೆಯ ಬೇಯಿಸಿದರೆ ಮೃದುರುಚಿಯಹದೇನೈ 1ಕೆಸರು ಮಳಲು ಮೆದ್ದರೊಡಲಗ್ನಿ ತಣ್ಣಸವಹದೇನೈಬಿಸಿಲ ತೊರೆಗೆ ಮಂಜುವನಿಗೆ ಧಗೆಯತೃಷೆಹೋಹದೇನೈ2ಮಲಯಜಲೇಪಕೆ ಬಲವತ್ತರ ಭವತಾಪ ಶಾಂತವೇನೈಎಳೆಗರು ಮಣ್ಣಾವಿನ ಮೊಲೆಯುಂಡು ಜೀವಿಪುದೇನೈ 3ಹರಿಯೊಪ್ಪದಿರದಾ ಹಲವು ಧರ್ಮಕರ್ಮದ ಕಾರಣೇನೈಕರಿಯುಂಡ ಬೆಳವಲ ಹಣ್ಣಿನ ತಿಳಲೆಂದಿಗುಳಿವುದೇನೈ 4ಏಕೋ ನಾರಾಯಣ ಆಸೀತ್ ಹಾಗಂದಿಲ್ಲವೇನೈಸಾಕು ನ ಬ್ರಹ್ಮಾ ನ ಚ ಶಂಕರ:ಎಂಬೊ ಮಾತದೇನೈ 5ವಾಸುದೇವನ ಡಿಂಗರರಿಗೆ ಅಶುಭ ಹೊಂದಬಲ್ಲದೇನೈಕ್ಲೇಶಾಧಿಕವು ನೋಡಿ ಅವ್ಯಕ್ತಾಸಕ್ತರಿಗಲ್ಲವೇನೈ 6ಪ್ರಸನ್ನವೆಂಕಟಪತಿ ಅರ್ಚನೆದಾರಿಲಿ ಕಂಟಕೇನೈಹುಸಿಯಲ್ಲ ಧ್ರುವಬಲಿವಿಭೀಷಣರೆ ಸಾಕ್ಷಿ ನಂಬಿರಿನ್ನು7
--------------
ಪ್ರಸನ್ನವೆಂಕಟದಾಸರು