ಕಾಯಬೇಕೆನ್ನ ನೀ ಸದ್ಗುರು ರನ್ನಾ
ಕಾಯೋ ನಂಬಿದೆ ನಾನು ಪ
ಮರಹು ಮುನಿಯನು ಸೇರಿದೇ
ನಾ ನನ್ನೊಳಗ ಅರವಪಥಜರಿದೇ
ಕರುಣಾ ಸಾಗರ ನೆಂದು
ಮೊರೆಯ ಹೊಕ್ಕೆನುಬಂದು
ತರಣೋಪಾಯವೆನ್ನೊಳು ಸಾರಿ
ಉದಾರೀ ದಯ ಬೀರಿ 1
ಆರರಿಗಳ ಕಾಟದೀ ಅವರಾಕೂಡೀ
ಮೀರಲಾರೆನೋ ನಾನು
ಶ್ರೀರಮಣನ ದಯದೊಲವಾ
ನಿಶ್ಚಲವಾ ಕಳವಳವಾಗಳವಾ 2
ಮೀರಿದ ತೂರ್ಯಾಗಾರವ ಸುಖದಿಂದಲಿ
ಸಾರುವಂದದಿ ಮತಿ
ಬೀರೊ ಶ್ರೀಮಹಿಪತಿ
ತಾರಿಸೋ ಕೊಟ್ಟು ನಿನ್ನೆಚ್ಚರವೆ
ಘನ ಬೆರುವೆ ನಿಜದರುವೇ ಸುರತರುವೆ ಗುರುವೆ 3