ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೆನ್ನ ಫಾಲಲೋಚನಾ ನಂದೀಶವಾಹನಾ ಪ ಸದನ ಅ.ಪ ನಾಗಭೂಷಣ ದನುಜಹರಣ ದಿವಿಜಶರಣ ಭೂತಗಣ ಭೋಗಿಶಯನ ಸಿರಿಯ ರಮಣ ವಿಮಲಚರಣ ಸೇವೆಯಿತ್ತು 1 ಮದನವೈರಿ ದುರಿತಹಾರಿ ಶಶಿಜಟಾಜೂಟಧಾರಿ ಮ ಮ ದೇವ ಮಾಂಗಿರಿರಂಗ ಚರಣಯುಗವ ತೋರಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಲಾಲಿಪುದೆನ್ನ ಸೊಲ್ಲ ಲಕುಮಿಯ ನಲ್ಲ ನೀಲ ನೀರದ ನಿಭ ನಿರುಪಮ ಮಲ್ಲ ಪ. ಉದಯದೋಳೇಳುತ ಉಚಿತ ಕರ್ಮಗಳ ಸದರದಿ ಮಾಡದೆ ಸಾಧುಪೂಜೆಗಳ ಮದ ಮುಖತನದಿಂದ ಮನೆಯಲ್ಲಿ ತಿರುಗುವೆ- ನಿದನು ನಿನ್ನಯ ಸೇವೆಯೆಂಬ ಭಾವನೆಯಿತ್ತು 1 ಕೀಟಕೆ ಸಾಮ್ರಾಜ್ಯ ಪದವಿಯನಿತ್ತಿ ಹಾಟಕಕಶಿಪನ ಮಗನ ಮೇಲೆತ್ತಿ ಆಟದ ನೆವದಿಂದ ಶಕಟನ ತರಿದಿ ಕಿ- ಭವ ದಾಟುವಂದದಿ ತೋರಿ2 ಪಾದ ವನರುಹಗಳನು ನೆನೆದು ಪೂಜಿಸುವದಕನುಕೂಲಗಳನು ಮನೆಗಧಿಪತಿ ನೀನು ಮಾಡಿ ರಕ್ಷಿಪುದಿನ್ನು ವನಜ ಭವಾರ್ಚಿತ ವೆಂಕಟಾಚಲನಾಥ 3
--------------
ತುಪಾಕಿ ವೆಂಕಟರಮಣಾಚಾರ್ಯ