ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಟ್ಟೆಯಾ ಸ್ವಾಮಿ ಎನ್ನ ಬಿಟ್ಟೆಯಾ ಬಿಟ್ಟೆಯಾ ಎನ್ನ ಜೀಯ ವ್ಯರ್ಥ ಪ. ಕೊಟ್ಟೆಯಾ ದುರಿತದ ಕಯ್ಯ ಅಹ ಕಟ್ಟ ಕಡೆಗು ಕಾವ ನೀನೆಂದು ನಂಬಿಕೆ ಇಟ್ಟ ದಾಸನ ಇಂಥ ಬಟ್ಟೆಯೊಳಗೆ ದೂಡಿ ಅ.ಪ. ಅನ್ಯರಿಗಳುಕದ ಶೌರ್ಯ ಸ್ವಜನೋನ್ನತವಾದ ಗಾಂಭಿರ್ಯ ಜನ ಸನ್ನುತವಾಗಿಹುದಾರ್ಯ ನಿನ್ನ ಸನ್ನುತಿ ಗೃಹ ಚಾತುರ್ಯಗಳ ತನ್ನಂತೆ ಕರುಣಿಸಿ ತಾವಕನೆನಿಸಿರೆ ಕುನ್ನಿಯ ಮರಿಗಿಂತ ಕಡೆಮಾಡಿ ದಾರಿಯೊಳ್ 1 ತಲ್ಪದಿಂದೆದ್ದವಸರದಿ ಬೊಮ್ಮ- ಕಲ್ಪೇಶ ನೀನಿಟ್ಟ ಕ್ರಮದಿ ಸ್ವಲ್ಪ ಸ್ವಲ್ಪವಾದರು ಕವರ್i ನೆವದಿ ನಾನಾ ಕಲ್ಪ ಪೂಜೆಯಗೈದು ಮುದದಿ ಶೇಷ ಕಲ್ಪೇಶ ನಿನಗೆ ಸಮರ್ಪಿಸಿ ಬಾಳ್ದನ- ನಲ್ಪ ಜನರಿಗೆ ನಿತ್ಯಾಲ್ಪರಿವೊಲ್ಮಾಡಿ 2 ಬಂದ ಸಜ್ಜನರನು ನೋಡಿ ಮಾನ- ದಿಂದ ಕುಳ್ಳಿರಿಸಿ ಮಾತಾಡಿ ಮತ್ತೆ- ನ್ನಿಂದಾದ ಸತ್ಕಾರ ಮಾಡಿ ತಿಳಿ- ದಂದದಿ ನಿನ್ನನು ಪಾಡಿ ಇದೆ ಮುಂದೆ ತಾರಕವೆಂದಾ ನಂದಗೊಡಿರಲೆನ್ನ ಹಂದಿಯಂದದಿ ಮೂಲೆ ಹೊಂದಿಸಿ ಕೆಡ ಹಾಕಿ 3 ಸಂಧ್ಯಾದಿಗಳನೆಲ್ಲ ಬಿಟ್ಟು ಅನ್ನ ತಿಂದು ಬೀಳುವೆ ಲಜ್ಜೆಗೆಟ್ಟು ರೋಗ ಬಂಧಿತ ನರಗಳ ಕಟ್ಟು ಶೂಲ ದಂದದಿ ಬೀಳುವ ಪೆಟ್ಟು ಇನ್ನು ಮೋಚಿಸು ಹಾಗಾ- ದಂದ ಕಾಲಕೆ ಪದ ಹೊಂದಿಸಿಕೊಳದೆನ್ನ 4 ಮರೆಯಲಿಲ್ಲೆಂದಿಗೂ ನಿನ್ನವೆಂಬು- ದರಿಯೆಯ ಲೋಕಪಾವನ್ನ ಇನ್ನು ಕರುಣ ಬಾರದ್ಯಾಕೊ ರನ್ನ ಶೇಷ ನಿತ್ಯ ಪ್ರಸನ್ನ ಬಹು ಕರಗುತ ಕಣ್ಣೀರ ಸುರುವಿದ ಮಾತ ಮರೆವುದುಚಿತವಲ್ಲ ಪರಮ ದಯಾಂಬುಧಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಭಕ್ತಿ ಒಂದೇ ಸಾಕು ಸಜ್ಜನರಿಗೆ | ಕು ಯುಕ್ತಿಯಾತಕೆ ಹಲವು ಬಗೆ ಪ ಶಕ್ತರಾಗಿಹ ಅಧಿಕಾರಿಗಳಿಗೆ ಕು- ಯುಕ್ತಿ ಏತಕೆ ಹಲವು ಬಗೆ ಅ.ಪ ದೀನರು ನಾವೆಂದು ದಿನ ದಿನದೀ ನಾನು ಎಂಬುದು ಬಿಟ್ಟಿರುವವಗೆ 1 ಲೇಸಾದ ದಾರಿಯೊಳ್ ನಡಿಯುವರಿಗೆ2 ಹರುಷ ಶೋಕಗಳೊಂದೆ ಸಮನಾಗಿ ತಿಳಿದು ಪುರುಷ ಪ್ರಯತ್ನಗಳನು ಮೆರೆದು ಗುರುರಾಮವಿಠಲನ ಸ್ಮರಿಪರಿಗೆ 3
--------------
ಗುರುರಾಮವಿಠಲ
ಆರ ಮುಂಧೇಳಲಿ ಕರಕರಿಯ ಈ |ಪೋರನು ಕೊಡವಲ್ಲನಲ್ಲೇ ಸೀರೆಯ ಪದಾರಿಯೊಳ್ಹೋಗಿ ಬಹರ್ಯಾರೆನ್ನ ಕಂಡರೆ |ಊರೆಲ್ಲ ಹೋಗಿ ದೂರರೇನೆ1ಸಂತಿಗೆ ಹೋಗ್ಯಾಕೆ ನಿಂತರೆಂದುಡುಕುತ |ಕಾಂತನೇ ಬಂದರೇನಂತ ಹೇಳುವಾ 2ಬತ್ತಲಾರಾಗಿ ಜಲ ಮತ್ತೀಗ ಸೇರುವಾಗಿ |ಮೃತ್ಯು ಬಂದನಂಬುದರ್ತಿವೇನೆ 3ನೀರ ಹಾವುಗಳೆಲ್ಲ ಶರೀರವ ಸುತ್ತುತಿವೆ |ಗಾರಾದೆವಲ್ಲೆ ವಾರಿಜಾಸ್ಯೆ 4ಮುಳ್ಳು ತೆಪ್ಪವು ಮೋರೆಗೆಲ್ಲ ಮುಚ್ಚುತಲಿವೆ |ಖುಲ್ಲಪೋರಗೆ ದಯೆಯಿಲ್ಲವಲ್ಲೇ 5ಜಲ ಜಂತುಗಳೆಲ್ಲ ಗುಳು ಗುಳು ಮಾಡುತವೆ |ಜಲಜಾಕ್ಷಗ್ಯೇತಕೆ ತಿಳಿಯದಮ್ಮ 6ಮೀನಾಗಳಲ್ಲಿ ಹತ್ತಿ ಏನೇನೋ ಮಾಡುತವೆ |ಏಣಾಕ್ಷಿ ನಮಗೇ ಏನು ಬಂತೇ 7ಹಿಂದತ್ತ ಹೋದರೆ ಕಂಧರದುದ್ದ ನೀರು |ಮುಂದತ್ತ ಬರೆ ಎದೆಗಿಂದ ಕೆಳಗೆ 8ಏಡಿಗಳೆಲ್ಲ ಕಾಲು ನೋಡಿ ಕಚ್ಚುತಲಿವೆ |ಮಾಡಲಿನೆ ಮೋರೆ ಬಾಡಿತಲ್ಲೆ 9ಮೂಗುತಿ ಮಣಿಯೆಲ್ಲ ಹೇಗೋ ಎಲ್ಲ್ಯೋ ಎನಲು |ಈ ಗತಿಯಾಗೆ ಮನೆಗೆ ಹೋಗೋದ್ಹ್ಯಾಂಗೆ 10ಏನಾದರಾಗಲಿ ಪ್ರಾಣೇಶ ವಿಠಲಗೆ |ನೀನೇ ಗತಿಯೋ ಕಾಯೊ ಎನ್ನಬೇಕೇ 11
--------------
ಪ್ರಾಣೇಶದಾಸರು