ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಶಾವತಾರದ ನಿಂದಾಸ್ತುತಿಗಳು ವರನ ಚಂದಮದೇನ ವರ್ಣಿಸುವೆನೆಲೆ ಸಖಿಯೆ ಪರಮಸುಂದರಗಾತ್ರನಿರವ ಕೇಳೆ ಬಿಚ್ಚಿರುವ ಕಣ್ಗಳಂ ಮುಚ್ಚಲಾರದ ವರಗೆ ಪಚ್ಚಕರ್ಪೂರದಾ ಕಪ್ಪಿದೇಕೆ ಕೊಳೆತುನಾರುತಲಿಹಗೆ ಲಲಿತವಸ್ತ್ರಗಳೇಕೆ ಹೊಲಸು ಮಯ್ಯಿಗೆ ಗಂಧ ಬಳಿಯಲೇಕೆ ಜಲಧಿಯಲಿ ವಾಸಿಪಗೆ ಪÀಲವಿಧದ ತೊಡವುಗಳೆ ನೆಲೆಯಿಲ್ಲದಾತಂಗೆ ಲಲನೆ ಸುತರೆ ಅಜ್ಞಾತಪಾದಕ್ಕೆ ಗೆಜೆ ಗೊಲಸೆ ವಿಜ್ಞಾನಮಯಗೆ ವಿವಿಧ ಸಿಂಗರವೆ ಯಜ್ಞಭೋಕ್ತಗೆ ಮತ್ತೆ ಭಕ್ಷ್ಯದೆಡೆಯೆ
--------------
ನಂಜನಗೂಡು ತಿರುಮಲಾಂಬಾ
ದಶಾವತಾರದ ಲೀಲೆಗಳು ಅಂಬುಜದಳಾಕ್ಷಗೆ ಮಂಗಳ ಪ ಸರ್ವ ಜೀವರಕ್ಷಕಗೆ ಮಂಗಳ ಅ ಜಲಧಿಯೊಳಾಮ್ನಾಯ ತಂದಗೆ ಮಂಗಳಕುಲಗಿರಿ ತಾಳ್ದಗೆ ಜಯಮಂಗಳನೆಲನ ಕದ್ದಸುರನ ಗೆಲಿದಗೆ ಮಂಗಳಚೆಲುವ ನರಸಿಂಹಗೆ ಶುಭಮಂಗಳ1 ಶುಭ ಮಂಗಳ 2 ಶುಭ ಮಂಗಳ 3
--------------
ಕನಕದಾಸ